Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಸೋರಿಯಾಸಿಸ್ ಒಂದು ಸಮಗ್ರ ರೋಗ: ಡಾ.ಎಂ.ಸಿ.ರೂಪ
ತಾಜಾ ಸುದ್ದಿ

ಸೋರಿಯಾಸಿಸ್ ಒಂದು ಸಮಗ್ರ ರೋಗ: ಡಾ.ಎಂ.ಸಿ.ರೂಪ

Dinamaana Kannada News
Last updated: October 31, 2025 4:33 am
Dinamaana Kannada News
Share
Davanagere
SHARE
ದಾವಣಗೆರೆ : ಸೋರಿಯಾಸಿಸ್ ಒಂದು ಸಮಗ್ರ ರೋಗವಾಗಿದ್ದು, ಇದು ಕೇವಲ ಚರ್ಮಕ್ಕಷ್ಟೇ ಸೀಮಿತವಾಗಿರುವುದಿಲ್ಲ.  ಬೇರೆ ಅಂಗಗಳಿಗೂ ಪರಿಣಾಮ ಬೀರುತ್ತದೆ ಎಂದು ಜೆಜೆಎಂ ವೈದ್ಯಕೀಯ ಕಾಲೇಜಿನ ಚರ್ಮರೋಗ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಎಂ.ಸಿ.ರೂಪ ತಿಳಿಸಿದರು.
ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ  ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದಿಂದ  ವಿವೇಕ್ ಪೋಷಕರ ಆರೋಗ್ಯ ಕಾರ್ಯಾಗಾರದಡಿ ಆಯೋಜಿಸಲಾಗಿದ್ದ ” ಸಹರೋಗಗಳು(ಸೋರಿಯಾಸಿಸ್) – ಸರಣಿ ಕ್ರಿಯೆಯ ಬಗ್ಗೆ ಅರಿವು ಮೂಡಿಸುವುದು” ಎಂಬ ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹೃದಯ ಸಂಬಂಧಿ ಖಾಯಿಲೆ, ಮಧುಮೇಹ ಮತ್ತು ಮಾನಸಿಕ ಖಾಯಿಲೆಗಳನ್ನು ಸೋರಿಯಾಸಿಸ್ ಪ್ರಚೋದಿಸಬಹುದು ಅಥವಾ ಈ ಸಹ ರೋಗಗಳು ಹತೋಟಿಯಲ್ಲಿ ಇಲ್ಲದಿದ್ದರೆ ಸೋರಿಯಾಸಿಸ್ ಅನ್ನು ಉಲ್ಬಣಿಸಬಹುದು. ಹಾಗಾಗಿ ಈ ಅಭಿಯಾನವು ಕೇವಲ ಚರ್ಮ ರೋಗಕ್ಕಷ್ಟೇ ಸೀಮಿತವಾಗದೇ ಶೀಘ್ರ ರೋಗ ನಿರ್ಣಯ ಮತ್ತು ಚಿಕಿತ್ಸೆಯನ್ನು ಈ ರೋಗಗಳಿಗೆ ನೀಡಿವು ಮೂಲಕ ರೋಗಿಗಳ ಯೋಗಕ್ಷೇಮ ಮತ್ತು ಸಮಗ್ರ ಆರೈಕೆ ಮಾಡಬಹುದಾಗಿದೆ ಎಂದರು.
