Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > ಸೊಂಡೂರಿನ ಕಗ್ಗತ್ತಲೆಯ ಕಥನಗಳು -6 ಪೋಸ್ಟ್ ಮಾರ್ಟಮ್ ಆಗಿ ಬಂದ ಹೊಲ!
Blog

ಸೊಂಡೂರಿನ ಕಗ್ಗತ್ತಲೆಯ ಕಥನಗಳು -6 ಪೋಸ್ಟ್ ಮಾರ್ಟಮ್ ಆಗಿ ಬಂದ ಹೊಲ!

Dinamaana Kannada News
Last updated: April 27, 2024 4:14 am
Dinamaana Kannada News
Share
sanduru mining
ಸೊಂಡೂರಿನ ಕಗ್ಗತ್ತಲೆಯ ಕಥನಗಳು -6
SHARE

ಸರ್ಕಾರವು ದೋಣಿಮಲೈ ಬ್ಲಾಕ್ ಭಾಗದಲ್ಲಿ 9733 ಹೆಕ್ಟೇರ್, ನಾರ್ಥ್ ಈಸ್ಟರ್ನ್ ಬ್ಲಾಕ್ ನಲ್ಲಿ 9064 ಹೆಕ್ಟೇರ್,ರಾಮನ ಮಲೈ ಭಾಗದಲ್ಲಿ 7769 ಹಾಗೂ ಸ್ವಾಮಿ ಮಲೈ ಬ್ಲಾಕ್ ನ ಭಾಗದಲ್ಲಿ 6993 ಹೆಕ್ಟೇರುಗಳಲ್ಲಿ ಮಾತ್ರ ಗಣಿಗಾರಿಕೆಗೆ ಅನುಮತಿ ನೀಡಿತ್ತು.ಆದರೆ ಸೊಂಡೂರಿನ ಸುತ್ತಮುತ್ತಲಿನ ಅಕ್ರಮ ಗಣಿಗಾರಿಕೆಯ ಪ್ರಮಾಣವೂ ಕೂಡ ಇಷ್ಟೆ ಗಾತ್ರದಾಗಿತ್ತು ಎಂಬುದೂ ಸತ್ಯ.  ಒಟ್ಟು ಸೊಂಡೂರಿನ ಭಾಗದಲ್ಲಿ 48 ಉದ್ಯಮಗಳಿದ್ದವು.

ಕಾನೂನು ಉಲ್ಲಂಘಿಸಿದ ಕಂಪನಿಗಳೇ ಹೆಚ್ಚು

ಅವುಗಳ ಪೈಕಿ 20ಕ್ಕೂ ಹೆಚ್ಚು ಕಾನೂನನ್ನು ಉಲ್ಲಂಘಿಸಿದ ಅಕ್ರಮ ಕಂಪೆನಿಗಳೇ ಆಗಿದ್ದವು.ಲೀಗಲ್ ಎನ್ನುವಂತಹ ಕೆಲ ಕಂಪೆನಿಗಳೂ ಸಹ ಅಗತ್ಯಕ್ಕಿಂತ ಹೆಚ್ಚೇ ಅದಿರನ್ನು ರಫ್ತು ಮಾಡುತ್ತಿದ್ದವು ಎಂಬುದು ಕೂಡ ತನಿಖೆಯ ವರದಿಯೊಂದರಲ್ಲಿ ದಾಖಲಾಗಿದೆ.

ಉಸಿರಾಡಲೂ ಕಷ್ಟಪಡುವಂತಹ ಪರಿಸ್ಥಿತಿ

ಇರುವ ಭೌಗೋಳಿಕ ಪ್ರದೇಶದಲ್ಲಿ ಗಣಿಗಾರಿಕೆಯ ದಾಳಿಯಿಂದಾಗಿ ಜನಸಂಖ್ಯೆಯ ಸಾಂದ್ರತೆಯ ಪರಿಮಾಣ  ಹೆಚ್ಚಾಯಿತು. ಜನರು ಉಸಿರಾಡಲೂ ಕಷ್ಟಪಡುವಂತಹ ಪರಿಸ್ಥಿತಿ ಉಂಟಾಯಿತು.

