ದಾವಣಗೆರೆ: ಈ ಬಾರಿ ದಾವಣಗೆರೆಯಲ್ಲಿ ಕಾಂಗ್ರೆಸ್ ವಿಜಯಮಾಲೆ ದರಿಸುವುದು ಖಚಿತ, ವಿನಯ್ ಕುಮಾರ್ ಗೆ ಓಟ್ ಹಾಕಿದ್ರೆ ಬಿಜೆಪಿಗೆ ಹಾಕಿದ ಹಾಗೆ, ನಿಮಗೆ ಸಿದ್ದರಾಮಯ್ಯ ಬೇಕಾ ವಿನಯ್ ಕುಮಾರ್ ಬೇಕಾ ನಿರ್ಧಾರ ಮಾಡಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಹೊನ್ನಾಳಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಮಾತನಾಡಿದರು. ನಮ್ಮ ಕುರುಬ ಸಮಾಜಕ್ಕೆ ಬಿಜೆಪಿಯರು ಎಲ್ಲಿಯು ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಿಲ್ಲ. ನಾವು ಎರಡು ಕಡೆ ಟಿಕೆಟ್ ಕೊಟ್ಟಿದ್ದೇವೆ. ಕಳೆದ ಆರು ತಿಂಗಳಿನಿಂದ ಪಕ್ಷಕ್ಕೆ ಬಂದ ವಿನಯ್ ಕುಮಾರ್ ಗೆ ಬೇಡಯ್ಯ ನಿನಗಿನ್ನು ಭವಿಷ್ಯ ಇದೆ ಎಂದಿದ್ದೆ, ಆಯಿತು ಎಂದು ಒಪ್ಪಿಕೊಂಡು ಹೋದ ಗಿರಾಕಿ ಉಲ್ಟಾ ಆಗಿ ಬಿಡೋದಾ ಎಂದು ಕಿಡಿಕಾರಿದರು.
ನಮ್ಮ ಗ್ಯಾರೆಂಟಿ ಯೋಜನೆಗಳಿಂದ ಜನತೆ ನೆಮ್ಮದಿಯಿಂದ ಬದುಕುತ್ತಿದ್ದಾರೆ. ಶಕ್ತಿಯೋಜನೆಯಿಂದ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗಡೆ ಅವರೆ ಪತ್ರ ಬರೆದು ನಿಮ್ಮ ಹೆಸರಿನಲ್ಲಿ ಪೂಜೆ ಮಾಡಿಸುತ್ತಿದ್ದೇವೆ ಎಂದಿದ್ದಾರೆ.
ದಾವಣಗೆರೆ ಸಂಸದರಾಗಿರುವ ಸಿದ್ದೇಶ್ವರ ಅವರು ಕೇಂದ್ರದ ಸಚಿವಾಲಯದಲ್ಲಿ ಮಾತಾಡಿ ದಾವಣಗೆರೆಗೆ ಅನುದಾನ ತಂದಿಲ್ಲ. ಇನ್ನು ಅವರ ಪತ್ನಿ ಮಾತಾಡ್ತಾರಾ ಎಂದು ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ ಅವರು ದೇಶದಲ್ಲಿ ಹಣದುಬ್ಬರ ಹೆಚ್ಚಾಗಿ ಬೆಲೆ ಏರಿಕೆಯಾಗಿವೆ ಅನೇಕ ಸಮಸ್ಯೆಗಳಿಂದ ಜನತೆ ತತ್ತರಿಸಿ ಹೋಗಿದ್ದು ಬಿಜೆಪಿಯನ್ನು ವಿರೋಧಿಸುತ್ತಿದ್ದಾರೆ.
ಈ ಬಾರಿ ಬಿಜೆಪಿ ಗೆಲ್ಲಲ್ಲ, ವಿನಯ್ ಕುಮಾರ್ ಗೆಲ್ಲಲ್ಲ, ಒಂದೇ ಜಾತಿಯನ್ನಿಟ್ಟುಕೊಂಡು ಗೆದ್ದವರಿಲ್ಲ. ವಿನಯ್ ಕುಮಾರ್ ಗೆ ಓಟ್ ಹಾಕಿದರೆ ಅದು ಬಿಜೆಪಿಗೆ ಹಾಕಿದ ಹಾಗೆ. ನಾನು ಸಿಎಂ ಆಗಿ ಮುಂದುವರೆಯಬೇಕು ಎಂದರೆ ಕಾಂಗ್ರೆಸ್ ಪಕ್ಷಕ್ಕೆ ಮತವನ್ನು ನೀಡಿ ಕಳೆದ ಬಾರಿ ಶಾಂತನಗೌಡ ಅವರಿಗೆ ಲೀಡ್ ಕೊಟ್ಟು ಗೆಲ್ಲಿಸಿದ ಹಾಗೆ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ ಅವರನ್ನು ಗೆಲ್ಲಿಸಬೇಕು ಎಂದರು.
