Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > ಯತ್ನಾಳರ ಹಿಡಿತವಿಲ್ಲದ ನಾಲಿಗೆಯಿಂದಾಗಿ ಬಿಜೆಪಿಗೆ ಗಂಡಾಂತರ
Blogತಾಜಾ ಸುದ್ದಿ

ಯತ್ನಾಳರ ಹಿಡಿತವಿಲ್ಲದ ನಾಲಿಗೆಯಿಂದಾಗಿ ಬಿಜೆಪಿಗೆ ಗಂಡಾಂತರ

Dinamaana Kannada News
Last updated: April 20, 2024 5:29 pm
Dinamaana Kannada News
Share
Panchamasali Gurupeeth
ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಆವರಣದಲ್ಲಿ ವಚನಾನಂದ ಶ್ರೀ ಹಾಗೂ ಸಮಾಜದ ಮುಖಂಡರು ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
SHARE

ಹರಿಹರ: ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳರ ಹಿಡಿತವಿಲ್ಲದ ನಾಲಿಗೆಯಿಂದಾಗಿ ಬಿಜೆಪಿ ಗಂಡಾಂತರವಾಗಲಿದೆ. ದೊಡ್ಡ ನಾಯಕರಾಗಿ ಬೆಳೆಯಬೇಕಾದವರು ಆಧಾರ ರಹಿತವಾಗಿ ಮಾತನಾಡುವುದನ್ನು ಬಿಡಬೇಕೆಂದು ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಆಗ್ರಹಿಸಿದರು.

ಗುರುಪೀಠ ಹಾಗೂ ಸಮುದಾಯದ ಜನರಿಗೆ ನೋವುಂಟು ಮಾಡಿದೆ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಶ್ರೀಗಳ ಕುರಿತು ಯತ್ನಾಳ ಆಡಿರುವ ಮಾತುಗಳು, ವ್ಯಕ್ತಪಡಿಸಿರುವ ಆಂಗಿಕ ಭಾಷೆ, ಜೊತೆಗಿದ್ದ ಗದ್ದಿಗೌಡರ್ ಯತ್ನಾಳರ ಮಾತಿಗೆ ನಕ್ಕಿದ್ದು ಗುರುಪೀಠ ಹಾಗೂ ಸಮುದಾಯದ ಜನರಿಗೆ ನೋವುಂಟು ಮಾಡಿದೆ, ಸನಾತನ ಧರ್ಮದ ಬಗ್ಗೆ ಪ್ರಸಂಶೆ ವ್ಯಕ್ತಪಡಿಸುವವರೆ ಕಾವಿಧಾರಿಗಳ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯೆ ಎಂದು ಪ್ರಶ್ನಿಸಿದರು.

ಯತ್ನಾಳರು ಒಮ್ಮೆ ಮಠಕ್ಕೆ ಭೇಟಿ ನೀಡಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿ ಮಾತನಾಡಲಿ 

ಪಂಚಮಸಾಲಿ ಸಮಾಜದ ರಾಜ್ಯ ಕಾರ್ಯಾಧ್ಯಕ್ಷ ಸೋಮನಗೌಡ ಪಾಟೀಲ್ ಮಾತನಾಡಿ, ವಾಸ್ತವ ಅರಿಯದೆ ಟೀಕೆ ಮಾಡುವುದು ಶೋಬೆ ತರುವುದಿಲ್ಲ, ದೊಡ್ಡ ನಾಯಕರಾಗಿ ಬೆಳೆಯಬೇಕಾದ ಯತ್ನಾಳರು ಒಮ್ಮೆ ಮಠಕ್ಕೆ ಭೇಟಿ ನೀಡಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿ ಮಾತನಾಡಲಿ ಎಂದು ಹೇಳಿದರು.

