Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > ಕೇಂದ್ರ  ಸಚಿವ ಜೋಷಿ ಅವರಿಂದ ಲಿಂಗಾಯತ ಸಮುದಾಯದ ವಿರುದ್ದ ಕುತಂತ್ರ
Blogತಾಜಾ ಸುದ್ದಿ

ಕೇಂದ್ರ  ಸಚಿವ ಜೋಷಿ ಅವರಿಂದ ಲಿಂಗಾಯತ ಸಮುದಾಯದ ವಿರುದ್ದ ಕುತಂತ್ರ

Dinamaana Kannada News
Last updated: April 9, 2024 12:14 pm
Dinamaana Kannada News
Share
Dingaleshwar Swami
ಹರಿಹರದ ಪಂಚಮಸಾಲಿ ಪೀಠಕ್ಕೆ ದಿಂಗಾಲೇಶ್ವರ ಸ್ವಾಮಿಗಳು ಭೇಟಿ ನೀಡಿ ವಚನಾನಂದ ಸ್ವಾಮಿಗಳ ಜೊತೆ ಚರ್ಚೆ
SHARE

ದಾವಣಗೆರೆ :     ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಅವರು ಹಿಂದಿನಿಂದಲೂ ಲಿಂಗಾಯತ ಸ್ವಾಮಿಜೀ ಮತ್ತು ಲಿಂಗಾಯತ ಸಮುದಾಯದ ವಿರುದ್ದ ಕುತಂತ್ರ ಮಾಡಿಕೊಂಡು ಬಂದಿದ್ದಾರೆ ಎಂದು ದಿಂಗಾಲೇಶ್ವರ ಸ್ವಾಮಿಗಳು ಅಕ್ರೋಶ ವ್ಯಕ್ತಪಡಿಸಿದರು.

ಹರಿಹರದ ಪಂಚಮಸಾಲಿ ಪೀಠಕ್ಕೆ ಭೇಟಿ ನೀಡಿ ವಚನಾನಂದ ಸ್ವಾಮಿಗಳ ಜೊತೆ  ಚರ್ಚೆ ನಡೆಸಿದ ನಂತರ ಅವರು ಮಾತನಾಡಿದರು.

ಕೆಲ ಮಠಾಧೀಶರನ್ನು ಜೋಷಿ ಅವರು ಹೆದರಿಸಿ ಹೇಳಿಕೆಗಳನ್ನು ಕೊಡಿಸುತ್ತಿದ್ದಾರೆ. ಅದರೆ, ನಮ್ಮ ವಿರುದ್ದ ಹೇಳಿಕೆ ಕೊಡುವ ಸ್ವಾಮೀಜಿಗಳ ವಿರುದ್ದವೇ ಅ ಮಠದ ಭಕ್ತರೇ ಸಿಟ್ಟು ಹೊರ ಹಾಕುತ್ತಿದ್ದಾರೆ. ಅಲ್ಲಿ ಕೂಡ ಹೊಡೆದಾಳುವ ಕೆಲಸ ಜೋಷಿಯವರು ಮಾಡುತ್ತಿದ್ದಾರೆ.  ನನ್ನ ಮಠ ಇರುವ ಊರಿನಲ್ಲೇ ನಮ್ಮ ವಿರುದ್ದ  ಕೆಲಸ ಮಾಡುತ್ತಿದ್ದಾರೆ. ನಮ್ಮ ವಿರುದ್ದ ನಮ್ಮವರನ್ನೇ  ಎತ್ತಿಕಟ್ಟುತ್ತಿದ್ದಾರೆ.  ಸಾವಿರಾರು ವರ್ಷಗಳಿಂದ ಅದನ್ನೇ ಮಾಡಿಕೊಂಡು ಬಂದಿದ್ದಾರೆ ಈಗ ಕೇಂದ್ರ ಸಚಿವರು ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಬಹುಸಂಖ್ಯಾತರಾದ ಲಿಂಗಾಯತರು ಹಾಗೂ ಉಳಿದ ಸಮಾಜದವರು ಕೂಡ ಈ ಬಾರಿ ಜೋಷಿಯವರಿಗೆ ತಕ್ಕ ಉತ್ತರ ಕೊಡುತ್ತಾರೆ ಎಂದು ಹೇಳಿದರು.

