Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > ಅಸ್ತವ್ಯಸ್ತಗೊಂಡ ಭಾರತದ ಸಾಂಸ್ಕೃತಿಕ ರಾಯಭಾರಿ ಮೀರ್ ಮುಕ್ತಿಯಾರ್ ಅಲಿ
Blog

ಅಸ್ತವ್ಯಸ್ತಗೊಂಡ ಭಾರತದ ಸಾಂಸ್ಕೃತಿಕ ರಾಯಭಾರಿ ಮೀರ್ ಮುಕ್ತಿಯಾರ್ ಅಲಿ

Dinamaana Kannada News
Last updated: March 30, 2024 5:10 am
Dinamaana Kannada News
Share
davanagere
ಕರ್ನಾಟಕದ ಕಬೀರ ಶಿಶುವಿನಾಳ ಶರೀಫರ ಗಿರಿಗೆ ಮೀರ್ ಮುಕ್ತಿಯಾರ್ ಅಲಿ ಭೇಟಿ ನೀಡಿದ ಸಮಯ
SHARE

ಹದಿನಾಲ್ಕು ದೇಶಗಳಲ್ಲಿ ಭಾರತದ ಕಬೀರನನ್ನ, ಮೀರಾಳನ್ನು, ತುಳಸೀದಾಸ, ಪರಮಾನಂದರನ್ನು ತನ್ನ ಹಾಡಿನಿಂದ ಪರಿಚಯಿಸಿದ, ಸಮ್ಮೋಹಕಗೊಳಿಸಿದ ವಿಶಿಷ್ಟ ಹಾಡುಗಾರ ಮೀರ್ ಮುಕ್ತಿಯಾರ್ ಅಲಿ.

ದೂರದ ಬಿಕಾನೇರ್ (ರಾಜಸ್ಥಾನ)ನವರು. ಈಗ ಹಾಡುತ್ತಿರುವ ಇವರು ತನ್ನ ಕುಟುಂಬದ ೨೬ ನೇ ತಲೆಮಾರಿನವರು. ಮೈ ಝುಮ್ಮೆನ್ನೆಸುವ ಹಾಡುಗಾರಿಕೆಗೆ ಮನಸೋಲದವರಿಲ್ಲ. ಅನುಭವಿಸಿ ಹಾಡ್ತಾರೆ.

ಹಾಡನ್ನೇ ಉಸಿರಾಗಿಸಿಕೊಂಡಿರುವ ಪೂರ್ಣಪ್ರಮಾಣದ ಬದುಕಾಗಿಸಿಕೊಂಡ ಇವರು ಬಹುತೇಕ ಭಾರತದ ಎಲ್ಲ ಮುಖ್ಯ ನಗರಗಳಲ್ಲೂ ಕಾರ್ಯಕ್ರಮ ಕೊಟ್ಟಿದ್ದಾರೆ.ಬಾಲಿವುಡ್ ಚಿತ್ರಗಳಿಗೂ ಹಾಡಿದ್ದಾರೆ.ಅವರ ಜೊತೆ ಶರೀಫಗಿರಿಯಲಿ ಇರುವ ಅವಕಾಶ ಸಿಕ್ಕಿತು.

ಅದಕ್ಕೆ ಕಾರಣವಾದದ್ದು  ಹಾರ್ಮೋನಿಯಂ ಪೆಟ್ಟಿಗೆ! 1970 ನೇ ಇಸವಿಯಲಿ ಕೊಂಡ ಹಾರ್ಮೋನಿಯಮ್ ರಿಪೇರಿಗೆ ಬಂದಿತ್ತು. ಕೊಲ್ಕತ್ತಾ, ಅಹಮದಾಬಾದ್, ದೆಹಲಿ,ಲಕ್ನೋ… ಊರುಗಳಲ್ಲಿ ಕೇಳಿದರೂ ರಿಪೇರಿಯಾಗಲಿಲ್ಲ. ಕೊನೆಗೆ ಅವರ ತಂದೆಯವರ ನೆನಪಿನಿಂದ ಕರ್ನಾಟಕದ ದಾವಣಗೆರೆ…‌ಕಾಳಿಕಾದೇವಿ ರೋಡ್…ಇಷ್ಟು ವಿಳಾಸ ಹಿಡಿದು ಬಂದರು.

