Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ಅಭಿಪ್ರಾಯ > ದಿನಮಾನ-ಪುಸ್ತಕ ವಿಮರ್ಶೆ|ಮಾತಿಲ್ಲದವರ ಮರುದನಿಯಾಗಿ….ಮೂಕನಾಯಕ
ಅಭಿಪ್ರಾಯ

ದಿನಮಾನ-ಪುಸ್ತಕ ವಿಮರ್ಶೆ|ಮಾತಿಲ್ಲದವರ ಮರುದನಿಯಾಗಿ….ಮೂಕನಾಯಕ

Dinamaana Kannada News
Last updated: January 25, 2026 4:28 am
Dinamaana Kannada News
Share
Davanagere
SHARE

ಹೃದಯದ ಮೂಲಕವೇ ಶರೀರದ ಎಲ್ಲಾ ಧಮನಿಗಳಿಗೆ,ನರನಾಡಿಗಳಿಗೆ ರಕ್ತ ಸರಬರಾಜಾಗುತ್ತದೆ. ಒಂದು ವೇಳೆ ಮನುಷ್ಯ ಮೂಕನಾಗಿದ್ದರೆ ಅಲ್ಲಿ ಅವನ ಹೃದಯದ ಧ್ವನಿ ಅತ್ಯಂತ ಮಹತ್ವ ಪೂರ್ಣದ್ದಾಗು ತ್ತದೆ.

ಹೀಗೆಂದು ಹೇಳಿದ ಅಂಬೇಡ್ಕರ್,ಮಾನವನ ಜ್ಞಾನ ಮತ್ತು ತತ್ವಶಾಸ್ತ್ರದ ಕೇಂದ್ರವೇ ಹೃದಯವೆಂದು ಪ್ರತಿಪಾದಿಸಿ ತಮ್ಮ ಪತ್ರಿಕೆ ‘ಮೂಕನಾಯಕ’ದ ಅಸ್ತಿತ್ವವನ್ನು ದಾಖಲಿಸಿದ್ದಾರೆ.

ಒಬ್ಬ ಪತ್ರಕರ್ತನ ಪತ್ರಿಕೋದ್ಯಮದ ಉದ್ದೇಶ,ರಾಷ್ಟ್ರದ ಪ್ರಗತಿಯೇ ಆಗಿರಬೇಕು.ಅದಕ್ಕೂ ಮೊದಲು ವ್ಯಕ್ತಿಯ ಏಳಿಗೆ ಯಾಗಬೇಕು.ಮುಖ್ಯವಾಗಿ ಯಾವ ವ್ಯಕ್ತಿ ಮತ್ತು ಸಮಾಜದ ಅವನತಿಯಿಂದಾಗಿ ರಾಷ್ಟ್ರದ ಅವನತಿಯಾಗುತ್ತಿದೆಯೋ ಮೊದಲು ಅದರ ಏಳಿಗೆಯಾಗಬೇಕು ಎಂದು ಬಯಸಿದರು.

ಬಹಿಷ್ಕೃತ ಜನರ ಮೇಲಾಗುತ್ತಿರುವ ದೌರ್ಜನ್ಯಗಳು ನಡೆಯದಂತೆ ನೋಡಿಕೊಳ್ಳುವ ಉಪಾಯಗಳನ್ನು ಚರ್ಚಿಸುವ ಮತ್ತು ಉನ್ನತಿಯ ಮಾರ್ಗಗಳ ಹುಡುಕಾಟಕ್ಕಾಗಿ ಮತ್ತು ಆ ಕಾಲದ ಬಾಂಬೆ ಕ್ರಾನಿಕಲ್, ಹರಿಜನ, ಕೇಸರಿ, ಸುಬೋಧ, ವಿಜಯಿ ಮರಾಠಗಳಂತಹ ಪತ್ರಿಕೆಗಳಲ್ಲಿ ಅಸ್ಪೃಶ್ಯರ ಚಿಂತಾಜನಕ ಸ್ಥಿತಿಗಳನ್ನು ಚರ್ಚಿಸಲು ಇರುವ ಕೊರತೆಯನ್ನು ನೀಗಿಸಲು ಖಾಲಿ ಬಿಟ್ಟಿರುವ ಜಾಗಕ್ಕಾಗಿಯೆ ಅಂಬೇಡ್ಕರರು, 1920  ಜನವರಿ ತಿಂಗಳಿನಲ್ಲಿ ‘ಮೂಕನಾಯಕ’ಪತ್ರಿಕೆ ಪ್ರಾರಂಭಸಿದ್ದು,ಐತಿಹಾಸಿಕವಾದ ನಿರ್ಧಾರವಾಗಿತ್ತು.

