ದಾವಣಗೆರೆ : ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದೇಶದ ಭವಿಷ್ಯ ಅಡಗಿದೆ. ದೇಶ ಯಾವ ದಿಕ್ಕಿನಲ್ಲಿ ಸಾಗಬೇಕು ಎನ್ನುವ ಕುರಿತು ಜನ ತೀರ್ಮಾನ ಮಾಡಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಹೇಳಿದರು.
ನಗರದ ಹೈಸ್ಕೂಲ್ ಮೈದಾನದಲ್ಲಿ ಶನಿವಾರ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದಿಂದ ಏರ್ಪಡಿಸಿದ್ದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶದಲ್ಲಿರುವ ಸರ್ಕಾರ ಸಾಮಾನ್ಯ ಪ್ರಜೆಗಳಿಗಾಗಿ ಕೆಲಸಮಾಡುತ್ತಿಲ್ಲ ಬಂಡವಾಳ ಶಾಹಿಗಳ ಕೆಲಸ ಮಾಡುತ್ತಿದೆ ಇದರ ಪರಿಣಾಮ 45 ವರ್ಷದಲ್ಲಿ ಕಾಣದ ನಿರುದ್ಯೋಗ ಭಾರತದಲ್ಲಿದೆ. ಭಾರತದ ಯುವಕರು ನಿರುದ್ಯೋಗಿಗಳಾಗಿದ್ದರೆ. ಕಷ್ಟಪಟ್ಟು ಮಕ್ಕಳನ್ನು ಓದಿಸುತ್ತಾರೆ. ಅದರೆ ವಿದ್ಯಾಭ್ಯಾಸ ಇದ್ದರು ಉತ್ರಮ ಉದ್ಯೋಗ ವಿಲ್ಲ ಕೇಂದ್ರ ಸರಕಾರ ಉದ್ಯೋಗ ಸೃಷ್ಠಿಸಲು ಯಾವ ಯೋಜನೆ ರೂಪಿಸಿಲ್ಲ ಎಂದು ಹೇಳಿದರು.
ಮೋದಿ ದೇಶದ ದೊಡ್ಡ ಸಂಸ್ಥೆಯನ್ನು ಖಾಸಗೀಕರಣ ಮಾಡಿದರೆ ಮೀಸಲಾತಿಗೆ ಪೆಟ್ಟು ಬೀಳಲಿದೆ. ದೇಶದ ಸಂಪತ್ತು, ಜನರಿಗೆ ಸೇರಿದ್ದು ಮೋದಿ ಈ ಸಂಪತ್ತನ್ನು ಸಾರ್ವಜನಿಕರಿಗೆ ನೀಡುವ ಯಾವ ಕೆಲಸ ಮಾಡಿಲ್ಲ ಹತ್ತು ವರ್ಷದ ಆಡಳಿತದಲ್ಲಿ ಜನ ಜೀವನ ಸುಧಾರಿಸಿದೆಯೇ.. ಉದ್ಯೋಗ ಸಿಕ್ಕಿದೆಯೇ ಜೀವನ ಸುಧಾರಿಸಿಲ್ಲ ಮತ್ತಷ್ಟೂ ಸಂಕಷ್ಟ ಹೆಚ್ಚಾಗಿದೆ. ದೇಶದಲ್ಲಿ ಬಡವರು ಬಡವರಾಗಿಯೇ ಇದ್ದಾರೆ ಶ್ರೀಮಂತ ರು ಮತ್ತಷ್ಟು ಶ್ರೀಮಂತರಾಗಿದ್ದಾರೆ. ಬಿಜೆಪಿ ಪಕ್ಷ ವಿಶ್ವದಲ್ಲೇ ಅತ್ಯಂತ ಶ್ರೀಮಂತ ಪಕ್ಷವಾಗಿ ಹೊರಹೊಮ್ಮಿದೆ. ಇದರ ಜೊತೆಗೆ ದೊಡ್ಡ ಉದ್ಯಮಿಗಳ ಹದಿನಾರು ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದ್ದಾರೆ. ಇವತ್ತು ಒಂದು ಕಡೆ ಬಿಜೆಪಿ ಪಕ್ಷಕ್ಕೆ ಕಾಸು ಸಂಗ್ರಹಣೆ ಮಾಡಿದೆ.ಇನ್ನೊಂದು ಕಡೆ ಸಾಮಾನ್ಯ ಜನರು ಬೆಲೆ ಏರಿಕೆಯಿಂದ ತತ್ತರಿಸುತ್ತಿದ್ದಾರೆ.