Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > Davanagere Viraktamatha : ಹಾಲು ಹಾಳು ಮಾಡಬೇಡಿ, ಮಕ್ಕಳಿಗೆ ನೀಡಿ : ಬಸವಪ್ರಭು ಸ್ವಾಮೀಜಿ
ತಾಜಾ ಸುದ್ದಿ

Davanagere Viraktamatha : ಹಾಲು ಹಾಳು ಮಾಡಬೇಡಿ, ಮಕ್ಕಳಿಗೆ ನೀಡಿ : ಬಸವಪ್ರಭು ಸ್ವಾಮೀಜಿ

Dinamaana Kannada News
Last updated: August 9, 2024 12:01 am
Dinamaana Kannada News
Share
DAVANAGERE
ದಾವಣಗೆರೆ ವಿರಕ್ತಮಠದಲ್ಲಿ ಬಸವ ಪಂಚಮಿ ಹಿನ್ನಲೆಯಲ್ಲಿ ಕುಡಿಸುವ ಹಬ್ಬ
SHARE

ದಾವಣಗೆರೆ (Davangere District): ಮೂಢನಂಬಿಕೆಗಳನ್ನು ಬಿಟ್ಟರೆ ಜಗತ್ತು ಸ್ವರ್ಗವಾಗುತ್ತದೆ. ಇಂದು ದೇಶದಲ್ಲಿರುವ ಬಡತನಕ್ಕೆ ಅನೇಕ ಕಾರಣಗಳಿದ್ದರೂ ಅದರಲ್ಲಿ ಮೂಢನಂಬಿಕೆಗಳು ಒಂದು ಕಾರಣವಾಗಿದೆ ಎಂದು ಡಾ.ಬಸವಪ್ರಭು ಸ್ವಾಮೀಜಿ ಹೇಳಿದರು

ನಗರದ ವಿರಕ್ತಮಠ (Viraktamatha) ದಲ್ಲಿ ಬಸವ ಪಂಚಮಿ ಅಂಗವಾಗಿ ಹಾಲು ಕುಡಿಸುವ ಹಬ್ಬ (Milk drinking festival)  ಸಮಾರಂಭದ ನೇತೃತ್ವ ವಹಿಸಿ ಆಶೀರ್ವಚನ ನೀಡಿದರು.

ನಾವು ಕುಡಿಯುವ ಅಮೃತ ಸಮಾನವಾದ ಹಾಲನ್ನು ದೇವರು, ಧರ್ಮದ ಹೆಸರಿನಲ್ಲಿ ಹಾಳು ಮಾಡುತ್ತಿದ್ದೇವೆ ಇದು ಶ್ರೇಷ್ಠತೆ ಅಲ್ಲ.ಈ ಹಾಲನ್ನು ಮಕ್ಕಳಿಗೆ , ಬಡಜನರಿಗೆ , ರೋಗಿಗಳಿಗೆ , ವೃದ್ಧರಿಗೆ ಕುಡಿಸಿದರೆ ನಿಜವಾಗಿಯೂ ದೇವರು ಸಂತೃಪ್ತಿಯಾಗುತ್ತಾನೆ. ದೇವರು ವಾಸವಾಗಿರುವುದು ಹಸಿದ ಜನರಲ್ಲಿ, ಬಡವರಲ್ಲಿ ಇದ್ದಾನೆ. ಅವರಲ್ಲಿ ದೇವರನ್ನು ಕಾಣಬೇಕು ಎಂದರು.