ಸೋರಿಯಾಸಿಸ್ ಖಾಯಿಲೆಗೆ ಪ್ರಪಂಚದಾದ್ಯಂತ  ಸರಿ ಸುಮಾರು 2-3% ಪೀಡಿತ ಜನರು ಇದ್ದಾರೆ ಎಂದು ಅಂದಾಜಿಸಲಾಗಿದೆ. ಭಾರತದ ವಯಸ್ಕ ಜನಸಂಖ್ಯೆಯಲ್ಲಿ ಸೋರಿಯಾಸಿಸ್ ಪೀಡಿತರ ಪ್ರಮಾಣವು 0.44% ರಿಂದ 2.8% ರ ವರೆಗೆ ಇರುವುದಾಗಿ ತಿಳಿದು ಬಂದಿದೆ. ಸೋರಿಯಾಸಿಸ್ ಒಂದು ಸ್ವಯಂ ದೇಹದ ಮೇಲೆ ತನ್ನ ಪ್ರತಿರಕ್ಷಣಾ ವ್ಯವಸ್ಥೆಯು ದಾಳಿ ಮಾಡುವ ಸ್ಥಿತಿಯಾಗಿದ್ದು, ಅದು ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಸೋರಿಯಾಸಿಸ್ ಗೆ ಅನೇಕ ಕಾರಣಗಳು ಇದ್ದು ಅದರಲ್ಲಿ ಪ್ರಮುಖವಾಗಿ ಆತ್ಮಘಾತಿ ಪ್ರಕ್ರಿಯೆ, ಕೆಲವು ಸೋಂಕುಗಳು ಕಾರಣಗಳಿದ್ದು, ಅದರಲ್ಲಿ ಅನುವಂಶಿಯತೆ ಕೂಡ ಒಂದು ಎಂದು ತಿಳಿಸಿದರು.
ವ್ಯಕ್ತಿಯ ಹುಟ್ಟಿನಿಂದ ಯಾವುದೇ ವಯಸ್ಸಿನಲ್ಲಿ ಹಾಗೂ ವೃದ್ದಾಪ್ಯದಲ್ಲೂ ಕಾಣಿಸಿಕೊಳ್ಳಬಹುದು. ಗಂಡು ಅಥವಾ ಹೆಣ್ಣು ಯಾರಲ್ಲಿ ಬೇಕಾದರೂ ಕಾಣಿಸಿಕೊಳ್ಳಬಹುದು. ಸೋರಿಯಾಸಿಸ್ ಸಾಂಕ್ರಾಮಿಕ ರೋಗವಾಗಿರುವುದಿಲ್ಲ. ಬಹಳಷ್ಟು ರೋಗಿಗಳಲ್ಲಿ ಚಳಿಗಾಲದಲ್ಲಿ ಉಲ್ಭಣಿಸುತ್ತದೆ. ಇದಕ್ಕೆ ಶಾಸ್ವತ ಪರಿಹಾರ ಚಿಕಿತ್ಸೆ ಇಲ್ಲದಿದ್ದರೂ, ರೋಗ ನಿಯಂತ್ರಣಕ್ಕೆ ಮತ್ತು ತೀವ್ರತೆ ತಡೆಗಟ್ಟಲು ಉತ್ತಮ ಚಿಕಿತ್ಸಾ ವಿಧಾನಗಳು ಲಭ್ಯವಿದೆ ಎಂದರು.
ಈ ಸ್ಥಿತಿಯನ್ನು ನೀವು ಒಬ್ಬರೇ ಎದುರಿಸಬೇಕಾಗಿಲ್ಲ. ಸೋರಿಯಾಸಿಸ್ ನೊಂದಿಗೆ ಬದುಕುತ್ತಿರುವ ಅನೇಕರು ನಿಮ್ಮೊಂದಿಗೆ ಇದ್ದಾರೆ. ತಜ್ಞ ವೈದ್ಯರ ಸಹಾಯವನ್ನು ಪಡೆಯಿರಿ. ಸೋರಿಯಾಸಿಸ್ ಬಗ್ಗೆ ಜಾಗೃತಿಗೆ ಹೆಜ್ಜೆ ಇಡೋಣ, ಮೂಢನಂಬಿಕೆಗಳನ್ನು ತೊಡೆದು ಹಾಕಿ ಆರೋಗ್ಯ ಸಮಾಜಕ್ಕಾಗಿ ಶ್ರಮಿಸೋಣ, ಸೋರಿಯಾಸಿಸ್ ನಿಂದ ಬಳಲುವವರಿಗೆ ಸಹಾಯ, ತಿಳುವಳಿಕೆ, ಪ್ರೋತ್ಸಾಹ ನೀಡೋಣ ಎಂದು ಹೇಳಿದರು.

