Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > ಸೊಂಡೂರಿನ ಕಗ್ಗತ್ತಲೆಯ ಕಥನಗಳು – 7 ಬಡವರೇ ಇರದ ಊರು
Blog

ಸೊಂಡೂರಿನ ಕಗ್ಗತ್ತಲೆಯ ಕಥನಗಳು – 7 ಬಡವರೇ ಇರದ ಊರು

Dinamaana Kannada News
Last updated: April 28, 2024 4:10 am
Dinamaana Kannada News
Share
sanduru mining dvg
ಸಂಡೂರಿನ ಕಥನಗಳು-7
SHARE

ಎಣ್ಣೆ ಕಾಳುಗಳ ಬೆಳೆಗೆ ಪ್ರಶಸ್ತವಾದ ಭೂಮಿ

ಸೊಂಡೂರಿನ ಭೂಮಿ ತುಂಬಾ ಫಲವತ್ತಾದುದು.  ಕಲ್ಲುಮಿಶ್ರಿತ ಕೆಂಪು ಮಣ್ಣಿನ ಇಲ್ಲಿನ ಹೊಲಗಳಿಗೆಲ್ಲ ಒಂದು ಆಕಾರವೆಂಬುದಿಲ್ಲ. ಇಳಿಜಾರಿನಂತಹ ಹೊಲಗಳ ಈ ಪ್ರದೇಶಗಳು ಎಣ್ಣೆ ಕಾಳುಗಳ ಬೆಳೆಗೆ ಪ್ರಶಸ್ತವಾದ ಭೂಮಿಯಿದು.  ಉಳಿದಂತೆ ಜೋಳ, ಸಜ್ಜೆ, ನವಣೆ, ರಾಗಿ, ಗುರೆಳ್ಳು ಅತಿ ಮುಖ್ಯ ಬೆಳೆಗಳಾಗಿದ್ದವು.

ಆಗೆಲ್ಲ ರೊಕ್ಕವೆಂಬುದು ಈಗಿನಂತೆ ಕೆಂಪಾಗಿರಲಿಲ್ಲ. ಎಷ್ಟೋ ಜನರು ನೋಟಿನಲ್ಲಿರುವ ಗಾಂಧೀತಾತನನ್ನೂ ನೋಡಿರಲಿಲ್ಲ.  ಅದರ ಅವಶ್ಯಕತೆಯೂ ಅವರಿಗೆ ಇರಲಿಲ್ಲ. ಚಹಾ ಮಾಡಲು ಚಾ ಬಿಲ್ಲೆ, ಬೆಲ್ಲ, ಮುಂತಾದ ದಿನಸಿ ಬೇಕೆಂದರೆ ಮನೆಯ ರಾಗಿ, ಜ್ವಾಳಗಳನ್ನು ಶೆಟ್ಟರ ಅಂಗಡಿಗೆ ಕೊಟ್ಟು ತರಬೇಕಿತ್ತು.

ನೋಟು, ನಾಣ್ಯಗಳೆಲ್ಲ ಕೈಯಿಂದ ಕೈಗಳಿಗೆ ಓಡಾಡುತ್ತಿರಲಿಲ್ಲ. ಶತಮಾನಗಳ ಕಾಲ ಕೃಷಿಯನ್ನೆ ನಂಬಿ ಬದುಕಿದ್ದ ಸಮುದಾಯಗಳ ಸಂಖ್ಯೆ ನಿರಂತರವಾಗಿ ಏರಿಕೆಯಾದಂತೆಲ್ಲ, ಭಾರತದಂತಹ ಕೃಷಿ ಮೂಲ ಅಭಿವೃದ್ಧಿ ಶೀಲ ರಾಷ್ಟ್ರಗಳು ನಿರುದ್ಯೋಗಗಳಂತಹ ಒತ್ತಡಗಳನ್ನು ನಿವಾರಿಸಿಕೊಳ್ಳಲು ಕೈಗಾರಿಕೆಗಳನ್ನು ಸ್ಥಾಪಿಸುವುದು ಅನಿವಾರ್ಯವಾಯಿತು.

ಇಂತಹ ದೇಶದಲ್ಲಿ ಸರ್ಕಾರ ಜನಹಿತಕಾರಿಯಾದ ‘ಇಂಡಸ್ಟ್ರಿಯಲ್ ಪಾಲಿಸಿ’ಯೊಂದನ್ನು ರೂಪಿಸಿಕೊಳ್ಳುವ ಅಗತ್ಯತೆ ಇದ್ದುದರಿಂದ ಕಾನೂನುಗಳು ರಚನೆಯಾದು ವೆಂಬುದೇನೋ ನಿಜ. ಈ ಕೈಗಾರಿಕಾ ನೀತಿಗಳು ಜನಪರವಾಗಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ಆಯಾ ಪ್ರಭುತ್ವಗಳದಾಗಿರಬೇಕಿತ್ತು.