ಧೂಳಿನ ಹಾನಿಯ ಪರಿಹಾರ”ಕ್ಕಾಗಿ ಹೋರಾಟ

ಊರುಗಳಲ್ಲಿ ಅಳಿದುಳಿದ ಹೊಲಗಳೂ ಧೂಳಿನಿಂದ ಆವೃತವಾದವು. ನಾಶವಾದ ತಮ್ಮ ಬೆಳೆ ಪರಿಹಾರಕ್ಕಾಗಿ 2007 ರಲ್ಲಿ”ಧೂಳಿನ ಹಾನಿಯ ಪರಿಹಾರ”ಕ್ಕಾಗಿ ಹೋರಾಟ ನಡೆಯಿತು. ಆಗ ಕಂಪೆನಿಗಳು ಎಕರೆಗೆ ಕೇವಲ ರೂ.4000/ಗಳನ್ನು ಮಾತ್ರ ರೈತರಿಗೆ ಕೊಟ್ಟು ಕೈ ತೊಳೆದುಕೊಂಡವು.ತಿಂಗಳಿಗೆ ಲಕ್ಷ ಲಕ್ಷ ರೂಪಾಯಿಗಳವರೆಗೂ  ಆದಾಯ ಬರುವಂತೆ ಬೆಳೆಯುವ ಭೂಮಿಯನ್ನು ಲೀಜ್ ಗೆ ನೀಡಿದ್ದ ರೈತರಿಗೆ ಅದೊಂದು ಸಮಸ್ಯೆಯೆ ಆಗಲಿಲ್ಲ. ರೈತಪರ ಚಳುವಳಿಗಳೂ ಸಹ ಆಗ ಅವರ ಕಣ್ಣಿಗೆ ತಮಾಷೆಯಂತೆ ಗೋಚರಿಸಿದ್ದಂತೂ ಸತ್ಯ.

ಗಣಿಗಾರಿಕೆಯ ಉತ್ತುಂಗದ ದಿನಗಳಲ್ಲಿ ಪ್ರತಿದಿನ ಇಪ್ಪತ್ತೈದು ಸಾವಿರ ಟನ್ನಿನಷ್ಟು ಪ್ರಮಾಣದ  ಅಕ್ರಮ ಅದಿರು  ಸಾಗಾಟವಾಗುತ್ತಿತ್ತು!. ರೈತರಿಂದ ಲೀಜ್ ಪಡೆದ ಹೊಲಗಳನ್ನು ಕನಿಷ್ಟ ಐದೈದು ಅಡಿಗಳಷ್ಟು ಆಳಕ್ಕೆ ಯಂತ್ರಗಳು ಬಗೆದು ,ಮಣ್ಣು ಕಲ್ಲನ್ನೂ ಬಿಡದೆ,ಹಗಲೂ ರಾತ್ರಿ ಸಾಗಾಟ ಮಾಡಿದವು.

ಕೈಯ್ಯೊಳಗಿದ್ದ ದುಡ್ಡು ಕೂಡ ಖಾಲಿ

ಲೀಜ್ ಅವಧಿ ಮುಗಿದ ನಂತರ ಹೊಲಗಳನ್ನು ವಾಪಸು ಪಡೆದ ರೈತರ ಮೊಗಗಳಲ್ಲಿ ತಮ್ಮದೇ ದೇಹವು ಪೋಸ್ಟ್ ಮಾರ್ಟಮ್  ಆಗಿ ಬಂದಂತೆ ಶಾಕ್ ಗೆ ಒಳಗಾದರು.ಅಷ್ಟೊತ್ತಿಗಾಗಲೇ ಕಾಲ ಮಿಂಚಿ ಹೋಗಿತ್ತು. ಕೈಯ್ಯೊಳಗಿದ್ದ ದುಡ್ಡು ಕೂಡ ಖಾಲಿಯಾಗಿತ್ತು.ಮಕ್ಕಳ ದೊಡ್ಡ ದೊಡ್ಡ ಗಾಡಿಗಳು, ಗಣಿಗಾರಿಕೆಯಲ್ಲಿ ,ರಿಟೇಲ್ ಮೈನಿಂಗ್ ನಲ್ಲಿ ದುಡಿಯುವೆನೆಂದು ಬ್ಯಾಂಕಿನಿಂದ ಸಾಲ ಮಾಡಿ ತೆಗೆದುಕೊಂಡ ಲಾರಿ,ಟಿಪ್ಪರುಗಳ ಮೌನ ಅವರನ್ನು ಭಯಭೀತರನ್ನಾಗಿಸಿತು.

ಇಲ್ಲಿನ ಆರಾಧ್ಯದೈವ ಕುಮಾರಸ್ವಾಮಿ ತನ್ನ ದರ್ಶನಕ್ಕೆ ಬರುವವರಿಗೆ,ಅವರಷ್ಟೆ ಎತ್ತರದವನಾಗಿ ಗೋಚರಿಸುತ್ತಾನಂತೆ.ದೊಡ್ಡವರ ಕಣ್ಣಿಗೆ ದೊಡ್ಡವನಾಗಿ, ಚಿಕ್ಕವರ ಕಣ್ಣಿಗೆ ಚಿಕ್ಕವನಾಗಿ ಕಾಣಿಸುತ್ತಾನೆ ಎಂಬ ಪ್ರತೀತಿಯಿದೆ.

