Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > Davanagere | ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಅ.23 ರಂದು ಬೃಹತ್‌ ಪ್ರತಿಭಟನೆ
ತಾಜಾ ಸುದ್ದಿ

Davanagere | ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಅ.23 ರಂದು ಬೃಹತ್‌ ಪ್ರತಿಭಟನೆ

Dinamaana Kannada News
Last updated: October 20, 2024 12:38 pm
Dinamaana Kannada News
Share
DAVANAGERE
SHARE

ದಾವಣಗೆರೆ (Davanagere):  ರಾಜ್ಯ ಸರಕಾರ ಸುರ್ಪ್ರೀಂ ಕೋರ್ಟ್‌ ಆದೇಶದಂತೆ ಒಳಮೀಸಲಾತಿ ಜಾರಿ ಮಾಡಬೇಕು , ಒಳಮೀಸಲಾತಿ ಜಾರಿಗೆ ಬರುವವರೆಗೂ  ನೇಮಕಾತಿ ಪ್ರಕ್ರಿಯೆಗಳನ್ನು ತಡೆ ನೀಡಬೇಕು ಎಂದು ಆಗ್ರಹಿಸಿ ಮಾದಿಗ -ಛಲವಾದಿ ಸಮಾಜದ ಒಕ್ಕೂಟದಿಂದ ಬೃಹತ್‌ ಪ್ರತಿಭಟನೆ ಅ.23 ರಂದು ಆಯೋಜಿಲಾಗಿದೆ ಎಂದು ಎರಡು ಸಮುದಾಯದ ಮುಖಂಡರು ಹೇಳಿದರು.

ಈ ಕುರಿತು ಭಾನುವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಎರಡು ಸಮುದಾಯ ಮುಖಂಡರು, ಈ ಹೋರಾಟದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಎರಡು ಸಮುದಾಯದ ಭಾಂದವರು ಪಾಲ್ಗೊಳ್ಳಿದ್ದಾರೆ. ಈ ಮೂಲಕ ಶೀಘ್ರ ಒಳಮಿಸಲಾತಿ ಅನುಷ್ಠಾನಕ್ಕೆ ಒತಾಯಿಸಲಿದ್ದೇವೆ ಎಂದರು.

ನಿವೃತ್ತ ಡಿವೈಎಸ್ಪಿ ರವಿ ನಾರಾಯಣ್ ಮಾತನಾಡಿ, ಅಸ್ಪೃಶ್ಯರಿಗೆ ಡಾ. ಅಂಬೇಡ್ಕರ್ ಮೀಸಲಾತಿಯನ್ನು ಸಂವಿಧಾನಬದ್ಧವಾಗಿ ನೀಡಿದ್ದಾರೆ. 1970ರ ದಶಕದಲ್ಲಿ ಸ್ಲೃಶ ಸಮುದಾಯಗಳನ್ನು ಪ. ಜಾತಿಗಳ ಪಟ್ಟಿಗೆ ಸೇರಿಸಿದ್ದು,  ಆ ಸಮಯದಲ್ಲಿ ಅವರಿಗೆ ಅಗತ್ಯವಿತ್ತೋ ಅಥವಾ ಆ ಕಾಲಘಟ್ಟಕ್ಕೆ ಅದನ್ನು ಸೇರ್ಪಡೆಗೊಳಿಸಿದ್ದಾರೆ. ಆದರೆ,  ಮುಂದುವರಿದ ಸಾಮಾಜಿಕ ಪರಿಸ್ಥಿತಿಯಲ್ಲಿ ಶೈಕ್ಷಣಿಕ ಮತ್ತು ಔದ್ಯೋಗಿಕವಾಗಿ ಕ್ರಮೇಣ ಅವರಿಗೇ ಮಾತ್ರವೇ  ಪ.ಜಾತಿಯಲ್ಲಿನ ಅವಕಾಶಗಳು ಸಿಕ್ಕಿದವು. ಆದರೆ , ಅಸ್ಪೃಶ್ಯರಾದ ನಾವು ಅಂದಿನಿಂದಲೂ ಇಂದಿನವರೆಗೂ ಕೂಡ ಅವಮಾನಕರ ಪರಿಸ್ಥಿತಿಯಲ್ಲಿದ್ದೇವೆ. ಅತ್ಯಂತ ಕೆಳ  ಸಮುದಾಯದ ಅಸ್ಪೃಶ್ಯರಾದ ನಮಗೆ ಶೈಕ್ಷಣಿಕ ಮತ್ತು ಉದ್ಯೋಗ, ಆರ್ಥಿಕವಾಗಿ ಮೀಸಲಾತಿಯಲ್ಲಿ ವಂಚನೆಯಾಗಿದೆ ಎಂದು ಹೇಳಿದರು.