ಖಾಸಗಿ -ಸರಕಾರಗಳ ಘರ್ಷಣೆಗಳಿಗೆ ಬಡ ಕಾರ್ಮಿಕರು ಬಲಿ

ಆ ನೀತಿಗಳು ಬಹುತೇಕ ಆಡಳಿತಾರೂಢ ಪಕ್ಷಗಳ ತತ್ವಗಳಂತೆ ರೂಪಿತಗೊಂಡಾಗ ಆರ್ಥಿಕ ಅಸಮತೋಲನ ಉಂಟಾಯಿತು. ಬಡವ-ಶ್ರೀಮಂತರ ಅಂತರ ಹೆಚ್ಚಾಯಿತು. ಜನರ ಸರ್ಕಾರಗಳೇ ಕೈಗಾರಿಕೆಗಳನ್ನು ಸ್ಥಾಪಿಸಿದ್ದರೆ ದೇಶದ ದೃಷ್ಟಿಯಿಂದ ಉತ್ತಮವಾದ ನಡೆಯಾಗಿರುತ್ತಿತ್ತು.ಆದರೆ ಖಾಸಗಿ -ಸರಕಾರಗಳ ಘರ್ಷಣೆಗಳಿಗೆ ಬಡ ಕಾರ್ಮಿಕರು ತುತ್ತಾದರು.

ಬಳ್ಳಾರಿ ಜಿಲ್ಲೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಹುಸಂಖ್ಯೆಯಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಿ, ಮಹಾಸ್ಫೋಟವೆ ನಡೆಯಿತೆನ್ನಬಹುದು. ಪರಿಣಾಮವಾಗಿ, ಇಡೀ ರಾಜ್ಯದಲ್ಲಿಯೆ ಅತಿ ವೇಗವಾಗಿ ಬೆಳೆಯುತ್ತಿರುವ ಎರಡನೇ ಅತಿದೊಡ್ಡ ನಗರವಾಗಿ ಬಳ್ಳಾರಿ ಗುರುತಿಸಿಕೊಂಡಿತು.

ರಾಜ್ಯದ ಜಿ.ಡಿ.ಪಿ.ಯ ಶೇ.3.4 ಕೇವಲ ಬಳ್ಳಾರಿಯೊಂದರಿಂದಲೇ ಇತ್ತು.2007 ರಿಂದ 2013 ವರೆಗೂ ಇದೇ ವೇಗದಲ್ಲಿತ್ತು. ಆಗ ಜಿಲ್ಲೆಯ ವಾರ್ಷಿಕ ತಲಾ ಆದಾಯವು ರೂ.74,554 ರೂಪಾಯಿಗಳಿತ್ತು. ಅಂದರೆ ಪ್ರತಿಯೊಬ್ಬನ ತಿಂಗಳ ಆದಾಯವೆ ರೂ 6213/ ಆಗಿ, ದಿನವೊಂದಕ್ಕೆ ಪ್ರತಿಯೊಬ್ಬನ ಆದಾಯವು ರೂ.207/ ಆಗಿತ್ತು. ಅಂದರೆ ಭಾರತದ ಬಡತನ ರೇಖೆಯ ಮಾನದಂಡವಾಗಿದ್ದ ದಿನವೊಂದಕ್ಕೆ ರೂ.27 ರ ಆದಾಯದ ಬಡವರು ಇಡೀ ಜಿಲ್ಲೆಯಲ್ಲಿಯೇ ಇರಲಿಲ್ಲ. ಇರಲೇ ಇಲ್ಲ!

ಇಡೀ ಜಿಲ್ಲೆಯಲ್ಲಿ ಬಡವರೇ ಇರಲಿಲ್ಲ!.
ಆಹಾ… ಅಭಿವೃದ್ಧಿಯ ಮಾನದಂಡವೆ!

ಇದ್ದಕ್ಕಿದ್ದಂತೆಯೆ ಸ್ತಬ್ದವಾದ ಅಕ್ರಮ ಗಣಿಗಾರಿಕೆಯಿಂದಾಗಿ ಅಸಂಖ್ಯಾತ ಕಾರ್ಮಿಕರು ಕೆಲಸವಿಲ್ಲದೆ ಬೀದಿಗೆ ಬಿದ್ದರು. ಅತ್ತ ಬ್ಯಾಸಾಯವೂ ಮಾಡದ, ಮಾಡುವ ಮನಸ್ಸಿದ್ದರೂ ಭೂ ನಿರ್ಗತಿಕರಾಗಿ ಅಕ್ಷರಶಃ ಇವರುಗಳೆಲ್ಲ ಅರೆಹುಚ್ಚರಾಗಿದ್ದುದು ಆಶ್ಚರ್ಯವೇನಿಲ್ಲ.

