Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > ಕಮ್ಯುನಿಸ್ಟ್ ಆಗದ ನಿಜ ಮಾರ್ಕಿಷ್ಟ್ ಹಿರೇಮಠ
Blog

ಕಮ್ಯುನಿಸ್ಟ್ ಆಗದ ನಿಜ ಮಾರ್ಕಿಷ್ಟ್ ಹಿರೇಮಠ

Dinamaana Kannada News
Last updated: April 12, 2024 5:28 am
Dinamaana Kannada News
Share
Hiremath
ಎಸ್ ಎಸ್‌ ಹಿರೇಮಠ
SHARE

‌ಮೇಲ್ವರ್ಗಗಳ ತವರಿನಂತಿರುವ ಹಡಗಲಿಯಲ್ಲಿ ಗ್ರಾಮದೇವತೆಯ ಜಾತ್ರೆಯಲ್ಲಿ ಕೆಲ ವಿದ್ಯಾವಂತ ದಲಿತ ಯುವಕರನ್ನು ಕೂಡಿಸಿಕೊಂಡು ಅನಿಷ್ಟ ಪದ್ದತಿಯ ವಿರುದ್ದ ಸಮರ ಸಾರಿದ್ದು,ದಲಿತ ಸಂಘರ್ಷ ಸಮಿತಿ ಸ್ಥಾಪಿಸಿದ್ದು ಮೇಲ್ವರ್ಗಗಳ ಕೆಂಗಣ್ಣಿಗೆ ಗುರಿಯಾಯಿತು.

ದಲಿತ ಲೋಕದ ಕರಾಳ ಬದುಕಿನ ದರ್ಶನವು ಅಂಬೇಡ್ಕರ್ ವಾದಿಯನ್ನಾಗಿಸಿತು 

ಒಮ್ಮೆಯಂತೂ  ಜಾತ್ರೆಯಲ್ಲಿಯೇ ಅವರ ಮೇಲೆ ದೈಹಿಕ ಹಲ್ಲೆಯಾಯಿತು.ಬೆಳಗಾವಿ,ಧಾರವಾಡ ಜಿಲ್ಲೆಯ ಹಾಲು ಕುಡಿದು,ಜೊತೆಗೆ ಗಾಂಧಿವಾದವನ್ನು ಹೊತ್ತು ತಂದಿದ್ದ ಮೇಷ್ಟ್ರು,ಹೊಸಪೇಟೆಯ ಭೀಮಸೇನರಾವ್ ಮೇಷ್ಟ್ರರ ಸಂಪರ್ಕದಿಂದ ಮಾರ್ಕ್ಸ್ವಾದಿಯಾಗಿದ್ದ ಮೇಷ್ಟ್ರಿಗೆ ,ದಲಿತ ಲೋಕದ ಕರಾಳ ಬದುಕಿನ ದರ್ಶನವು ಅಂಬೇಡ್ಕರ್ ವಾದಿಯನ್ನಾಗಿಸಿತು.

ಕಟ್ಟರ್ ಮಾರ್ಕಿಷ್ಟ್ ರು  ಅರ್ಥಮಾಡಿಕೊಳ್ಳದೇ ಹೋದದ್ದು ದುರಂತ

ಗಾಂಧಿ,ಲೋಹಿಯಾ,ಮಾರ್ಕ್ಸ್,ಹೆಗೆಲ್,ಲೆನಿನ್,ಬಸವಣ್ಣ…ಹೀಗೆ ಹತ್ತು ಹಲವು ಸಾಂಸ್ಕೃತಿಕ,ರಾಜಕೀಯ ಐಕಾನ್ ಗಳ ಐಡಿಯಾಲಜಿಗಳ ನ್ನು ಅರೆದು ಕುಡಿದಂತೆ ಇದ್ದ  ಎಸ್ಸೆಸ್ ಮೇಷ್ಟ್ರು ಸದಾ ಹರಿವ ನದಿಯಂತೆ ಚಲನಶೀಲರಾಗಿದ್ದರು.ಈ ಗುಣವನ್ನು ಕಟ್ಟರ್ ಮಾರ್ಕಿಷ್ಟ್ ರು  ಅರ್ಥಮಾಡಿಕೊಳ್ಳದೇ ಹೋದದ್ದು ದುರಂತವೇ ಸರಿ. ಹಡಗಲಿಯ ಗೋಡೆಗಳ ಮೇಲೆ ಪೊರಕೆ ಪಿಕಾಸಿಯ ಗುರುತಿನ ಚಿಹ್ನೆ ರಾರಾಜಿಸುವಂತೆ ಮಾಡಿದ್ದಲ್ಲದೆ, ಸಿದ್ಧಲಿಂಗಯ್ಯವರ ಹೋರಾಟದ ಹಾಡುಗಳು ಹಾದಿಬೀದಿಗಳಲ್ಲಿ ಪ್ರತಿಧ್ವನಿಸಿ ,ಇಡೀ ಊರು-ಕೇರಿಗಳಲ್ಲಿ ಹಿರೇಮಠರೆಂಬ ಅಯ್ಯಪ್ಪನೋರ್ವ ಮೇಷ್ಟ್ರು ಸುದ್ದಿಯಾಗಿ ಹೋದರು.