ಖರ್ಚು, ವೆಚ್ಚ ಲೆಕ್ಕ ಪಾರದರ್ಶಕ

ಗುರುಪೀಠದ ಆಡಳಿತಾಧಿಕಾರಿ ಡಾ.ರಾಜಕುಮಾರ್ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳು ನಾಡಿನ ಎಲ್ಲಾ ಮಠ, ಮಾನ್ಯಗಳಿಗೂ ಆಗಾಗ್ಗೆ ಅನುದಾನ ನೀಡಿದ್ದು ಅದೇ ರೀತಿ ಈ ಮಠಕ್ಕೂ ನೀಡಿದೆ. ಅನುದಾನ ಪೀಠದ ಟ್ರಸ್ಟಿಗೆ ಬಂದಿದೆಯೆ ಹೊರತು ಶ್ರೀಗಳಿಗೆ ಬಂದಿಲ್ಲ, ಖರ್ಚು, ವೆಚ್ಚ ಲೆಕ್ಕ ಪಾರದರ್ಶಕವಾಗಿದ್ದು ಯತ್ನಾಳರು ಪರಿಶೀಲಿಸಬಹುದಾಗಿದೆ ಎಂದರು.

ಶ್ರೀಗಳ ಬಗ್ಗೆ ಅವಹೇಳನಕಾರಿ ಮಾತನಾಡಿದರೆ ಯತ್ನಾಳರ ಮನೆ ಮುಂದೆ ಪ್ರತಿಭಟನೆ

ಗುರುಪೀಠದ ಧರ್ಮದರ್ಶಿ ಚಂದ್ರಶೇಖರ ಪೂಜಾರ್ ಮಾತನಾಡಿ, ಪಂಚಮಸಾಲಿ ಸಮುದಾಯದ ಮುಖಂಡರಿಗೆ ಲೋಕಸಭಾ ಟಿಕೆಟ್ ಅಗತ್ಯದ ಸಂಖ್ಯೆಯಲ್ಲಿ ನೀಡಿರಿ ಎಂದ್ದು ತಪ್ಪೆ, ಪಕ್ಷಾತೀತವಾಗಿ ಪಂಚಮಸಾಲಿ ಸಮುದಾಯದ ಹಿತಕ್ಕೆ ಶ್ರಮಿಸುತ್ತಿರುವ ಮಠದ ಬಗ್ಗೆ, ಶ್ರೀಗಳ ಬಗ್ಗೆ ಅವಹೇಳನಕಾರಿ ಮಾತನಾಡಿದರೆ ಯತ್ನಾಳರ ಮನೆ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪಂಚಮಸಾಲಿ ಸಮುದಾಯಕ್ಕೆ ಅನ್ಯಾಯ ಎಸಗಿರುವುದು ವಾಸ್ತವ

ವಚನಾನಂದ ಶ್ರೀಗಳು ಮಾತನಾಡಿ, ಶೇ.10 ರಷ್ಟು ಜನಸಂಖ್ಯೆ ಇರುವ ವೀರಶೈವ ಸಮುದಾಯದವರಿಗೆ ಬಿಜೆಪಿಯು ಮುಖ್ಯಮಂತ್ರಿ ಸ್ಥಾನ, ರಾಜ್ಯಾಧ್ಯಕ್ಷ ಸ್ಥಾನ ಇತ್ಯಾದಿ ನೀಡಿದೆ, ದೊಡ್ಡ ಸಮುದಾಯವಾದ ಪಂಚಮಸಾಲಿ ಸಮುದಾಯಕ್ಕೆ ಅನ್ಯಾಯ ಎಸಗಿರುವುದು ವಾಸ್ತವ. ಮಠವು ಯಾವ ಪಕ್ಷದ ಪರ ಅಥವಾ ವಿರುದ್ಧವಿಲ್ಲ, ಸಮುದಾಯದ ಮುಖಂಡರಿಗೆ ಸೂಕ್ತ ಸ್ಥಾನ, ಮಾನ ನೀಡಿರಿ ಎಂದು ಆಗ್ರಹಿಸಿದ್ದೇವೆ, ಆದರೆ ಯತ್ನಾಳರು ಸಣ್ಣತನ ಪ್ರದರ್ಶಿಸುತ್ತಿದ್ದಾರೆ, ತ್ರಿವಿಧ ದಾಸೋಹ ನೀಡುತ್ತಾ ಮಠವು ಅಲ್ಪಾವಧಿಯಲ್ಲಿ ಕಂಡಿರುವ ಅಭಿವೃದ್ಧಿಯನ್ನು ಅವರು ಗಮನಿಸಬೇಕೆಂದರು.

