Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > ಸೊಂಡೂರಿನ ಕಗ್ಗತ್ತಲೆಯ ಕಥನಗಳು-23    ಒಂದಿನಾ…ಮಣ್ಣಾಕ ಹೋಗದು!
Blog

ಸೊಂಡೂರಿನ ಕಗ್ಗತ್ತಲೆಯ ಕಥನಗಳು-23    ಒಂದಿನಾ…ಮಣ್ಣಾಕ ಹೋಗದು!

Dinamaana Kannada News
Last updated: May 14, 2024 4:21 am
Dinamaana Kannada News
Share
sanduru
ಸೊಂಡೂರಿನ ಕಗ್ಗತ್ತಲೆಯ ಕಥನಗಳು
SHARE

ಬಡವರಾಗಿ ಹುಟ್ಟಿಬಿಟ್ಟೀವಿ…ಏನ್ ಮಾಡದು ಹಂಗಾ ಒಂದಿನಾ…ಮಣ್ಣಾಕ ಹೋಗದು! ಹೀಗೆ ನಗುನಗುತ್ತಲೇ ಸಾವಿನ ಕುರಿತು ಮಾತನಾಡುವ ಆಕೆ ಕೂಡ ಗಣಿ ಕೆಲಸ ಮಾಡುವ ಕಾರ್ಮಿಕಳೆ ಆಗಿದ್ದವಳು.

ಸುಪ್ರೀಮ್ ಕೋರ್ಟಿನ ಆದೇಶದನ್ವಯ ಬಂದ್ ಆದ ಅಕ್ರಮ ಗಣಿಗಾರಿಕೆಯಿಂದಾಗಿ ಊರಿನ ಹೊರಗೆ ತಟ್ಟಿ ಹೋಟೆಲು ಇಟ್ಟುಕೊಂಡಿರುವ ಆಕೆಗೆ ಬದುಕಿನ ಮೇಲೆ ಅಂತಹ ಯಾವುದೇ ಮೋಹವಿಲ್ಲದ ಸಂತಳಂತೆ ಕಂಡಳು.

ಕಮ್ಮತೂರು !

ಒಂದು ಕಾಲದಲ್ಲಿ ಮಳೆಯಾಶ್ರಿತ ಹೊಲಗಳಲ್ಲಿ ಎಣ್ಣೆ ಕಾಳು ಬೆಳೆಗಳನ್ನೆ ಬೆಳೆದು ಬದುಕು ಕಟ್ಟಿಕೊಂಡ ಕುಟುಂಬಗಳಿದ್ದವು. ತನ್ನದೇ ಹೊಲದ ಪಹಣಿ ಹಿಡಿದು ಸರ್ವೆ ನಂಬರ್ ಸಹಿತ ತೋರಿಸುವ ಆ ಹುಡುಗ, ತನ್ನಜ್ಜ , ಅಪ್ಪನ ಕಾಲದ ಹೊಲದ ತುಂಬ ಡಿಪ್ಪಿಂಗ್ ಮಾಡಿದ ಮಣ್ಣು ತುಂಬಿರುವುದನ್ನು ತೋರಿಸಿದ.  ಇಂತಹದರೊಳಗೆ ಬಿತ್ತಿ ಬೆಳೆಯುವುದಾದರೂ ಏನು ? ಎಂಬಂತೆ ಮುಖ ನೋಡಿದ.

ಬೆಳೆಯ ಸುಳಿಗೆ ಮೈನಿಂಗ್ ಮಣ್ಣು ತುಂಬಿದೆ !

