Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ಅಭಿಪ್ರಾಯ > Unstable relationships|ಸ್ಥಿರವಲ್ಲದ ಸಂಬಂಧಗಳು:ಗೀತಾ ಭರಮಸಾಗರ
ಅಭಿಪ್ರಾಯ

Unstable relationships|ಸ್ಥಿರವಲ್ಲದ ಸಂಬಂಧಗಳು:ಗೀತಾ ಭರಮಸಾಗರ

ಗೀತಾ ಭರಮಸಾಗರ
Last updated: December 4, 2025 5:10 am
ಗೀತಾ ಭರಮಸಾಗರ
Share
Geethabhramasagara
SHARE

ಕೆಲವು ಸಂಬಂಧಗಳು ಹೇಗೆಂದರೆ ಮೈದಾ ಹಿಟ್ಟಿನ ಕಣಕದಂತೆ…… ಕಿತ್ತರೂ ಕೂಡಿಕೊಳ್ಳುವ ಅನಿವಾರ್ಯತೆಗೆ ತಲುಪಿರುತ್ತವೆ.

ಬದುಕಿನ ಪಯಣದಲ್ಲಿ ಎದುರಾಗುವರೆಲ್ಲರೂ ತಮ್ಮದೇ ಆದ ಛಾಪುಗಳನ್ನು ಮೂಡಿಸಿ ಮಾಯವಾಗಿರುತ್ತಾರೆ. ಕೆಲವರು ವ್ಯವಹಾರಕ್ಕಾಗಿ,ಕೆಲವರು ದೈಹಿಕ ವಾಂಛೆಗಾಗಿ ಮತ್ತೆ ಕೆಲವರು ತಮ್ಮ ಬದುಕಿನ ದಾರಿಯನ್ನು ಸುಗಮಗೊಳಿಸಿಕೊಳ್ಳುವುದಕ್ಕಾಗಿ, ಇನ್ನು ಕೆಲವರು ಟೈಮ್ ಪಾಸ್ಗಾಗಿ ಹೇಗೆ ಅವರವರ ಕಂಫರ್ಟ್ ಝೋನನ್ನು ಸೃಷ್ಟಿಸಿಕೊಳ್ಳುತ್ತಾರೆ.

ಟೈಮ್ ಪಾಸ್ ಸಂಬಂಧಗಳ ಬಗ್ಗೆ ಹೇಳದೆ ಇರಲು ಸಾಧ್ಯವಿಲ್ಲ. ಇವು ಕಾಲ ಕಳೆಯಲು ಸಂಬಂಧ ಬೆಳೆಸುತ್ತವೆ.ಮನಸ್ಸಿನ,ದೇಹದ ಮತ್ತು ಹಣದ ಕೊರತೆ ನೀಗುವವರೆಗೂ ಆತ್ಮೀಯವಾಗಿ ಬೆರೆತು…. ನಲಿದು ಕೊನೆಗೊಂದಿನ ನೋವಿನ ವಿದಾಯವನ್ನು ಹೇಳಿ ಕೊನೆಯಾಗುತ್ತವೆ.

Friends with benifit ತರ ಉಪಯೋಗ ಕೊಟ್ಟು, ತಗೊಳ್ಳಿ ಅನ್ನುವವರೆಗೂ ಮಾತ್ರವೇ. ಇಲ್ಲಿ ಆಪ್ತತೆಯ ತೀವ್ರತೆ ಇರುವುದಿಲ್ಲ.ಮನೆಯವರೆಗೂ,ಮನಸ್ಸಿನವರೆಗೂ ಭಾವನೆಗಳು ಚಲನಾತ್ಮಕವಾಗಿದ್ದರೂ,ಎಲ್ಲೋ ಒಂದು ಕಡೆ ಮೋಸ,ಸುಳ್ಳು, ದ್ರೋಹದ ತಡೆಗೋಡೆಗೆ ಸಿಲುಕಿ ಸಂಬಂಧಗಳ ನಡುವಿನ ನಂಬಿಕೆಯೇ ಬಿರುಕು ಬಿಡುವಂತೆ ಮಾಡುತ್ತವೆ.

