ದಾವಣಗೆರೆ : ಅಮಲು ಬರುವ ಸಿರಫ್ಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ 5 ಜನ ಆರೋಪಿತರನ್ನು ಪೊಲೀಸರು ಬಂಧಿಸಿದ್ದಾರೆ.
ಶಿವಕುಮಾರ , ಅಜಿಮುದ್ದೀನ್, ಮಹಮದ್ ಶಾರೀಕ್, ಸೈಯದ್ ಬಾಬು, ಅಬ್ದುಲ್ ಗಫರ್ ಬಂಧಿತರು.
ಬಸವನಗರ ಠಾಣಾ ವ್ಯಾಪ್ತಿಯ ದೇವರಾಜ ಅರಸ್ ಬಡಾವಣೆ ಫ್ಲೈಓವರ್ ಪಕ್ಕದ ಸರ್ವೀಸ್ ರಸ್ತೆಯಲ್ಲಿ ಕಾನೂನುಬಾಹಿರವಾಗಿ ಯಾವುದೇ ಪರವಾನಗಿ ಇಲ್ಲದೇ ಅಮಲು ಬರುವ ಸಿರಫ್ ಬಾಟಲಿಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಮೇರೆಗೆ ಮಾದಕ ದ್ರವ್ಯ ನಿಗ್ರಹ ಪಡೆಯ ಪಿ.ಎಸ್.ಐ ಸಾಗರ್ ಅತ್ತರವಾಲ್ ಹಾಗೂ ತಂಡ ಎಸ್ಪಿ ಉಮಾಪ್ರಶಾಂತ ಮಾರ್ಗದರ್ಶನದಲ್ಲಿ ಸ್ಥಳದ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿತರಿಂದ 100 ಎಂ.ಎಲ್ ನ ಒಟ್ಟು 340 Broncof-C cough Syrup , 100 ಎಂ.ಎಲ್ ನ 15 EDEX-CT cough Syrup ಬಾಟಲ್ಗಳು , 20 ಸಣ್ಣ ಬಾಕ್ಸ್ ಗಳಲ್ಲಿರುವ aceclofenac Paracetamol & serratiopeptidase tablets , ಒಂದು ಹೊಂಡಾ ಆಕ್ಟಿವಾ ಬೈಕು, 1200 ರೂ, ನಗದುಹಣವನ್ನು ವಶಪಡಿಸಿಕೊಂಡಿದ್ದು ಒಟ್ಟು ವಶಪಡಿಸಿಕೊಂಡ ಮಾಲಿನ ಬೆಲೆ 1,25,504 ರೂ,ಗಳಾಗುತ್ತದೆ. ಬಸವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read also : ಲಿಂಗಾಯತ ಮಠಾಧೀಶರಿಗೆ ಅಪಮಾನ : ಶ್ರೀ ಕಾಡಸಿದ್ದೇಶ್ವರ ಸ್ವಾಮಿಯನ್ನು ದೇಶದಿಂದ ಗಡಿಪಾರು ಮಾಡಿ
ದಾಳಿಯಲ್ಲಿ ದಾವಣಗೆರೆ ನಗರ ಉಪವಿಭಾಗದ ಡಿವೈಎಸ್ಪಿ ಶರಣಬಸವೇಶ್ವರ ಭೀಮರಾವ್ ಬಿ , ಬಸವನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ನಂಜುAಡಸ್ವಾಮಿ, ಪಿ.ಎಸ್.ಐ ಸಾಗರ ಅತ್ತರವಾಲ, ಸಿಬ್ಬಂದಿ ಪ್ರಕಾಶ, ಷಣ್ಮುಖ ಮಂಜುನಾಥ, ಶಿವರಾಜ್, ಗೋವಿಂದರಾಜ್, ಶ್ರೀನಿವಾಸ, ಫಕ್ರುದ್ದೀನ್, ಇಮ್ತಿಯಾಜ್, ಮಂಜುನಾಥ ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ಅಪರಾಧ ಸ್ಥಳ ಪರಿಶೀಲನೆ ಅಧಿಕಾರಿಗಳಾದ ರಘುನಾಥ, ದೇವರಾಜ ಹಾಗೂ ದರ್ಶನ್ ಇವರು ದಾಳಿಯಲ್ಲಿ ಪಾಲ್ಗೊಂಡಿದ್ದರು.