ದಾವಣಗೆರೆ (Davanagere): ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಬಿ ಎಮ್ ಸಿ ಆರ್ ಐ)ಯ ಸೂಕ್ಷಾಣುಜೀವಿ ವಿಭಾಗದ ಉಪನ್ಯಾಸಕಿ ಶ್ರೀ ಮತಿ ಕುಸುಮ ಜಿ ಆರ್ ಅವರಿಗೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿದೆ.
“ಸ್ರ್ಕೀನಿಂಗ್ ಆಂಡ್ ಐಡೆಂಟಿಫಿಕೇಶನ್ ಆಫ್ ಪೀಕಲ್ ಕಾರೇಜ್ ಆಫ್ ಕಾರ್ಬಪೆನಮೇಸ್ ಪ್ರೊಡ್ಯೂಸಿಂಗ್ ಕ್ಲೆಬ್ಸಿಲ್ಲಾ ನ್ಯುಮೋನಿಯಾ ಆಂಡ್ ಎಸ್ಚರೀಶಿಯ ಕೋಲಿ ಬೈ ಮಾಲಿಕ್ಯುಲರ್ ಮೆಥೆಡ್ಸ್ ಫ್ರಮ್ ಪೇಶಂಟ್ಸ್ ಇನ್ ಎ ಟರ್ಶರಿ ಕೇರ್ ಹಾಸ್ಪಿಟಲ್” ಎನ್ನುವ ವಿಷಯದ ಬಗ್ಗೆ ಬಿಎಮ್ ಸಿ ಆರ್ ಐ ನ ಮೈಕ್ರೋಬಯಾಲಾಜಿ ವಿಭಾಗದ ಮುಖ್ಯಸ್ಥರಾಗಿದ್ದ ನಿವೃತ್ತ ಪ್ರಾಧ್ಯಾಪಕರಾದ ಡಾ.ನಾಗರತ್ನಮ್ಮ ಟಿ ಹಾಗೂ ಪ್ರೊಫೆಸರ್ ಡಾ.ಅಂಬಿಕಾ ಆರ್ ಅವರ ಮಾರ್ಗದರ್ಶನದಲ್ಲಿ ಈ ಸಂಶೋಧನೆಯನ್ನು ಮಾಡಿದ್ದಾರೆ.
Read also : Davanagere | ತಾಲ್ಲೂಕು ಸಂಯೋಜಕರ ಹುದ್ದೆಗೆ ಅರ್ಜಿ ಆಹ್ವಾನ
ಜಿ. ಆರ್ . ಕುಸುಮ ಹಾಲಸ್ವಾಮಿ ಅವರು ಮೂಲತಃ ದಾವಣಗೆರೆ ತಾಲ್ಲೂಕಿನ ಕಂದಗಲ್ಲು ಗ್ರಾಮದವರು.