ಕರ್ನಾಟಕದ ಕಬೀರ ಶಿಶುನಾಳ ಶರೀಫರ ಮುಂದೆ ಕುಳಿತು ಹಾಡುವ ಅಭಿಲಾಷೆ ವ್ಯಕ್ತಪಡಿಸಿದರು.

ಶರೀಫನ ಎದುರಿನ ಬಯಲಿನಲ್ಲಿ ,ಸುರಿವ ಮಳೆಯಲ್ಲಿ ಹಾಡಿಯೇ ಹಾಡಿದರು….

ದೈವತ್ವ…ಎಂದರೆ ಇದೇ ಇರಬಹುದೇನೋ ಎಂಬಂತೆ….

ಮಳೆ ಸುರಿಯುತ್ತಿತ್ತು…

ನಮ್ಮೆದೆಗೆ ರಾಗವೂ ಇಳಿಯುತ್ತಿತ್ತು…

ಭಾಷೆ ಅಡ್ಡಿಯಾಗಲಿಲ್ಲ…

ದೇಶ…ಗಡಿಗಳು…ಬಣ್ಣ…..ಧರ್ಮಗಳೂ …ಸಹ.

ಕಾಲ ಕೂಡ ….!!

ಬಸೂ..ಅನುಪಮಾ..ಮಂಜಪ್ಪ ಮೇಷ್ಟ್ರು,ಗೆಳೆಯ ಲಿಂಗರಾಜ್,ಅನುಪಸ್ಥಿತಿಯಲ್ಲೂ ಕಾಡಿದ ಗೆಳೆಯ ರಮಜಾನ್ ಕಿಲ್ಲೆದಾರ್,ಶಿಶುವಿನಹಾಳದ ಮುಗಳಿ ಸರ್ ಮತ್ತು ಅಲ್ಲಿನ ಟ್ರಸ್ಟಿನ ಅಂತಃಕರುಣೆಗೆ,ಡಾ.ಅನಸೂಯಾ ಮೇಡಮ್ ಗೆ ಮತ್ತು ಕೈಯ್ಯಾರೆ ಉಪ್ಪಿಟ್ಟು ಬಡಿಸಿದ ಹಲವಾರು ಮರಿ ಶರೀಫರಿಗೆ ಧನ್ಯವಾದ.

ಮಗುವಿನಂತಹ ಮುಗ್ಧತೆಯನ್ನು, ಶರೀಫನಂತಹ ಗುರುವಿನ ಶಿಷ್ಯನಾಗುವ ಹಂಬಲವನ್ನೂ ಒಟ್ಟೊಟ್ಟಿಗೆ ಹೊಂದಿರುವ  ಮುಕ್ತಿಯಾರ್ ರಿಗೆ ಕರ್ನಾಟಕವೆಂದರೆ ಬಲು ಪ್ರೀತಿ. ಶರೀಫರನ್ನು ಅರಿಯಲು ಪ್ರಯತ್ನಿಸುತ್ತಿರುವ ,ಕನ್ನಡವನ್ನು ಕಲಿತೇ ಶರೀಫನ ಪದ ಹಾಡುವ ಹಂಬಲ ವ್ಯಕ್ತಪಡಿಸುವಾಗ ವಿಧೇಯ ವಿದ್ಯಾರ್ಥಿಯಾಗುತ್ತಾರೆ.

ಸಧ್ಯದ ಅಸ್ತವ್ಯಸ್ತಗೊಂಡ ಭಾರತಕ್ಕೆ,ಸಾಂಸ್ಕೃತಿಕ ರಾಯಭಾರಿಯಾಗಬಲ್ಲವರು ಮೀರ್ ಮುಕ್ತಿಯಾರ್ ಅಲಿ!