ಬಿತ್ತನೆ ಮಾಡುವ ಮುನ್ನ ಬೀಜಗಳನ್ನು ಭೂಗರ್ಭಕೆ ಸಲ್ಲಿಸಿ, ತಾಯಿ ಕಾಪಾಡವ್ವಾ.. ಭೂಮ್ತಾಯೀ.. ಎಂದು ಬಾಲ್ಯದಲ್ಲಿ ಪೂಜಿಸಿದ ಅದೇ ಭೂಮಿಯನ್ನು ಬಗೆದವರ ಗುಂಪಿನಲ್ಲಿ ತಾನೂ ಒಬ್ಬನಾದುದುಕೆ ದುಃಖಿಸುವ ಆತನನ್ನು ಸಂತೈಸುವವರಾದರೂ ಯಾರು?

ಬಿ.ಶ್ರೀನಿವಾಸ

TAGGED:dinamaana.comKannada NewsSanduru stories.ಕನ್ನಡ ಸುದ್ದಿದಿನಮಾನ.ಕಾಂಸಂಡೂರಿನ ಕಥನಗಳು.
Share This Article
Twitter Email Copy Link Print
Previous Article former davanagere ರೈತರಿಗೆ ಭರವಸೆ ನೀಡಿ ವಂಚನೆ : ಎನ್‌ಡಿಎ ತೊಲಗಿಸಲು ಹೋರಾಟ
Next Article Supreme Court ಇಂಡಿಯಾ ಒಕ್ಕೂಟದಲ್ಲಿ ನಾಯಕ ಯಾರು? : ಮೋದಿ  

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

ಬಸವನಗೌಡ ಯತ್ನಾಳ್ ಬಿಜೆಪಿ ರಾಜ್ಯಾಧ್ಯಕ್ಷರಾಗಬೇಕು : ಶಾಸಕ ಬಿ.ಪಿ. ಹರೀಶ್

ದಾವಣಗೆರೆ : ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಅನುಭವದ ಕೊರತೆ ಇದೆ. ಹಾಗಾಗಿ, ರಾಜ್ಯಾಧ್ಯಕ್ಷರ ಬದಲಾವಣೆ ಆಗಲೇಬೇಕು. ಅವರ ಬದಲು ಹಿರಿಯರಾದ…

By Dinamaana Kannada News

Davanagere | ರಾಜ್ಯೋತ್ಸವ ಆಚರಣೆ ಪೂರ್ವಭಾವಿ ಸಿದ್ದತಾ ಸಭೆ : ಎಲ್ಲಾ ಇಲಾಖೆಯಲ್ಲಿಯು ಕನ್ನಡ ಬಳಕೆ ಕಡ್ಡಾಯ

ದಾವಣಗೆರೆ,ಅ .19 (Davanagere) : ಜಿಲ್ಲಾಡಳಿತದಿಂದ ನವೆಂಬರ್ 1 ರಂದು ನಡೆಯುವ 69 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಜಿಲ್ಲಾ…

By Dinamaana Kannada News

Davanagere | ಭವಿಷ್ಯ ಹಾಳು ಮಾಡಿಕೊಳ್ಳಬೇಡಿ : ನ್ಯಾ.ಮಹಾವೀರ್ ಮಾ.ಕರೆಣ್ಣವರ್

ದಾವಣಗೆರೆ ಸೆ.25  (Davanagere)  : ವಿದ್ಯಾರ್ಥಿ ಜೀವನದಲ್ಲಿ ರ್ಯಾಗಿಂಗ್ ಎಂಬುವುದು ಪೆಡಂಭೂತ, ಇದು ಸಮಾಜಘಾತುಕ, ಸಾಮಾಜಿಕ, ಬೌದ್ಧಿಕ ಮತ್ತು ಧಾರ್ಮಿಕ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

Davanagere | ನಮ್ಮ ಆರೋಗ್ಯ, ನಮ್ಮ ಕೈಲಿ : ಡಿ.ಸಿ

By Dinamaana Kannada News
Davanagere
ತಾಜಾ ಸುದ್ದಿ

ಎಸ್.ಎಸ್. ಜನರಲ್ ಆಸ್ಪತ್ರೆಯಲ್ಲಿ ಒಳರೋಗಿಗಳ ಸೇವೆಗೆ ಡಾ|| ಎಸ್ಸೆಸ್ ಚಾಲನೆ

By Dinamaana Kannada News
Davanagere
ತಾಜಾ ಸುದ್ದಿ

ವಿದ್ಯುತ್ ವ್ಯತ್ಯಯ | ಜೂ.24 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ

By Dinamaana Kannada News
Davanagere
ತಾಜಾ ಸುದ್ದಿ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ | ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?