Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > ದಿನಮಾನ ಹೆಮ್ಮೆ : ಲೋಹಿಯಾ ಚನ್ನಬಸವಣ್ಣ
Blog

ದಿನಮಾನ ಹೆಮ್ಮೆ : ಲೋಹಿಯಾ ಚನ್ನಬಸವಣ್ಣ

Dinamaana Kannada News
Last updated: July 7, 2024 5:19 am
Dinamaana Kannada News
Share
dinamaana
ಲೋಹಿಯಾ ಚನ್ನಬಸವಣ್ಣ
SHARE

Kannada News | Dinamaanada Hemme  | Dinamaana.com | 07-07-2024

ದೃಶ್ಯಾನುಭೂತಿ ತಮ್ಮ ಮಾತುಗಳಲ್ಲಿ ಕಟ್ಟಿಕೊಡಬಲ್ಲರು

(Lohia Channabasavanna)

ಅವರ ಇಡೀ ಸಾಹಚರ್ಯೆಯ ಅವಧಿಯಲ್ಲಿ, ನಾವು ಕಾಣದ, ಸಮಾಜವಾದದ ಅತ್ಯುನ್ನತ ಕಾಲವೊಂದಲ್ಲಿದ್ದಂತೆ ಭಾಸವಾಗುತ್ತದೆ. ಅಂತಹ ದೃಶ್ಯಾನುಭೂತಿಯನ್ನು ಅವರು ತಮ್ಮ ಮಾತುಗಳಲ್ಲಿ ಕಟ್ಟಿಕೊಡಬಲ್ಲರು.

ನಾಡು ಕಟ್ಟುವ ಉಮೇದು (Lohia Channabasavanna)

ಕೆಲವರ ಬದುಕು,ಸಹಚರ್ಯೆ ಗಳಿಂದ ಉಂಟಾಗುವ ಅನುಭವವೇ ವಿಶೇಷವಾಗಿರುತ್ತದೆ. ಕವಿತೆಯೊಂದು ತನ್ನ ಶಬ್ದಗಳಿಂದ ಸೌಂದರ್ಯಾನುಭವ ನೀಡುತ್ತಿರುವಂತೆ ಅವರೊಂದಿಗಿನ ಮಾತುಕತೆಗಳು ನಾಡು ಕಟ್ಟುವ ಉಮೇದನ್ನು ಹೆಚ್ಚಿಸುವಂತೆ ಇರುತ್ತವೆ.

ತಮ್ಮ ಚಿಂತನ,ಮಂಥನ ಮತ್ತು ಸೃಜನಶೀಲ ಕ್ಷಣಗಳಲ್ಲಯೂ ಕೂಡ ನಿರ್ಲಿಪ್ತರಂತೆ ಕಾಣುವವರು ತಮ್ಮ ಬದುಕಿನ ಬಹುಭಾಗವನ್ನು ಸಮಾಜದ ನಡುವೆ ಕಳೆದಿರುತ್ತಾರೆ. ಇಲ್ಲಿ ಅವರ ಬುದ್ದಿಗಿಂತ ಭಾವಕ್ಕಿಂತ ಬದುಕಿನ ನೇರ ಅನುಭವ ಬಲು ದೊಡ್ಡ ಬಂಡವಾಳ.

ಕನ್ನಡಕ್ಕೆ ಅತ್ತ್ಯುತ್ತಮ ಪುಸ್ತಕಗಳನ್ನು ಓದಲು ಕೊಟ್ಟ ಚನ್ನಬಸವಣ್ಣ (Lohia Channabasavanna)