ಲಿಂಗಾಯತ ‌ನಾಯಕರನ್ನು ತುಳಿಯುವುದರಲ್ಲಿ ಪ್ರಮುಖ ಪಾತ್ರ ಜೋಷಿಯವರದ್ದು.  ಈ ಬಾರಿ ಲಿಂಗಾಯತ ‌ನಾಯಕರು ಅಷ್ಟೇ ಅಲ್ಲ ಅ ಭಾಗದ ಎಲ್ಲಾ ಸಮಾಜದ  ಜನರು ಕೂಡ ನನ್ನ ರಾಜಕೀಯ ಪ್ರವೇಶವನ್ನು ಸ್ಬಾಗತ ಮಾಡಿದ್ದಾರೆ.  ಅದರಲ್ಲಿ ಬ್ರಾಹ್ಮಣ ಸಮಾಜದವರು ಕೂಡ ಅತ್ಯಂತ ಪ್ರಮುಖವಾಗಿ ಸ್ವಾಗತ ಮಾಡಿದ್ದಾರೆ.  ನಾನು ಬಿಜೆಪಿ ಬಂಡಾಯನೂ ಅಲ್ಲ ಕಾಂಗ್ರೆಸ್ ಬಂಡಾಯನೂ ಅಲ್ಲ ಎಂದರು.

ಕಾಂಗ್ರೆಸ್ ಅಭ್ಯರ್ಥಿ ಯನ್ನು ಜೋಷಿಯವರೇ ಆಯ್ಕೆ ಮಾಡಿದ್ದಾರೆ ಎಂದು  ಜನರು ಮಾತನಾಡುತ್ತಿದ್ದಾರೆ. ಈ ಎರಡು ಪಕ್ಷದ ಜನರು ನನ್ನನ್ನು ಬಯಸಿ ಬೆಂಬಲಿಸಿದ್ದಾರೆ. ಎಷ್ಟೇ ವಿರೋಧ ಮಾಡಿದರೂ ಹಿಗ್ಗುವ ಕುಗ್ಗುವ ಕೆಲಸ ಮಾಡಿಲ್ಲ. ನಾನು 40% ಅರೋಪವನ್ನು ಸಾಭೀತು ಮಾಡುತ್ತೇನೆ ಎಂದು ಹೇಳಿದ್ದೇ ಅವಾಗಲೂ ಸಮಸ್ಯೆಗಳು ಬಂದಿದ್ವು. ಈಗಲೂ ಕೂಡ ಸಮಸ್ಯೆಗಳು ಬಂದಿವೆ. ಸತ್ಯ ಇರುವಾಗ ಸಮಸ್ಯೆಗಳು ಬಂದೇ ಬರುತ್ತದೆ.  ನನ್ನನ್ನು ಯಾರು ಕೂಡ ಸಂಪರ್ಕ ಮಾಡುವ ಕೆಲಸ ಮಾಡಿಲ್ಲ. ಯಾವುದೇ ಪಕ್ಷ ನನ್ನನ್ನು ಅಮಂತ್ರಣ ಮಾಡಿದರೆ ಭಕ್ತರ ಮುಂದಿಟ್ಟು ನಿರ್ಧಾರ ಮಾಡುತ್ತೇನೆ.  ಗುರುಗಳ ಆಶೀರ್ವಾದ ಪಡೆದೆ ನಾನು ಮಠದಿಂದ ರಾಜಕೀಯಕ್ಕೆ ಬಂದಿದ್ದೇನೆ ಎಂದರು.