 

             ಬಿ.ಶ್ರೀನಿವಾಸ

TAGGED:dinamaana.comdinamaana.com.davanagere newsMir Muktiar Aliದಿನಮಾನ.ಕಾಂದಿನಮಾನ.ಕಾಂ.ದಾವಣಗೆರೆ ಸುದ್ದಿಮೀರ್ ಮುಕ್ತಿಯಾರ್ ಅಲಿ
Share This Article
Twitter Email Copy Link Print
Previous Article vote without fail ತಪ್ಪದೇ ಮತಗಟ್ಟೆಗೆ ಬಂದು ಮತಚಲಾಯಿಸಿ
Next Article cm siddaramaya  “ತೆರಿಗೆ ಭಯೋತ್ಪಾದನೆ’’ ಯಿಂದ ಕಾಂಗ್ರೆಸ್ ಪಕ್ಷ ಮಣಿಸಲು ಸಾಧ್ಯವಿಲ್ಲ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ಅಬ್ದುಲ್ ಘನಿ ತಾಹಿರ್ ಅವರ ತಾಯಿ ಅಲ್ಹಾಜ್ ಖಮೃನ್ನಿಸ್ ನಿಧನ

ದಾವಣಗೆರೆ : ದಿ.ಅಲ್ಹಾಜ್ ಸಿ.ಜಿ ಖಲೀಲ್ ಅಹಮದ್ ಶರೀಫ್ ಉರ್ದು ಮುಂಶಿರವರ ಧರ್ಮಪತ್ನಿ, ರಾಜ್ಯ ವಕ್ಪ್ ಕೌನ್ಸಿಲ್ ಸಮಿತಿ ಸದಸ್ಯರಾದ…

By Dinamaana Kannada News

ವಕ್ಫ್ ಮಸೂದೆ ಕುರಿತು ಪ್ರಚೋದನಾತ್ಮಕ ಹೇಳಿಕೆ: ಆರೋಪಿಗಳನ್ನು ಬಂಧಿಸಿದ ದಾವಣಗೆರೆ ಪೊಲೀಸ್‌

ದಾವಣಗೆರೆ: ಇತ್ತೀಚಿಗೆ ದಾವಣಗೆರೆ ನಗರದಲ್ಲಿ ವಕ್ಫ್ ಮಸೂದೆ -2025 ಬಿಲ್ ವಿರುದ್ಧವಾಗಿ ಪ್ರಚೋದನಾತ್ಮಕವಾಗಿ ಮಾತನಾಡಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ…

By Dinamaana Kannada News

ದಾವಣಗೆರೆ | ಬ್ಯಾಂಕಿಗೆ ಹಣ ಜಮಾ ಮಾಡುವ ವೇಳೆ ಮಹಿಳೆಯರ ಗುಂಪೊಂದು 1 ಲಕ್ಷ ರೂ. ಕದ್ದು ಪರಾರಿ

ದಾವಣಗೆರೆ : ಬ್ಯಾಂಕಿಗೆ ಹಣ ಜಮಾ ಮಾಡಲು ಬಂದಿದ್ದ ಬ್ಯಾಗಿನಿಂದ ಹೊರ ರಾಜ್ಯದ ಗುಂಪೊಂದು 1 ಲಕ್ಷ ರೂ. ದೋಚಿ…

By Dinamaana Kannada News

You Might Also Like

CEO Gitte Madhava Vitthal Rao
ತಾಜಾ ಸುದ್ದಿ

ಕುಷ್ಠರೋಗ ನಿವಾರಣೆಗೆ ಅರಿವು ಮೂಡಿಸಿ : ಸಿಇಓ ಗಿತ್ತೆ ಮಾಧವ ವಿಠಲ ರಾವ್

By Dinamaana Kannada News
Davanagere
ತಾಜಾ ಸುದ್ದಿ

ಮೈಕ್ರೋ ಫೈನಾನ್ಸ್ ನವರು ಕಿರುಕುಳ ನೀಡಿದರೆ ದೂರು ನೀಡಿ : ಎಸ್ಪಿ

By Dinamaana Kannada News
vinaykumara G B
ತಾಜಾ ಸುದ್ದಿ

ಯಾರೂ ಕರೆದು ಅವಕಾಶ ಕೊಡಲ್ಲ, ನಾವೇ ಸೃಷ್ಟಿಸಿಕೊಳ್ಳಬೇಕು: ವಿನಯ್ ಕುಮಾರ್  

By Dinamaana Kannada News
Davanagere crime
ಅಪರಾಧ ಸುದ್ದಿತಾಜಾ ಸುದ್ದಿ

ಬೈಕ್ ಕಳ್ಳತನ ಪ್ರಕರಣ : ಅಂತರ ಜಿಲ್ಲಾ ಕಳ್ಳರ ಬಂಧನ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?