ಕರ್ನಾಟಕದ ರಾಜಕಾರಣ,ಸಮಾಜವಾದದ ಅಧಃಪತನವನ್ನೂ,ವ್ಯಕ್ತಿ ವಿಶೇಷತೆಗಳನ್ನು,ಘಟನೆ-ವಿಘಟನೆಗಳನ್ನೂ ತನ್ನದೇ ವಿಶ್ಲೇಷಕ ದೃಷ್ಟಿಯಿಂದ ನೋಡುವ ನಿಷ್ಠುರವಾದಿ ಲೋಹಿಯಾ ಚನ್ನಬಸವಣ್ಣ ಯಾರಿಗೆ ತಾನೆ ಗೊತ್ತಿಲ್ಲ? ಬಳ್ಳಾರಿಯ ಲೋಹಿಯಾ ಪ್ರಕಾಶನದ ಮೂಲಕ ಕನ್ನಡಕ್ಕೆ ಅತ್ತ್ಯುತ್ತಮ ಪುಸ್ತಕಗಳನ್ನು ಓದಲು ಕೊಟ್ಟ ಚನ್ನಬಸವಣ್ಣನವರ ಬದುಕು ವೈಯಕ್ತಿಕ ನೆಲೆಯದಾದರೂ ಅದು ಸಾಮಾಜಿಕೀಕರಣಗೊಳ್ಳುವ ರೀತಿಯು ಬೆರಗು ಮೂಡಿಸುವಂತಿದೆ.

ಸಮಾಜವಾದಿ ಕೂಡ ಇದ್ದಾನೆ(Lohia Channabasavanna)

ಕಾಣದ ಕತ್ತಲಲ್ಲಿ ಬೇರಿಳಿಸಿದ ಮರ ಹುಗಿದ ಅಜ್ಞಾತಗಳ ಬಗೆಯುತ್ತ ಹೋದಂತೆ…… ಚನ್ನಬಸವಣ್ಣ ಬದುಕಿದ್ದಾರೆ. ಚನ್ನಬಸವಣ್ಣನವರ ಎದೆಯೊಳಗೆ ಲೋಹಿಯಾ , ಶಾಂತವೇರಿ,ಮಧು ದಂಡವತೆ,ಜಾರ್ಜ್ ಫರ್ನಾಂಡಿಸ್,ಹಡಪದ ರಾಚಪ್ಪ,ಕೆ.ಹೆಚ್.ರಂಗನಾಥ,ಮಧುಲಿಮೆಯೆ,ಕರ್ಪೂರಿ ಠಾಕೂರ್ ,ಪಟೇಲರು,ಪ್ರಮೀಳಾ ದಂಡವತೆ,ಹೆಗಡೆ,ಇರುವಂತೆ ಅವರೊಳಗೆ ಒಬ್ಬ ಕವಿ,ಕಥೆಗಾರ,ಸಂಶೋಧಕ,ಸಮಾಜ ಸುಧಾರಕನೆಂಬ ಬಹುದೊಡ್ಡ ಜವಾಬ್ದಾರಿ ಹೊತ್ತ ಸಮಾಜವಾದಿ ಕೂಡ ಇದ್ದಾನೆ.

ನಾಗರಿಕ ಸಮಾಜವಾದ ಎಚ್ಚರದಲ್ಲಿ ಇರಿಸಿದ್ದಾರೆ (Lohia Channabasavanna)

ಇಂತಹ ಲೋಹಿಯಾವಾದಿ ಚನ್ನಬಸವಣ್ಣ ನಮ್ಮ ನಡುವಿನ ಜೀವಂತ ನಿಷ್ಟುರ ಸಮಾಜವಾದಿ.ಅಪ್ಪಟ ಶಿಸ್ತಿನ ಮನುಷ್ಯರಾದ ಚನ್ನಬಸವಣ್ಣ ಯಾವುದೇ ಕಾರ್ಯಕ್ರಮವನ್ನು ಆಯೋಜಿಸಲಿ,ನಿಗದಿತ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮವನ್ನು ಆರಂಭಿಸಿ ಬಿಡುತ್ತಾರೆ. ಅತಿಥಿಗಳು ಮುಖ್ಯಮಂತ್ರಿಯೇ ಆಗಿರಲಿ,ಮಂತ್ರಿಗಳೇ ಆಗಿರಲಿ,ಮಹಾ ಮೇಧಾವಿ ಸಾಹಿತಿಗಳೇ ಆಗಿರಲಿ,ಅವರ ಗೈರನ್ನು ಗಮನಿಸಿಯೂ ಗಮನಿಸದಂತೆ , ಇಲ್ಲಿ ಯಾರೂ ಮುಖ್ಯವಲ್ಲ ,ಯಾರೂ ಅಮುಖ್ಯರೂ ಅಲ್ಲ, ಎಂಬಂತೆ ಉದ್ದೇಶಿತ ಕಾರ್ಯಕ್ರಮವನ್ನು ಆರಂಭಿಸುತ್ತಾರೆ. ವೈಚಾರಿಕ ಕೃತಿಗಳನ್ನು ಪ್ರಕಟಿಸುವ ಮೂಲಕ ನಾಗರಿಕ ಸಮಾಜವಾದವನ್ನು ಸದಾ ಎಚ್ಚರದಲ್ಲಿ ಇರಿಸಿದ್ದಾರೆ.