ನಾನು ಹಾಗೂ ವಚನಾನಂದ ಸ್ವಾಮೀಜಿ ಗಳು ಆತ್ಮೀಯರು. ಈಗ ನಾನು ಪೀಠಕ್ಕೆ ಬಂದಿದ್ದಕ್ಕೆ ವಿಶೇಷ ಆರ್ಥ ಬಂದಿದೆ ಅಷ್ಟೇ. ಬೇರೆ ಬೇರೆ ಎಲ್ಲಾ ಮಠಗಳನ್ನು, ಲಿಂಗಾಯೇತರ ಮಠಗಳನ್ನು ಕೂಡ ಭೇಟಿಯಾಗಿದ್ದೇನೆ. ಎಲ್ಲಾರೂ ಕೂಡ ನನಗೆ ಬೆಂಬಲವನ್ನು ಕೊಟ್ಟು ಸ್ವಾಗತ ಮಾಡಿದ್ದಾರೆ. ಯಾರೇ ಮನವೊಲಿಸಲು ಬಂದರು ನನ್ನ ನಿರ್ಣಯ ಬದಲಾಯಿಸುವುದಿಲ್ಲ ಎಂದರು.

ಪಂಚಮಸಾಲಿ ಪೀಠದ ವಚನಾನಂದ  ಸ್ವಾಮಿಗಳು ಮಾತನಾಡಿ,  ದಿಂಗಾಲೇಶ್ವರ ಸ್ವಾಮೀಜಿ ಪಕ್ಷೇತರ ಸ್ಪರ್ಧೆ ಸ್ವಾಗತಾರ್ಹವಾಗಿದೆ. ಅವರು ರಾಜಕೀಯ ಶುದ್ದೀಕರಣಕ್ಕಾಗಿ ರಾಜಕಾರಣಕ್ಕೆ ಬಂದಿದ್ದಾರೆ.

ಉತ್ತರ ಭಾರತದಂತೆ  ಕರ್ನಾಟಕದಲ್ಲಿ  ಮಠಾಧೀಶರು ರಾಜಕಾರಣಕ್ಕೆ ಬರಬೇಕು. ರಾಜಕಾರಣ ದಲ್ಲಿ ಅಶುದ್ದಿಯನ್ನು  ಶುದ್ದಿ ಮಾಡಲಿಕ್ಕೆ ಪರಮ ಪೂಜ್ಯರು ಬಹಳ ಯೋಗ್ಯರು ಅಂತ ನನಗೆ ಅನಿಸುತ್ತೆದೆ.  ಪ್ರಹ್ಲಾದ್ ಜೋಶಿ ಅವರು ಆ ಭಾಗದ ಲಿಂಗಾಯತ ನಾಯಕರನ್ನು ತುಳಿಯುವಂತ ಕೆಲಸ ಮಾಡಿದ್ದಾರೆ. ಈ ವಿಚಾರವೂ ನಮ್ಮ ಗಮನಕ್ಕೆ ಬಂದಿದೆ. ಈ ವಿಚಾರವಾಗಿ ನಾವು ಸದ್ಯದರಲ್ಲೆ ಸಭೆ ನಡೆಸಿ ನಿರ್ಧಾರ ತಿಳಿಸುತ್ತೇವೆ. ಪರಮ ಪೂಜ್ಯರು ಬಹಳ ವರ್ಷದಿಂದ ಪರಿಚಯ ಅವರ ಭಕ್ತರ ಎಲ್ಲರ ಅಭಿಪ್ರಾಯ ಕೇಳಿಕೊಂಡು ಚುನಾವಣೆ ಸ್ಪರ್ಧೆ ಮಾಡಿದ್ದಾರೆ.ಅದು ಅವರ ವೈಯಕ್ತಿಕ ನಿರ್ಧಾರವಲ್ಲ. ಶೀಘ್ರವೇ  ಅಲ್ಲೊಂದು ಸಭೆ ಮಾಡಿ ನಮ್ಮ ನಿರ್ಧಾರ ತಿಳಿಸುತ್ತೇವೆ ಎಂದು ಹೇಳಿದರು.

