Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > ಎದೆ ನೋವು ಸಾಮಿ…ಎಂದು ಬಂದವರು
Blog

ಎದೆ ನೋವು ಸಾಮಿ…ಎಂದು ಬಂದವರು

Dinamaana Kannada News
Last updated: April 22, 2024 6:53 am
Dinamaana Kannada News
Share
minininga
ಎದೆ ನೋವು ಸಾಮಿ...ಎಂದು ಬಂದವರು
SHARE

ಸೊಂಡೂರು ತಾಲೂಕು,ಚೋರನೂರು ಗ್ರಾಮದ ಜನ ಗಣಿಗಾರಿಕೆಯಲ್ಲಿ ತೊಡಗಿಕೊಂಡಿಲ್ಲ.ಆದರೆ ಗಣಿಗಾರಿಕೆ ನಡೆಯುವ ಪಕ್ಕದಲ್ಲಿಯೇ ಹೊಲಗಳು ಇರುವುದರಿಂದಾಗಿ ಬೇಸಾಯದ ಬಡ ರೈತರು ತೀವ್ರ ಕೆಮ್ಮು,ಮತ್ತು ನಿರಂತರ ಎದೆನೋವಿನಿಂದ ಬಳಲುತ್ತಾರೆ.

ಕೆಮ್ಮುವಾಗ ಕಷ್ಟಪಡುತ್ತಾರೆ.ದೇಹ ಕ್ಷೀಣಿಸುತ್ತಾ ಬರುತ್ತದೆ.ಆರು ಜನರ ಕುಮಾರಪ್ಪನ ಇಡೀ ಕುಟುಂಬಕ್ಕೆ ತಾನೊಬ್ಬನೇ ಆಧಾರ.ಈಗ ಆತನಿಗೆ ಕೆಲಸ ಮಾಡಲು ಆಗುವುದಿಲ್ಲ.ಸಣ್ಣ ಮಕ್ಕಳು ಶಾಲೆ ಬಿಟ್ಟು ಕಿರಾಣಿ ಅಂಗಡಿಯಲ್ಲಿ ಪಟ್ಣ ಕಟ್ಟಲು ಹೋಗುತ್ತಾರೆ.  ಆಕಸ್ಮಾತ್ ಯಾರಾದರೂ ಲೇಬರ್ ಆಫೀಸರ್,ಇನ್ಸ್ಪೆಕ್ಟರ್ ಏನಾದರೂ ಬಂದರೆ ಅಂಗಡಿಗೆ ಸಾಮಾನು ಖರೀದಿಗೆ ಬಂದವರಂತೆ ವರ್ತಿಸಬೇಕೆಂದು ಮೊದಲೇ ತರಬೇತಿಯನ್ನೂ ನೀಡಲಾಗಿದೆ.ಆ ಹುಡುಗನ ಶಾಲೆಯ ಗೈರುಹಾಜರಿ ಆರು ಜನರ ಹಸಿವನ್ನು ಹೇಗೋ ಸ್ವಲ್ಪಮಟ್ಟಿಗೆ ಕಡಿಮೆಮಾಡಿದೆ.

ಸಿಲಿಕೋಸಿಸ್” ರೋಗ

ಗಣಿಗಾರಿಕೆಯಿಂದ ಸೊಂಡೂರು ತಾಲೂಕಿನ ಸುತ್ತಲಿನ ಹಳ್ಳಿಗಳಲ್ಲಿ “ಸಿಲಿಕೋಸಿಸ್”ರೋಗ ಪ್ರಮಾಣವು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ.ಸಿಲಿಕೋಸಿಸ್ ಇದೊಂದು ಶ್ವಾಸಕೋಶ ಸಂಬಂಧಿ ರೋಗವಾಗಿದ್ದು,ಸಾಮಾನ್ಯವಾಗಿ ಗಣಿಗಾರಿಕೆಯಿಂದ ಎದ್ದ ಸಿಲಿಕಾ ಧೂಳನ್ನು ಉಸಿರಾಡಿದಾಗ ಉಂಟಾಗುತ್ತದೆ.ಬಹುತೇಕ ಗಣಿಗಳಲ್ಲಿ ಕೆಲಸ ಮಾಡುವ ಜನರಿಗೆ ಇದು ಸಂಭವಿಸುತ್ತದೆ.

