Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಗ್ರಾಹಕರಿಂದ ಹೆಚ್ಚುವರಿ ಕಂತು ವಸೂಲಿ : ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ಗೆ ಬಿಸಿ ಮುಟ್ಟಿಸಿದ ಗ್ರಾಹಕ ಆಯೋಗ
ತಾಜಾ ಸುದ್ದಿ

ಗ್ರಾಹಕರಿಂದ ಹೆಚ್ಚುವರಿ ಕಂತು ವಸೂಲಿ : ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ಗೆ ಬಿಸಿ ಮುಟ್ಟಿಸಿದ ಗ್ರಾಹಕ ಆಯೋಗ

Dinamaana Kannada News
Last updated: March 6, 2025 11:59 am
Dinamaana Kannada News
Share
Davangere
ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ಗೆ ಗ್ರಾಹಕರ ಆಯೋಗ ಬಿಸಿ
SHARE
ದಾವಣಗೆರೆ (Davanagere) : ಗ್ರಾಹಕರಿಂದ ಹೆಚ್ಚುವರಿ ಕಂತುಗಳನ್ನು ವಸೂಲಿ ಮಾಡಿದ ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ಗೆ ಗ್ರಾಹಕರ ಆಯೋಗ ಬಿಸಿ ಮುಟ್ಟಿಸಿದೆ.
ನಾಗನೂರು ಗ್ರಾಮದ ರೇಖಾ ಚಂದ್ರಶೇಖರಪ್ಪ 2019 ರ ಫೆ.25 ರಂದು ದಾವಣಗೆರೆಯ ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನಲ್ಲಿ ಮನೆಯನ್ನು ಅಡಮಾನ ಮಾಡಿ 4.04   ಲಕ್ಷ ರೂ. ಸಾಲ ಪಡೆದಿದ್ದರು.
ಅಸಲು ಮತ್ತು ಬಡ್ಡಿ ಸೇರಿ ಮಾಸಿಕ 11.390 ರೂ.ನಂತೆ 60  ಸಮ ಕಂತುಗಳಲ್ಲಿ ಮರುಪಾವತಿಸುವಂತೆ ತಿಳಿಸಿ ಸಾಲ ಮಂಜೂರು ಮಾಡಿತ್ತು. ಸಾಲದ ಕಂತುಗಳನ್ನು ಪಾವತಿಸುತ್ತಾ ಬಂದಿದ್ದ ಗ್ರಾಹಕರು ಕೋವಿಡ್ ವೇಳೆ ಆರ್ಥಿಕ ತೊಂದರೆಯಿಂದಾಗಿ 4 ಕಂತು ಪಾವತಿಸಿರಲಿಲ್ಲ.
ಆಗ ಆರ್‌ಬಿಐ ಕೋವಿಡ್ ಅವಧಿಯಲ್ಲಿ ಸಾಲದ ಕಂತು ತುಂಬಲು ಒತ್ತಾಯಿಸುವಂತಿಲ್ಲ. ಬಾಕಿ ಕಂತು ನಂತರ ಕಟ್ಟಿಸಿಕೊಳ್ಳಬಹುದು ಎಂದು ಹೊರಡಿಸಿದ ಗೈಡ್‌ಲೈನ್ ಲಾಭ ಪಡೆದ ಗ್ರಾಹಕರು ನಂತರ ಬಾಕಿ ಕಂತು ಸೇರಿ ಒಟ್ಟು 60  ಕಂತು ಕಟ್ಟಿ ಪೂರ್ಣಗೊಳಿಸಿದ್ದರು. ಆದರೂ ಮತ್ತೆ ಹೆಚ್ಚುವರಿ 6 ಕಂತು ವಸೂಲಿ ಮಾಡಿ, ಇನ್ನೂ ಬಾಕಿ ಇದೆ, ಕಂತುಗಳನ್ನು ಕಟ್ಟುವಂತೆ ಬ್ಯಾಂಕ್ ಗ್ರಾಹಕರಿಗೆ ನೋಟಿಸ್ ಕಳಿಸಿತ್ತು. ಅಲ್ಲದೆ ಬ್ಯಾಂಕ್ ಸಿಬ್ಬಂದಿ ಪದೇ ಪದೇ ಮನೆ ಬಳಿ ಹೋಗಿ ಸಾಲದ ಕಂತು ತುಂಬುವಂತೆ ಒತ್ತಾಯಿಸುತ್ತಿದ್ದರು.