ಇದು ದಲಿತ ಲೋಕದ ಮೊಟ್ಟಮೊದಲ ಪಾಕ್ಷಿಕವಾದರೂ ಮೂಕನಾಯಕನ ಆಯುಷ್ಯ ಕೇವಲ ಮೂರೇ ವರ್ಷದ್ದಾದರೂ ಅದು ದಲಿತ ಚಿಂತನೆಗೆ ವೇದಿಕೆ ಒದಗಿಸಿದ ಮಹತ್ವ ಅಪೂರ್ವ ವಾದುದು. ಅದೊಂದು ಚಳುವಳಿಯ ಭಾಗವೇ ಆಗಿಹೋಗಿತ್ತು.

ಈಗ ನಾನು ಸಂಕೋಚ ಪಟ್ಟುಕೊಂಡು ನಾನೇನು ಮಾಡಲಿ,
ನಾನೀಗ ದನಿಯೆತ್ತದೇ ಉಳಿಗಾಲವಿಲ್ಲ . 
 ದನಿಯಿಲ್ಲದವರ ಪರವಾಗಿ ಈ ಲೋಕದಲ್ಲಿ ಯಾರೂ ದನಿಯೆತ್ತುವುದಿಲ್ಲ. 
 ಇದು ತಿಳಿದೂ ತಿಳಿದೂ ಮೌನವಾಗಿರುವುದರಲ್ಲಿ ಯಾವ ಅರ್ಥವೂ ಇಲ್ಲ. 

ಹೀಗೆಂದು ಹೇಳಿದ ಸಂತ ತುಕಾರಾಮನ ಅಭಂಗದ ಸಾಲುಗಳೇ ಬಹುಷಃ ಅಂಬೇಡ್ಕರರನ್ನು  ಪತ್ರಿಕೋದ್ಯಮಕ್ಕೆ ಇಳಿಸಿ ದವೇನೋ. ಅಂಬೇಡ್ಕರ್ ಗೆ ಎರಡೂ ಕೈಯಿಂದ ಬರೆಯುವ ಹವ್ಯಾಸವಿತ್ತು ಎನ್ನುವ ಕುತೂಹಲಕರ ಮಾಹಿತಿಯನ್ನು ತಿಳಿಸುವ ಲೇಖಕರು ,ಅಂಬೇಡ್ಕರ್ ಎನ್ನುವ ಸವ್ಯಸಾಚಿ, ಮೂಕನಾಯಕನ ಸಂಪಾದಕೀಯ ಬರೆಹಗಳ ಮೂಲಕ ತನ್ನ ಮಕ್ಕಳಿಗೆ ಬುದ್ಧಿವಾದ ಹೇಳುವಂತೆ ಅಸ್ಪೃಶ್ಯ ಮತ್ತು ಬಹಿಷ್ಕೃತ ಸಹೋದರರಿಗೆ  ಬರೆದ ಹದಿನಾಲ್ಕು ಬರೆಹಗಳಿವೆ.

Read also : ದಿನಮಾನ-ಪುಸ್ತಕ ವಿಮರ್ಶೆ|ಗೌರವಾನ್ವಿತ ಮೂರ್ಖರು: ನರವಿಕಲ್ಪಕ್ಕೆ ತುತ್ತಾದ ದೇಶವೊಂದರ ವಕ್ರ ರೇಖೆಗಳ ಅನಾವರಣ

ಚಾರಿತ್ರಿಕವಾದ ಸಂಪಾದಕೀಯಗಳ ಸಂಕಲನವನ್ನು ಕನ್ನಡಕ್ಕೆ ಕೊಡಮಾಡಿದ ಲೇಖಕರಾದ  ರೇಣುಕಾ ನಿಡಗುಂದಿ ಮತ್ತು ರಮೇಶ್ ಅರೋಲಿಯವರಿಗೆ ನಾಡು ಕೃತಜ್ಞವಾಗಿರುತ್ತದೆ.

ಮಾತಿಲ್ಲದವರ ಮರುದನಿಯಾಗಿ .. .ಮೂಕನಾಯಕ

ಹಿಂದಿ ಮೂಲ: ಶ್ಯೊರಾಜ್ ಸಿಂಗ್ ಬೆಚೈನ್
 ಅನುವಾದ   : ರೇಣುಕಾ ನಿಡಗುಂದಿ
                 ರಮೇಶ ಅರೋಲಿ
ಅಹರ್ನಿಶಿ ಪ್ರಕಾಶನ , ಶಿವಮೊಗ್ಗ.

