ಜಗಳೂರು: ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗಾಗಿ ದಿನದ 24 ಗಂಟೆಗಳ ಕಾಲ ಮಕ್ಕಳಿಗೆ ಬೋಧನೆಯ ಜೊತೆಗೆ ಅವರ ಅಭ್ಯಾಸದ ಕಡೆಗಮನ ಹರಿಸುವಂತ ಕೆಲಸ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಅಚ್ಚು ಪರೀಕ್ಷೆಗೆ ಮಕ್ಕಳನ್ನು ಸನ್ನದ್ದಗೊಳಿಸುವ ಕಾರ್ಯ ಭರದಿಂದ ಸಾಗಿದೆ.
ಕಳೆದ ಎರಡು ವರ್ಷಗಳಿಂದ ತಾಲೂಕು ಎಸ್ ಎಸ್ ಎಲ್ ಸಿ ಪರೀಕ್ಷಾ ಪಲಿತಾಂಶದಲ್ಲಿ ಜಿಲ್ಲೆಯಲ್ಲಿ 4 ಸ್ಥಾನಕ್ಕೆ ಕುಸಿದಿರುವುದರಿಂದ ಈ ಬಾರಿ ಶೇಕಡ 100ರಷ್ಟು ಫಲಿತಾಂಶ ಗಳಿಸುವುದು ಮತ್ತು ಜಿಲ್ಲೆಗೆ ಪ್ರಥಮ ಸ್ಥಾನ ಗುರಿಯನ್ನಾಗಿಟ್ಟುಕೊಂಡು ಹಗಲಿರಳು ಶ್ರಮ ಹಾಕುತ್ತಿದೆ.
ತಾಲೂಕಿನಲ್ಲಿ 17 ಸರ್ಕಾರಿ ಪ್ರೌಢಶಾಲೆ, 8 ಮೊರಾರ್ಜಿ ವಸತಿ ಶಾಲೆ, 21 ಅನುದಾನಿತ ಎಂಟು ಅನುದಾನ ರಹಿತ ಸೇರಿದಂತೆ ಒಟ್ಟು 53 ಪ್ರೌಢಶಾಲೆಗಳಿದ್ದು ನೀವು ಬಾರಿ 20272 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಹಿಸಿಕೊಂಡಿದ್ದಾರೆ.
ಪೂರ್ಣಗೊಂಡ ಪಠ್ಯಕ್ರಮ ಮತ್ತೆ ಪುನರ್ವನ: ಡಿಸೆಂಬರ್ 31ಕ್ಕೆ ಪ್ರೌಢಶಾಲಾ ವಿದ್ಯಾರ್ಥಿಗಳ ಎಲ್ಲಾ ವಿಷಯಗಳ ಪಾಠ ಪ್ರವಚನಗಳು ಸಂಪೂರ್ಣಗೊಂಡಿದ್ದು ಜನವರಿ ಒಂದರಿಂದ ಪುರ್ನ ಮನನ ಮಾಡುವ ತರಗತಿಗಳು ಪ್ರಾರಂಭವಾಗಿವೆ.
ಶಿಕ್ಷಕರುಗಳಿಂದ ಫೋನ್ ಮೂಲಕ ಜಾಗೃತಿ: ಶಿಕ್ಷಕರು ವಿದ್ಯಾರ್ಥಿಗಳ ಪೋಷಕರ ಫೋನುಗಳಿಗೆ ಪ್ರತಿನಿತ್ಯ ಬೆಳಗಿನ ಜಾವ ಐದು ಗಂಟೆಗೆ ಮತ್ತು ರಾತ್ರಿ 10.30 ಕ್ಕೆ ಕರೆ ಮಾಡಿ ಮಕ್ಕಳು ಓದಿಕೊಳ್ಳುತ್ತಿದ್ದಾರೆಯೇ ಇಲ್ಲವೆಂದು ಖಾತರಿಪಡಿಸಿಕೊಳ್ಳುವುದು ಮತ್ತು ಓದದೇ ಇದ್ದರೆ ಪೋಷಕರಿಗೆ ಸಲಹೆಯನ್ನು ನೀಡುವುದು.
ಪರೀಕ್ಷಾ ಭಯವನ್ನು ಹೋಗಲಾಡಿಸಲು ಪ್ರಾಯೋಗಿಕ ಪರೀಕ್ಷೆ : ಶಿಕ್ಷಣ ಪರೀಕ್ಷಾ ಮಂಡಳಿಯಿಂದ ನಾಲ್ಕು ಮಾದರಿ ಪ್ರಶ್ನೆ ಪತ್ರಿಕೆಯ ಪರೀಕ್ಷೆಯನ್ನು ಮತ್ತು ಎರಡು ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಮಕ್ಕಳು ಈಗಾಗಲೇ ಬರೆದಿದ್ದು ಮಾರ್ಚ್ ನಡೆಯುವ ಪರೀಕ್ಷೆಗೆ ವಿದ್ಯಾರ್ಥಿಗಳು ಸಣ್ಣದರಾಗಿದ್ದಾರೆ.
