ದಾವಣಗೆರೆ (Davanagere): ದಾವಣಗೆರೆಯ ಕೆಟಿಜೆ ನಗರ, ಭಗತ್ ಸಿಂಗ್ ನಗರ ಹಾಗೂ ಲೆನಿನ್ ನಗರಕ್ಕೆ ಸಿಟಿ ಬಸ್ ಕಲ್ಪಿಸಲು ಕೋರಿ ಉತ್ತರ ವಲಯ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಕೆ. ಶ್ರೀನಿವಾಸ್ ಕಲ್ಪತರ ಅವರು ಕೆಎಸ್ಆರ್ಟಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಭಾಗಗಳಲ್ಲಿ ಹೆಚ್ಚಾಗಿ ಬಡ- ಮಧ್ಯಮ ವರ್ಗದವರು ಹಾಗೂ ಕೂಲಿ ಕಾರ್ಮಿಕರು ಹೆಚ್ಚಾಗಿ ವಾಸಿಸುತ್ತಿರುವುದರಿಂದ ಇಲ್ಲಿಯ ಜನಗಳಿಗೆ ರೈಲ್ವೆ ನಿಲ್ದಾಣ ಹಾಗೂ ಖಾಸಗಿ ಬಸ್ ನಿಲ್ದಾಣಕ್ಕೆ ಹೋಗಲು ಯಾವುದೇ ನಗರ ಸಾರಿಗೆ ಇಲ್ಲದಿರುವುದರಿಂದ ಆಟೋದಲ್ಲಿಯೇ ಹೋಗಬೇಕಾದ ಪರಿಸ್ಥಿತಿ ಇರುವುದರಿಂದ ಆರ್ಥಿಕವಾಹಿ ತುಂಬಾ ಕಷ್ಟವಾಗುತ್ತದೆ. ಆದ್ದರಿಂದ ಒಂದು ಸರಿಯಾದ ರೂಟ್ ಮ್ಯಾಪ್ ಅನ್ನು ತಯಾರು ಮಾಡಿ ಈ ಭಾಗಕ್ಕೆ ನಗರ ಸಾರಿಗೆ ಬಸ್ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಶ್ರೀನಿವಾಸ್ ಅವರು ಕೋರಿದರು.
Read also : Davangere | ಬಡ ವಿದ್ಯಾರ್ಥಿಗಳಿಗೆ ಧನ ಸಹಾಯ
ಈ ಸಂದರ್ಭದಲ್ಲಿ ಗ್ಯಾರಂಟಿ ಸಮಿತಿಯ ಸದಸ್ಯ ಲಿಯಾಕತ್ ಅಲಿ ಹಾಗು ಕೆ ಟಿ ಜೆ ನಗರದ ಮುಖಂಡರಾದ ಪ್ರದೀಪ್ ಹಾಗು ಸುಲೇಮಾನ್ ಇತರರು ಉಪಸ್ಥಿತರಿದ್ದರು.