ಈ ಆಪ್ತತೆಗಳು ಬದುಕನ್ನು ಪ್ರವೇಶಿಸಿ ಹೃದಯದ ಒಳಗೆ ಬೆಚ್ಚನೆಯ ನವಿರಾದ ಗುರುತನ್ನು ಮೂಡಿಸುವ ಮೊದಲೇ ಕಹಿ ನೆನಪುಗಳಿಗೆ ಸಹಿ ಮಾಡಿರುತ್ತವೆ. “ಕೆಲವೊಮ್ಮೆ ಅತಿಯಾಗಿ ಪ್ರೀತಿಸುವುದು ಒಂದು ಸ್ವಯಂ ವಿನಾಶದ ರೂಪವೇ ಆಗಿರುತ್ತದೆ “.ಯಾವುದೇ ಸಂಬಂಧಗಳು ಶಾಶ್ವತವಲ್ಲ.ಸಂಬಂಧಗಳಲ್ಲಿ ಕಾಲಕ್ರಮೇಣ ಆಸಕ್ತಿಗಳು ಮಾಸುತ್ತವೆ.

ಪ್ರೀತಿ ನಿರೀಕ್ಷೆಯ ವಸ್ತುವಲ್ಲ.... ಯಾವಾಗ ನಾವು ಯಾವುದೇ ನಿರೀಕ್ಷೆಯ ಹಂಗಿಲ್ಲದೆ ಬದುಕಲು ಪ್ರಾರಂಭಿಸುತ್ತೇವೆಯೋ ಆಗಲೇ ಬದುಕಿನಲ್ಲಿ ನಿಜವಾದ ಸಂತೋಷ ನೆಲೆಯೂರಲು ಸಾಧ್ಯ. ಬದುಕು ಒಂದು ಕನಸಿನ ಮೂಟೆ ಇದ್ದಂತೆ.ಕಟ್ಟುವುದು ಸುಲಭ, ಹೊತ್ತು ಜೀವನ ಸಾಗಿಸುವುದು ಕಷ್ಟ.

ಬದಲಾಗುತ್ತಿರುವ ನನ್ನವರನ್ನೆಲ್ಲ ಬಿಟ್ಟು, ನನಸಾಗದ ಆ ಕನಸುಗಳನ್ನು ಮರೆತು…. ಹಗಲಿರುಳು ಕಾಡುವ ಅಷ್ಟು ಆಲೋಚನೆಗಳನ್ನೆಲ್ಲ ತೊರೆದು ಗಟ್ಟಿಯಾಗುವ ಹೃದಯವೀಗ ಹೈರಾಣಾಗಿದೆ.

ಯಾವುದೇ ಸಂಬಂಧವನ್ನು ಕೇವಲ ಕಣ್ಣುಗಳಿಂದ ಒಪ್ಪಿಕೊಳ್ಳಬೇಕೆ ವಿನಹ ಎದೆಯಿಂದ ಅಪ್ಪಿಕೊಳ್ಳಬಾರದು ಎಂಬ ತಾತ್ವಿಕತೆಯೆಡೆಗೆ ಮನಸ್ಸು ವಾಲುತ್ತದೆ. ಅಷ್ಟೊತ್ತಿಗಾಗಲೇ ಬದುಕಿನ ಸತ್ಯದರ್ಶನವಾಗಿ “ಮೌನವನ್ನು ಖರೀದಿಸಲು ಮಾತುಗಳನ್ನೇ ಮಾರಿಬಿಟ್ಟಿರುತ್ತೇವೆ”.

Davanagere

ಕೆಲವೊಂದಿಷ್ಟು ಬದಲಾವಣೆಗಳು ನೋವು ಕೊಡುತ್ತವೆ.ಆದರೆ ನಮ್ಮ ಒಳಿತಿಗಾಗಿ ಅವು ಅಗತ್ಯ ಎಂಬ ಸಕಾರಾತ್ಮಕ ಆಲೋಚನೆಗಳಿಂದ ಅಂತಹ ಸಂಬಂಧಗಳಿಗೆ ತಿಲಾಂಜಲಿ ಇಟ್ಟು ನೆಮ್ಮದಿಯ ರಹದಾರಿಗೆ ನಮ್ಮನ್ನು ನಾವು ಬದಲಾಯಿಸಿಕೊಳ್ಳುವುದು ಅನಿವಾರ್ಯವಾಗಿದೆ.