ಈ ಕಾರಣಕ್ಕಾಗಿ ಗ್ರಾಹಕರು ಹೆಚ್ಚುವರಿಯಾಗಿ ಕಟ್ಟಿಸಿಕೊಂಡಿರುವ 68.340  ರೂ. ಬಡ್ಡಿ ಸಹಿತ ಹಿಂದಿರುಗಿಸಲು ಮತ್ತು ಅಡಮಾನ ಪತ್ರದ ರಿ ಕನ್ವೆಯನ್ಸ್ ಡೀಡ್ ಮಾಡಿಕೊಡುವಂತೆ ಹಾಗೂ ಸಾಲದ ಭದ್ರತೆಗೆ ಪಡೆದುಕೊಂಡಿದ್ದ ಚೆಕ್ ಹಿಂತಿರುಗಿಸಲು ಅದೇಶಿಸಬೇಕೆಂದು ಕೋರಿ ಗ್ರಾಹಕರು ವಕೀಲರ ಮೂಲಕ ದಾವಣಗೆರೆ ಜಿಲ್ಲಾ ಗ್ರಾಹಕ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಸಾಕ್ಷಿ ಹಾಗೂ ದಾಖಲೆಗಳನ್ನು ಪರಿಶೀಲಿಸಿ, ಎರಡೂ ಕಡೆಯ ವಾದ ಪ್ರತಿವಾದ ಆಲಿಸಿದ ಜಿಲ್ಲಾ ಗ್ರಾಹಕ ಆಯೋಗದ ಅಧ್ಯಕ್ಷ ಸಿ.ಎಸ್.ತ್ಯಾಗರಾಜನ್ ಮತ್ತು ಸದಸ್ಯರಾದ ಬಿ.ಯು.ಗೀತಾ ದೂರುದಾರರ ದೂರನ್ನು ಪುರಸ್ಕರಿಸಿ ಗ್ರಾಹಕರಿಂದ ಹೆಚ್ಚುವರಿಯಾಗಿ ವಸೂಲಿ ಮಾಡಿದ್ದ ಮೊತ್ತದಲ್ಲಿ ಚೆಕ್‌ಗಳು ಅಮಾನ್ಯ ವಾದ ಶುಲ್ಕ ಮುರಿದು 57.740 ರೂ. ಹಿಂದಿರುಗಿಸಬೇಕು.
ಮಾನಸಿಕ ತೊಂದರೆ ಕೊಟ್ಟಿದ್ದಕ್ಕಾಗಿ 25000  ಪರಿಹಾರ, ದೂರಿನ ವೆಚ್ಚ 5000 ಮತ್ತು ರಿ ಕನ್ವೆಯನ್ಸ್ ಡೀಡ್ ಮಾಡಿ ಯಾವುದೇ ಸಾಲ ಬಾಕಿ ಇರುವುದಿಲ್ಲ ಎಂದು ಪ್ರಮಾಣ ಪತ್ರ ನೀಡಿ, ಸಾಲದ ಭದ್ರತೆಗೆ ಪಡೆದುಕೊಂಡಿದ್ದ ಚೆಕ್ ಹಿಂತಿರುಗಿಸುವಂತೆ ಆದೇಶ ಹೊರಡಿಸಿದೆ.
ದೂರುದಾರರ ಪರವಾಗಿ ಬಿ.ಬಸವರಾಜ್ ಉಚ್ಚಂಗಿದುರ್ಗ ವಾದ ಮಂಡಿಸಿದ್ದರು.
Read also : ಡಾ.ನಾಗರಾಜ್ ನಿವಾಸದ ಮೇಲೆ ಲೋಕಾಯುಕ್ತ ದಾಳಿ: ಚಿನ್ನ, ನಗದು, ದಾಖಲೆ ವಶ
TAGGED:Davanagere districtDavanagere NewsDinamana.comKannada news ದಾವಣಗೆರೆ ಜಿಲ್ಲೆಕನ್ನಡ ಸುದ್ದಿದಿನಮಾನ.ಕಾಂ
Share This Article
Twitter Email Copy Link Print
Previous Article ಆಹಾರ ನಿರೀಕ್ಷಕ ಡಾ.ನಾಗರಾಜ್ ನಿವಾಸದ ಮೇಲೆ ಲೋಕಾಯುಕ್ತ ದಾಳಿ: ಚಿನ್ನ, ನಗದು, ದಾಖಲೆ ವಶ
Next Article Davanagere ವಿದ್ಯುತ್‌ ಶಾರ್ಟ್‌ ಸರ್ಕಿಟ್‌ : ಡಿಡಿಪಿಐ ಕಚೇರಿ ಕಡತ ಹಾಗೂ ಕಂಪ್ಯೂಟರ್‌ ಭಸ್ಮ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