Read also : ಕನ್ನಡ ರಾಜ್ಯೋತ್ಸವ|ಕನ್ನಡವೇ ಸತ್ಯ,ಕನ್ನಡವೇ ನಿತ್ಯವಾಗಬೇಕಾದರೆ…..:

ಈ ಸಂದರ್ಭದಲ್ಲಿ ಆಸ್ಪತ್ರೆ ನಿರ್ದೇಶಕ ಡಾ.ಜಿ.ಗುರುಪ್ರಸಾದ, ಹಿರಿಯ ಮಕ್ಕಳ ತಜ್ಞರಾದ ಡಾ.ಬಾಣಾಪುರ ಮಠ, ಡಾ.ಸುರೇಶ ಬಾಬು, ಆಸ್ಪತ್ರೆ ವ್ಯವಸ್ಥಾಪಕ ಸಿದ್ದೇಶ್ವರ ಗುಬ್ಬಿ, ಡಾ.ಮೃತ್ಯುಂಜಯ, ಡಾ.ಮಧು ಪೂಜಾರ್, ಡಾ.ರೇವಪ್ಪ, ಮಕ್ಕಳ ಪೋಷಕರು, ನರ್ಸಿಂಗ್ ವಿದ್ಯಾರ್ಥಿಗಳು ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
TAGGED:Bapuji Child Health InstituteDavanagere NewsDinamana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ
Share This Article
Twitter Email Copy Link Print
Previous Article Geeta Bharamasagar ಕನ್ನಡ ರಾಜ್ಯೋತ್ಸವ|ಕನ್ನಡವೇ ಸತ್ಯ,ಕನ್ನಡವೇ ನಿತ್ಯವಾಗಬೇಕಾದರೆ…..:
Next Article Dr. D. Francis ಕನ್ನಡಿಗರ ಹೆಮ್ಮೆಯ ಉಸಿರು: ಕನ್ನಡವೇ ನಮ್ಮಉಸಿರು|ಡಾ. ಡಿ. ಫ್ರಾನ್ಸಿಸ್
Leave a comment

Leave a Reply Cancel reply

You must be logged in to post a comment.

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ಮೈಕ್ರೋ-ಫೈನಾನ್ಸ್ ಕಂಪನಿಗಳಿಗೆ ಸರ್ಕಾರ ಕಡಿವಾಣ ಹಾಕಲಿ ಅಕ್ರಮ ವಿರೋಧಿ ಮಹಿಳಾ ವೇದಿಕೆ ಒತ್ತಾಯ

ದಾವಣಗೆರೆ : ಮಹಿಳೆಯರನ್ನು ಶೋಷಿಸುತ್ತಿರುವ ಮೈಕ್ರೋ-ಫೈನಾನ್ಸ್ ಕಂಪನಿಗಳಿಗೆ ಸರಕಾರ ಕಡಿವಾಣ ಹಾಕುವವರೆಗೂ ಹೋರಾಟ ನಡೆಸುವುದಾಗಿ ಮೈಕ್ರೋ-ಫೈನಾನ್ಸ್‍ಅಕ್ರಮ ವಿರೋಧಿ ಮಹಿಳಾ ವೇದಿಕೆ…

By Dinamaana Kannada News

Davanagere | ಅ. 9 ರವರೆಗೆ  ಗ್ರಂಥಾಲಯ ಮೇಲ್ವಿಚಾರಕರ ದಾಖಲಾತಿ ಪರಿಶೀಲನೆ ಅವಧಿ ವಿಸ್ತರಣೆ

ದಾವಣಗೆರೆ; ಸೆ.23  (Davanagere) :   ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ…

By Dinamaana Kannada News

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಬದುಕು ಸ್ಫೂರ್ತಿದಾಯಕ : ಸಿಎಂ ಸಿದ್ದರಾಮಯ್ಯ

ಬೆಂಗಳೂರು (Benagalore): ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಬದುಕು ಸ್ಫೂರ್ತಿದಾಯಕವಾಗಿದ್ದು, ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಗೌರವ ಸಲ್ಲಿಸಬೇಕು…

By Dinamaana Kannada News

You Might Also Like

Applications invited
ತಾಜಾ ಸುದ್ದಿ

ಪೌರಕಾರ್ಮಿಕರ ವಿಶೇಷ ನೇರ ನೇಮಕಾತಿಗೆ ಅರ್ಜಿ ಆಹ್ವಾನ

By Dinamaana Kannada News
Application for Youth Fund Scheme
ತಾಜಾ ಸುದ್ದಿ

ಯುವನಿಧಿ ಯೋಜನೆ: ನಿರುದ್ಯೋಗಿ ಭತ್ಯೆ ಪಡೆಯಲು ಅರ್ಜಿ ಆಹ್ವಾನ

By Dinamaana Kannada News
Dr. D. Francis
ಅಭಿಪ್ರಾಯ

ಕನ್ನಡಿಗರ ಹೆಮ್ಮೆಯ ಉಸಿರು: ಕನ್ನಡವೇ ನಮ್ಮಉಸಿರು|ಡಾ. ಡಿ. ಫ್ರಾನ್ಸಿಸ್

By Dinamaana Kannada News
Geeta Bharamasagar
ಅಭಿಪ್ರಾಯ

ಕನ್ನಡ ರಾಜ್ಯೋತ್ಸವ|ಕನ್ನಡವೇ ಸತ್ಯ,ಕನ್ನಡವೇ ನಿತ್ಯವಾಗಬೇಕಾದರೆ…..:

By ಗೀತಾ ಭರಮಸಾಗರ
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?