TAGGED:Davanagere Newsdinamaana.comDinamana-Book ReviewKannada NewsMookanayakaಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂಮೂಕನಾಯಕ
Share This Article
Twitter Email Copy Link Print
Previous Article Davanagere ಉಲ್ಲಸಯುತ ಜೀವನಕ್ಕೆ ಕಲೆ ಶಕ್ತಿ : ದಾವಣಗೆರೆ ವಿಶ್ವವಿದ್ಯಾನಿಲಯ ಪ್ರೊ.ಕುಂಬಾರ
Next Article Davanagere ಸಂತೋಷಕುಮಾರ್ ಅವರಿಗೆ ಅತ್ಯುತ್ತಮ ಮತದಾರರ ನೊಂದಣಾಧಿಕಾರಿ ಪ್ರಶಸ್ತಿ
Leave a comment

Leave a Reply Cancel reply

You must be logged in to post a comment.

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ನದಿಯಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ : ಕ್ರಮಕ್ಕೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಮನವಿ

ಹರಿಹರ (Harihara): ತಾಲ್ಲೂಕಿನ ತುಂಗಭದ್ರಾ ನದಿ ಹಾಗೂ ಸೂಳೆಕೆರೆ ಹಳ್ಳದಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ಮಾಡುತ್ತಾ ಅಪಾಯಕಾರಿ ಗುಂಡಿಗಳನ್ನು ಸೃಷ್ಟಿsಸುವ…

By Dinamaana Kannada News

ದಾವಣಗೆರೆ | ಬೀಡಾ ಅಂಗಡಿಯಲ್ಲಿ ಗಾಂಜಾ ಮಾರಾಟ ಆರೋಪಿ ಸೆರೆ

ದಾವಣಗೆರೆ : ಗಾಂಜಾ ಮಾರಾಟ ಮಾಡುತ್ತಿದ್ದ ಬೀಡಾ ಅಂಗಡಿ ಮೇಲೆ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಉತ್ತರ ಪ್ರದೇಶದ…

By Dinamaana Kannada News

ವಿಶೇಷಚೇತನರ ಮಾಸಿಕ ಪಿಂಚಣಿ :  ಸಂಸತ್ತಿನಲ್ಲಿ ಗಮನಸೆಳೆದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ 

ದಾವಣಗೆರೆ.ಮಾ.11 (Davanagere); ಇಂದಿರಾಗಾಂಧಿ ರಾಷ್ಟ್ರೀಯ ವಿಶೇಷಚೇತನರ ಪಿಂಚಣಿ ಯೋಜನೆಯಡಿ ಫಲಾನುಭವಿಗಳಿಗೆ ತಿಂಗಳಿಗೆ ಕೇವಲ‌ 300 ರೂಪಾಯಿ ನೀಡಲಾಗುತ್ತಿದೆ.ಇದರಿಂದ ಮೂಲಭೂತ ಅಗತ್ಯಗಳನ್ನು…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ಇಂದಿನ ವಿದ್ಯಾರ್ಥಿಗಳೇ ನಿಜವಾದ ದೇಶದ ರಕ್ಷಕರು : ವೈ.ಮಂಜಪ್ಪ ಕಾಕನೂರು

By Dinamaana Kannada News
Mohammad Hanif Siddiqui
ತಾಜಾ ಸುದ್ದಿ

77ನೇ ಗಣರಾಜ್ಯೋತ್ಸವ :ಮೊಹಮ್ಮದ್ ಹನೀಫ್ ಸಿದ್ದಿಕಿ ಅವರಿಗೆ ಪ್ರಶಸ್ತಿ ಪತ್ರ ವಿತರಣೆ

By Dinamaana Kannada News
Davanagere
ತಾಜಾ ಸುದ್ದಿ

ಗ್ರಾಮೀಣ ಜನರ ಉದ್ಯೋಗ ಕಸಿದ ಕೇಂದ್ರ: ಡಾ.ಪ್ರಭಾ ಮಲ್ಲಿಕಾರ್ಜುನ್

By Dinamaana Kannada News
Davanagere
ತಾಜಾ ಸುದ್ದಿ

ಜ.27 ಮಂಗಳವಾರ ಅಖಿಲ ಭಾರತ ಬ್ಯಾಂಕ್ ಮುಷ್ಕರ: ಕೆ.ರಾಘವೇಂದ್ರ ನಾಯರಿ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?