ದಾವಣಗೆರೆ ಬಹಳ ಹಿಂದಿನಿಂದಲೂ ದಲಿತ ಹೋರಾಟದ ಜಿಲ್ಲೆ. ದೇಹಕ್ಕೆ ಎರಡೂ ಕೈಗಳಂತೆ ಮಾದಿಗ ಮತ್ತು ಛಲವಾದಿ ಸಮುದಾಯಗಳು ಸೋದರ ಸಮುದಾಯಗಳು. ಎರಡು ಸಮುದಾಯಗಳು ಒಟ್ಟಿಗೆ ಒಳ ಮೀಸಲಾತಿ ಜಾರಿಗೆ ಒತ್ತಾಯಿಸುತ್ತಿದ್ದೇವೆ.  ಹಾಗಾಗಿ ಸರ್ಕಾರ ತಕ್ಷಣವೇ ಒಳ ಮೀಸಲಾತಿ ಜಾರಿಗೊಳಿಸಬೇಕು ಮತ್ತು ಒಳ ಮೀಸಲಾತಿ ಜಾರಿಯಾಗುವವರೆಗೂ ನೇಮಕಾತಿ ಪ್ರಕ್ರಿಯೆ ತಡೆಹಿಡಿಯಬೇಕು ಎಂದು ಒತ್ತಾಯಿಸಿದರು.

ಛಲವಾದಿ ಸಮುದಾಯದ ನಿವೃತ್ತ ಡಿವೈಎಸ್ಪಿ ರುದ್ರಮುನಿ ಮಾತನಾಡಿ, ಅಸ್ಪೃಶ್ಯರಿಗೆ ಎಲ್ಲಾ ರಂಗಗಳಲ್ಲೂ ಅನ್ಯಾಯವಾಗಿದೆ.‌ ನಾವು ಸರ್ಕಾರದ ಅನುಕಂಪ ಬಯಸಿಲ್ಲ. ಸಂವಿಧಾನಿಕ ಹಕ್ಕನ್ನು ಕೇಳುತ್ತಿದ್ದೇವೆ. ಸುಪ್ರೀಂ ಕೋರ್ಟ್‌ ಒಳ ಮೀಸಲಾತಿ ಆದೇಶವನ್ನು ಜಾರಿಗೆ ತರಲು ಮೀನಾಮೇಷ ಎಣಿಸಲಾಗುತ್ತಿದೆ.  ಇದನ್ನು ಮಾದಿಗ ಮತ್ತು ಚಲವಾದಿ ಸಮುದಾಯಗಳಾದ ನಾವು ಎರಡು ಸಮಾಜಗಳು ಖಂಡನೆ ಮಾಡುತ್ತೇವೆ. ಅವರಿಗೆ ಒಳಮಿಸಲಾತಿ ಜಾರಿಗೊಳಿಸಲು ಸಮರ್ಪಕ ದತ್ತಾಂಶಗಳು ಕೂಡ ಲಭ್ಯವಿದೆ.   ವರದಿಗಳು ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಅವುಗಳನ್ನು ಬಳಸಿ ಜಾರಿಗೆ ಅವಕಾಶವಿದೆ. ಸರ್ಕಾರಕ್ಕೆ ಒಳಮೀಸಲಾತಿ ಜಾರಿಗೆ ಇಚ್ಚಾಶಕ್ತಿ ಇಲ್ಲ. ಇದನ್ನು ವಿರೋಧಿಸಿ  ದಾವಣಗೆರೆಯಲ್ಲಿ ಅ.  23 ರಂದು ಶಾಂತಿಯುತ ಮೆರವಣಿಗೆ, ಹೋರಾಟ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಜಾರಿಯಾಗುವವರೆಗೆ ಅಮರಣಾಂತ ಹೋರಾಟ ಮಾಡುತ್ತೇವೆ ಎಂದರು.