TAGGED:dinamaana.comDingaleshwar Swami.Kannada Newsಕನ್ನಡ ನ್ಯೂಸ್‌ದಿಂಗಾಲೇಶ್ವರ ಸ್ವಾಮಿಗಳು.ದಿನಮಾನ.ಕಾಂ
Share This Article
Twitter Email Copy Link Print
Previous Article Ramanamali ಹಿಂದೂ- ಮುಸ್ಲಿಂ ಭಾವೈಕ್ಯದ ಪ್ರತೀಕವೇ ಡಿ.ರಾಮನಮಲಿ
Next Article davanagere ಬಯಲುಸೀಮೆ ‘ಯುಗಾದಿ ಸಂಭ್ರಮ’

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್)ಯಿಂದ ಅಕ್ರಮ ಮಾದಕ ವಸ್ತುಗಳು ವಶಕ್ಕೆ

ದಾವಣಗೆರೆ (Davanagere) : "ಆಪರೇಷನ್ ನಾರ್ಕೋಸ್” ಎಂಬ ವಿಶೇಷ ಕಾರ್ಯಚರಣೆಯ ಅಡಿಯಲ್ಲಿ, ನೈಋತ್ಯ ರೈಲ್ವೆ ಮೈಸೂರು ವಿಭಾಗದ ರೈಲ್ವೆ ರಕ್ಷಣಾ…

By Dinamaana Kannada News

ವಕೀಲರು ಕೌಶಲ್ಯತೆ ವೃದ್ದಿಸಿಕೊಳ್ಳಬೇಕು : ಪ್ರೊ.ಡಾ.ನಟರಾಜ್

ದಾವಣಗೆರೆ: ಕೇಳುವ, ಪ್ರಶ್ನಿಸುವ ಮತ್ತು ಚರ್ಚಿಸುವ ಮನೋಭಾವ ಬೆಳಸಿಕೊಂಡಾಗ ಮಾತ್ರ ಪರಿಪೂರ್ಣರಾಗಲು ಸಾಧ್ಯ ಎಂದು ಚಿತ್ರದುರ್ಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಡಾ.ನಟರಾಜ್…

By Dinamaana Kannada News

Harihara | ಪ್ರೊ.ಬಿ.ಕೃಷ್ಣಪ್ಪ ಜಯಂತಿ ನಿಮಿತ್ತ ಪುಷ್ಪ ನಮನ ಜೂ.9ಕ್ಕೆ

ಹರಿಹರ (Harihara): ನಗರದ ಬೈಪಾಸ್ ಬಳಿಯ ಮೈತ್ರಿವನದ ಆವರಣದಲ್ಲಿ ಜೂ.9 ರಂದು ಬೆಳಿಗ್ಗೆ 10ಕ್ಕೆ ಕರ್ನಾಟಕ ದಲಿತ ಸಂಘರ್ಷ ಸಮಿತಿ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ನಾಳೆಯಿಂದ ನಾಗನೂರಿನಲ್ಲಿ ಅದ್ದೂರಿ ಉಮಾ ಮಹೇಶ್ವರ ಜಾತ್ರೆ

By Dinamaana Kannada News
Davanagere crime news
ಅಪರಾಧ ಸುದ್ದಿ

ನಕಲಿ ಬಂಗಾರ ವಂಚನೆ ಪ್ರಕರಣ:ಇಬ್ಬರ ಬಂಧನ

By Dinamaana Kannada News
DHO DAVANAGERE
ತಾಜಾ ಸುದ್ದಿ

ಆಯ್ಕೆಯಾದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ : ಆಕ್ಷೇಪಣೆಗೆ ಆಹ್ವಾನ

By Dinamaana Kannada News
Deadline extended
ತಾಜಾ ಸುದ್ದಿ

ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಯೋಜನೆ :ಅವಧಿ ವಿಸ್ತರಣೆ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?