ಜಗಳೂರು: ಬೇಸಿಗೆ ಮುಗಿಯುವವರೆಗೂ ಹಗಲಿರುಳ್ಳನ್ನದೆ ಪಿಡಿಒ ಮತ್ತು ನೀರು ಗಂಟೆಗಳು ಶ್ರಮಿಸಬೇಕಾಗಿದೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಬೇಕಾಗಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೆಂಚಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣದ ಗುರುಭವನದಲ್ಲಿ ಟಾಸ್ಕ್ ಪೋಸ್ ಸಮಿತಿಯ ಸಭೆಯಲ್ಲಿ ಮಾತನಾಡಿದರು.
ಇನ್ನೇನು ಬೇಸಿಗೆ ಪ್ರಾರಂಭವಾಗುತ್ತಿದ್ದು ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಹಗಲಿರಳು ಅಧಿಕಾರಿಗಳು ಹದ್ದಿನ ಕಣ್ಣಿನಂತೆ ಕೆಲಸ ಮಾಡ ಬೇಕಾಗಿದೆ ಅತಿ ಸಮಸ್ಯೆಯಾಗಿರುವ ಗ್ರಾಮಗಳಲ್ಲಿ ಖಾಸಗಿ ಬೋರ್ವೆಲ್ ಗಳ ಮೂಲಕ ನೀರಿನ ವ್ಯವಸ್ಥೆಯನ್ನು ಮಾಡಬೇಕು ಹೊಸ ಬೋರ್ವೆಲ್ ಕೊರೆಸಲು ಅನು ಮತಿ ದೊರೆಯುವುದು ಕಷ್ಟವಾಗಿದ್ದು ಇರುವ ಸಂಪನ್ಮೂಲವನ್ನೇ ಸದ್ಬಳಕೆ ಮಾಡಿಕೊಳ್ಳಬೇಕಾಗಿದೆ ಎಂದರು.
ಬಿಸ್ತುವಳ್ಳಿ ಪಿಡಿಒ ಶಿವಕುಮಾರ್ ಮಾತನಾಡಿ, ಬಿಸ್ತವಳ್ಳಿ ಗ್ರಾಮದ ಗೋಪಗೊಂಡ ನಹಳ್ಳಿ ಎಲ್ಲಿ ಜೆಜೆಮ್ ಕಾಮಗಾರಿ ನಡೆದದ್ದು ನೀರು ಬರುತ್ತಿಲ್ಲ. ಇದರ ಬಗ್ಗೆ ಗಮನ ಹರಿಸಬೇಕು ಎಂದು ತಿಳಿಸಿದಾಗ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಸಾಧಿಕ್ ವುಲ್ಲಾ ಇನ್ನು ಸ್ವಲ್ಪ ಕೆಲಸ ಬಾಕಿ ಇದ್ದು ಪೂರ್ಣಗೊಂಡ ನಂತರ ನೀರು ಬರಲಿದೆ ಎಂದು ಸಭೆಯ ಗಮನಕ್ಕೆ ತಂದರು.
ಬಿಳಿಚೋಡು ಪಿಡಿಒ ನಂದಿಲಿಂಗೇಶ್ವರ ಮಾತನಾಡಿ, ಮಾದನಹಳ್ಳಿ ಕಾಟನಳ್ಳಿ ಬಿಳಿ ಚೂಡಿನ ಎರಡು ವಾರ್ಡ್ಗಳಲ್ಲಿ ನೀರಿನ ಸಮಸ್ಯೆ ಆಗಲಿದೆ ಎಂದು ಮುಂಚೆಯೇ ವರದಿಯನ್ನು ನೀಡಿದ್ದೆ ಕಳೆದ ಬಾರಿ ಬೋರ್ ವೆಲ್ ಮೂಲಕ ನೀರು ಸರಬರಾಜು ಮಾಡಿದವರಿಗೆ ಹಣ ಪಾವತಿ ಆಗಿಲ್ಲ ಎಂಬ ದೂರು ಕೇಳು ಬರುತ್ತಿವೆ ಎಂದಾಗ ಬಹುತೇಕ ಎಲ್ಲಾ ಬಿಲ್ಲುಗಳನ್ನು ಪಾವತಿ ಮಾಡಲಾಗಿದೆ ಸಮಯಕ್ಕೆ ಸರಿಯಾಗಿ ಕಡತಗಳನ್ನು ನೀಡದೆ ಇರುವುದರಿಂದ ಸಮಸ್ಯೆ ಆಗಿರಬಹುದು ಎಂದು ಎಇಇ ಸಾಧಿಕ್ ವುಲ್ಲ ಸಭೆಗೆ ತಿಳಿಸಿದರು.
ಪಿಡಿಒ ವಾಸು ಮಾತನಾಡಿ, ಕೆಚ್ಚೆನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಕೆಳಗೋಟೆ ಗ್ರಾಮದಲ್ಲಿ ಜೆಜೆ ಎಂ ಕಾಮಗಾರಿ ಮಾಡಿದ್ದು ಇರುವ ಪೈಪ್ ಲೈನ್ ಗಳನ್ನು ಹಡೆಗೆಡಿಸಿ ರುವುದರಿಂದ ಗ್ರಾಮಸ್ಥರಿಗೆ ಸಮರ್ಪಕವಾದ ನೀರಿನ ವ್ಯವಸ್ಥೆ ಯನ್ನು ನೀಡಲು ಆಗುತ್ತಿಲ್ಲ ಎಂದಾಗ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸ ಲಾಗುವುದು ಎಂದು ಎ ಡಬ್ಲ್ಯೂ ಸಾಧಿಕ್ ಉಲ್ಲಾ ಸಮಸ್ಯೆಯ ಬಗ್ಗೆ ಸ್ಪಷ್ಟನೆ ನೀಡಿದರು.