ಒಳಮೀಸಲಾತಿ ಜಾರಿ ಗೊಳಿಸಬೇಕು. ಒಳ ಮೀಸಲಾತಿ ಜಾರಿಯಾಗುವವರೆಗೂ ನೇಮಕಾತಿ ಪ್ರಕ್ರಿಯೆಗಳನ್ನು ತಡೆಹಿಡಿಯಬೇಕು. ಪ. ಜಾತಿಗಳಲ್ಲಿನ ವಿವಿಧ ಸೌಲಭ್ಯಗಳು ಮತ್ತು ಹಣಕಾಸು ಸೌಲಭ್ಯಗಳನ್ನು ಕೂಡ ಒಳಮೀಸಲಾತಿ ಜಾರಿಯಾಗುವವರೆಗೆ ತಡೆಹಿಡಿಯಬೇಕು ಎಂಬ ಮೂರು ನಿರ್ದಿಷ್ಟ ಬೇಡಿಕೆಗಳನ್ನು ಇಟ್ಟುಕೊಂಡು ಹೋರಾಟ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ನಿವೃತ್ತ ಅಧಿಕಾರಿ  ಪುರುಷೋತ್ತಮ ಮಾತನಾಡಿ, ಎಸ್ ಎಂ ಕೃಷ್ಣ ಸರ್ಕಾರ ಸದಾಶಿವ ಆಯೋಗ ರಚಿಸಿ ವರದಿ ನೀಡಲು ತಿಳಿಸಿತು. ಆಯೋಗದ ವರದಿಗೆ ಬಿಎಸ್ವೈ ಚಾಲನೆ ನೀಡಿದರು. ಸದಾಶಿವ ಆಯೋಗದ ವಿಸ್ತೃತ ವರದಿ ಇದೆ. 2008ರಲ್ಲಿ ಚಿತ್ರದುರ್ಗದ ಮಾದಾರ ಪೀಠದಲ್ಲಿ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ, ಯಡಿಯೂರಪ್ಪ, ಎಲ್ಲರೂ ಭಾಗವಹಿಸಿದ ಸಮಾರಂಭದಲ್ಲಿ  ಸಿಎಂ ಸಿದ್ದರಾಮಯ್ಯ – ” ಮೀಸಲಾತಿ, ಇದು ಭಿಕ್ಷೆ ಅಲ್ಲ, ಅದು ನಿಮ್ಮ ಹಕ್ಕು” ಎಂದು ಹೇಳಿಕೆ ನೀಡಿದ್ದರು.  ಅಧಿಕಾರಕ್ಕೆ ಬಂದ ನಂತರ ಸಿಎಂ ಸಿದ್ದರಾಮಯ್ಯನವರ ಮೇಲೆ ವಿಶ್ವಾಸವಿತ್ತು, ಅವರು ಅಹಿಂದ ಚಳವಳಿಯ ನೇತೃತ್ವ ವಹಿಸಿದ್ದರು.  ಹಾಗಾಗಿ ಇವರು ಸಾಮಾಜಿಕ ನ್ಯಾಯವನ್ನು ಒಳಮೀಸಲಾತಿಯ ಪರವಾಗಿ ನಿರ್ಣಯ ಕೈಗೊಳ್ಳುತ್ತಾರೆ ಎಂಬ ವಿಶ್ವಾಸವಿತ್ತು. ಆದರೆ,  ಜಾರಿಗೆ ಖಚಿತ ನಿಲುವು ಇದುವರೆಗೂ ತೆಗೆದುಕೊಳ್ಳದಿರುವುದು ಸಮುದಾಯಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.  ಸುಪ್ರೀಂಕೋರ್ಟ್ ಏಳು ನ್ಯಾಯಮೂರ್ತಿಗಳ ಪೀಠ  ರಾಜ್ಯ ಸರ್ಕಾರಕ್ಕೆ ವಿವೇಚನಾ ಅಧಿಕಾರವಿದೆ. ರಾಜ್ಯ ಸರ್ಕಾರಗಳು ಒಳಮೀಸಲಾತಿ ಜಾರಿಗೊಳಿಸಬಹುದು ಎಂದು ತೀರ್ಪು ನೀಡಿದರೂ ಸಹ ಸಿಎಂ ಸಿದ್ದರಾಮಯ್ಯ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಒಳಮೀಸಲಾತಿ ಶೀಘ್ರ ಅನುಷ್ಠಾನಕ್ಕೆ ಅಕ್ಟೋಬರ್ 24ರ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಿ. ಇಲ್ಲವಾದಲ್ಲಿ ಉತ್ತರ ಭಾರತದ ಗುಜ್ಜಾರ್ ಸಮುದಾಯದಂತೆ ನಾವು ಕೂಡ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.

