ದಾವಣಗೆರೆ (Davanagere) : ಡಾ.ಬಿ.ಆರ್.ಅಂಬೇಡ್ಕರ ಬಗ್ಗೆ ಅವಹೇಳನ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವವರ ವಿರುದ್ದ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ,
ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಂ ನ thekingofkarnataka ಹಾಗೂ dj_troll ಎಂಬ ಖಾತೆಗಳಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರಿಗೆ ಸಂಬಂಧಿಸಿದಂತೆ ಅವರ ಜೀವನ ಶೈಲಿಯನ್ನು ಅವರ ಉನ್ನತ ದರ್ಜೆಯ ಡಿಗ್ರಿಗಳನ್ನು, ಮೀಸಲಾತಿಯ ಬಗ್ಗೆ & ಜೈ ಭೀಮ್ ಎನ್ನುವ ಪದದ ಬಗ್ಗೆ ಅತೀ ಕೆಟ್ಟದಾಗಿ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಆದ್ದರಿಂದ ಭಾರತರತ್ನ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅಭಿಮಾನಿಗಳಲ್ಲಿಯೂ ಅನುಯಾಯಿಗಳಲ್ಲಿಯೂ ಮತ್ತು ಭಾರತೀಯರಿಗೆ ಮಾನಸಿಕವಾಗಿ ದಕ್ಕೆ ಉಂಟಾಗಿರುತ್ತದೆ. ಸಮಾಜದ ಸುವ್ಯವಸ್ಥೆ ಕೂಡ ಹಾಳಾಗುತ್ತಿದೆ ಆದ್ದರಿಂದ ಸದರಿ ಇನ್ಸ್ಟಾಗ್ರಾಂ ಐಡಿ ಬಳಕೆದಾರರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೋಳ್ಳಬೇಕೆಂದು ಚನ್ನಗಿರಿ ಟೌನ್ ನ ವಾಸಿಯಾದ ಕುಬೇಂದ್ರಸ್ವಾಮಿ ದೂರು ದಾಖಲಿಸಿದ್ದರು.
ವಾಟ್ಸ್ಆಪ್, ಫೇಸ್ಬುಕ್, ಇನ್ಸ್ಟಾಗ್ರಾಮ್, ಟ್ವಿಟ್ಟರ್ ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ರೀತಿಯ ಪ್ರಚೋದನಕಾರಿ, ವ್ಯಕ್ತಿ ನಿಂದನೆ, ಧಾರ್ಮಿಕ ನಿಂದನೆ, ದ್ವೇಷ ಭಾಷಣ, ದೇಶ ವಿರೋಧಿ ಪೋಸ್ಟ್ಗಳು ಇತ್ಯಾದಿ ಅಕ್ಷೇಪರ್ಹ ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದು ಮತ್ತು ಶೇರ್ ಮಾಡುವುದು ಕಾನೂನಿಗೆ ಬಾಹಿರವಾಗಿದ್ದು, ಅಂತ ಪೋಸ್ಟ್ಗಳನ್ನು ಮಾಡುವಂತಹ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.
Read also : ಗ್ರಾಮದಲ್ಲಿ ಮದುವೆ ಸಂಭ್ರಮ : ಕೈಚಳಕ ತೋರಿಸಿದ ಕಳ್ಳರು