ಸಚಿವರಾಗಿರುವ ಎಸ್.ಎಸ್ ಮಲ್ಲಿಕಾರ್ಜುನ ಅವರು ಮಾತನಾಡಿ ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಏನೇನು ಮಾಡಬೇಕು ಅಂದುಕೊಂಡಿದ್ದೇವೊ ಅವೆಲ್ಲವು ಮಾಡಿದ್ದೇವೆ. ಐದು ಯೋಜನೆಗಳು ಉಪಯೋಗವಾಗಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಸಿಎಂ ಸಿದ್ದರಾಮಯ್ಯರು ಕಾರಣ ಎಂದ ಅವರು ದಾವಣಗೆರೆ ತಾಲ್ಲೂಕಿನಲ್ಲೆ ಗೃಹಲಕ್ಷ್ಮಿ ಉಪಯೋಗವಾಗಿದ್ದು ಜಿಲ್ಲೆಯಲ್ಲಿ 4.10 ಮಹಿಳೆಯರು ಇದರ ಉಪಯೋಗ ಪಡೆದುಕೊಂಡಿದ್ದಾರೆ. ಪ್ರಸ್ತು ಲೋಕಸಭಾ ಸದಸ್ಯರು ಏನು ಮಾಡಿಲ್ಲ ರಸ್ತೆಗಳ ಅಭಿವೃದ್ದಿಯಾಗಿಲ್ಲ, ಶಿವಮೊಗ್ಗ, ಹರಿಹರ ರೈಲುಮಾರ್ಗದ ಮಾರ್ಗ ನೆನೆಗುದಿಗೆ ಬಿದ್ದಿದೆ
ಹಿಂದೆ ತರಳುಬಾಳು ಹುಣ್ಣಿಮೆಯಲ್ಲಿ ಇದೇ ಹೊನ್ನಾಳಿಯಲ್ಲಿ 57 ಕೆರೆಗಳಿಗೆ ಅನುಮತಿ ನೀಡಲಾಗಿತ್ತು. ಈಗ ಕಾರ್ಯರೂಪದಲ್ಲಿದ್ದು ಮೂರು ತಿಂಗಳಲ್ಲಿ ಕಾರ್ಯರೂಪ ಆಗಲಿದೆ. ನಿಮ್ಮೆಲ್ಲರ ಆಶಿರ್ವಾದ ಕಾಂಗ್ರೆಸ್ ಪಕ್ಷಕ್ಕೆ ಅತ್ಯಗತ್ಯವಿದ್ದು ಡಾ. ಪ್ರಭಾ ಮಲ್ಲಿಕಾರ್ಜುನ ಅವರಿಗೆ ಮತ ನೀಡುವಂತೆ ಕೋರಿದರು.
ತರಿಕೆರೆಯ ಶಾಸಕ ಶ್ರೀನಿವಾಸ್, ಈಶ್ವರ್ ನಾಯಕ್, ಶಾಂತನಗೌಡ, ಬಸವಂತಪ್ಪ, ಮಂಜಪ್ಪ, ಆರ್.ಶಂಕರ್, ಶಿವಯೋಗಿ, ಮಂಜಣ್ಣ, ನೈರುತ್ಯ ಅಭ್ಯರ್ಥಿ ಆಯುನೂರು ಮಂಜುಜಾಥ್, ಸಿದ್ದಪ್ಪ, ವಿಶ್ವನಾಥ್, ಗಂಗಪ್ಪ, ಮಾ.ಜಿ.ಆರ್.ನಾಗಪ್ಪ, ಚಂದ್ರಶೇಖರ್, ಗದಿಗೇಶ್ ಉಮಾಪತಿ ಇತರರು ಇದ್ದರು.