ಇದನ್ನೂ ಓದಿ : ಕೊಳವೆಬಾವಿಗಳನ್ನು ಕೊರೆಸುವಾಗ ನಿಬಂಧನೆಗಳನ್ನು ಪಾಲಿಸಿ : ಡಿಸಿ
ದೇವಿಕೇರಿ ಗ್ರಾಪಂ ವ್ಯಾಪ್ತಿಯ ಗ್ರಾಮದ ಮೆದಕೆರನಹಳ್ಳಿ ಮತ್ತು ಗುಡ್ಡದ ನಿಂಗನಹಳ್ಳಿ ಗ್ರಾಮದಲ್ಲಿ ತಿರುಗಿ ವಸೂಲಿಗೆ ವ ತೆರಳಿದಂತ ಸಿಬ್ಬಂದಿಗಳ ಮೇಲೆ ಹಲ್ಲೆಗೆ ಯತ್ನಿಸುತ್ತಿದ್ದಾರೆ ಎಂದು ಕಾರ್ಯದರ್ಶಿ ಎಂದಾಗ ಮೆದಕೆರೆನಹಳ್ಳಿ ಗ್ರಾಮದಲ್ಲಿ ಇನ್ನು ಸ್ವಲ್ಪ ಜೆಜೆಎಂ ಕಾಮಗಾರಿಬಾಕಿ ಇದೆ ಎಂದು ಎಇಇ ಸಾಧಿಕ್ ಸ್ಪಷ್ಟನೇ ನೀಡಿದರು.
ಈ ಸಂದರ್ಭದಲ್ಲಿ ಪಶು ಸಂಗೋಪನ ಇಲಾಖೆಯ ಸಹಾಯಕ ನಿರ್ದೇಶಕರಾದ ಲಿಂಗರಾಜ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಅಶೋಕ್, ಕೃಷಿ ಇಲಾಖೆಯ ಸಹಾಯಕ ಸಹಾಯಕ ನಿರ್ದೇಶಕಿ ಶ್ವೇತ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಲಮೂರ್ತಿ, ಜಿ.ಪಂ ಎಇಇ ಶಿವಮೂರ್ತಿ, ಸಿ ಡಿ ಪಿ ಓ ಬೀರೇಂದ್ರ ಕುಮಾರ್, ತಾಲೂಕು ಆರೋಗ್ಯ ಅಧಿಕಾರಿ ವಿಶ್ವನಾಥ್ ಇದ್ದರು.
ಚರ್ಚಿತವಾದ ವಿಷಯಗಳು:
ಮೂರು ತಿಂಗಳಗಳ ಕಾಲ ನೀರಿನ ಸಮಸ್ಯೆ ಯಾಗದಂತೆ ಕ್ರಮ ಕೈಗೊಳ್ಳಬೇಕು.
ನೀರಗಂಟಿಗಳು ಸಮಸ್ಯೆಗಳ ಬಗ್ಗೆ ಮುಂಜಾಗ್ರತೆಯ ಮುಂಜಾಗ್ರತವಾಗಿ ಪಿಡಿಒಗಳ ಗಮನಕ್ಕೆ ತರಬೇಕು
ಗ್ರಾಮ ಪಂಚಾಯಿತಿ ಆಡಳಿತ ಅಧಿಕಾರಿಗಳು ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು.
ಹೊಸ ಬೋರ್ವೆಲ್ ಕೊರಿಸಲು ಅವಕಾಶವಿರುವುದಿಲ್ಲ.
ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಅವಕಾಶವಿರುವುದಿಲ್ಲ
ಗ್ರಾಮಗಳ ವ್ಯಾಪ್ತಿಯಲ್ಲಿರುವ ಶಾಲಾ ಕಾಲೇಜು, ವಿದ್ಯಾರ್ಥಿ ನಿಲಯಗಳಲ್ಲಿ ಅಂಗನವಾಡಿ ಕೇಂದ್ರಗಳಿಗೆ ನೀರಿನ ಸಮಸ್ಯೆ ಯಾಗದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಮತ್ತು ಪೈಪ್ ಲೈನ್ ಹೊಡೆದಿರುವುದನ್ನು ಪಟ್ಟಿ ಮಾಡಿ ಮತ್ತು ಚರಂಡಿಗಳಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಹಾದು ಹೋಗಿದ್ದರೆ ಬೇರೆ ಕಡೆ ಸ್ಥಳಾಂತರ ಮಾಡಿ ನೀರು ಗಂಟಿಗಳು ಸಮಸ್ಯೆ ಇದ್ದರೆ ಪಿಡಿಒ ಮತ್ತು ಆಡಳಿತ ಅಧಿಕಾರಿಗಳ ಗಮನಕ್ಕೆ ತರಬೇಕು
ಕೆಂಚಪ್ಪ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ.
ನೀರಿನ ಸಮಸ್ಯೆ ಇದ್ದರೆ ಹೊಸ ಬೋರ್ವೆಲ್ ಕೊಡಿಸಲು ಅವಕಾಶವಿಲ್ಲ ಮತ್ತು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಅವಕಾಶವಿಲ್ಲ ರೈತರನ್ನು ಮಲವಳಿಸಿ ಖಾಸಗಿ ಬೋರ್ವೆಲ್ ಗಳಿಂದ ಮಾಸಿಗೆ ಬಾಡಿಗೆ ಆಧಾರದ ಮೇಲೆ ವ್ಯೆವಸ್ಥೆ ಮಾಡಬೇಕು
ಸಾಧಿಕ್ ವುಲ್ಲ ಎಇಇ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ.
