Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ನೀರಿನ ಸಾಮರ್ಥ್ಯ ಹೆಚ್ಚಿಸಲು ಗ್ರಾಮಸ್ಥರಿಂದ ಕೆರೆ ಹೂಳುತ್ತುವ ಕಾರ್ಯ
ತಾಜಾ ಸುದ್ದಿ

ನೀರಿನ ಸಾಮರ್ಥ್ಯ ಹೆಚ್ಚಿಸಲು ಗ್ರಾಮಸ್ಥರಿಂದ ಕೆರೆ ಹೂಳುತ್ತುವ ಕಾರ್ಯ

Dinamaana Kannada News
Last updated: June 24, 2024 7:15 am
Dinamaana Kannada News
Share
davanagere hadadi lake
ದಾವಣಗೆರೆ ತಾಲೂಕಿನ ಹದಡಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಸ್ವಯಂ ಪ್ರೇರಿತರಾಗಿ 3 ಹಿಟಾಚಿ ಹಾಗೂ ನೂರಾರು ಟ್ರ್ಯಾಕ್ಟರ್ಗಳಿಂದ ಹದಡಿ ಕೆರೆಯ ಹೂಳೆತ್ತುವ ಕಾರ್ಯ ಭರದಿಂದ ಸಾಗಿದೆ
SHARE

ದಾವಣಗೆರೆ :   ತಾಲೂಕಿನ ಹದಡಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು 3 ಹಿಟಾಚಿ ಬಳಸಿ ನೂರಾರು ಟ್ರ್ಯಾಕ್ಟರ್‍ಗಳಿಂದ ಸ್ವಯಂ ಪ್ರೇರಿತರಾಗಿ ಹದಡಿ ಕೆರೆಯ ಹೂಳನ್ನು ಎತ್ತುತ್ತಿದ್ದು ನೀರಿನ ಸಂಗ್ರಹ ಸಾಮಾಥ್ರ್ಯವನ್ನು ಹೆಚ್ಚಿಸಲು ಮುಂದಾಗಿದ್ದಾರೆ.

ಕೆರೆಯ ಹೂಳೆತ್ತುವ ಕಾರ್ಯಕ್ಕೆ ರೈತರು ಚಾಲನೆ ನೀಡಿದ್ದು ಹೂಳೆತ್ತಿದ್ದ ಮಣ್ಣನ್ನು ತಮ್ಮ ಹೊಲ ತೋಟಗಳಿಗೆ ಸಾಗಿಸುತ್ತಾ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ ಜತೆಗೆ ಕೆರೆಯ ನೀರಿನ ಸಂಗ್ರ ಸಾಮಾಥ್ರ್ಯವನ್ನು ಹೆಚ್ಚಿಸಿ ಅಂತರ್ಜಲ ವೃದ್ಧಿಗೆ , ಜನಜಾನುವಾರುಗಳ ನಿತ್ಯ ಬಳಕೆ ಹಾಗೂ ಕೃಷಿ ಚಟುವಟಿಕೆಗೆ ಅನುಕೂಲವಾಗಲೆಂದು ಶ್ರಮಿಸುತ್ತಿದ್ದಾರೆ.

ಭೀಕರ ಬರ , ತೀವ್ರ ಬಿಸಿಲಿನ ತಾಪಮಾನಗಳ ದಿನಗಳನ್ನು ಕಳೆದು ಹೊರ ಬಂದಿರುವ ಜನತೆಗೆ , ಮುಂಗಾರು ಅಬ್ಬರಿಸಿ ಕಣ್ಮರೆಯಾಗುತ್ತಿರುವುದರಿಂದ , ರೈತರ ಸಂತೋಷ ಕೆಲವೇ ದಿನಗಳಿಗೆ ಸೀಮಿತವಾಗಿ ಮುಗಿಲ ಕಡೆ ಮುಖ ಮಾಡಿದ್ದಾನೆ. ಇಗಾಗಲೇ ಮುಂಗಾರು ನಂಬಿ ನೂರಾರು ರೈತರು ನೆಲಕ್ಕೆ ಬೀಜ ಹಾಕಿದ್ದು ಬೆಳೆಗಳು ಬಾಡುತ್ತಿದ್ದು ಮುಗಿಲು ನೊಡುತ್ತಿದ್ದಾರೆ,