ಬ್ಯಾಸಾಯ ಹೋಯಿತು.  ಮೈನಿಂಗ್ ಬಂದಿತು. ಈಗ ಅವೆರೆಡೂ ಇಲ್ಲದ ಊರು ಏದುಸಿರು ಬಿಡುತಿದೆ. ಗಣಿ ಆಸ್ಪೋಟದ ದಾಳಿಗೆ ಬಿರುಕು ಬಿಟ್ಟ ಮನೆಯ ಗೋಡೆಗಳೊಂದಿಗೆ ಅವರು ಅದೆಷ್ಟು ಹೊತ್ತು ಮಾತನಾಡಿಯಾರು ? ಎಲ್ಲೋ ಅಲ್ಲೋ ಇಲ್ಲೋ ಅಳಿದುಳಿದ ಜಮೀನಿನಲ್ಲಿ ಬಿತ್ತಿ, ಮೆಕ್ಕೆಜೋಳದ ಬೆಳೆಯ ಸುಳಿಗೆ ಮೈನಿಂಗ್ ಮಣ್ಣು ತುಂಬಿದೆ !

1791  ಕೋಟಿ (D.M.F) ಮೈನಿಂಗ್ ಫಂಡ್

ಗಣಿಗಾರಿಕೆಯಿಂದ ತತ್ತರಿಸಿದ ಇಂತಹ ಊರುಗಳಿಗೆ ಮೂಲಭೂತ ಸೌಕರ್ಯಗಳಿಗಾಗಿಯೆ ಡಿಸ್ಟ್ರಿಕ್ಟ ಮೈನಿಂಗ್ ಫಂಡ್(D.M.F) ತೆಗೆದಿರಿಸಲಾಗಿದೆ. ಅದರ ಮೊತ್ತವೇ ಬರೋಬ್ಬರಿ ಸಾವಿರದ ಏಳುನೂರ ತೊಂಭತ್ತೊಂದು ಕೋಟಿ ರೂಪಾಯಿಗಳು! ಅದರಲ್ಲಿ ಒಂಭೈನೂರ ತೊಂಭತ್ತೆಂಟು ಕೋಟಿಗಳನ್ನು ಈಗಾಗಲೆ ಗಣಿಬಾಧಿತ ಹಳ್ಳಿಗಳ ಅಭಿವೃದ್ಧಿಗೆ ಖರ್ಚು ಮಾಡಲಾಗಿದೆ ಎಂಬುದು ಸರ್ಕಾರವೇ ಕೊಡುವ ಅಂಕಿ ಅಂಶವಾಗಿದೆ.

ಡ್ಯಾಮು ಇದ್ರು ನೀರಿಲ್ಲ

ಡ್ಯಾಮು ಹತ್ರ ಐತೆ…ಆದ್ರೆ ಕುಡಿಯಾಕ ನೀರ್ ಸೈತ ಸಿಗಾದಿಲ್ಲ ಸಾ.. “ಜನ ಟೂರ್  ಸೈತ ಇಲ್ಲಿಗೆ ಬರಾದಿಲ್ಲ ಸಾ…ಯಾಕೆಂದ್ರೆ ಧೂಳಿಗೆ ಅರ್ಧ ಹೆದ್ರಕಂಬ್ತಾರೆ,ಮತ್ತೆ ಲಾರಿ ಆಕ್ಸಿಡೆಂಟಿಗೆ ಹೆದರಿ ಎಲ್ಲಿಸುದ್ದಪಾ ಅಂದು ಹಂಪಿ ಕಡೀಗೆ ಹೋಗಿಬಿಡ್ತಾರೆ..” ಎಂದು ಹೇಳುವ ಆತನ ಕಂಗಳಲ್ಲಿ , ಮೈನಿಂಗು ಇಲ್ಲ,ಟೂರಿಸಂ ಇಲ್ಲ ನಮ್ ಹಣೇಬರಾ ಇಷ್ಟೆ ಎಂದು ಹೇಳುತ್ತಿರುವ ಹಾಗಿತ್ತು.    ಬಡವರಾಗಿ ಹುಟ್ಟಿ ಬಿಟ್ಟೀವಿ ಸಾ…ಮತೆ ಏನ್ ಮಾಡುಕು? ಪ್ರಶ್ನೆ ,ಮನದ ಮೂಲೆಯಲ್ಲಿ ಕಟೆಯುತ್ತಲೆ ಇದೆ.

