ದಾವಣಗೆರೆ (Davanagere): ರೌಡಿಶೀಟರ್ ಸಂತೋಷ ಆಲಿಯಾಸ್ ಕಣುಮನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸಂತೋಷ ಚಾವಳಿ, ನವೀನ್, ನವೀನ್ (ಬ್ರಾಕಿ ನವೀನ್), ಎ.ಕಾರ್ತಿಕ್, ರಾಜ, ಬಸವರಾಜ್ , ಮಾರುತಿ, ಪ್ರಭು, ಜಯಸೂರ್ಯ, ಭರತ್ ಬಂಧಿಸಿದ್ದಾರೆ. ಮೇ 5 ರಂದು ಸಂಜೆ ಹದಡಿ ರಸ್ತೆಯ ಸೋಮೇಶ್ವರ ಸುಪರ್ ಸ್ಪೆμÁಲಿಟಿ ಆಸ್ಪತ್ರೆಯ ಮುಂಭಾಗದ ಪವರ್ ಸ್ಪೋಟ್ರ್ಸ ಅಂಡ್ ರಿಕ್ರಿಯೇಷನ್ ಕ್ಲಬ್ನ ಕಟ್ಟಡದಲ್ಲಿ ಆರೋಪಿ ಸಂತೋಷ ಚಾವಳಿ ಸಂತು ಮತ್ತು ಇತರರು ಸೇರಿ ಸಂತೋಷ ಕುಮಾರ.ಕೆ (ಕಣುಮ) ಇವನನ್ನು ಹರಿತವಾದ ಆಯುಧಗಳಿಂದ ಹೊಡೆದು ಕೊಲೆ ಮಾಡಿದ್ದು ಬಗ್ಗೆ ವಿದ್ಯಾನಗರ ಪೊಲೀಸ್ ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿತರ ಪತ್ತೆಗೆ ಎಸ್ಪಿ ಉಮಾ ಪ್ರಶಾಂತ, ಎಎಸ್ಪಿ ವಿಜಯಕುಮಾರ ಎಂ ಸಂತೋಷ, ಜಿ ಮಂಜುನಾಥ ಮಾರ್ಗದರ್ಶನದಲ್ಲ್ಲಿ ದಾವಣಗೆರೆ ನಗರ ಡಿವೈಎಸ್ಪಿ ಶರಣಬಸವೇಶ್ವರ. ಬಿ ನೇತೃತ್ವದಲ್ಲಿ 05 ಪ್ರತ್ಯೇಕ ತಂಡಗಳನ್ನು ರಚನೆ ಮಾಡಿಲಾಗಿತ್ತು. ವಿದ್ಯಾನಗರ ಪೊಲೀಸ್ ಠಾಣೆಯ ಪಿಐ ಶಿಲ್ಪಾ ವೈ.ಎಸ್, ಕೆಟಿಜೆ ನಗರ ಪೊಲೀಸ್ ಠಾಣೆಯ ಸುನೀಲ್ ಕುಮಾರ.ಹೆಚ್.ಎಸ್, ಆಜಾದ್ ನಗರ ಠಾಣೆಯ ಅಶ್ವಿನ್ ಕುಮಾರ.ಆರ್.ಜಿ, ಆಜಾದ್ ನಗರ ವೃತ್ತ ಸಿಪಿಐ ಬಾಲಚಂದ್ರನಾಯ್ಕ, ಮಹಿಳಾ ಠಾಣೆಯ ಪಿಐ ಸೈಯದ್ ದಾದಾ ನೂರ್ ಅಹ್ಮದ್, ಬಸವನಗರ ಪೊಲೀಸ್ ಠಾಣೆಯ ಪಿಐ ನಂಜುಂಡಸ್ವಾಮಿ ಹಾಗೂ ಅಧಿಕಾರಿ – ಸಿಬ್ಬಂದಿಗಳನ್ನು ಒಳಗೊಂಡ ತಂಡಗಳು ಆರೋಪಿತರ ಪತ್ತೆ ಹಚ್ಚಿದೆ.
