ದಾವಣಗೆರೆ (Davanagere) : ವಿವಿಧ ಜಿಲ್ಲೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಹರಿಹರ ನಗರ ಠಾಣೆ ಪೊಲೀಸರು ಬಂಧಿಸಿ 10.30 ಲಕ್ಷ ಮೌಲ್ಯದ ಸ್ವತ್ತು ವಶಕ್ಕೆ ಪಡೆದಿದ್ದಾರೆ.
ರಾಣೆಬೆನ್ನೂರಿನ ಪ್ರವೀಣ ಆನಂದಪ್ಪ (23) ಆಕಾಶ್ (23) ಇವರು ಕಳ್ಳತನ ಮಾಡಿದ ಮೋಟಾರ್ ಬೈಕ್ ನಲ್ಲಿ ಬರುತ್ತಿದ್ದಾಗ ಪೊಲೀಸ್ ರು ತಡೆದು ನಿಲ್ಲಿಸಿ ವಿಚಾರಣೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. 1ನೇ ಆರೋಪಿ ತಲೆಮರೆಸಿಕೊಂಡಿದ್ದು ಪತ್ತೆ ಕಾರ್ಯ ಮುಂದುವರೆದಿದೆ.
ದೂರುದಾರರಾದ ಗೋಪಿ.ಪಿ.ಎನ್ ಇವರು ತಮ್ಮ ಹೊಂಡಾ ಶೈನ್ ಬೈಕ್ ಕಳ್ಳತನವಾದ ಬಗ್ಗೆ ಹರಿಹರ ನಗರ ಠಾಣೆ ಅಪರಾಧ ಪ್ರಕರಣ ದಾಖಲಿಸಿದ್ದರು.
ಪ್ರಕರಣದ ಪತ್ತೆಗಾಗಿ ಎಎಸ್ಪಿ ವಿಜಯಕುಮಾರ ಕುಮಾರ್ ಎಂ ಸಂತೋಷ , ಜಿ ಮಂಜುನಾಥ, ಗ್ರಾಮಾಂತರ ಡಿವೈಎಸ್ಪಿ ಪೊಲೀಸ್ ಮಾರ್ಗದರ್ಶನದಲ್ಲಿ ಹರಿಹರ ನಗರ ಠಾಣೆ ಪಿಐ ಎಸ್.ದೇವಾನಂದ ನೇತೃತ್ವದಲ್ಲಿ ಪಿ.ಎಸ್.ಐ ಜಿ.ಎಸ್.ವಿಜಯ್, ಶ್ರೀಪತಿ ಗಿನ್ನಿ ಪಿ.ಎಸ್.ಐ, ಅಪರಾಧ ವಿಭಾಗ ಸಿಬ್ಬಂದಿಗಳಾದ ನಾಗರಾಜ ಸುಣಗಾರ, ಸಿದ್ದೇಶ.ಹೆಚ್, ರವಿ.ಆರ್, ರುದ್ರಸ್ವಾಮಿ.ಕೆ.ಸಿ, ಹನುಮಂತಪ್ಪ ಗೋಪನಾಳ, ರವಿನಾಯ್ಕ್, ಶಾಂತರಾಜ್.ಎಂ.ಎಸ್, ಸಿದ್ದರಾಜು, ರವಿ.ಕೆ, ಚಾಲಕ ರಂಗನಾಥ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ರಾಮಚಂದ್ರ ಜಾದವ್, ಶಿವಕುಮಾರ, ರಮೇಶ ರವರನ್ನೊಳಗೊಂಡ ತಂಡ ಹರಿಹರ ನಗರದ ಎಂ.ಜಿ.ವೃತ್ತದಲ್ಲಿ ವಾಹನ ಚೆಕ್ ಮಾಡುವಾಗ ಆರೋಪಿ ಸಿಕ್ಕಿ ಬಿದ್ದಿದ್ದಾರೆ.
ಆರೋಪಿಗಳಿಂದ 123.5 ಗ್ರಾಂ ಬಂಗಾರದ ಆಭರಣ 59.72 ಗ್ರಾಂ ತೂಕದ ಒಂದು ಬೆಳ್ಳಿ ಲೋಟ, ಕೃತ್ಯಕ್ಕೆ ಬಳಕೆ ಮಾಡಿದ ಹೈಡ್ರಾಲಿಕ್ ಕಟ್ಟರ್ ಮಿಷಿನ್, ಬ್ಯಾಡಗಿ ಪೊಲೀಸ್ ಠಾಣೆ ಪ್ರಕರಣದ ಮೋಟಾರ್ ಬೈಕ್, ಹರಿಹರ ನಗರ ಪೊಲೀಸ್ ಠಾಣೆ ಪ್ರಕರಣದ ಹೊಂಡಾ ಶೈನ್ ಮೋಟಾರ್ ಬೈಕ್ ಸೇರಿದಂತೆ ಒಟ್ಟು 10,30,000/-ರೂ ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದ್ದಾರೆ.
ಆರೋಪಿ ಶಿವಮೊಗ್ಗ ಜಿಲ್ಲೆ ವಿನೋಬನಗರ ಠಾಣೆಯಲ್ಲಿ -02, ತಿರ್ಥಹಳ್ಳಿಯಲ್ಲಿ -01 ಸರಗಳ್ಳತನ ಪ್ರಕರಣಗಳು, ಹುಬ್ಬಳ್ಳಿ- ದಾರವಾಡ- ಕೇಶವಪುರ ಠಾಣೆ-01 ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ.
ಪ್ರಕರಣದಲ್ಲಿ ಆರೋಪಿತರ ಪತ್ತೆಕಾರ್ಯದಲ್ಲಿ ಯಶಸ್ವಿಯಾದ ಅಧಿಕಾರಿ ಸಿಬ್ಬಂದಿಗಳನ್ನು ಎಸ್ಪಿ ಉಮಾ ಪ್ರಶಾಂತ್ ಪ್ರಶಂಸನೆ ವ್ಯಕ್ತಪಡಿಸಿದ್ದಾರೆ.
Read also : ಸರ್ಕಾರಿ ಶಾಲೆಗಳ ಉಳಿವಿಗೆ ಬಜೆಟ್ನಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಬೇಕು: ಜಿಕ್ರಿಯಾ