Read also : ದಿನಮಾನ ಹೆಮ್ಮೆ : ಬಳ್ಳಾರಿ ಜಾಲಿ ಹೂಗಳ ಕವಿ– ಪೀರ್ ಬಾಷಾ

ಬ್ಯಾಂಕೊಂದರ ಅಧಿಕಾರಿಯಾಗಿದ್ದ ಕಾಲದಲ್ಲಿಯೂ ಸಹ ಎಂದೂ ಕೂಡ ಬ್ಯಾಂಕಿನ ಸಮಯವನ್ನು ತನ್ನ ಕೆಲಸಗಳಿಗೆ ಬಳಸಿಕೊಳ್ಳಲಿಲ್ಲ. ಯೂನಿಯನ್, ವೈಚಾರಿಕ ಚಿಂತನೆಗಳು , ಚರ್ಚೆಗಳು , ಪ್ರಕಟಣೆಗಳು ಕೆಲಸ ಎಲ್ಲವನ್ನೂ ತನ್ನ ಕಚೇರಿ ವೇಳೆಯ ನಂತರದಲ್ಲಿ ಮಾಡಿದ ಜೀವ. ಕನ್ನಡ ನಾಡಿಗೆ ಲೋಹಿಯಾರನ್ನು, ಮಧು ದುಂಡಾವರ್ತನೆ, ಕರ್ಪೂರಿ ಠಾಕೂರ್, ಜಾರ್ಜ್ ಫರ್ನಾಂಡಿಸ್ ರಂತಹವರನ್ನು ಹತ್ತಿರಕ್ಕೆ ತಂದವರು.

ಹೇಗೋ ನನ್ನ ಪಾಡಿಗೆ

ನಾನು ಬದುಕುತ್ತೇನೆ

ಇನ್ನಷ್ಟು ನೆಲವ ಉತ್ತು ಬಿತ್ತು

 

 ನೀರೆರೆದು ಮಲಗಿರುವ ಬೀಜಗಳ

 ಕಣ್ಣು ತೆರೆಸುತ್ತೇನೆ

 

 ನಾಳೆ ಈ ಸಸಿಗಳೆಲ್ಲ

 ವಟವೃಕ್ಷಗಳಾಗಿ ಸಾವಿರ ಜನಕ್ಕೆ

 ನೆರಳಾದೆವೆಂಬ ಮಹದಾಸೆ ಇರದಿದ್ದರೂ ಒಂದೆರಡಾದರೂ

ಬೀಜವಾಗುವಂಥ ಹಣ್ಣು ಬಿಟ್ಟಾವೆಂದು ನಂಬಿ ಕಾಯುತ್ತೇನೆ

 

ಎಂದು ಬರೆದ ತಮ್ಮ ಒಡನಾಡಿ

ಕವಿ ಜಿಎಸ್ಸೆಸ್ ರವರ ಆಶಯದಂತೆ ಚನ್ನಬಸವಣ್ಣ ಕೂಡ ಕಾಯುತ್ತಿದ್ದಾರೆ.

ಇಂತಹ ಶ್ರಮಜೀವಿ ಅಣ್ಣ,ಕನ್ನಡಕ್ಕೆ ನೀಡಿದ ಮೌಲಿಕ ಕೃತಿಗಳ ಕಾರಣಕ್ಕೆ,

ಲೋಹಿಯಾ ಚನ್ನಬಸವಣ್ಣನವರಿಗೆ ಕನ್ನಡ ನಾಡು ಎಂದೆಂದಿಗೂ ಕೃತಜ್ಞವಾಗಿರುತ್ತದೆ.