ಆರೋಪಿ ಸಂತೋಷ ಚಾವಳಿ ಕೃತ್ಯಕ್ಕೆ ಬಳಸಿದ್ದ ಮೊಬೈಲು ಸ್ಥಳ ತೋರಿಸುವುದಾಗಿ ದಾವಣಗೆರೆ ನಗರದ ಐಗೂರು ರಸ್ತೆಯಲ್ಲಿರುವ ಮೋರಿಯ ಹತ್ತಿರ ಕರೆದುಕೊಂಡು ಹೋಗಿ ಏಕಾಏಕಿ ಪೊಲೀಸ್ ವಶದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದ, ಈ ವೇಳೆ ಹಿಡಿಯಲು ಪ್ರಯತ್ನಿಸಿದ್ದು, ಆರೋಪಿಯು ಕಲ್ಲಿನಿಂದ ತನಿಖಾಧಿಕಾರಿ ಶರಣಬಸವೇಶ್ವರ.ವಿ ರವರ ಮೇಲೆ ತೂರಿದ್ದು ಸಿಬ್ಬಂದಿ ಬೋಜಪ್ಪ ಕಿಚಡಿ, ಹಿಡಿದುಕೊಳ್ಳಲು ಪ್ರಯತ್ನಿಸಿದಾಗ ಕಲ್ಲಿನಿಂದ ಸಿಬ್ಬಂದಿಯ ಪ್ರಯತ್ನಿಸಿದಾಗ ಬೋಜಪ್ಪ ಕಲ್ಲು ಬಲ ತೋಳಿಗೆ ಬಡಿದು ರಕ್ತಗಾಯವಾಗಿದೆ.
ಆರೋಪಿ ಓಡಿ ಓಡಿಹೋಗದಂತೆ ಎಚ್ಚರಿಕೆ ಕೊಟ್ಟರೂ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆತ್ಮರಕ್ಷಣೆಗಾಗಿ ಡಿವೈಎಸ್ಪಿ ಗಾಳಿಯಲ್ಲಿ ಒಂದು ಸುತ್ತು ಗಂಡು ಹಾರಿಸಿದರೂ ಆರೋಪಿ ಓಡಿ ಹೋಗಲು ಪ್ರಯತ್ನಿಸಿದ ಕಾರಣ À ಕಾಲಿಗೆ ಒಂದು ಸುತ್ತು ಫೈರಿಂಗ್ ಮಾಡಿ ಅವನನ್ನು ವಶಕ್ಕೆ ಪಡೆದಿದ್ದಾರೆ.
Read also : crime news | ದಾವಣಗೆರೆಯಲ್ಲಿ ರೌಡಿಶೀಟರ್ ಸಂತೋಷ್ (ಕಣುಮ) ಬರ್ಬರ ಹತ್ಯೆ
ಸಂತೋಷ ಚಾವಳಿ ಚಿಕಿತ್ಸೆಯ ಬಗ್ಗೆ ಸಿ.ಜಿ ಆಸ್ಪತ್ರೆಗೆ ದಾಖಲಿಸಿ ಆರೋಪಿತನ ವಿರುದ್ದ ಕ್ರಮ ಕೈಗೊಳ್ಳುವಂತೆ ಡಿವೈಎಸ್.ಪಿ ರವರು ಆರ್.ಎಂ.ಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತರಿಂದ ಕೃತ್ಯಕ್ಕೆ ಬಳಿಸಿದ ಆಟೋ, ಬೈಕ್ಗಳು, ಲಾಂಗಗಳು, ಚಾಕುಗಳನ್ನು ವಶಕ್ಕೆ ಪಡೆದಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆದು ತನಿಖೆ ಮುಂದುವರಿಸಲಾಗಿದೆ.
ಕೊಲೆ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಿದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಹಾಗೂ ಸುಕೋ ತಂಡದ ಅಧಿಕಾರಿಗಳನ್ನು, ಶ್ವಾನದಳದ ತಂಡವನ್ನು ಎಸ್ಪಿ ಉಮಾ ಪ್ರಶಾಂತ್ ಶ್ಲಾಘೀಸಿದ್ದಾರೆ.