Davanagere | ಚಲಿಸುವ ರೈಲಿಗೆ ಬಿದ್ದು ಪ್ರಾಣ ಕಳೆದುಕೊಳ್ಳುತ್ತಿದ್ದ ವೃದ್ಧನ ಪ್ರಾಣ ರಕ್ಷಿಸಿದ ರೈಲ್ವೆ ಸಿಬ್ಬಂದಿ

ದಾವಣಗೆರೆ (Davanagere): ಕಣ್ಣೆದುರಿಗೆ ರೈಲಿನ ಗಾಲಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿದ್ದ ವಯೋವೃದ್ಧನನ್ನು ಹೋಮ್ ಗಾಡ್೯  ರಕ್ಷಿಸಿ ಪ್ರಾಣ ಉಳಿಸಿರುವ ಘಟನೆ…

By Dinamaana Kannada News

ಸರಕಾರಿ ಅಸ್ಪತ್ರೆಯಲ್ಲಿ ಎಲ್ಲಾ ಸೌಲಭ್ಯ  ಕಲ್ಪಿಸಿ : ಜಯ ಕರ್ನಾಟಕ ಸಂಘಟನೆ ಒತ್ತಾಯ

ಹರಿಹರ : ಸರಕಾರಿ ಆಸ್ಪತ್ರೆಯಲ್ಲಿ ಎಲ್ಲಾ ಸೌಲಭ್ಯಗಳು ಕಲ್ಪಿಸುವ ನಿಟ್ಟಿನಲ್ಲಿ ಸೂಕ್ತ ಜರುಗಿಸುವಂತೆ ಆಗ್ರಹಿಸಿ ತಾಲೂಕು ಜಯ ಕರ್ನಾಟಕ ಸಂಘಟನೆಯವರು…

By Dinamaana Kannada News

ಪ್ರತಿಭೆ ಯಾವುದೇ ಒಂದು ಜಾತಿ-ಸಮುದಾಯದ ಸ್ವತ್ತಲ್ಲ: ಸಿ.ಎಂ.ಸಿದ್ದರಾಮಯ್ಯ  

ಚಿತ್ರದುರ್ಗ ಜು 20:  ಪ್ರತಿಭೆ ಯಾವುದೇ ಒಂದು ಜಾತಿ-ಸಮುದಾಯದ ಸ್ವತ್ತಲ್ಲ ಎಂದು  ಸಿ.ಎಂ.ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು. ಚಿತ್ರದುರ್ಗದಲ್ಲಿ ಹೆಚ್.ಆಂಜನೇಯ ಚಾರಿಟಬಲ್…

By Dinamaana Kannada News

You Might Also Like

Davanagere
Blog

ಬಾಲಕಾರ್ಮಿಕ ಪದ್ದತಿ ವಿರುದ್ದ ಅರಿವು ಮೂಡಿಸಲು ಜಾಥಾ ಆಂದೋಲನಕ್ಕೆ ಚಾಲನೆ

By Dinamaana Kannada News
Davanagere
Blog

Harihar | ನೀರಿನ ಪೂರೈಕೆಯಲ್ಲಿ ವ್ಯತ್ಯಯ

By Dinamaana Kannada News
Davanagere
Blog

Davanagere | ನಗರ ಸಚ್ಚತೆಗೆ ಸಹಕರಿಸಿ, ಉಲ್ಲಂಘನೆಯಾದಲ್ಲಿ ದಂಡ ಪಾವತಿಸಿ : ಡಿಸಿ

By Dinamaana Kannada News
Davanagere
Blog

ನಾಗರಿಕ ರಕ್ಷಣಾ ಸ್ವಯಂ ಸೇವಕರಾಗಿ ನೋಂದಾಯಿಸಿಕೊಳ್ಳಲು ಅರ್ಜಿ ಆಹ್ವಾನ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?