ಜನಸಾಮಾನ್ಯರಿಗಾಗಿ ಬರೆದರು 

ತಾನು ನಂಬಿದ ಗಾಂಧಿಯನ್ನು,ಮಾರ್ಕ್ಸ,ಲೆನಿನ್,ಬಸವಣ್ಣ,ಅಲ್ಲಮ,ಲೋಹಿಯಾ ಮತ್ತು ಅಂಬೇಡ್ಕರ್ ರನ್ನು ನಾಲ್ಕು ಗೋಡೆಗಳ ಮಧ್ಯಕ್ಕಷ್ಟೆ ಸೀಮಿತಗೊಳಿಸದೆ ಜನರ ನಡುವೆ ತಂದು ನಿಲ್ಲಿಸಿದರು. ನಮ್ಮಲ್ಲಿ ಪಂಡಿತರನ್ನು ಗಮನದಲ್ಲಿಟ್ಟುಕೊಂಡು ಬರೆಯುವ ವರ್ಗ ಇರಬಹುದು.ಆದರೆ ಜನಸಾಮಾನ್ಯರನ್ನು ಗಮನಿಸಿ ಬರೆದು ಅವರಿಗಾಗಿ ಬದುಕಿದವರಲ್ಲಿ ಹಿರೇಮಠರು ಅಗ್ರಗಣ್ಯರಾಗಿದ್ದಾರೆ ಎನ್ನುವುದನ್ನು ನಾವೆಂದಿಗೂ ಮರೆಯಬಾರದು.

ಎಸ್.ಎಫ್.ಐ.ಮತ್ತು ಡಿ.ವೈ.ಎಫ್.ಐ. ಸಂಘಟನೆ ಕಟ್ಟಿ ಬೆಳಸಿದರು

ಅದುವರೆಗೂ ಬಳ್ಳಾರಿ ಜಿಲ್ಲೆಯಲ್ಲಿ ಎಡಪಂಥೀಯ ಚಳುವಳಿಗಳೇ ಇಲ್ಲದ,ಸಂಘಟನೆಗಳೇ ಇಲ್ಲದ ಕಾಲದಲ್ಲಿ ಎಸ್.ಎಫ್.ಐ.ಮತ್ತು ಡಿ.ವೈ.ಎಫ್.ಐ.ಗಳಂತಹ ಸಂಘಟನೆಗಳನ್ನು ಕಟ್ಟಿ ಬೆಳೆಸಿದ ಹಿರೇಮಠರು, ಹಡಗಲಿಯಲ್ಲಿ ಡಿ.ಎಸ್.ಎಸ್.ಸಂಘಟನೆಯನ್ನು ಹುಟ್ಟು ಹಾಕಿದ್ದಲ್ಲದೆ ಅದು ತುಂಬ ಕ್ರಿಯಾಶೀಲವಾಗಿರುವಂತೆ ನೋಡಿಕೊಂಡರು.ಆದರೆ ತನ್ನ  ತಾಯಿಯಂತಿದ್ದ ಕಮ್ಯುನಿಸ್ಟ್ ಪಾರ್ಟಿಯ ಕೇಂದ್ರದಲ್ಲಿದ್ದವರಿಗೆ ಹಿರೇಮಠರ ಸಾಮಾಜಿಕ,ಸಾಂಸ್ಕೃತಿಕ ಶೋಧಗಳು ಅರ್ಥವಾಗಲಿಲ್ಲ ಎನಿಸುತ್ತದೆ ಅಥವಾ ಕೇಂದ್ರ ಸಮಿತಿಯ ಸರ್ವಾಧಿಕಾರದ ಧೋರಣೆಯ ಅಹಂನಿಂದಲೋ ಏನೋ ಅಂಬೇಡ್ಕರರ ಚಿಂತನೆಗಳನ್ನೂ ದೂರವೇ ಇಟ್ಟರು.

ಗಾಂಧಿವಾದವನ್ನು,ಗಾಂಧಿಯ ವ್ಯಕ್ತಿತ್ವಗಳನ್ನೂ ಕೂಡ ದೂರವೇ ಇರಿಸಿದವು.ಎಡಪಕ್ಷಗಳ ಈ ಕ್ರಿಯೆ  ಈ ಎರಡೂ ರಾಷ್ಟ್ರನಾಯಕನ ಚಿಂತನೆಗಳಿಂದ ಉಳಿದ  ದೂರವೇ ಪಾರ್ಟಿಯ ಬೆಳವಣಿಗೆಗೆ ಅಡ್ಡಿಯಾಯಿತೆನ್ನಬಹುದು.  ಭಾರತದ ಎಡಪಕ್ಷಗಳ ಮಟ್ಟಿಗೆ ಇದೊಂದು ಐತಿಹಾಸಿಕ ಪ್ರಮಾದವಾಗಿಯೇ ಇಂದಿಗೂ  ಉಳಿದುಬಿಟ್ಟಿದೆ.