Read Also : Harihara | ನಗರಸಭೆ ಅಧ್ಯಕ್ಷ್ಯೆ ಹಾಗೂ ಆಯುಕ್ತರಿಂದ ಜಿಲ್ಲಾಸ್ಪತ್ರೆಗೆ ಭೇಟಿ, ಸಾಂತ್ವಾನ

ದಲಿತ ಸಂಘಟನೆಗಳ ಒಕ್ಕೂಟದ ಸಂಚಾಲಕ ಮಲ್ಲೇಶ್  ಮಾತನಾಡಿ, ಇದು ಮಾದಿಗ ಛಲವಾದಿ ಸೇರಿದಂತೆ ಎಲ್ಲರ ಒಕ್ಕೊರಲ ಹೋರಾಟ. ಸುಪ್ರೀಂ ಕೋರ್ಟ್ ತೀರ್ಪು ಜಾರಿಯಾದ ನಂತರ ಸಿಎಂ ಸಿದ್ದರಾಮಯ್ಯ ಸ್ವಾಗತಿಸಿದರು. ನಂತರ  ಅದಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಇದು ಬೇರೆ ಕಾರಣಕ್ಕೆ ಮುಂದೆ ಹೋಗಬಾರದು. ಒಳ ಮೀಸಲಾತಿ ಜಾರಿಯ ವಿಳಂಬ ಕಾರಣಕ್ಕೆ ಗೊತ್ತಿಲ್ಲ. ನಮಗೆ ಸಾಂವಿಧಾನಿಕ ಹಕ್ಕುಗಳು ಒದಗಿಸಿಕೊಡಬೇಕು.  ಚುನಾವಣೆ ಕಾರಣಕ್ಕಾದರೂ ಶೀಘ್ರ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಸದಸ್ಯರಾದ ಎಲ್‌.ಡಿ.ಗೋಣೆಪ್ಪ,  ಉದಯಕುಮಾರ್,  ಪಾಲಿಕೆ ಮಾಜಿ ಸದಸ್ಯ ಹಾಲೇಶ್‌,  ಪೌರ ನೌಕರರ ಸಂಘದ  ಗೋವಿಂದರಾಜ್, ದಲಿತ ಮುಖಂಡರಾದ ಆಲೂರು ನಿಂಗರಾಜ,  ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕುಂದವಾಡ ಮಂಜುನಾಥ, ಸೋಮಲಾಪುರದ ಹನುಮಂತಪ್ಪ,  ಹೆಗ್ಗೆರೆ ರಂಗಪ್ಪ, ನಾಗಭೂಷಣ್,  ಹಿರಿಯ ಪತ್ರಕರ್ತ ಏಕಾಂತಪ್ಪ,  ಬಿ.ಎಂ. ನಿರಂಜನ್, ಸಾಗರ್,  ರಾಮಯ್ಯ, ಹರಿಹರ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಪಿ.ಜೆ.ಮಹಾಂತೇಶ,  ಮಹಾಲಿಂಗಪ್ಪ, ಎಚ್ ಕೆ ಬಸವರಾಜ, ಶೇಖರಪ್ಪ, ನೀಲಗಿರಿಯಪ್ಪ, ಗೋವಿಂದರಾಜ್, ಅಂಜಿನಪ್ಪ, ಜಯಪ್ರಕಾಶ್, ಓಂಕಾರಪ್ಪ ಹಾಗೂ ಮಾದಿಗ ಮತ್ತು ಚಲವಾದಿ ಸಮಾಜದ ಮುಖಂಡರುಗಳು, ದಲಿತ ಸಂಘಟನೆಯ ಕಾರ್ಯಕರ್ತರುಗಳು ಭಾಗವಹಿಸಿದ್ದರು.

