ಜಗಳೂರು: ಸಕಾಲಕ್ಕೆ ಗ್ಯಾರಂಟಿ ಯೋಜನೆ ಗಳು ಯಾವುದೇ ಆಡೆತಡೆ ಇಲ್ಲದೇ ಫಲಾನುಭವಿಗಳಿಗೆ ತಲುಪಿಸುವ ಕೆಲಸ ಸರ್ಮಪಕವಾಗಿ ನಿರ್ವಹಿಸಬೇಕು ಎಂದು ತಾಲ್ಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ಷಂಷೀರ್ ಅಹಮ್ಮದ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗುರುವಾರ ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದ ಸಾಮರ್ಥ್ಯ ಸೌಧದಲ್ಲಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಅನ್ನಭಾಗ್ಯ ಯೋಜನೆಯಡಿ ಪಟ್ಟಣದಲ್ಲಿ 8 ಮತ್ತು ಗ್ರಾಮೀಣ ಭಾಗದಲ್ಲಿ 91 ನ್ಯಾಯಬೆಲೆ ಅಂಗಡಿಗಳನ್ನೊಳಗೊಂಡಂತೆ 118610 ಆಧ್ಯತಾ ಕಾರ್ಡ್ ಗಳಲ್ಲಿರುವ ಫಲಾನುಭವಿಗಳಿಗೆ ಫೆಬ್ರವರಿ ತಿಂಗಳಲ್ಲಿ 5613.90 ಕ್ವಿಂಟಾಲ್ ಅನ್ನಭಾಗ್ಯದಡಿ ಅಕ್ಕಿ ಹಂಚಿಕೆ ಯಾಗಿದೆ. 5333.49 ಕ್ವಿಂಟಾಲ್ ಎನ್ಎಫ್ ಎಸ್ ಎ ಅಕ್ಕಿ ಹಂಚಿಕೆಯಾಗಿದೆ.ಗೃಹ ಲಕ್ಷ್ಮಿ ಯೋಜನೆಯಡಿ ತಾಲ್ಲೂಕಿನ 42727 ಫಲಾನುಭವಿಗಳು ನೊಂದಣಿಯಾಗಿದ್ದು.41689 ಫಲಾನುಭವಿಗಳಿಗೆ ಸೆಪ್ಟೆಂಬರ್ 2025 ಮಾಹೆಯಲ್ಲಿ ಹಣಪಾವತಿಯಾಗಿದೆ.ಆಗಸ್ಟ್ ಮಾಹೆಯಲ್ಲಿ 1346 ಫಲಾನುಭವಿಗಳ ಎನ್ ಪಿಸಿಐ ಫೆಲ್ಡ್ ಆಗಿರುವುದನ್ನು ಸರಿಪಡಿಸಿ ಹಣಪಾವತಿಗೆ ಕ್ರಮವಹಿಸಲಾಗಿದೆ.ಜ.2026 ರ ಮಾಹೆಯಲ್ಲಿ 155.12 ಗೃಹಜ್ಯೋತಿ ಬೇಡಿಕೆಯಿದೆ.ಯುವನಿಧಿ ಯೋಜನೆಯಡಿ 1028 ಫಲಾನುಭವಿಗಳಿಗೆ ಹಣಪಾವತಿಸಲಾಗಿದೆ ಎಂದು ಇಲಾಖಾವಾರು ಅಧಿಕಾರಿಗಳು ಮಾಹಿತಿ ನೀಡಿದರು.
ನಂತರ ಗ್ಯಾರಂಟಿ ಯೋಜನೆ ಅಧ್ಯಕ್ಷರು ಪ್ರತಿಕ್ರಿಯಿಸಿ ತಾಲ್ಲೂಕಿನ ಬಡಜನರಿಗೆ ಗ್ಯಾರಂಟಿ ಯೋಜನೆಗಳು ಆರ್ಥಿಕ ಸಂಜೀವಿನಿಯಾಗಿವೆ.ಮಾ.4 ರಂದು ದಾವಣಗೆರೆ ಗುಂಡಿಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ರಾಜ್ಯ ಸಚಿವರು ಹಾಗೂ ಅಧಿಕಾರಿಗಳನ್ನೊಳಗೊಂಡ ಸಭೆ ನಡೆಯಲಿದೆ ಶೀಘ್ರದಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಹಣಪಾವತಿಯಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಸಹಾಯಕ ಅಧಿಕಾರಿಗಳಾದ ಮಂಜುನಾಥ್,ಹನುಮಂತಪ್ಪ,ಪ್ರೀತಿ,ವಿಶ್ ವನಾಥ್,ಗ್ಯಾರಂಟಿ ಸಮಿತಿಯ ಸದಸ್ಯರಾದ ಸಿ.ತಿಪ್ಪೇಸ್ವಾಮಿ,ಪಲ್ಲಾಗಟ್ಟೆ ಶೇಖರಪ್ಪ,ನಾಗರಾಜ್,ಸಾವಿತ್ರಮ್ಮ,ಶಿ ವನಗೌಡ್ರು,ಚನ್ನಬಸವನಗೌಡ್ರು,ಮಾಳಮ್ ಮನಹಳ್ಳಿ ವೆಂಕಟೇಶ್,ಓಮಣ್ಣ,ಕೆಳಗೋಟೆ ಅಹಮ್ಮದ್ ಅಲಿ,ಸೇರಿದಂತೆ ಇತರರು ಇದ್ದರು.
ಇಲಾಖೆಗಳ ಅನುಷ್ಠಾನ ಅಧಿಕಾರಿಗಳ ಗೈರು:
ರಾಜ್ಯ ಸರಕಾರದ ಬಡವರಿಗೆ ಅನುಕೂಲವಾಗುವಂತೆ ಜಾರಿಗೊಳಿಸಿರುವ ಸಿಡಿಪಿಓ,ಬೆಸ್ಕಾಂ,ಆಹಾರ ಇಲಾಖೆ,ಕೆಎಸ್ ಆರ್ ಟಿಸಿ ಡಿಪೋ ವ್ಯವಸ್ಥಾಪಕ,ಉದ್ಯೋಗ ವಿನಿಮಯ ಇಲಾಖೆ ಗಳ ಅನುಷ್ಠಾನ ಅಧಿಕಾರಿಗಳು ಪ್ರಗತಿ ಪರಿಶೀಲನಾಸಭೆಗೆ ಗೈರಾಗಿದ್ದು ಕೆಳದರ್ಜೆಯ ಸಿಬ್ಬಂದಿಗಳನ್ನು ಕಳುಹಿಸಿರುವುದು ಮಹತ್ತರ ಗ್ಯಾರಂಟಿ ಯೋಜನೆ ಕುರಿತು ತಾತ್ಸಾರಕ್ಕೆ ಕೈಗನ್ನಡಿಯಾಗಿದೆ..
ಗ್ಯಾರಂಟಿ ಯೋಜನೆ ಅಧ್ಯಕ್ಷ ಷಂಷೀರ್ ಅಹಮ್ಮದ್