ಜಿಲ್ಲೆಯಲ್ಲಿನ ಕೆರೆ ಕಟ್ಟೆಗಳ ಹೂಳು ತೆಗೆಸಿ ನೀರಿನ ಸಂಗ್ರಹ ಸಾಮಥ್ರ್ಯ ಹೆಚ್ಚಿಸಲು , ಸರ್ಕಾರ ಮನೆರೇಗದಡಿ ಜಲ ಸಂರಕ್ಷಣೆ ಯೋಜನೆ ರೂಪಿಸಲು ಇದು ಸಕಾಲವಾಗಿದೆ. ಹವಮಾನ ಇಲಾಖೆಯು ಈ ಬಾರಿ ಉತ್ತಮ ಮಳೆಯಾಗುವ ಮುನ್ಸೂಚನೆ ನೀಡಿರುವುದರಿಂದ ಮಳೆ ನೀರು ಕೊಯ್ಲಿಗೆ ಆಧ್ಯತೆ ನೀಡಬೇಕು ಜತೆಗೆ ಸರ್ಕಾರ ವಾಟರ್ ಬಜೆಟ್ ರೂಪಿಸದೆ ಕಣ್ಣುಮುಚ್ಚಿ ಕುಳಿತಿದೆ , ಸ್ವಯಂ ಪ್ರೇರಿತರಾಗಿ ಕೆರೆ ಹೂಳೆತ್ತುವ ಮೂಲಕ ಸರ್ಕಾರದ ಕಣ್ಣು ತೆರಸಬೇಕಿದೆ ಎಂದು ಸಾರ್ವಜನಿಕರು ರೈತರು ಮಾತನಾಡಿಕೊಳ್ಳುತ್ತಿದ್ದಾರೆ.

ಈ ವೇಳೆ ರೈತಮುಖಂಡ ಕೊಳೇನಹಳ್ಳಿ ಬಿಎಂ ಸತೀಶ್ ಮಾತನಾಡಿ, ಕೆರೆ ಕಾಯಕಲ್ಪ ನೀರ ನೆಮ್ಮದಿಗೆ ದಾರಿಯಾಗುತ್ತದೆ. ಭೀಕರ ಬರದಿಂದ ರೈತರು ಹೊರ ಬಂದಿದ್ದಾರೆ, ಈಬಾರಿ ಮುಂಗಾರು ಸಮರ್ಪಕವಾಗಿ ಸುರಿಯುತ್ತಿಲ್ಲಾ. ಇಗಾಗಲೇ ರೈತರು ಮುಂಗಾರು ನಂಬಿ ನೆಲಕ್ಕೆ ಬೀಜ ಹಾಕಿ ಮುಗಿಲು ನೊಡುತ್ತಿದ್ದಾರೆ, ಜಿಲ್ಲೆಯಲ್ಲಿನ ಕೆರೆಗಳ ಹೂಳೆತ್ತಿ ನೀರಿನ ಸಂಗ್ರಹ ಸಾಮಾಥ್ರ್ಯವನ್ನು ಹೆಚ್ಚಿಸುವುದು ಸರ್ಕಾರ ಕೆಲಸವಾಗಿದ್ದು ಇದು ಸಕಾಲವಾಗಿದೆ, ಈ ಹಿಂದೆ , ನೀರು ಸಂಗ್ರಹಿಸಲು ಇದು ಸಕಾಲ , ಎಂಬ ಶಿರ್ಷೀಕೆಯಲ್ಲಿ ವಿಜಯ ಕರ್ನಾಟಕ ಪತ್ರಿಕೆ ವರದಿ ಬಿತ್ತರಿಸಿ ಜಿಲ್ಲಾಡಳಿತವನ್ನು ಎಚ್ಚರಿಸಿತ್ತು. ಆದರೇ ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವರಿ ಸಚಿವರು ಚುನಾವಣೆ ಗುಂಗಿನಿಂದ ಹೊರಬಂದು ವಾಟರ್ ಬಜೆಟ್ ಬಗ್ಗೆ ಕಾಯಕಲ್ಪ ರೂಪಿಸಲಿಲ್ಲಾ. ಇದನ್ನರಿತ ಹದಡಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಸ್ವಯಂ ಪ್ರೇರಿತಾಗಿ ಕೆರೆ ಹೂಳುತ್ತಿ , ಮಣ್ಣನ್ನು ತಮ್ಮ ಹೊಲಗಳಿಗೆ ಹಾಕಿಕೊಳ್ಳುತ್ತಾ ಕೆರೆಯ ನೀರಿನ ಸಂಗ್ರಹ ಸಾಮಾಥ್ರ್ಯವನ್ನು ಹೆಚ್ಚಿಸಲು ಶ್ರಮಿಸುತ್ತಿದ್ದಾರೆ ಇದರಿಂದಾಗಿ ಅಂತರ್ಜಲ ವೃದ್ಧಿಯಾಗಿ ಜನ ಜಾನುವಾರುಗಳ ನಿತ್ಯ ಬಳಕೆ ಹಾಗೂ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದ್ದು ನಿಜಕ್ಕೂ ಶ್ಲಾಘನೀಯವಾಗಿದೆ ಎಂದರು.

