Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > poem | ಕಣ್ಣುಗಳು ಕಾಯುತ್ತಿವೆ : ಪಿಆರ್. ವೆಂಕಟೇಶ್
ತಾಜಾ ಸುದ್ದಿ

poem | ಕಣ್ಣುಗಳು ಕಾಯುತ್ತಿವೆ : ಪಿಆರ್. ವೆಂಕಟೇಶ್

Dinamaana Kannada News
Last updated: July 16, 2025 5:50 am
Dinamaana Kannada News
Share
Eyes are waiting PR. Venkatesh
SHARE
ಗುಡಿಸಲ ಬಾಗಿಲಲ್ಲಿ
ಹಸಿದ ಹೊಟ್ಟೆಯಲ್ಲಿ
ಭಾರ ಹೊತ್ತವಳ ಬರುವಿಕೆಗೆ
ಕರುಳಪ್ರೀತಿಯ ಕಣ್ಣುಗಳ ಸದಾ ಕಾಯುವಿಕೆ
ಗುಡಿಸಲೊಳಗೆ  ಕಗ್ಗತ್ತಲು
ಆಗಲೇ ಉರಿದು ತಣ್ಣಗಾದ
ತನ್ನಲ್ಲೇ ಹರಡಿಕೊಂಡ ಒಲೆಬೆಂಕಿಯ ಬೆತ್ತಲು
ಜಿಬ್ಲದೊಡಲಲ್ಲಿ ನಿಟ್ಟಾದ ರೊಟ್ಟಿಗಳು
ಹಸಿವನ್ನು ರೇಗಿಸುತ್ತಿವೆ.
ಗುಡಿಸಲ ಸುತ್ತ ಹಬ್ಬಿದ
ಬೀದಿ ದೀಪದ ಮಂದ ಬೆಳಕ ಬೇಧಿಸಿ
ಕಣ್ಣುಗಳು ಕಾಯುತ್ತಿವೆ.

ಸತ್ತ ಇರುಳು
ಗೋರಿ ಸೇರುವ ಮೊದಲೆ ಎದ್ದವಳ ನಡೆ
ಗುಡಿಸಲ ಮುಂದಿನ
ಮಂಜಿನ ಪರೆದೆ ಹೊದ್ದ ಗುಡ್ಡದ ಕಡೆಗೆ
ಮುಗಿಲ ಚುಕ್ಕೆಗಳು ಮಾಯವಾಗಿ
ಬಗ್ಗನೆಯ ಬೆಳಕು ಚಿಮ್ಮಲು ಹವಣಿಸುವಾಗ
ಕಾಡಾಡಿ, ಕಟ್ಟಿಗೆಯ ಹೆಣಭಾರ ಹೊತ್ತು
ಗುಡ್ಡದ ನೆತ್ತಿಯ ಇಳಿಜಾರಿನಿಂದ
ಇಳಿವಾಗವಳು ಕಿನ್ನರಲೋಕದ ಸುಂದರಿ
ಶ್ರಮದ ದೇವತೆ!

ಕಟ್ಟಿಗೆ ಮಾರಲು ಊರಾಡಿ,
ಧನಿಕರ ಹೊಲದಲ್ಲಿ ಕೂಲಿಮಾಡಿ
ದಿನ ಸತ್ತು ಕತ್ತಲಕಂಬಳಿ ಹಾಸುವಾಗ
ಗೇಣು ಹೊಟ್ಟೆ ತುಂಬಿಸಲು
ಚೋಟುಕೂಲಿ ಹಿಡುದು
ಕೊಕ್ಕರೆಯಂಥಹ ಕಾಲುಗಳಿಂದ ತೆವಳುತ್ತಾ
ತೆಳುದೇಹದ, ಕಪ್ಪು ಬಣ್ಣ ಅವಳು
ಬೇರೆಯಾರಲ್ಲ, ನನ್ನಮ್ಮ ಲಮಾಣಿ ಶಾಂತ.
ಅವಳಿಗಾಗಿ ಕಾಯುತ್ತಿವೆ ಕಣ್ಣುಗಳು.