 

           ಬಿ.ಶ್ರೀನಿವಾಸ

TAGGED:dinamaana.comHiremath was a true Marxist who did not become a communist.Kannada Newsಕನ್ನಡ ನ್ಯೂಸ್‌ಕಮ್ಯುನಿಸ್ಟ್ ಆಗದ ನಿಜ ಮಾರ್ಕಿಷ್ಟ್ ಹಿರೇಮಠ.ದಿನಮಾನ.ಕಾಂ
Share This Article
Twitter Email Copy Link Print
Previous Article SAFBDAR HASMI ‘ಸಪ್ದರ್ ಜೀವಿಸಿದ್ದರೆ’ ಪ್ಯಾಸಿಸಂ ವಿರುದ್ದ ಬೀದಿಯಲ್ಲಿರುತ್ತಿದ್ದರು..
Next Article davanagere “370” ದೇಶದೊಳು 

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

ಘನತ್ಯಾಜ್ಯ ಸಂಸ್ಕರಣೆ ಘಟಕಕ್ಕೆ ಬೆಂಕಿ: ಆವರಗೊಳ್ಳ ಗ್ರಾಮಕ್ಕೆ ಹಬ್ಬಿದ ವಿಷ ಹೊಗೆ

ದಾವಣಗೆರೆ: ಇಲ್ಲಿನ ಮಹಾನಗರ ಪಾಲಿಕೆಯ ಆವರಗೊಳ್ಳದಲ್ಲಿನ ಘನತ್ಯಾಜ್ಯ ಸಂಸ್ಕರಣೆ ಹಾಗೂ ವಿಲೇವಾರಿ ಘಟಕದಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ವಿಷಪೂರಿತ ಹೊಗೆ ಗ್ರಾಮವನ್ನು…

By Dinamaana Kannada News

ಹೆಗಡೆಯವರ ಅಭಿಪ್ರಾಯಕ್ಕೆ ಪ್ರಧಾನಿಗಳ ಒಪ್ಪಿಗೆ ಇಲ್ಲದಿದ್ದರೆ ಅವರನ್ನು ಪಕ್ಷದಿಂದ ವಜಾ ಮಾಡಲಿ – ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು  

ಹಿಂದೂ ಧರ್ಮವನ್ನು ರಕ್ಷಿಸಬೇಕಾದರೆ ಸಂವಿಧಾನವನ್ನು ಬದಲಾಯಿಸಬೇಕು. ಅದಕ್ಕಾಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 400 ಸ್ಥಾನಗಳನ್ನು ಗೆಲ್ಲಿಸಿಕೊಡಬೇಕು" ಎಂದು ಸಂಸದ ಅನಂತ್‍ಕುಮಾರ್…

By Dinamaana Kannada News

ಕ್ರೀಡೆಯಿಂದ ಸದೃಢ ಆರೋಗ್ಯ ಸಾಧ್ಯ : ಶಾಸಕ ಕೆ.ಎಸ್.ಬಸವಂತಪ್ಪ

ದಾವಣಗೆರೆ:  ಆಟೋಟಗಳಲ್ಲಿ ಭಾಗವಹಿಸುವುದರಿಂದ ದೇಹದ ಸರ್ವಾಂಗೀಣ ಬೆಳವಣಿಗೆಯಾಗುವುದಲ್ಲದೇ ಸದೃಢ ಆರೋಗ್ಯ ನಿರ್ಮಾಣವಾಗುತ್ತದೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು. ಮಾಯಕೊಂಡ ಕ್ಷೇತ್ರದ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

Davanagere | ಅರೆ ಕಾಲಿಕ ಶಿಕ್ಷಕರ ಸೇವೆಗೆ ಅರ್ಜಿ ಆಹ್ವಾನ

By Dinamaana Kannada News
Needle of Light-Book
Blog

ಗೀತಾ ಮಂಜುರವರ ಕಿರು ಬೆಳಕಿನ ಸೂಜಿ” ಕೃತಿಗೆ 2024ರ “ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ”

By Dinamaana Kannada News
Davanagere police
ತಾಜಾ ಸುದ್ದಿಅಪರಾಧ ಸುದ್ದಿ

ಎರಡು ಪ್ರತ್ಯೇಕ ಅಪ್ರಾಪ್ತ ಬಾಲಕ ವಾಹನ ಚಾಲನೆ ಪ್ರಕರಣ : ವಾಹನ ಮಾಲೀಕರಿಗೆ 25 ಸಾವಿರ ದಂಡ 

By Dinamaana Kannada News
GM University Davanagere
ತಾಜಾ ಸುದ್ದಿ

ಜಿಎಂ ವಿಶ್ವವಿದ್ಯಾಲಯ : ಪ್ರಸಕ್ತ ಸಾಲಿನಲ್ಲಿ 1000 ಜಾಬ್ ಆಫರ್ಸ್ ಸ್ವೀಕರಿಸಿದ ವಿದ್ಯಾರ್ಥಿಗಳು

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Welcome Back!

Sign in to your account

Lost your password?