ಕೋಟ್…
ಜಿಲ್ಲಾ ಉಸ್ತುವರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್‍ರ ಸಲಹೆಯಂತೆ . ಹದಡಿ ಹಾಗೂ ಸುತ್ತಮುತ್ತಲ ಗ್ರಾಮಗಳ ರೈತರು ಕೆರೆ ಹೂಳನ್ನು ಎತ್ತುತ್ತಾ ಜಮೀನುಗಳಿಗೆ ಸಾಗಿಸುತ್ತಿದ್ದಾರೆ. ಇದರಿಂದ ಎಲ್ಲದಕ್ಕೂ ಲಾಭವಾಗಲಿದೆ. ಈ ಹಿಂದೆ ಕೆರೆ ಹೂಳೆತ್ತಲು ಸರ್ಕಾರ ಮನರೇಗ ಯೋಜನೆಯಲ್ಲಿ 20 ಲಕ್ಷ ಹಣವನ್ನು ಮುಂಜೂರುಮಾಡಿತ್ತು. ಕೂಲಿ ಕಾರ್ಮಿಕರ ಕೊರತೆಯಿಂದಾಗಿ ಕೆರೆ ಹೂಳೆತ್ತಲು ಸಾಧ್ಯವಾಗಲಿಲ್ಲಾ ಇನ್ನೂ 10 ಲಕ್ಷ ಹಣ ಬಾಕಿ ಇದೆ ಎಂಬ ಮಾಹಿತಿ ಇದೆ. ಮುಂದಿನ ದಿನಗಳಲ್ಲಿ ಗ್ರಾಮಸ್ಥರ ನಿಯೋಗವ ಸಚಿವರ ಬಳಿ ತೆರಳಿ ಚರ್ಚಿಸಲಾಗುವುದು.