TAGGED:Davangere District.dinamaana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Harihara Harihara | ನಗರಸಭೆ ಅಧ್ಯಕ್ಷ್ಯೆ ಹಾಗೂ ಆಯುಕ್ತರಿಂದ ಜಿಲ್ಲಾಸ್ಪತ್ರೆಗೆ ಭೇಟಿ, ಸಾಂತ್ವಾನ
Next Article siddaramhai ಪೊಲೀಸ್ ಮಕ್ಕಳಿಗಾಗಿ 7 ಪ್ರಮುಖ ಸ್ಥಳಗಳಲ್ಲಿ 7 ಪಬ್ಲಿಕ್ ಶಾಲೆ : ಸಿ.ಎಂ ಘೋಷಣೆ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
ವಾರದ ಕಥೆವಾರದ ಕಥೆ

Popular Posts

Davanagere | ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ದಾವಣಗೆರೆ (Davanagere): ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಚನ್ನಗಿರಿ ತಾಲೂಕಿನ ಅಜ್ಜಿಹಳ್ಳಿ ಗ್ರಾಮದ ಟಿ.ಎನ್.ರಂಗಸ್ವಾಮಿ, ಮೈಕಲ್…

By Dinamaana Kannada News

KANNADA FILM NEWS : ಹ್ಯಾಪಿ ನ್ಯೂಸ್ ಫ್ರಮ್ (London Cafe! ) ಲಂಡನ್ ಕೆಫೆ !

ಇನ್ನೇನಿದ್ರೂ ಟೀಸರ್ ಟೈಮ್! ಎನ್ನುತ್ತಾ ಸಣ್ಣದೊಂದು ಮಂದಹಾಸ ಬೀರುವ ಆಪರೇಷನ್ ಲಂಡನ್ ಕೆಫೆ ನಿರ್ದೇಶಕ ಸಡಗರ ರಾಘವೇಂದ್ರ ಈ ಮೂಲಕ…

By Dinamaana Kannada News

Bhadra Dam | ಒಂದೂವರೆ ತಿಂಗಳು ಭದ್ರಾ ಅಚ್ಚುಕಟ್ಟುದಾರರ ಎಡದಂಡೆ ನಾಲೆಗೆ ನೀರಿಲ್ಲ

ದಾವಣಗೆರೆ (Bhadra Dam) ಭದ್ರಾ ಜಲಾಶಯದ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರ ಅನುಮತಿ ಮೇರೆಗೆ ಭದ್ರಾ ಜಲಾಶಯದ ಎಡದಂಡೆ ನಾಲೆಗೆ…

By Dinamaana Kannada News

You Might Also Like

Eeshwaramma Higher Primary and High School
ತಾಜಾ ಸುದ್ದಿ

ಆಸಕ್ತಿ ಇರುವ ಕ್ಷೇತ್ರಗಳಲ್ಲಿ ಸಾಧನೆ ಮಾಡಿ : ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ

By Dinamaana Kannada News
Modern Dairy Training
ತಾಜಾ ಸುದ್ದಿ

ದಾವಣಗೆರೆ|ಆಧುನಿಕ ಹೈನುಗಾರಿಕೆ ತರಬೇತಿ

By Dinamaana Kannada News
Power outage
ತಾಜಾ ಸುದ್ದಿ

ದಾವಣಗೆರೆ |ಜು. 26 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ

By Dinamaana Kannada News
Innonext
ತಾಜಾ ಸುದ್ದಿ

ಇನ್ನೋನೆಕ್ಸ್ಟ್ ಏರಿಯನ್ ಭಾರತ್ ಅಸ್ಟ್ರಾನೋಮಿ ಎಕ್ಸ್‍ಪೋ 1.0 : ಬಾಹ್ಯಾಕಾಶದ ಕೌತುಕ ಕಂಡು ಬೆರಗಾದ ವಿದ್ಯಾರ್ಥಿಗಳು

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?