ಸುದ್ದಿಗೋಷ್ಟಿಯಲ್ಲಿ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ, ಸಮುದಾಯದ ಮುಖಂಡರಾದ ಪ್ರಕಾಶ್ ಪಾಟೀಲ್, ಶಂಕರಗೌಡ ಪಾಟೀಲ್, ವಸಂತಮ್ಮ ಹುಲ್ಲತ್ತು, ರಶ್ಮಿ ಕುಂಕದ್, ಮಂಜಣ್ಣ, ಹಾಲೇಶ್ ಗೌಡ, ಭಿಷ್ಟನಗೌಡ, ಪರಮೇಶ್ ಪಟ್ಟಣಶೆಟ್ಟಿ ಹಾಗೂ ಇತರರಿದ್ದರು.

TAGGED:dinamaana.comKannada NewsVachanananda Shri of Panchamasali Gurupeeth.ಕನ್ನಡ ನ್ಯೂಸ್‌ದಿನಮಾನ.ಕಾಂಪಂಚಮಸಾಲಿ ಗುರುಪೀಠದ ವಚನಾನಂದ ಶ್ರೀ.
Share This Article
Twitter Email Copy Link Print
Previous Article ceo davanagere ಸರ್ಕಾರಿ ಐಟಿಐ ಕಾಲೇಜಿನಿಂದ ಚುನಾವಣಾ ಮತದಾನ ಜಾಥಾ
Next Article Zilla Panchayat ಮತದಾನ ಜಾಗೃತಿಗೆ ಫ್ಯಾಶನ್ ಶೋ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ದಾವಣಗೆರೆ |ಗಾಂಧಿ ಜಯಂತಿ : ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ

ದಾವಣಗೆರೆ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ 2025 ರ ಅ.2 ರಂದು ಆಚರಿಸುವ ಮಹಾತ್ಮ ಗಾಂಧೀಜಿಯವರ 156…

By Dinamaana Kannada News

ದಾವಣಗೆರೆ : ಸಮೀಕ್ಷೆಯಲ್ಲಿ “ಮಾದಿಗ” ಎಂದೇ ನಮೂದಿಸಿ

ದಾವಣಗೆರೆ : ಸೆ.22ರಿಂದ ಆರಂಭವಾಗಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಮಾದಿಗ ಸಂಬAಧ ಎಡಗೈ ಸಮುದಾಯವರು ಜಾತಿ ಮತ್ತು ಉಪ…

By Dinamaana Kannada News

Davanagere | ಆ.30 ರಿಂದ ಆರೋಗ್ಯ ಮಾತೆಯ ಬಸಲಿಕ ವಾರ್ಷಿಕ ಮಹೋತ್ಸವ

ಹರಿಹರ  (Davangere District)  : ಪ್ರತಿ ವರ್ಷದಂತೆ ಈ ಬಾರಿಯೂ ಆ.30 ರಿಂದ ಸೆ.09 ರ ವರೆಗೆ 9 ದಿನಗಳ…

By Dinamaana Kannada News

You Might Also Like

CEO Gitte Madhava Vitthal Rao
ತಾಜಾ ಸುದ್ದಿ

ಕುಷ್ಠರೋಗ ನಿವಾರಣೆಗೆ ಅರಿವು ಮೂಡಿಸಿ : ಸಿಇಓ ಗಿತ್ತೆ ಮಾಧವ ವಿಠಲ ರಾವ್

By Dinamaana Kannada News
Davanagere
ತಾಜಾ ಸುದ್ದಿ

ಮೈಕ್ರೋ ಫೈನಾನ್ಸ್ ನವರು ಕಿರುಕುಳ ನೀಡಿದರೆ ದೂರು ನೀಡಿ : ಎಸ್ಪಿ

By Dinamaana Kannada News
vinaykumara G B
ತಾಜಾ ಸುದ್ದಿ

ಯಾರೂ ಕರೆದು ಅವಕಾಶ ಕೊಡಲ್ಲ, ನಾವೇ ಸೃಷ್ಟಿಸಿಕೊಳ್ಳಬೇಕು: ವಿನಯ್ ಕುಮಾರ್  

By Dinamaana Kannada News
Davanagere
ತಾಜಾ ಸುದ್ದಿ

ಭ್ರಷ್ಟಾಚಾರ ಪ್ರಜಾಪ್ರಭುತ್ವದ ಶತ್ರು: ಜಿಲ್ಲಾ ನ್ಯಾ.ಡಿ.ಕೆ.ವೇಲಾ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?