ಆದರೆ ಡಕಾಯಿತರ ಕಣ್ಣಿಗೆ ಯಾಕೆ ಬೀಳಲಿಲ್ಲವೋ…?ಎಂಬುದು ನಿಗೂಢವಾಗಿ ಉಳಿದ  ಪ್ರಶ್ನೆಗೆ ಆ ಸ್ಕಂದ ಮಹಾಶಯನೆ ಉತ್ತರಿಸಬೇಕು.

          ಬಿ.ಶ್ರೀನಿವಾಸ

TAGGED:dinamaana.comKannada NewsSanduru stories.ಕನ್ನಡ ಸುದ್ದಿದಿನಮಾನ.ಕಾಂಸಂಡೂರಿನ ಕಥನಗಳು.
Share This Article
Twitter Email Copy Link Print
Previous Article davanagere ಚಿತ್ರಕಲಾ ಶಿಕ್ಷಕರಿಂದ 50 ಮೀಟರ್ ಬಟ್ಟೆಯಲ್ಲಿ ಮತದಾನ ಜಾಗೃತಿ
Next Article harihara banuvalli ಮದಕರಿನಾಯಕ ಮಹಾದ್ವಾರ ತೆರವು : ಮತದಾನ ಬಹಿಷ್ಕಾರದ ಎಚ್ಚರಿಕೆ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ  

ಹರಿಹರ: ಹರಿಹರದಲ್ಲಿ  ನಡೆದ ಅಂಜುಮನ್ ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಪ್ರಥಮ ಪಿಯುಸಿ ವಿಭಾಗದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.…

By Dinamaana Kannada News

ನಿರ್ಲಕ್ಷ್ಯವು ಇನ್ನೋಬ್ಬರ ಜೀವಕ್ಕೆ ಕಂಟಕವಾಗದಿರಲಿ

ಹರಿಹರ:  ಕಲಬೆರಕೆ, ಆಸುರಕ್ಷಿತ ಮತ್ತು ಗುಣಮಟ್ಟವಿಲ್ಲದ ಆಹಾರ ತಯಾರಿಕೆ ಹಾಗೂ ವಿತರಣೆ ಮಾಡುವುದು ದಂಡ ಮತ್ತು ಶಿಕ್ಷೆ ವಿಧಿಸಬಹುದಾದ ಆಪರಾಧವಾಗಿರುತ್ತದೆ…

By Dinamaana Kannada News

ಮಾ.8 ರಂದು ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್

ದಾವಣಗೆರೆ (Davanagere) : ಮಾ.8ರಂದು ನಡೆಯುವ ಲೋಕ ಅದಾಲತ್‍ನಲ್ಲಿ ನ್ಯಾಯಾಲಯದಲ್ಲಿ ಬಾಕಿ ಇರುವ, ರಾಜಿ ಆಗಬಹುದಾದ ಎಲ್ಲಾ ರೀತಿಯ ವ್ಯಾಜ್ಯಗಳನ್ನು…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ತಾನಾಗಬಲ್ಲ-ತಾನಾಗಿಸಬಲ್ಲ ಇದು ಶಿಕ್ಷಕನಲ್ಲಿರುವ ಗುಣಧರ್ಮ : ಡಾ|| ರಾಘವೇಂದ್ರ ಗುರೂಜಿ

By Dinamaana Kannada News
Davanagere
ತಾಜಾ ಸುದ್ದಿ

Davanagere | ನಮ್ಮ ಆರೋಗ್ಯ, ನಮ್ಮ ಕೈಲಿ : ಡಿ.ಸಿ

By Dinamaana Kannada News
Davanagere
ತಾಜಾ ಸುದ್ದಿ

ಎಸ್.ಎಸ್. ಜನರಲ್ ಆಸ್ಪತ್ರೆಯಲ್ಲಿ ಒಳರೋಗಿಗಳ ಸೇವೆಗೆ ಡಾ|| ಎಸ್ಸೆಸ್ ಚಾಲನೆ

By Dinamaana Kannada News
Davanagere
ತಾಜಾ ಸುದ್ದಿ

ವಿದ್ಯುತ್ ವ್ಯತ್ಯಯ | ಜೂ.24 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?