ರೈತರು ಸಂಕಷ್ಟದಲ್ಲಿದ್ದಾರೆ ಆದರೆ ರೈತರ ಸಾಲ ಮನ್ನಾ ಮಾಡದೆ ಶ್ರೀಮಂತ ರ ಸಾಲನ್ನಾ ಆಗಿದೆ. ಈ ಮೂಲಕ ಬಂಡವಾಳ ಶಾಹಿಗಳಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ ಎಂದು ದೂರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ ಮೇ.7 ರಂದು ಚುನಾವಣೆ ನಡೆಯಲಿದೆ ಈ ಚುನಾವಣೆ ಮಹತ್ವದ ಚುನಾವಣೆಯಾಗಿದೆ. ಜನ ಮತದಾನಕ್ಕೂ ಮುನ್ನಾ ಯೋಚಿಸಬೇಕು ಯಾವ ಪಕ್ಷ ಅಧಿಕಾರಕ್ಕೆ ಬಂದರೆ ಒಳಿತು ಆರ್ಥಿಕ, ಸಾಮಾಜಿಕ ಶಕ್ತಿ ನೀಡುತ್ತಾರೆ .ಸಮಾಜದಲ್ಲಿಬದಲಾವಣೆ ತರುತ್ತಾರೆ ಅರ್ಥ ಅಂತಹವರಿಗೆ ಮತ ನೀಡಿ. ಸಾಧನೆ ಮುಂದಿಟ್ಟು ಮತ ಕೇಳಬೇಕು ಆದರೆ ಮೋದಿ ದೇಶದ ಅಭಿವೃದ್ಧಿ ವುಚಾರ ಇಡದೆ ಸುಳ್ಳುಗಳನ್ನು ಇಡುತ್ತಿದ್ದಾರೆ ಇದನ್ನು ಜನ ಅರ್ಥ ಮಾಡಿಕೊಳ್ಳಬೇಕು. ವಿದೇಶದಲ್ಲಿರುವ ಕಪ್ಪು ಹಣ ತರುವುದಾಗಿ ಹೇಳಿದ್ದರು.ಅಧಿಕಾರಕ್ಕೆ ಬಂದ ಮೂರೇ ದಿನದಲ್ಲಿ ಜನರ ಖಾತೆಗೆ ಹದಿನೈದು ಲಕ್ಷ ಹಾಕುವುದಾಗಿ ಹೇಳಿದ್ದರು. ಹತ್ತು ವರ್ಷದಲ್ಲಿ ಹದಿನೈದು ರೂಪಾಯಿಯನ್ನೂ ಹಾಕಿಲ್ಲ. ನಿರುದ್ಯೋಗ ಇದೆ ಯುವಸಮೂಹ ಪದಿವೀಧರರಿಗೆ ಎರಡು ಕೋಟಿ ಉದ್ಯೋಗ ಸೃಷ್ಠಿ ಮಾಡುವುದಾಗಿ ಹೇಳಿದ್ದರು. ಹತ್ತು ವರ್ಷದಲ್ಲಿ ಇಪ್ಪತ್ತು ಕೋಟಿ ಉದ್ಯೋಗ ಸೃಷ್ಠಿಯಾಗಿಲ್ಲ ಎಂದು ವ್ಯಂಗ್ಯ ವಾಡಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಮಹಿಳೆಯರಿಗೆ ಶಕ್ತಿಕೊಟ್ಟವರು ನಾವು, ಅನ್ನಭಾಗ್ಯ ಕೊಟ್ಟವರು ನಾವು. ಉಚಿತ ಬಸ್ ಪ್ರಯಾಣ ಕೊಟ್ಟವರು ನಾವು. ಗೃಹ ಜ್ಯೋತಿ ಯೋಜನೆ, ಯುವ ನಿಧಿ ತಂದವರು ನಾವು. ಕೊಟ್ಟ ಮಾತಿನಂತೆ ಮಾತು ಉಳಿಸಿಕೊಂಡಿದ್ದೇವೆ. ಅದರೆ ಬಿಜೆಪಿ ಕೊಟ್ಟಿದ್ದು ಮಾತ್ರ ಚೊಂಬು ಅದ್ದರಿಂದ ಪ್ರಭಾ ಮಲ್ಲಿಕಾರ್ಜುನ ಅವರನ್ನು ಸಂಸತ್ತಿಗೆ ಕಳುಹಿಸಿಕೊಡಿ ಎಂದು ಮನವಿ ಮಾಡಿದರು.
ಸಚಿವ ಎಸ್ .ಎಸ್ ಮಲ್ಲಿಕಾರ್ಜುನ್ ಮಾತನಾಡಿ, ದೇಶದ ಪ್ರಜಾಪ್ರಭುತ್ವ ಉಳಿಸಲು ರಾಹುಲ್ ಗಾಂಧಿ ಮುಂದಾಗಿದ್ದಾರೆ.ಭಾರತ ರಕ್ಷಣೆಗೆ ಮುಂದಾಗಿದ್ದಾರೆ. ಸಂವಿಧಾನದ ರಕ್ಷಣೆಗಾಗಿ ಕಾಂಗ್ರೆಸ್ ಗೆಲ್ಲಿಸಿ ಎಂದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್, ಶಾಸಕರಾದ ಡಿ.ಜಿ ಶಾಂತನಗೌಡ, ಲತಾ ಮಲ್ಲಿಕಾರ್ಜುನ್, ಬಸವಂತಪ್ಪ, ಶಿವಗಂಗಾ ಬಸವರಾಜ್, ಶರತ್ ಬಚ್ಚೇಗೌಡ, ಮೊಹಮ್ಮದ್ ನಲಪಾಡ್, ಮೇಯರ್ ವಿನಾಯಕ ಪೈಲ್ವಾನ್,ಸಾಧು ಕೋಕಿಲ, ಮಾಜಿ ಸಚಿವ ಹೆಚ್ ಆಂಜನೇಯ ಸೇರಿದಂತೆ ಹಲವರು ಇದ್ದರು.