Read also : ಕನ್ನಡ ರಾಜ್ಯೋತ್ಸವ|ಕನ್ನಡವೇ ಸತ್ಯ,ಕನ್ನಡವೇ ನಿತ್ಯವಾಗಬೇಕಾದರೆ…..:

ನಂಬಿಕೆಗಳು ಸಾಯಬಾರದು,ಭರವಸೆಗಳು ಬತ್ತಬಾರದು, ಭಾವನೆಗಳು ಕ್ಷೀಣಿಸಬಾರದೆಂದು ನಂಬಿದವರಿಗೆ ಪ್ರಾಣ ಕೊಡುವ ಅಗತ್ಯವಿಲ್ಲ.ಪ್ರಾಣವಿರುವವರೆಗೂ ನಂಬಿಕೆಗೆ ದ್ರೋಹ ಮಾಡದೆ ಇದ್ದರೆ ಅದೇ ನಿಜವಾದ ಸಂಬಂಧಗಳು.

ಕೆಲವು ವಿದಾಯಗಳು ಕಠಿಣವೆನಿಸಿದರೂ…. ಅನಿವಾರ್ಯ. ಅಕ್ಕರೆ ಇಲ್ಲದ ಸಂಬಂಧಕ್ಕೆ ಬಿಕ್ಕಿಬಿಕ್ಕಿ ಕಣ್ಣೀರಿಟ್ಟರೇನು?…. ಅದು ನೀಡುವುದು ಬೇವಿನ ಕಹಿ ಹೊರತು, ಬೆಲ್ಲದ ರುಚಿಯನ್ನಲ್ಲ.

ಎಷ್ಟು ದಿನದ ಋಣಾನುಬಂಧವೋ ಅಷ್ಟೇ ದಿನ ಪ್ರತಿಯೊಂದು ಸಂಬಂಧಗಳು ನಮ್ಮೊಟ್ಟಿಗೆ ಇರುತ್ತವೆ. ಅವು ಮುಗಿದ ಮೇಲೆ ಕೆಲವರು ದೂರ ಹೋಗುತ್ತಾರೆ, ಮತ್ತೆ ಕೆಲವರು ಸತ್ತು ಹೋಗ್ತಾರೆ ಮತ್ತೆ ಕೆಲವರು ಬದುಕಿರುವಾಗಲೇ ದೂರ ಸರಿಯುತ್ತಾರೆ. ಅದನ್ನು ನಾವು ಸ್ವೀಕರಿಸಬೇಕೆ ವಿನಹ ದುಃಖಿಸಬಾರದು.

ಆದ್ದರಿಂದ ಏನನ್ನೋ ಪಡೆದುಕೊಳ್ಳುವ ಭರದಲ್ಲಿ ಮತ್ತಿನ್ನೇನನ್ನೋ ಕಳೆದುಕೊಳ್ಳುತ್ತಾ,ಪಡೆದದ್ದನ್ನು ನನ್ನದಲ್ಲವೆಂದು ಮತ್ತು ಕಳೆದುಕೊಂಡಿದ್ದು ನನ್ನದಲ್ಲವೆಂದು ತಿಳಿಯುವಷ್ಟರಲ್ಲಿ ನಮ್ಮ ಜೀವನವೇ ಮುಗಿದು ಹೋಗಿರುತ್ತದೆ.

ಈ ಸಮಯದಲ್ಲಿ ನಮ್ಮೊಟ್ಟಿಗಿರುವ ಸಂಬಂಧಗಳೊಂದಿಗೆ ಮತ್ತೆ ಮತ್ತೆ ಜೀವಿಸೋಣ. ಜೊತೆಗಿರದ,ಬಲವಂತದ ಸಂಬಂಧಗಳನ್ನು ಮುಕ್ತವಾಗಿ ತೊರೆದು ಬಿಡೋಣ.

ಗೀತಾ ಭರಮಸಾಗರ
ಲೇಖಕರು
ಚಿತ್ರದುರ್ಗ

TAGGED:Davanagere NewsDinamana.comKannada NewsUnstable relationshipsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
By ಗೀತಾ ಭರಮಸಾಗರ
ಗೀತಾ ಭರಮಸಾಗರ ಶಿಕ್ಷಕರು, ಲೇಖಕರು ಚಿತ್ರದುರ್ಗ.
Previous Article Davanagere ಬಾಲ ನ್ಯಾಯ ಮಂಡಳಿ:ಜಿ.ಎಂ.ರೂಪ,ಲಕ್ಷ್ಮೀ ನೇಮಕ
Next Article Davanagere ಸಿಎಂ ಸ್ಥಾನ ಮಾದಿಗ ಎಡಗೈ ಸಮುದಾಯಕ್ಕೆ ನೀಡಿ : ಪಿ.ಜೆ.ಮಹಾಂತೇಶ್ ಆಗ್ರಹ
Leave a comment

Leave a Reply Cancel reply

You must be logged in to post a comment.