ಕಾಯಿಲೆಯಿಂದ ಮುಕ್ತಿಯಿಲ್ಲ

ತಾರಾನಗರ,ಸುಶೀಲಾ ನಗರ,ಕೃಷ್ಣಾನಗರ,ಭುಜಂಗ ನಗರ ಮತ್ತು ಚೋರನೂರು,ಸ್ವಾಮಿ ಹಳ್ಳಿಗಳಂತಹ ಊರುಗಳಲ್ಲಿನ  ಅನೇಕರು ಗಣಿಗಳಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಿ,ಜಿಂದಾಲ್  ಫ್ಯಾಕ್ಟರಿಯಲ್ಲಿ ಸೆಕ್ಯುರಿಟಿ ಕೆಲಸಕ್ಕೆ ಮತ್ತು ಕೆಲವರು ಕೃಷಿ ಕೂಲಿಕಾರರಾಗಿ ಬದಲಾದರೂ  ಸಹ ಕಾಯಿಲೆಯಿಂದ ಮುಕ್ತಿ ಪಡೆಯಲಾಗಿಲ್ಲ.  ಇಂಥಾ ಹಳ್ಳಿಗಳಲ್ಲಿ ಮುದುಕ ಮುದುಕಿ ತಂದೆ ತಾಯಿಯರು ಹರೆಯದ ಮಕ್ಕಳ ಆರೈಕೆ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಗಾಳಿಯಗುಣಮಟ್ಟ ಪರೀಕ್ಷೆ ನಡೆದಿಲ್ಲ

ಈ ಭಾಗದಲ್ಲಿ ಉಸಿರಾಡುವ ಗಾಳಿಯ ಗುಣಮಟ್ಟವನ್ನೇನಾದರೂ ಆರೋಗ್ಯ ಇಲಾಖೆ ಪರೀಕ್ಷಿಸಿದೆಯಾ? ಎಂದರೆ ಅದೂ ಇಲ್ಲ,ರಾಷ್ಟ್ರೀಯ ಖನಿಜ ನೀತಿಯ ಪಾಲಿಸಿಗಳನ್ನು ಸಹ ಗಣಿ ಕಂಪೆನಿಗಳು ಅನುಸರಿಸುತ್ತಿಲ್ಲದಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಸರಕಾರಗಳು ಮತ್ತದರ ಅಧಿಕಾರಿ ವರ್ಗ ಕಣ್ಣುಮುಚ್ಚಿ ಕುಳಿತಂತೆ ತೋರುತ್ತಿದೆ.ಸಿಲಿಕೋಸಿಸ್ ಇದೊಂದು ಔದ್ಯೋಗಿಕ ಕಾಯಿಲೆಯಾಗಿದ್ದು,ಸಿಲಿಕಾ ಧೂಳಿನ ಇನ್ಹೆಲೇಷನ್ ನಿಂದಾಗಿ ಬರುವಂತದು.ಚಿಕಿತ್ಸೆಯು ಬ್ರಾಂಕೋಡಿಲೇಟರ್ಸ್ಗಳನ್ನು ಅವಲಂಬಿಸಿದೆ.

ಈ ಕಾಯಿಲೆಗೆ ನಿರ್ದಿಷ್ಟ ಚಿಕಿತ್ಸೆಯಿಲ್ಲ

ಹತ್ತು ಹದಿನೈದು ವರುಷಗಳ ಕಾಲದ ಅವಧಿಯಲ್ಲಿ ಮನುಷ್ಯನ ಒಳಗೇ ಅವಿತಿದ್ದು ಅವನನ್ನು ನಿಶ್ಯಕ್ತನನ್ನಾಗಿ ಮಾಡಬಲ್ಲ ಈ ಕಾಯಿಲೆಗೆ ನಿರ್ದಿಷ್ಟ ಟ್ರೀಟ್ಮೆಂಟ್ ಇಲ್ಲ.ಆದರೆ ಧೂಳನ್ನು ಉಸಿರಾಡುವುದನ್ನು ತಪ್ಪಿಸಬೇಕಷ್ಟೆ. ಧೂಳು ಇಲ್ಲದಂಗ ಅದೆಂಗ ಗಣಿಗಾರಿಕೆ ಮಾಡ್ತಾರ ಸಾಮಿ,?ಅದೇನರ ನಿಂತೋದರೆ…ನನ್ ಎದೆಯಷ್ಟೇ ಅಲ್ಲ,ನಮ್ಮ ಕುಟುಂಬವೇ ಸರ್ವನಾಶ ಆಗಿಬಿಡುತ್ತದೆ ಎಂದವನ ಮುಖ ನೋಡಿದೆ.

ಈ ಮಾತನ್ನು ಅವನು ನಗು ನಗುತ್ತಲೇ ಹೇಳಿದ್ದ!..

ಗಣಿಗಾರಿಕೆ ನಡೆದರೆ ಕೆಮ್ಮುತ್ತಲೋ,ಕುಂಟುತ್ತಲೋ…ಹತ್ತು ಹದಿನೈದು ವರುಷಗಳ ಕಾಲ ರೋಗ ಹೊತ್ತುಕೊಂಡೇ ಓಡಾಡಿ ಹೇಗೋ ಬದುಕಿ ಈ ಲೋಕ ತ್ಯಜಿಸಬಹುದು.

