ದಾವಣಗೆರೆ (Davangere) : ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ವಿದ್ಯಾಭ್ಯಾಸಕ್ಕಾಗಿ ಪಾಲಿಕೆ ಮಾಜಿ ಸದಸ್ಯರಾದ ಶ್ರೀ ಮತಿ ರೇಣುಕಮ್ಮ ಶಾಂತರಾಜ್ ಅವರ ಪುತ್ರ ನಿಟುವಳ್ಳಿ ಪ್ರವೀಣ್ ಕುಮಾರ್ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಧನ ಸಹಾಯ ಮಾಡಿದ್ದಾರೆ.
ಶ್ರೀರಾಮ ಬಡಾವಣೆ ದಾವಣಗೆರೆ ದಕ್ಷಿಣ ವಲಯದ 2024 -2025 ಸಾಲಿನಲ್ಲಿ ಶಾಲೆಯಲ್ಲಿ ಎಂಟನೇ ತರಗತಿವರೆಗೂ ವ್ಯಾಸಂಗ ಮಾಡಿದಂತಹ ಪ್ರತಿಭಾನ್ವಿತ ಹಾಗೂ ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ತುಂಬಿದರು.
Read also : ಮರಾಠ ಸಮುದಾಯಗಳ ಅಭಿವೃದ್ದಿ ನಿಗಮ : ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ
ಈ ಸಂದರ್ಭದಲ್ಲಿ ಪಾಲಿಕೆ ಮಾಜಿ ಸದಸ್ಯರಾದ ಶ್ರೀ ಮತಿ ರೇಣುಕಮ್ಮ ಶಾಂತರಾಜ್, ಮುಖ್ಯಪಾಧ್ಯಾಯರಾದ ಮಂಗಳ ಮೇಡಂ, ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷ ಪರುಶುರಾಮ್, ಉಪಾಧ್ಯಕ್ಷ್ಯೆ ಮಹಾಲಕ್ಷ್ಮಿ, ಹಾಗೂ 29 ನೇ ವಾರ್ಡಿನ ಕಾಗ್ರೇಸ್ ಅಧ್ಯಕ್ಷ ಆನಗೋಡ್ ನಾಗರಾಜ್ ರವರು, ಹಾಗೂ ಶಾಲೆಯ ಗುರುವೃಂದ, ಪಾಲಕರು ಉಪಸ್ಥಿತರಿದ್ದರು.