ಗುಡ್ಡದಲ್ಲಿ ಒಣ ಮರದ ಹುಡುಕಾಟ ದಾಟುತ್ತದೆ
ಅವಳುಟ್ಟ ದಾವಣಿಯಲಿ ಇಣುಕುವ ಮೈ
ಪೋತಿಯಾ ಹಾದುಬಂದ ಮೊಲೆಗಳು
ಕಾಲ್ಡಾ ನಾದಗಳಿಗೆ,
ನೂರಾರು ಸೂರ್ಯರನ್ನು ಹಿಡಿದಿಟ್ಡ
ಪೆಟಿಯಾ ಮಿಂಚಿಗೆ
ಕಾಡು ಕಾಯುವನ ಮೀಸೆ, ಕಣ್ಣು ಕುಣಿಯುತ್ತವೆ
ಅನೇಕ ದಾಳಿಗಳ ಎದುರಿಸಿ,
ಅದೆಷ್ಟೋಸಲ
“ಜೀಣಾ ಕಜಕೊ ಲಡಾಯಿ ಛಯಿ”
ಎಂದು ನನ್ನ  ತಲೆ ಸವರುತ್ತಾಳೆ.
ಈದಿ ಏನಾಯ್ತ ಇನ್ನೂ ಬಂದಿಲ್ಲ
ನನ್ನ ಕಣ್ಣುಗಳು ಮಂದ ಬೆಳಕ ಬೇಧಿಸಿ
ಅಮ್ಮ ಬರು ದಾರಿಯನ್ನೇ ನಿಟ್ಟಿಸಿವೆ
ನನ್ನ ನೆರಳನ್ನು ನುಂಗುವಷ್ಟು ಕತ್ತಲು ದಪ್ಪವಾಗಿದೆ
ನಾಲ್ಕು ಜನ ಬಂದರು
ತೇಕುತ್ತ, ತೊದಲುತ್ತ, ಬಿಕ್ಕುತ್
ಅಮ್ಮನಿಗೆ ಕರಿನಾಗರ ಕಚ್ಚದೆ ಎಂದರು
Eyes are waiting PR. Venkatesh
ಆ ಕಗ್ಗತ್ತಲಲ್ಲಿ ನೆತ್ತರು ಸುರಿವ ಕಾಲ
ಎಳೆಯುತ್ತಾ ಬಂದಳು.
ಮಂತ್ರವಾದಿ ಬಂದ, ಕೋಲು ತಿರುವಿ
ಏನೇನೋ ಒದರಿದ
ಔಷಧಿಯವನೂ ಬಂದ
ರಾತ್ರಿ ಕಳೆದು ದಿನ ಕಣ್ಣುತೆರೆದಿತ್ತು
ಅಮ್ಮನ ಕಣ್ಣು ಮುಚ್ಚಿತ್ತು
ಒಲೆಯ ಬೆಂಕಿ ನಮ್ಮ ಬದುಕಂತೆ
ತಣ್ಣನೆಯ ಬೂದಿಯಾಗಿತ್ತು.
ನಾವೆಲ್ಲ ಸೂತ್ರ ಹರಿದ ಗಾಳಿಪಟ
ನಮ್ಮೆದೆಯಲ್ಲಿ ದುಃಖದ ಕಡಲು
ಬಿಸಿಲಲ್ಲಿ ಆವಿಯಾಯಿತು.
ನಾನೀಗ ಶಿಕ್ಷಕ
ನನ್ನೆದೆಯಲ್ಲಿ ಅಮ್ಮನ ಸಾವು ಹೆಪ್ಪುಗಟ್ಟಿದೆ
ಸಂಜೆಯಾಗುತ್ತಲೆ ನನ್ನ ಕಣ್ಣುಗಳು
ಬಾಗಿಲಲ್ಲಿ ಕಾಯುತ್ತವೆ
ಮನೆಯಲ್ಲಿ ಗ್ಯಾಸ್ ಇದೆ
ಕಟ್ಟಿಗೆ ಹೊತ್ತು ಯಾರೇ ಬರಲಿ
ಅವನ್ನೆಲ್ಲಾ ಕೊಂಡು ಭಾರ ಇಳಿಸುವೆ
ದೇಶದ ಹೃದಯಕ್ಕೆ
ಭಾರ ಇಳಿಸುವ  ಗುಣವಿದ್ದರೆ !
( ದಾವಣಿ-ಚೋಲಿ, ಬಂಗಡಿ ಬಳೆ, ಕಾಲ್ಡ-ಕಾಲ್ಗಡಗ,
ಪೇಟಿಯಾ- ಕನ್ನಡಿಯ ಚೂರು ತುಂಬಿದ ಬಟ್ಟೆ,
“ಜೀಣಾ ಕಜಕೊ ಲಡಾಯಿ ಛೆಯಿ – ಬದುಕೆಂಬುದು ಹೋರಾಟ ಕಣೆ)
Read also : ಭದ್ರಾ ಜಲಾಶಯದಲ್ಲಿ 176.9 ಅಡಿ ನೀರು : ತುಂಬಲು 9.1 ಅಡಿ ಮಾತ್ರ ಬಾಕಿ 