ಹಾಲನ್ನು ಕಲ್ಲನಾಗಪ್ಪಗೆ ನನ್ನ ಪಾಲು , ಅಪ್ಪನ ಪಾಲು , ಅವ್ವನ ಪಾಲು ಎಂದು ಮಣ್ಣುಪಾಲು ಮಾಡಬೇಡಿ . ಹಾಲನ್ನು ಮತ್ತೊಬ್ಬರಿಗೆ ಕುಡಿಸುವ ಮೂಲಕ ಬಸವ ಪಂಚಮಿ ಎಂದು ಆಚರಿಸಬೇಕೆಂದು ಚಿತ್ರದುರ್ಗ ಮುರುಘಾಮಠ (Chitradurga Muruga Math) ವು ಕರೆ ನೀಡಿದೆ. ಕಳೆದ ಮೂವತ್ತು ವರ್ಷಗಳಿಂದ ಬಸವ ಪಂಚಮಿಯನ್ನು ಆಚರಿಸಲಾಗುತ್ತದೆ. ಈ ಆದರ್ಶವನ್ನು ಇಂದು ಅನೇಕ ಪ್ರಗತಿಪರ ಸಂಘಟನೆಗಳು ಆಚರಿಸಲು ಪ್ರಾರಂಭಿಸಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.

ಹಾಲನ್ನು ಹಾವುಗಳು ಸೇವಿಸುವುದಿಲ್ಲ ಹಾಲು ಹಾವಿನ ಆಹಾರ ಅಲ್ಲ. ಹಾಲನ್ನು ಸೇವಿಸುವುದಿಲ್ಲ ಎಂದು ವಿಜ್ಞಾನ ಹೇಳುತ್ತದೆ. ಈ ವೈಜ್ಞಾನಿಕ ಅಂಶವನ್ನು ನಾವು ಅರಿಯಬೇಕು ಧರ್ಮ, ದೇವರನ್ನು ನಾವು ವೈಜ್ಞಾನಿಕವಾಗಿ ಚಿಂತನೆ ನಡೆಸಿ ಆಚರಣೆ ಮಾಡಬೇಕು. ಆ ಹಿನ್ನಲೆಯಲ್ಲಿ ಬಸವಣ್ಣನವರು ನೀಡಿದ ಲಿಂಗಾಯತ ಧರ್ಮ ಜಗತ್ತಿನಲ್ಲಿಯೇ ವೈಜ್ಞಾನಿಕ , ವೈಚಾರಿಕತೆ , ಸಮಾನತೆಯ ಧರ್ಮವಾಗಿದೆ ಎಂದರು.

Read also : DAVANAGERE NEWS : ತಾಯಿಯ ಎದೆಹಾಲು ಮಕ್ಕಳಿಗೆ ದಿವ್ಯೌಷಧ : ನ್ಯಾ. ವೀಣಾ ಕೊಳೇಕರ್

ಬಸವರಾಜ ದೊಡ್ಡಮನಿ ಮಾತನಾಡಿ, ಮುರುಘಾಮಠವು ನಾಡಿನಲ್ಲಿ ವೈಚಾರಿಕ ಪ್ರಜ್ಞೆಯನ್ನು ಬೆಳೆಸುವ ಕಾರ್ಯವನ್ನು ಮಾಡುತ್ತಿದೆ. ನೊಂದವರ ಪರವಾಗಿ , ದುಃಖಿತರ ಪರವಾಗಿ ಬಸವಣ್ಣನವರು ಮಾಡಿದ ಕೆಲಸವನ್ನು ನಾವು ಪಾಲಿಸಬೇಕಾಗಿದೆ . ಬಸವತತ್ವಗಳು ಜಗತ್ತಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತವೆ. ಮಾನವನನ್ನು ಮಾನವನಂತೆ ಪ್ರೀತಿ ಮಾಡಿ ಎಂದು ಬಸವಣ್ಣನವರು ಕರೆ ನೀಡಿದ್ದಾರೆ ಎಂದರು.

ಸಮಾರಂಭದ ಉದ್ಘಾಟನೆಯನ್ನು ದೂಡಾ ಸದಸ್ಯರಾದ ವಾಣಿ ಬಕ್ಕೇಶ್ ಅವರು ಮಕ್ಕಳಿಗೆ ಹಾಲನ್ನು ವಿತರಣೆ ಮಾಡುವ ಚಾಲನೆ ನೀಡಿದರು.