ಬಿ.ಶ್ರೀನಿವಾಸ

TAGGED:Davangere Newsdinamaana.comDinamaanada HemmeKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂದಿನಮಾನದ ಹೆಮ್ಮೆ
Share This Article
Twitter Email Copy Link Print
Previous Article davanagere ಆಸ್ತಿ ತೆರಿಗೆ ಪಾವತಿಸುವ ಅವಧಿ ವಿಸ್ತರಣೆ
Next Article Applications invited ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

Davanagere | ಪ್ರೊ.ಪ್ರಸನ್ನಕುಮಾರ್‌ಗೆ ಸರ್ ಸಿ.ವಿ.ರಾಮನ್ ಯುವ ವಿಜ್ಞಾನಿ ಪುರಸ್ಕಾರ

ದಾವಣಗೆರೆ (Davanagere): ದಾವಣಗೆರೆ ವಿಶ್ವವಿದ್ಯಾನಿಲಯ ಗಣಿತಶಾಸ್ತ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾದ ಪ್ರೊ.ಬಿ.ಸಿ.ಪ್ರಸನ್ನಕುಮಾರ ಅವರು ರಾಜ್ಯಮಟ್ಟದ ಸರ್ ಸಿ.ವಿ.ರಾಮನ್…

By Dinamaana Kannada News

ಮಕ್ಕಳ ನೀತಿ ಕಥೆ: ಉತ್ತಮ ವ್ಯಕ್ತಿತ್ವಕ್ಕೆ ಭದ್ರ ಬುನಾದಿ|ಡಿ. ಫ್ರಾನ್ಸಿಸ್ 

ಮಕ್ಕಳು ಅರಳುವ ಹೂಗಳಿದ್ದಂತೆ. ಅವರಿಗೆ ಸಿಗುವ ಪರಿಸರ, ಬೋಧನೆ ಮತ್ತು ಮಾರ್ಗದರ್ಶನ ಅವರ ಭವಿಷ್ಯವನ್ನು ರೂಪಿಸುತ್ತದೆ. ಈ ಮಾರ್ಗದರ್ಶನದಲ್ಲಿ, ನೀತಿ…

By Dinamaana Kannada News

DAVANAGERE NEWS : ಗೃಹಲಕ್ಷ್ಮಿಗೆ ಇಕೆವೈಸಿ, ಸ್ಮಾರ್ಟ್ ಕಾರ್ಡ್ : ಸುಳ್ಳು ವದಂತಿಗೆ ಕಿವಿಗೊಡಬೇಡಿ

ದಾವಣಗೆರೆ.ಆ 08 (DAVANAGERE)  :  ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತುಗಳು ಜಮೆಯಾಗಲು ಸ್ವಲ್ಪ ತಡವಾಗಿದ್ದು…

By Dinamaana Kannada News

You Might Also Like

accident
ತಾಜಾ ಸುದ್ದಿ

Accident|ದೇವಿಕೆರೆ ಬಳಿ ಬೈಕ್ ಮತ್ತು ಆಟೋ ಡಿಕ್ಕಿ,ಓರ್ವ ವ್ಯಕ್ತಿ ಸಾವು

By Dinamaana Kannada News
Davanagere
ತಾಜಾ ಸುದ್ದಿ

ಕೆಲಸ ಖಾಯಮಾತಿಗೆ ಒತ್ತಾಯಿಸಿ ಪರವಾನಗಿ ಭೂಮಾಪಕರಿಂದ ಅನಿರ್ದಿಷ್ಟಾವಧಿ ಮುಷ್ಕರ

By Dinamaana Kannada News
Applications invited
Blog

ದೌರ್ಜನ್ಯ ಕಾಯ್ದೆಯ ಕುರಿತು ಅರಿವು ಮೂಡಿಸಲು ಅರ್ಜಿ ಆಹ್ವಾನ

By Dinamaana Kannada News
Applications invited
ತಾಜಾ ಸುದ್ದಿ

SCSP- TSP ಯೋಜನೆ ಅಡಿಯಲ್ಲಿ ಮೊಬೈಲ್ ಕ್ಯಾಂಟಿನ್ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?