ಜಗಳೂರು: ದೇವಾಲಯಗಳ ನಿರ್ಮಾಣಕ್ಕೆ ನೀಡಿದ ಆದ್ಯತೆಯನ್ನು ಪ್ರತಿಯೊಂದು ಗ್ರಾಮದಲ್ಲಿಯೂ ಶಾಲೆಗಳ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಕೆಪಿಸಿಸಿಯ ಎಸ್ಟಿ ಘಟಕದ ಪ್ರಧಾನ ಕಾರ್ಯದರ್ಶಿ ಎಂ .ಡಿ.ಕೀರ್ತಿ ಕುಮಾರ್ ಗ್ರಾಮಸ್ಥರಿಗೆ ಸಲಹೆ ನೀಡಿದರು.
ತಾಲೂಕಿನ ಗೌರಿಪುರ ಗ್ರಾಮದಲ್ಲಿ ನೂತನ ಆಂಜನೇಯ ಸ್ವಾಮಿಯ ದೇವಸ್ಥಾನದ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದರು.
ಪ್ರತಿಯೊಂದು ಗ್ರಾಮಗಳಲ್ಲಿಯೂ ಪ್ರತಿ ನಿತ್ಯ ದೇವಸ್ಥಾನಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ ಏನಿಲ್ಲ ಎಂದರು ಒಂದು ಗ್ರಾಮದಲ್ಲಿ ಮೂರು ನಾಲ್ಕು ದೇವಾಲಯಗಳು ನಿರ್ಮಾಣವಾಗಿವೆ ದೇವಾಲಯ ನಿರ್ಮಾಣಕ್ಕೆ ಇರುವ ಆಸಕ್ತಿಯನ್ನು ಗ್ರಾಮಸ್ಥರು ಶಾಲೆಗಳ ಅಭಿವೃದ್ಧಿಗೆ ಮತ್ತು ಶಾಲಾ ಶಾಲಾ ನೂತನ ಕಟ್ಟಡಕ್ಕೆ ಹೊತ್ತು ನೀಡಬೇಕು ಏಕೆಂದರೆ ಶಿಕ್ಷಣದಿಂದ ಮಾತ್ರ ಏನಾದರೂ ಸಾಧಿಸಲು ಸಾಧ್ಯ.
ಗ್ರಾಮೀಣ ಭಾಗಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂದರೆ ಸುಸಜ್ಜಿತವಾದ ಕೋಠಡಿಗಳ ಅವಶ್ಯಕತೆ ಇರುತ್ತದೆ ಕೊಠಡಿಗಳ ಜೊತೆಗೆ ಅಡುಗೆ ಕೋಣೆ ,ಶೌಚಾಲಯ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಗ್ರಾಮಸ್ಥರ ಆದ್ಯ ಕರ್ತವ್ಯವಾಗಬೇಕು ನಾವು ಕಾಣದ ದೇವರಿಗೆ ಗುಣಮಟ್ಟದ ದೇವಾಲಯಗಳನ್ನು ನಿರ್ಮಾಣ ಮಾಡುತ್ತೇವೆ ಮಕ್ಕಳು ಸಹ ದೇವರಿಗೆ ಸಮಾನರಾಗಿದ್ದು ಅವರು ಕಲಿಯುವಂತ ಶಾಲೆಗಳನ್ನು ಗುಣಮಟ್ಟದಿಂದ ನಿರ್ಮಾಣವಾಗುವಂತೆ ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತಹ ಕೆಲಸ ಪ್ರತಿಯೊಂದು ಗ್ರಾಮದ ಗ್ರಾಮಸ್ಥರ ಮೇಲಿದೆ ಎಂದರು.
ಶಿಕ್ಷಣ ಎಂಬುದು ಹುಲಿಯ ಹಾಲಿನಂತೆ ಈ ಹಾಲನ್ನು ಯಾರು ಕುಡಿಯುತ್ತಾರೆ ಅವರು ಗರ್ಜಿಸುತ್ತಾರೆ ಎಂಬ ಸಂವಿಧಾನ ಶಿಲ್ಪಿಯ ಮಾತಿನಂತೆ ಮಕ್ಕಳು ಕಲಿಯುವ ಹಂತದಲ್ಲಿ ಅವರಿಗೆ ಸುಸಜ್ಜಿತವಾದ ಕೊಠಡಿಗಳು ಹಾಗೂ ಶಿಕ್ಷಕರ ಕೊರತೆ ಇಲ್ಲದಂತೆ ನೋಡಿಕೊಳ್ಳಬೇಕಾಗಿದೆ.
Read also : ಉದ್ಯೋಗದ ದಾರಿ ತೆರೆಯುವ ಉದ್ಯೋಗ ಮೇಳ
ದೇವಾಲಯಗಳು ಸಹ ನೆಮ್ಮದಿಯ ತಾಣವಾಗುತ್ತಿದ್ದು ದೇವಾಲಯಗಳನ್ನು ನಿರ್ಮಾಣ ಮಾಡುವುದು ಮುಖ್ಯವಲ್ಲ ಅವುಗಳನ್ನು ಕಾಪಾಡಿಕೊಂಡು ಬರುವುದು ಅಷ್ಟೇ ಮುಖ್ಯ ಗ್ರಾಮದಲ್ಲಿ ಸರ್ವ ಸಮುದಾಯದವರು ಹೊಂದಾಣಿಕೆಯಿಂದ ಜೀವನ ನಡೆಸುತ್ತಿದ್ದು ಹಬ್ಬ ಹರಿ ದಿನಗಳನ್ನು ಹೊಂದಾಣಿಕೆಯಿಂದ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ ಜಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರತಿಯೊಂದು ಗ್ರಾಮಗಳಲ್ಲಿಯೂ ಸಹ ಗ್ರಾಮಸ್ಥರು ಹೊಂದಾಣಿಕೆಯಿಂದ ಜೀವನ ಮಾಡಿಸಿಕೊಂಡ ಬರುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರು ಗ್ರಾಮಸ್ಥರು ಹಾಜರಿದ್ದರು.
ಪಟ್ಟಣದ ಹೃದಯ ಭಾಗದಲ್ಲಿರುವ ಕೆಲ ಬಡಾವಣೆಗಳಲ್ಲಿ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲದೆ ಸುಮಾರು ವರ್ಷಗಳಿಂದ ಸಾರ್ವಜನಿಕರು ಪರಿತಪಿಸುತ್ತಿದ್ದರು ಶಾಸಕ ಬಿ. ದೇವೇಂದ್ರಪ್ಪನವರ ಆಸಕ್ತಿಯಿಂದ ಪಟ್ಟಣದ ಕೆಲ ಬಡವಣೆಗಳಲ್ಲಿ ರಸ್ತೆ ಚರಂಡಿ ಕಾಮಗಾರಿಗಳನ್ನು ಮಾಡಿಸುತ್ತಿದ್ದು ಅವರು ಮಾಡಿರುವಂತಹ ಕೆಲಸಗಳೇ ಸಾರಿ ಸಾರಿ ಹೇಳುತ್ತಿವೆ.ಎಸ್ಟಿ ಘಟಕದ ಪ್ರಧಾನ ಕಾರ್ಯದರ್ಶಿ ಎಂ .ಡಿ.ಕೀರ್ತಿ ಕುಮಾರ್