ಹಿರಿಯ ಮುಖಂಡ ಹದಡಿ ಹಾಲಪ್ಪ

TAGGED:Davangere District.Dinamana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article davanagere distric court ಯೋಗವು ನಮ್ಮ ಪ್ರಾಚೀನ ಸಂಪ್ರದಾಯದಿಂದ ಅಮೂಲ್ಯ ಕೊಡುಗೆ : ನ್ಯಾ. ರಾಜೇಶ್ವರಿ ಎನ್.ಹೆಗಡೆ
Next Article davanagere ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಅಗತ್ಯ: ಡಿ ಬದ್ರಿನಾಥ್

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
ವಾರದ ಕಥೆವಾರದ ಕಥೆ

Popular Posts

ತುಂಗಾ ಭದ್ರಾ ನದಿ : ನದಿ ದಾಟಿ ಅಂತ್ಯಕ್ರಿಯೆ

ಹರಿಹರ : ತಾಲೂಕಿನ ಗುತ್ತೂರು ಗ್ರಾಮದಲ್ಲಿ ಸ್ಮಶಾನ ಜಲಾವೃತ್ತವಾಗಿರುವುರಿಂದ ಮೃತ ಅಂತ್ಯಕ್ರಿಯೆಗೆ ಪರದಾಡಿದ ಘಟನೆ ನಡೆದಿದ್ದು, ನದಿ ಉಕ್ಕಿ ಹರಿಯುತ್ತಿರುವ…

By Dinamaana Kannada News

ರಾಜ್ಯ ಸರ್ಕಾರದಿಂದ ಭೂ ಗ್ಯಾರಂಟಿ ಯೋಜನೆಯಡಿ ಹಂತಹಂತವಾಗಿ ಹಕ್ಕುಪತ್ರ ವಿತರಣೆ; ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ (Davanagere):  ರಾಜ್ಯದಲ್ಲಿ ಭೂಮಿ ಹೊಂದಿರುವ ಬಡವರು, ಹಿಂದುಳಿದ ವರ್ಗದವರು, ಆದಿವಾಸಿಗಳು, ದಲಿತರು ಯಾವುದೇ ಕಾರಣಕ್ಕೂ ಅದರ ಮಾಲಿಕತ್ವದಿಂದ ವಂಚಿತರಾಗಬಾರದು…

By Dinamaana Kannada News

ದಾವಣಗೆರೆ | ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ವಿವಿಧ ಕೌಶಲ್ಯಭಿವೃದ್ದಿ ಯೋಜನೆಗೆ ಅರ್ಜಿ ಆಹ್ವಾನ

ದಾವಣಗೆರೆ  : ಅಲ್ಪಸಂಖ್ಯಾತರ ನಿರ್ದೇಶನಾಲಯ ಮತ್ತು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಪರಸ್ಪರ ಒಡಂಬಡಿಕೆಯೊಂದಿಗೆ ದೂರ ಶಿಕ್ಷಣ ಮಾದರಿಯಲ್ಲಿ ಪದವಿ,…

By Dinamaana Kannada News

You Might Also Like

bhadra-dam
ತಾಜಾ ಸುದ್ದಿ

Bhadra dam | ಭದ್ರಾ ಜಲಾಶಯ : ತುಂಬಲು ದಿನಗಣನೆ ಆರಂಭ

By Dinamaana Kannada News
Dinesh K Shetty
ತಾಜಾ ಸುದ್ದಿ

ದಾವಣಗೆರೆ|ದೇಶ ಮತ್ತು ಯೋಧರ ವಿಚಾರದಲ್ಲಿ ರಾಜಕೀಯ ಸಲ್ಲ: ದಿನೇಶ್ ಕೆ ಶೆಟ್ಟಿ

By Dinamaana Kannada News
recruitment for posts in BSF
ತಾಜಾ ಸುದ್ದಿ

BSFನಲ್ಲಿ 3588 ಹುದ್ದೆಗಳ ಭರ್ಜರಿ ನೇಮಕಾತಿ

By Dinamaana Kannada News
Gold price
ತಾಜಾ ಸುದ್ದಿ

ಮೂರು ದಿನಗಳಲ್ಲಿ ಚಿನ್ನದ ಬೆಲೆ 2,400 ರೂ. ಇಳಿಕೆ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?