Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > Davanagere | 32 ಪ್ರಕರಣದಲ್ಲಿ 60 ಸಂತ್ರಸ್ಥರಿಗೆ ರೂ.50.45 ಲಕ್ಷ ಪರಿಹಾರ : ಡಿಸಿ
ತಾಜಾ ಸುದ್ದಿ

Davanagere | 32 ಪ್ರಕರಣದಲ್ಲಿ 60 ಸಂತ್ರಸ್ಥರಿಗೆ ರೂ.50.45 ಲಕ್ಷ ಪರಿಹಾರ : ಡಿಸಿ

Dinamaana Kannada News
Last updated: June 26, 2025 11:46 am
Dinamaana Kannada News
Share
District Collector G.M. Gangadharaswamy
SHARE

ದಾವಣಗೆರೆ(Davanagere) :  ಜಿಲ್ಲೆಯಲ್ಲಿ ಪ.ಜಾತಿ ಮತ್ತು ಪ.ಪಂಗಡದರ ಮೇಲಿನ ದೌರ್ಜನ್ಯ ತಡೆ ಕಾಯಿದೆಯಡಿ 2025 ರ ಜನವರಿಯಿಂದ ಜೂನ್ 25 ರ ವರೆಗೆ 32 ಪ್ರಕರಣಗಳು ದಾಖಲಾಗಿದ್ದು 60 ಸಂತ್ರಸ್ಥರಿಗೆ ರೂ.50.45 ಲಕ್ಷ ಪರಿಹಾರ ವಿತರಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ.ತಿಳಿಸಿದರು.

ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದೌರ್ಜನ್ಯ ತಡೆ ಕಾಯಿದೆಯಡಿ ದಾಖಲಾದ ಪ್ರಕರಣಗಳಲ್ಲಿ 1 ಕೊಲೆ, 4 ಪೋಕ್ಸೋ ಪ್ರಕರಣ, 27 ಇತರೆ ದೌರ್ಜನ್ಯ ಪ್ರಕರಣಗಳು ಸೇರಿವೆ. ಇದರಲ್ಲಿ 6 ಜಾರ್ಚ್‍ಶೀಟ್ ಹಂತದಲ್ಲಿವೆ. ಸಂತ್ರಸ್ಥರಿಗೆ ಎಫ್‍ಐಆರ್ ಹಂತದಲ್ಲಿ ರೂ.37.95 ಲಕ್ಷ, ಚಾರ್ಜ್‍ಶೀಟ್ ಹಂತದಲ್ಲಿ 12 ಲಕ್ಷ ಪರಿಹಾರ ನೀಡಿದ್ದು ಇದರಲ್ಲಿ 42 ಪ.ಜಾತಿ ಮತ್ತು 18 ಪ.ಪಂಗಡದ ಸಂತ್ರಸ್ಥರಿದ್ದಾರೆ ಎಂದರು.

ಈ ಹಿಂದೆ ದೌರ್ಜನ್ಯ ತಡೆ ಕಾಯಿದೆಯಡಿ ದಾಖಲಾಗಿದ್ದ ಹದಡಿ ಪೊಲೀಸ್ ಠಾಣಾ ವ್ಯಾಪ್ತಿಯ ಒಂದು ಪ್ರಕರಣ ಪೋಕ್ಸೋದಡಿ ದಾಖಲಾಗಿ ರೂ.1.5 ಲಕ್ಷ ಪರಿಹಾರವನ್ನು ಬಾಲಕಿಯ ಕುಟುಂಬದವರಿಗೆ ನೀಡಲಾಗಿತ್ತು. ಬಾಲಕಿಗೆ 18 ವರ್ಷ ತುಂಬಿರದ ಕಾರಣ ಹುಡುಗನನ್ನು ಪೋಕ್ಸೋದಡಿ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಗಿತ್ತು. 18 ವರ್ಷದ ನಂತರ ಹುಡುಗ ಮತ್ತು ಹುಡುಗಿಗೆ ಕುಟುಂಬದವರ ರಾಜಿ ಸಂಧಾನದ ಮೂಲಕ ಮದುವೆ ಮಾಡಿಸಲಾಗಿದೆ. ಈ ಪ್ರಕರಣದಲ್ಲಿ ದಾಖಲಾಗಿದ್ದ ಪೋಕ್ಸೋ ಪ್ರಕರಣದ ತನಿಖಾ ವರದಿಯ ಬಿ.ರಿಪೋರ್ಟ್‍ನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ನ್ಯಾಯಾಲಯ ಇದನ್ನು ಪರಿಶೀಲಿಸಿ ಪೋಕ್ಸೋ ಪ್ರಕರಣ ಸಾಬೀತಾಗದ ಕಾರಣ ಪಡೆಯಲಾಗಿದ್ದ ಪರಿಹಾರದ ಮೊತ್ತವನ್ನು ವಾಪಸ್ ನೀಡಲು ಕೋರ್ಟ್ ಆದೇಶಿಸಿರುವ ಬಗ್ಗೆ ಸಭೆಯಲ್ಲಿ ಚರ್ಚೆಯಾಯಿತು.