ಪಿಆರ್. ವೆಂಕಟೇಶ್

TAGGED:Dinamana.comKannada Newspr-venkateshದಾವಣಗೆರೆ ಜಿಲ್ಲೆ .ದಿನಮಾನ.ಕಾಂಪಿಆರ್. ವೆಂಕಟೇಶ್
Share This Article
Twitter Email Copy Link Print
Previous Article DAVANAGERE ಭದ್ರಾ ಜಲಾಶಯದಲ್ಲಿ 176.9 ಅಡಿ ನೀರು : ತುಂಬಲು 9.1 ಅಡಿ ಮಾತ್ರ ಬಾಕಿ
Next Article Davanagere ದಾವಣಗೆರೆ | ವಿಶೇಷ ಕೋಟಾದಡಿ ಅಗ್ನಿವೀರ್ ನೇಮಕಾತಿ
Leave a comment

Leave a Reply Cancel reply

You must be logged in to post a comment.

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
ವಾರದ ಕಥೆವಾರದ ಕಥೆ

Popular Posts

ಬೇಸಿಗೆ ಚೆಸ್ ತರಬೇತಿ ಶಿಬಿರ  

ದಾವಣಗೆರೆ :   ದಾವಣಗೆರೆ ಚೆಸ್ ಕ್ಲಬ್ ವತಿಯಿಂದ 4 ರಿಂದ 15 ವರ್ಷದ ಮಕ್ಕಳಿಗೆ ಏಪ್ರಿಲ್ 1 ರಿಂದ 15ನೇ…

By Dinamaana Kannada News

Davanagere | ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆ ಪೂರ್ಣಗೊಳಿಸಲು ಡಿಸಿ ಸೂಚನೆ

ದಾವಣಗೆರೆ ಸೆ.3 (Davanagere ) : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಷಟ್ಪಥ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸುವ ಕೆಲಸ ದಾವಣಗೆರೆ ಕೆಲವು ಭಾಗದಲ್ಲಿ…

By Dinamaana Kannada News

DAVANAGERE NEWS : ಸಫಾಯಿ ಕರ್ಮಚಾರಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಿ : ಶಾಸಕ ಕೆ.ಎಸ್.ಬಸವಂತಪ್ಪ

ದಾವಣಗೆರೆ (Davangere district )  :   ಜಿಲ್ಲೆಯಲ್ಲಿರುವ ಸಫಾಯಿ ಕರ್ಮಚಾರಿ (Safai Karmachari) ಗಳಿಗೆ ಶಾಶ್ವತ ಮೂಲಭೂತ ಸೌಲಭ್ಯ ಕಲ್ಪಿಸುವ…

By Dinamaana Kannada News

You Might Also Like

heart attack
ತಾಜಾ ಸುದ್ದಿ

ದೈಹಿಕ ಶಿಕ್ಷಕ ರವಿಕುಮಾರ ಹೃದಯಾಘಾತದಿಂದ ಸಾವು

By Dinamaana Kannada News
Daavanagere
ತಾಜಾ ಸುದ್ದಿ

ಪೋಷಕರೇ ಎಚ್ಚರ.. ನಿಮ್ಮ ಮಗುವಿನ ಆಧಾರ್‌ ರದ್ದಾಗಲಿದೆ!

By Dinamaana Kannada News
No gruhalakshmi No new Ration card
ತಾಜಾ ಸುದ್ದಿ

ಹೊಸ ಪಡಿತರ ಚೀಟಿಯೂ ಇಲ್ಲ.. ಗೃಹಲಕ್ಷ್ಮಿ ಹಣವೂ ಇಲ್ಲ!

By Dinamaana Kannada News
Bhadra dam
ತಾಜಾ ಸುದ್ದಿ

ಭದ್ರಾ ಜಲಾಶಯ | ತುಂಬಲು  8.6 ಅಡಿ  ಬಾಕಿ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?