ಆದರೆ….  ಗಣಿಗಾರಿಕೆ ಸ್ತಬ್ದವಾದರೆ ಮಾತ್ರ ಹಸಿವಿನಿಂದ ಸಾಯಲು ತಡವೇ ಆಗುವುದಿಲ್ಲ ಎಂದು ಹೇಳುತ್ತಲೇ ಆತ ಕೆಮ್ಮತೊಡಗಿದ.

 

          ಬಿ.ಶ್ರೀನಿವಾಸ

 

TAGGED:dinamaana.comKannada NewsSilicosis" disease.ಕನ್ನಡ ನ್ಯೂಸ್‌ದಿನಮಾನ.ಕಾಂಸಿಲಿಕೋಸಿಸ್" ರೋಗ.
Share This Article
Twitter Email Copy Link Print
Previous Article Sondur rain ಸೊಂಡೂರಿನ  ಮಳೆ!
Next Article harihara dvg ಡಾ.ಬಿ.ಆರ್.ಅಂಬೇಡ್ಕರ್ ನಿಜವಾದ ರಾಷ್ಟ್ರೀಯವಾದಿ ನಾಯಕ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

ಮಕ್ಕಳ ಕಲ್ಯಾಣ ಸಮಿತಿಗೆ ನೇಮಕ, ಆಕ್ಷೇಪಣೆಗಳಿಗೆ ಅರ್ಜಿ ಆಹ್ವಾನ

ದಾವಣಗೆರೆ ಮಾ.10 (Davanagere) :  ದಾವಣಗೆರೆ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿಗೆ ಅಧ್ಯಕ್ಷರು, ಸದಸ್ಯರುಗಳನ್ನು ಸರ್ಕಾರದ ಮಾನದಂಡದನ್ವಯ ನೇಮಕ ಮಾಡಲಾಗಿದ್ದು…

By Dinamaana Kannada News

Harihara | ರೈಲು ಗಾಡಿಗೆ ಸಿಲುಕಿ ವೃದ್ದೆ ಸಾವು

ಹರಿಹರ (Harihara): ವೃದ್ದೆಯೊಬ್ಬರು ರೈಲು ಹಳಿ ದಾಟುವ ವೇಳೆ ರೈಲು ಗಾಡಿಗೆ ಸಿಲುಕಿ ಮೃತಪಟ್ಟಿರುವ ಘಟನೆ ನಡೆದಿದೆ. ರೈಲು ನಿಲ್ದಾಣದಲ್ಲಿ…

By Dinamaana Kannada News

Crime news | ರೌಡಿಶೀಟರ್ ಕಣುಮನ ಹಂತಕರು ಒಂದು ದಿನದ ನಂತರ ಅಂದರ್ !

ಚಿತ್ರದುರ್ಗ (chitraduraga): ರೌಡಿ ಶೀಟರ್ ಕಣುಮ ಅಲಿಯಾಸ್ ಕಣುಮ ಸಂತೋಷಕುಮಾರನನ್ನು ಬರ್ಬರವಾಗಿ ಹತ್ಯೆಗೈದು ಸ್ಥಳದಿಂದ ನಾಪತ್ತೆಯಾಗಿದ್ದ ಹಂತಕರ ಪೈಕಿ 10…

By Dinamaana Kannada News

You Might Also Like

Davanagere
ತಾಜಾ ಸುದ್ದಿ

Davanagere | ಅರೆ ಕಾಲಿಕ ಶಿಕ್ಷಕರ ಸೇವೆಗೆ ಅರ್ಜಿ ಆಹ್ವಾನ

By Dinamaana Kannada News
Needle of Light-Book
Blog

ಗೀತಾ ಮಂಜುರವರ ಕಿರು ಬೆಳಕಿನ ಸೂಜಿ” ಕೃತಿಗೆ 2024ರ “ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ”

By Dinamaana Kannada News
Davanagere police
ತಾಜಾ ಸುದ್ದಿಅಪರಾಧ ಸುದ್ದಿ

ಎರಡು ಪ್ರತ್ಯೇಕ ಅಪ್ರಾಪ್ತ ಬಾಲಕ ವಾಹನ ಚಾಲನೆ ಪ್ರಕರಣ : ವಾಹನ ಮಾಲೀಕರಿಗೆ 25 ಸಾವಿರ ದಂಡ 

By Dinamaana Kannada News
GM University Davanagere
ತಾಜಾ ಸುದ್ದಿ

ಜಿಎಂ ವಿಶ್ವವಿದ್ಯಾಲಯ : ಪ್ರಸಕ್ತ ಸಾಲಿನಲ್ಲಿ 1000 ಜಾಬ್ ಆಫರ್ಸ್ ಸ್ವೀಕರಿಸಿದ ವಿದ್ಯಾರ್ಥಿಗಳು

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Welcome Back!

Sign in to your account

Lost your password?