          ಬಿ.ಶ್ರೀನಿವಾಸ

 

TAGGED:dinamaana.comLatest Kannada Newssanduru mining.ಕನ್ನಡ ಸುದ್ದಿದಿನಮಾನ.ಕಾಂಸಂಡೂರು ಮೈನಿಂಗ್
Share This Article
Twitter Email Copy Link Print
Previous Article davanagere ಬೇಸಿಗೆ ಕಾಲದಲ್ಲಿ ಅಲರ್ಜಿ ಹಾಗೂ ದಮ್ಮಿನ ರೋಗಿಗಳ ವಿಶೇಷ ಕಾಳಜಿ ಅವಶ್ಯ
Next Article Davangere DC ಬೆಳೆ ಪರಿಹಾರ, ವಿಮಾ ಪರಿಹಾರ, ಖಾತರಿ ಹಣ ಸಾಲಕ್ಕೆ ಮುರಿದುಕೊಳ್ಳಬಾರದು : ಡಿಸಿ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
ವಾರದ ಕಥೆವಾರದ ಕಥೆ

Popular Posts

ರೂ.1,41 ಕೋಟಿ ಮೌಲ್ಯದಷ್ಟು ನಗದು, ವಿವಿಧ ವಸ್ತುಗಳು ವಶಕ್ಕೆ

ದಾವಣಗೆರೆ,ಏಪ್ರಿಲ್.03 : ಲೋಕಸಭಾ ಚುನಾವಣೆ ನಡೆಯುತ್ತಿದ್ದು ಮಾರ್ಚ್ 16 ರಿಂದ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಮಾರ್ಚ್ 16 ರಿಂದ ಏಪ್ರಿಲ್…

By Dinamaana Kannada News

ಒಳಮೀಸಲಾತಿಗೆ ಆಯೋಗ ರಚನೆ: ವಿಳಂಬ ನೀತಿ ಅಲ್ಲ : ಸಿದ್ದರಾಮಯ್ಯ

ಬೆಂಗಳೂರು : ರಾಜ್ಯದಲ್ಲಿ ಒಳ ಮೀಸಲಾತಿ ಕುರಿತು 3 ದಶಕಗಳ ನಿರಂತರ ಬೇಡಿಕೆ, ಒತ್ತಾಯಗಳ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಸಂಪುಟವು…

By Dinamaana Kannada News

ಕರ್ನಾಟಕ ರಾಜ್ಯ ಔಷಧ ಮತ್ತು ಮಾರಾಟ ಪ್ರತಿನಿಧಿಗಳ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ದಾವಣಗೆರೆ : ಕರ್ನಾಟಕ ರಾಜ್ಯ ಔಷಧ ಮತ್ತು ಮಾರಾಟ ಪ್ರತಿನಿಧಿಗಳ ಸಂಘದ 27ನೇ ರಾಜ್ಯ ಸಮ್ಮೇಳನವು ಕೋಲಾರದಲ್ಲಿ ಮಾ 16…

By Dinamaana Kannada News

You Might Also Like

bhadra-dam
ತಾಜಾ ಸುದ್ದಿ

Bhadra dam | ಭದ್ರಾ ಜಲಾಶಯ : ತುಂಬಲು ದಿನಗಣನೆ ಆರಂಭ

By Dinamaana Kannada News
Dinesh K Shetty
ತಾಜಾ ಸುದ್ದಿ

ದಾವಣಗೆರೆ|ದೇಶ ಮತ್ತು ಯೋಧರ ವಿಚಾರದಲ್ಲಿ ರಾಜಕೀಯ ಸಲ್ಲ: ದಿನೇಶ್ ಕೆ ಶೆಟ್ಟಿ

By Dinamaana Kannada News
recruitment for posts in BSF
ತಾಜಾ ಸುದ್ದಿ

BSFನಲ್ಲಿ 3588 ಹುದ್ದೆಗಳ ಭರ್ಜರಿ ನೇಮಕಾತಿ

By Dinamaana Kannada News
Gold price
ತಾಜಾ ಸುದ್ದಿ

ಮೂರು ದಿನಗಳಲ್ಲಿ ಚಿನ್ನದ ಬೆಲೆ 2,400 ರೂ. ಇಳಿಕೆ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?