ಸಮಾರಂಭದಲ್ಲಿ ಎಸ್.ಓಂಕಾರಪ್ಪ , ಟಿ.ಎಂ. ವೀರೇಂದ್ರ , ಲಂಬಿ ಮುರುಗೇಶಪ್ಪ , ಸುಜಾತ ಬೂಸ್ನೂರ್ ಇದ್ದರು.

TAGGED:Davangeredinamaana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article davanagere DAVANAGERE NEWS : ತಾಯಿಯ ಎದೆಹಾಲು ಮಕ್ಕಳಿಗೆ ದಿವ್ಯೌಷಧ : ನ್ಯಾ. ವೀಣಾ ಕೊಳೇಕರ್
Next Article Davanagere DAVANAGERE : ಅಂಗನವಾಡಿ ಕಾರ್ಯಕರ್ತೆ,ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರಾಗಿ ಲಿಯಾಖತ್ ಆಲಿ

ದಾವಣಗೆರೆ (Davanagere): ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರಾಗಿ ಲಿಯಾಖತ್ ಆಲಿ ಅವರನ್ನು ರಾಜ್ಯ ಸರಕಾರ ನೇಮಕ…

By Dinamaana Kannada News

ಪಂಚಮಸಾಲಿ ಸಮುದಾಯದ ಮುಖಂಡರಿಗೆ ಅನ್ಯಾಯ

ಹರಿಹರ  :    ರಾಜಕೀಯವಾಗಿ ಪಂಚಮಸಾಲಿ ಸಮುದಾಯದ ಮುಖಂಡರಿಗೆ ಅನ್ಯಾಯವಾಗಿದೆ ಎಂದು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ…

By Dinamaana Kannada News

Davanagere | ಎಸ್ ಎಸ್ ಎಂ ಜನ್ಮದಿನ ; ಬಾಸ್ಕೆಟ್ ಬಾಲ್ ಪಂದ್ಯಾವಳಿಗೆ ಚಾಲನೆ

ದಾವಣಗೆರೆ.ಸೆ.21 (Davanagere );  ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ  ಒಂದು ದಿನದ…

By Dinamaana Kannada News

You Might Also Like

MP visits STPI Bengaluru
ತಾಜಾ ಸುದ್ದಿ

ದಾವಣಗೆರೆ | ಸಂಸದರಿಂದ ಎಸ್‌ಟಿಪಿಐ ಬೆಂಗಳೂರು ಭೇಟಿ : ಐಟಿವಲಯಕ್ಕೆ ಹೊಸ ಉತ್ತೇಜನ

By Dinamaana Kannada News
ದಾವಣಗೆರೆ
ತಾಜಾ ಸುದ್ದಿ

ದಾವಣಗೆರೆ | ಆತ್ಮಹತ್ಯೆಗೆ ಯತ್ನ : ತಾಯಿ ಮತ್ತು  ಮಗು ರಕ್ಷಿಸಿದ 112 ಹೊಯ್ಸಳ ಸಿಬ್ಬಂದಿ

By Dinamaana Kannada News
District Jawahar Bal Manch
ತಾಜಾ ಸುದ್ದಿ

ದಾವಣಗೆರೆ | ಮಾದಕ ವಸ್ತುಗಳಿಂದ ಭವಿಷ್ಯ ಸರ್ವನಾಶ : ದಿನೇಶ್ ಕೆ. ಶೆಟ್ಟಿ

By Dinamaana Kannada News
Davanagere
ತಾಜಾ ಸುದ್ದಿ

ದಾವಣಗೆರೆ | ಮಾನವ ಅಭಿವೃದ್ದಿ ವರದಿ ತಯಾರಿಕೆಗೆ ಅರ್ಜಿ ಆಹ್ವಾನ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?