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

Davanagere | ಜಿಲ್ಲೆಯ ಅಭಿವೃದ್ದಿ ಮತ್ತು ಬ್ರಾಂಡ್ ದಾವಣಗೆರೆಗೆ ಸದಾಬದ್ದ : ಸಂಸದರಾದ ಡಾ : ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ ಸೆ.25 (Davanagere)  : ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಮಹಿಳಾ ರಕ್ಷಣೆಗೆ ಮೊದಲ ಆದ್ಯತೆಯಾಗಿದ್ದು ಮಹಿಳೆಯರ ರಕ್ಷಣೆಗೆ ಸಿಸಿಟಿವಿ…

By Dinamaana Kannada News

ಸೈಬರ್ ಅಪರಾಧ ತಡೆಗೆ ತಾಂತ್ರಿಕ ತರಬೇತಿ ಕಡ್ಡಾಯ : ಗೃಹ ಸಚಿವ ಡಾ: ಜಿ.ಪರಮೇಶ್ವರ್

ದಾವಣಗೆರೆ  :  ಮನೆ-ಮನೆಗೆ ಪೊಲೀಸ್ ಪೊಲೀಸ್ ಅತ್ಯಂತ ಸರಳವಾಗಿ ಮನೆಗಳಿಗೆ ತಲುಪಿ ಜನಸ್ನೇಹಿಯಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ರೂಪಿಸಿದ ಯೋಜನೆ…

By Dinamaana Kannada News

Davanagere | ಅಜಾದ್ ನಗರ ,ಭಾಷಾ ನಗರ ಸೇರಿದಂತೆ ವಿವಿಧಡೆ ವಿದ್ಯುತ್ ವ್ಯತ್ಯಯ

ದಾವಣಗೆರೆ ಜ.01 (Davanagere) : ಯರಗುಂಟೆ ವಿತರಣಾ ಕೇಂದ್ರದಿಂದ ಹೊರುಡುವ ಎಸ್‍ಜೆಎಂ ಮಾರ್ಗದ ವ್ಯಾಪ್ತಿಯಲ್ಲಿ ಜಲಸಿರಿ  ಕಾಮಗಾರಿಯನ್ನು ನಿರ್ವಹಿಸಬೇಕಾಗಿರುವುದರಿಂದ ಜ.2…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ಹರಿಹರ: ನಿಯಮಬಾಹಿರ ಮಣ್ಣು ಗಣಿಗಾರಿಕೆ ತಡೆಯಲು ಆಗ್ರಹಿಸಿ ಮನವಿ

By Dinamaana Kannada News
Davanagere
ತಾಜಾ ಸುದ್ದಿ

ಮೆಕ್ಕೆಜೋಳದ ಬೆಲೆ ಕುಸಿತ :ಕ್ರಮಕ್ಕೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಒತ್ತಾಯ

By Dinamaana Kannada News
Davanagere
ತಾಜಾ ಸುದ್ದಿ

ತೊಗರಿಬೇಳೆ- ಕಬ್ಬಿಗೆ ಬೆಂಬಲ ಬೆಲೆ ನಿಗದಿಗೆ ಒತ್ತಾಯ:ಸಿಎಂ‌ ಪತ್ರದೊಂದಿಗೆ ಕೇಂದ್ರ ಸಚಿವರಿಗೆ ಮನವಿ ನೀಡಿದ ಸಂಸದರ ನಿಯೋಗ

By Dinamaana Kannada News
Davanagere
Blog

ಕೃಷಿ ಉತ್ಪಾದಕತೆಯ ಮೇಲೆ ಹವಾಮಾನ ಬದಲಾವಣೆಯ ಕ್ರಮ : ಕೃಷಿ ಸಚಿವಾಲಕ್ಕೆ ಮಾಹಿತಿ ಕೇಳಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?