2025 ರಲ್ಲಿ ದಾಖಲಾದ ಪ್ರಕರಣಗಳಲ್ಲಿ ಮಾರ್ಚ್‍ನಲ್ಲಿ ದಾವಣಗೆರೆ ತಾ; 10, ಹರಿಹರ 1, ಹೊನ್ನಾಳಿ 1, ಚನ್ನಗಿರಿ 3 ಪ್ರಕರಣ, ಏಪ್ರಿಲ್ ನಲ್ಲಿ ದಾವಣಗೆರೆ 4, ಹರಿಹರ 1, ಹೊನ್ನಾಳಿ 1, ನ್ಯಾಮತಿ 1, ಚನ್ನಗಿರಿ 2, ಮೇ ತಿಂಗಳಲ್ಲಿ ದಾವಣಗೆರೆ 2, ಚನ್ನಗಿರಿ 2, ಜೂನ್‍ನಲ್ಲಿ ದಾವಣಗೆರೆ 3, ಚನ್ನಗಿರಿ 1 ಪ್ರಕರಣ ಸೇರಿ ಒಟ್ಟು 32 ದೌರ್ಜನ್ಯ ಪ್ರಕರಣಗಳಲ್ಲಿ 11 ಪ್ರಕರಣ ವಿಚಾರಣೆ ಹಂತ ಮತ್ತು 2 ಬಿ.ರಿಪೋರ್ಟ್, 17 ತನಿಖಾ ಹಂತದಲ್ಲಿವೆ.

Read also : ದಾವಣಗೆರೆ ಜಿಲ್ಲೆಗೆ ಜೂ. 27 ರಂದು ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜುನಾಥ್ ಗೌಡ

ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳು;  2025 ರ ಏಪ್ರಿಲ್ ನಲ್ಲಿ 138 ಬಾಕಿ ಇದ್ದ ಪ್ರಕರಣಗಳ ಜೊತೆಗೆ 7 ಹೊಸ ಪ್ರಕರಣಗಳು, ಇದರಲ್ಲಿ 1 ರಲ್ಲಿ ಬಿಡುಗಡೆಯಾಗಿದೆ. ಮೇ ತಿಂಗಳಲ್ಲಿ 144 ಪ್ರಕರಣಗಳೊಂದಿಗೆ 4 ಹೊಸ ಪ್ರಕರಣಗಳು ಸೇರಿ 148 ರಲ್ಲಿ 5 ರಲ್ಲಿ ಬಿಡುಗಡೆಯಾಗಿದೆ. ಜೂನ್ ನಲ್ಲಿ 143 ಪ್ರಕರಣಗಳೊಂದಿಗೆ 6 ಹೊಸ ಪ್ರಕರಣಗಳು ಸೇರಿ 149 ರಲ್ಲಿ 2 ರಲ್ಲಿ ಶಿಕ್ಷೆಯಾಗಿದ್ದು 1 ಬಿಡುಗಡೆಯಾಗಿತ್ತು. ಬಾಕಿ 146 ಪ್ರಕರಣಗಳು ನ್ಯಾಯಾಲದಲ್ಲಿವೆ. ನ್ಯಾಯಾಲಯದಲ್ಲಿನ ಪ್ರಕರಣಗಳಲ್ಲಿ ಹೆಚ್ಚು ಶಿಕ್ಷೆಯಾಗುವಂತೆ ಇದಕ್ಕೆ ಬೇಕಾದ ಸಾಕ್ಷ್ಯಾಧಾರಗಳನ್ನು ಸರಿಯಾಗಿ ಒದಗಿಸಲು ತನಿಖಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.

ನ್ಯಾಯಾಲದಲ್ಲಿ ಬಾಕಿ ಇರುವ 146 ಪ್ರಕರಣಗಳಲ್ಲಿ 2019 ರ 2, 2020 ರ14, 2021 ರ 7, 2022 ರಲ್ಲಿನ 22, 2023 ರಲ್ಲಿನ 47, 2024 ರಲ್ಲಿ ನಡೆದ 33 ಪ್ರಕರಣಗಳು ಸೇರಿದಂತೆ 2025 ರಲ್ಲಿನ 21 ಪ್ರಕರಣಗಳು ನ್ಯಾಯಾಲಯದಲ್ಲಿವೆ ಎಂದು ಸರ್ಕಾರಿ ಅಭಿಯೋಜಕರು ಸಭೆಗೆ ಮಾಹಿತಿ ನೀಡಿದರು.

ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ  ಹುಲಿಮನಿ ತಿಮ್ಮಣ್ಣ, ಜಿಪಂ  ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ್, ಪಾಲಿಕೆ ಆಯುಕ್ತರಾದ ರೇಣುಕಾ, ನಗರಾಭಿವೃದ್ದಿ ಕೊಶ ಯೋಜನಾ ನಿರ್ದೇಶಕ ಮಹಂತೇಶ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನಾಗರಾಜ್, ಸಮಿತಿ ಸದಸ್ಯರಾದ ಕುಂದುವಾಡ ಮಂಜುನಾಥ, ಬಿ.ಎನ್.ಉಮಾ, ಅವರಗೆರೆ ವಾಸು, ಬಾಬಣ್ಣ ಡಿ.ಎಸ್, ಅಣಜಿ ಅಂಜಿನಪ್ಪ, ಡಾ. ಅರವಿಂದನ್ ಪಿ.ಎಸ್, ಪಿ.ಎಂ.ನಾಗರಾಜ, ರೆಹಮತ್ ಉರ್ ರೆಹಮಾನ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

TAGGED:Dinamana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Youth Congress State President Manjunath Gowda ದಾವಣಗೆರೆ ಜಿಲ್ಲೆಗೆ ಜೂ. 27 ರಂದು ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜುನಾಥ್ ಗೌಡ
Next Article Applications invited ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ದಿ ನಿಗಮ : ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ಬಾಲ್ಯ ವಿವಾಹ : ಪೋಷಕರ ಮೇಲೆ ಪ್ರಕರಣ ದಾಖಲಿಸಲು ಸೂಚನೆ

ದಾವಣಗೆರೆ :    ಪ್ರಸಕ್ತ ವರ್ಷದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ 26 ಬಾಲ್ಯ ವಿವಾಹ ಪ್ರಕರಣಗಳು ವರದಿಯಾಗಿದ್ದು ಇದರಲ್ಲಿ…

By Dinamaana Kannada News

ಮೋದಿ ಮೆಚ್ಚಿಸಲು ಓನ್ ನೇಷನ್ ಓನ್ ಎಲಕ್ಷನ್ ತರಲಾಗುತ್ತಿದೆ: ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಟೀಕೆ

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ “ಒಂದು ದೇಶ- ಒಂದು ಚುನಾವಣೆ” ಜಾರಿಯ ಉದ್ದೇಶವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸಿ, ದೇಶವನ್ನು ಏಕಚಕ್ರಾಧಿಪತ್ಯದತ್ತ…

By Dinamaana Kannada News

ಸರ್ಕಾರಿ ಶಾಲೆಗಳ ಉಳಿವಿಗೆ ಬಜೆಟ್‌ನಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಬೇಕು: ಜಿಕ್ರಿಯಾ

ದಾವಣಗೆರೆ  (Davanagere): ದಾಖಲೆಯ ಬಜೆಟ್ ಮಂಡನೆ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಬಾರಿಯ ಆಯವ್ಯಯದಲ್ಲಿ ಸರ್ಕಾರಿ ಶಾಲೆಗಳ ಉಳಿವಿಗೆ ಮತ್ತು…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ನಾಳೆಯಿಂದ ನಾಗನೂರಿನಲ್ಲಿ ಅದ್ದೂರಿ ಉಮಾ ಮಹೇಶ್ವರ ಜಾತ್ರೆ

By Dinamaana Kannada News
Davanagere crime news
ಅಪರಾಧ ಸುದ್ದಿ

ನಕಲಿ ಬಂಗಾರ ವಂಚನೆ ಪ್ರಕರಣ:ಇಬ್ಬರ ಬಂಧನ

By Dinamaana Kannada News
DHO DAVANAGERE
ತಾಜಾ ಸುದ್ದಿ

ಆಯ್ಕೆಯಾದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ : ಆಕ್ಷೇಪಣೆಗೆ ಆಹ್ವಾನ

By Dinamaana Kannada News
Deadline extended
ತಾಜಾ ಸುದ್ದಿ

ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಯೋಜನೆ :ಅವಧಿ ವಿಸ್ತರಣೆ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?