ಸಭೆಗಳು : ಪೋಷಕರ ಸಭೆ ಮತ್ತು ಪ್ರತಿ ಶನಿವಾರ ಮುಖ್ಯ ಶಿಕ್ಷಕರ ಸಭೆ, ಪ್ರತಿ ಶುಕ್ರವಾರ ರಸಪ್ರಶ್ನೆಗಳು.
ತಾಯಂದಿರ ಸಭೆ: ಆಯಾ ಶಾಲೆಗಳಲ್ಲಿ ತಿಂಗಳಿಗೆ ಎರಡು ಬಾರಿ ಪೋಷಕರ ಸಭೆಯನ್ನು ಕರೆದು ಮಕ್ಕಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕುವುದು ಮತ್ತು ವಿದ್ಯಾರ್ಥಿಗಳಿಗೆ ಓದಿನ ಕಡೆ ಗಮನ ಹರಿಸುವಂತೆ ಪೋಷಕರಿಗೆ ಅರಿವು ಮೂಡಿಸಲಾಗುತ್ತಿದೆ.
ದಿನದ 24 ಗಂಟೆಗಳ ಕಾಲ ಮಕ್ಕಳ ಮೇಲೆ ನಿಗಾ: ಮುಂಜಾನೆ 5:00ಯಿಂದ ಕರೆ ಮಾಡಿ ಮಕ್ಕಳ ವಿದ್ಯಾರ್ಥಿಗಳನ್ನು ಎಚ್ಚರಗೊಳಿಸುವುದು ಮತ್ತು ಓದಿಕೊಳ್ಳುವಂತೆ ಎಚ್ಚರಿಕೆ ನೀಡುವುದು ನಂತರ ಶಾಲೆಯಲ್ಲಿ ಒಂಬತ್ತು ರಿಂದ ಹತ್ತು ಗಂಟೆಯವರೆಗೆ ವಿಶೇಷ ತರಗತಿಗಳು ಮತ್ತು ಸಂಜೆ ವೇಳೆ ನಾಲಕ್ಕು ಮೂವತ್ತರಿಂದ ಐದು ಮೂವತ್ತರವರೆಗೆ ಗುಂಪು ಅಧ್ಯಯನ ಮಾಡುವುದು.
ಇದನ್ನೂ ಓದಿ : ಜಗಳೂರು|ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಚ್ಚರ ವಹಿಸಿ : ಇಓ ಕೆಂಚಪ್ಪ ಸೂಚನೆ
ದತ್ತು ಯೋಜನೆಗಳು: ಶಾಲೆಯಲ್ಲಿ ಒಬ್ಬ ಶಿಕ್ಷಕರು 10 ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡು ಆ ವಿದ್ಯಾರ್ಥಿಗಳು ಕಲಿಕೆಯ ಕಡೆ ಆಸಕ್ತಿ ಬೆಳೆಸುವಂತೆ ಮಾಡುವುದು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವಂತೆ ಮಾಡುವುದು ಶಿಕ್ಷಕರ ಜವಾಬ್ದಾರಿ ಹೇಗಿದೆ.
ಪ್ರಾಯೋಗ ಟೀಚರ್: ವಿಜ್ಞಾನ ಮತ್ತು ಗಣಿತ ಸೇರಿದಂತೆ ತರ ಚಿತ್ರಗಳನ್ನು ಬಿಡಿಸುವ ಸಲುವಾಗಿ ನುರಿತ ಶಿಕ್ಷಕರಿಂದ ಮಕ್ಕಳಿಗೆ ತರಬೇತಿ ಕೊಡುವಂಥ ಕೆಲಸವನ್ನು ಮಾಡಲಾಗುತ್ತಿದೆ.
ಒಟ್ಟಾರೆಯಾಗಿ ಹತ್ತನೇ ತರಗತಿ ಫಲಿತಾಂಶದಲ್ಲಿ ಸುಧಾರಣೆ ಕೈಗೊಳ್ಳಲು ತಾಲೂಕು ಶಿಕ್ಷಣ ಇಲಾಖೆಯೂ ದಿನದ 24 ಗಂಟೆಗಳ ಕಾಲ ಶ್ರಮ ವಹಿಸುತ್ತಿದೆ.
ಪ್ರತಿಯೊಂದು ಮಗುವಿನ ಮೇಲೆ ನಿಗಾ ಇಡುವುದು ಬಹುತೇಕ ಎಲ್ಲಾ ವಿಷಯಗಳಲ್ಲಿಯೂ ಆಸಕ್ತಿ ಬೆಳೆಸಲಾಗುತ್ತಿದೆ ಶಿಕ್ಷಕರು ಶಕ್ತಿ ಮೀರಿ ಶ್ರಮ ಹಾಕುತ್ತಿದ್ದಾರೆ ಎಂದು
ಹಾಲಮೂರ್ತಿ , ಕ್ಷೇತ್ರ ಶಿಕ್ಷಣಾಧಿಕಾರಿಗಳು
