ಹರಿಹರ :
ಹರಿಹರ ನಗರದಲ್ಲಿ ನಡೆದ 13 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ರಾಜಕೀಯ ಧುರೀಣರು ಮತ್ತು ವಿವಿಧ ಕನ್ನಡ ಪರ ಸಂಘಟನೆಯವರು ಸೇರಿದಂತೆ ಹರಿಹರ ಜನತೆಯ ಉತ್ತಮ ಸಹಕಾರ ದಿಂದ ಅದ್ದೂರಿಯಾಗಿ ಮತ್ತು ಅರ್ಥಪೂರ್ಣವಾಗಿ ನಡೆದಿದ್ದು ಇತಿಹಾಸ ಸೃಷ್ಟಿ ಮಾಡಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ ಹೇಳಿದರು.
ನಗರದ ಉಡುಪಿ ಕಾಮತ್ ಹೋಟೆಲ್ ಸಭಾಂಗಣದಲ್ಲಿ, ಕರ್ನಾಟಕ ರಕ್ಷಣಾ ವೇದಿಕೆ( ಪ್ರವೀಣ್ ಶೆಟ್ಟಿ ಬಣ) ವತಿಯಿಂದ 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಯಾಗಿ ನಡೆದಿರುವುದಕ್ಕೆ, ಕಸಾಪ ಜಿಲ್ಲಾ ಮತ್ತು ತಾಲ್ಲೂಕು ಪದಾಧಿಕಾರಿಗಳಿಗೆ ಅಭಿನಂದನೆಗಳು ಹಾಗೂ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮ್ಮೇಳನ ಯಶಸ್ವಿಗೆ ಜನರಿಂದ ಅಭೂತಪೂರ್ವ ಸಹಕಾರ
ಜನರ ಉತ್ತಮ ಸಹಕಾರ ಹಾಗೂ ಪ್ರೋತ್ಸಾಹ ಇದ್ದರೆ ಸಮ್ಮೇಳನಗಳನ್ನು ಅದ್ಬುತ ವಾಗಿ ಮಾಡಬಹುದು ಎಂದು ಹರಿಹರ ಜನತೆ ಎರಡು ದಿನಗಳ ಕಾಲ ನಡೆದ ಸಮ್ಮೇಳನದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸುವ ಮೂಲಕ ಯಶಸ್ವಿಯಾಗಿಸಿದ್ದಾರೆ. ತಾಲ್ಲೂಕು ಮಟ್ಟದ ವಿವಿಧ ಇಲಾಖೆಯವರು, ಪತ್ರಕರ್ತರು, ಕನ್ನಡ ಪರ ಸಂಘಟನೆಯವರು, ಸಾಂಸ್ಕೃತಿಕ ರಂಗದ ಅಭಿಮಾನಿಗಳು, ಹಿರಿಯ ಸಾಹಿತಿಗಳು, ಕನ್ನಡ ಅಭಿಮಾನಿಗಳು , ಮೀಠಾಯಿ ಅರುಣ್ ಕುಮಾರ್, ರವರು ಸೇರಿದಂತೆ ಅಪಾರ ಸಂಖ್ಯೆಯ ಜನರು ಜಿಲ್ಲಾ ಸಮ್ಮೇಳನದ ಯಶಸ್ವಿಯಾಗಿ ನಡೆಯುವುದಕ್ಕೆ ಅಭೂತಪೂರ್ವ ಸಹಕಾರ ನೀಡಿದರು ಎಂದರು.
ಜಿಲ್ಲೆಯ ಮತ್ತು ತಾಲ್ಲೂಕಿನ ಪದಾಧಿಕಾರಿಗಳನ್ನು ಪ್ರವೀಣ್ ಶಟ್ಟಿ ಬಣದ ರಕ್ಷಣಾ ವೇದಿಕೆಯ ಸದಸ್ಯರು ಸನ್ಮಾನಿಸಿ ಗೌರವಿಸುವಂತ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಹೇಳಿದರು.
ಜನರಿಗೆ ಕನ್ನಡದ ಬಗ್ಗೆ ಅಭಿಮಾನವಿದೆ
ಸಮ್ಮೇಳನಧ್ಯಕ್ಷರಾದ ಪ್ರೋ ಸಿ.ವಿ. ಪಾಟೀಲ್ ಮಾತನಾಡಿ, ನಗರದ ಜನತೆಯಲ್ಲಿ ಕನ್ನಡದ ಬಗ್ಗೆ ಅಭಿಮಾನ, ಆತ್ಮವಿಶ್ವಾಸ, ಉಮ್ಮಸ್ಸು, ಉಲ್ಲಾಸ , ಉರುಪು ಹೆಚ್ಚು ಇದ್ದಿದ್ದರಿಂದ ಸಮ್ಮೇಳನ ಯಶಸ್ವಿಯಾಗಿ ನಡೆಯುವುದಕ್ಕೆ ದಾರಿಯಾಗಿದೆ ಎಂದರು.
ಕಾರ್ಮಿಕ ಮುಖಂಡ ಹೆಚ್.ಕೆ. ಕೊಟ್ರಪ್ಪ, ತಾಲ್ಲೂಕು ಕಸಾಪ ಅಧ್ಯಕ್ಷ ಡಿ.ಎಂ. ಮಂಜುನಾಥಯ್ಯ, ಗೌರವ ಕಾರ್ಯದರ್ಶಿಗಳಾದ ಎಂ.ಚಿದಾನಂದ ಕಂಚಿಕೇರಿ. ಬಿ.ಬಿ. ರೇವಣ್ಣನಾಯ್ಕ್, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ರೇವಣಸಿದ್ದಪ್ಪ ಅಂಗಡಿ, ಸದಸ್ಯ ಎ ರೀಯಾಜ್ ಆಹ್ಮದ್, ಕರ್ನಾಟಕ ರಕ್ಷಣಾ ವೇದಿಕೆಯ ರಮೇಶ್ ಮಾನೆ, ಪ್ರೀತಂ ಬಾಬು ಮಾತನಾಡಿದರು.
ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ರಾಘವೇಂದ್ರ ನಾಯರಿ, ಸಂಘಟನಾ ಕಾರ್ಯದರ್ಶಿಗಳಾದ ಜಿಗಳಿ ಪ್ರಕಾಶ್, ಸಿ.ಜಿ. ಜಗದೀಶ್ ಕೊಲಂಬಿ, ಕೃಷ್ಣ ಪಿ. ರಾಜೋಳ್ಳಿ, ರಕ್ಷಣಾ ವೇದಿಕೆಯ ತಾಲ್ಲೂಕು ಅಧ್ಯಕ್ಷ ರಮೇಶ್ ಮಾನೆ, ನಗರ ಘಟಕದ ಅಧ್ಯಕ್ಷ ಪೀತಂ ಬಾಬು, ಗೌರವ ಅಧ್ಯಕ್ಷ ಸುಬ್ರಹ್ಮಣ್ಯ ನಾಡಿಗೇರ, ಪದಾಧಿಕಾರಿಗಳಾದ ಪ್ರಾನ್ಸಿಸ್, ಕ್ಸೇವಿಯರ್, ಶಂಕರ್ ದುರಗೋಜಿ, ಇಂತಿಯಾಜ್ ಆಹ್ಮದ್, ಸಿದ್ದಪ್ಪ, ರಾಮು ರವಿರಾಜ್, ತಿಪ್ಪೇಶ್, ವಸಂತ್, ರುದ್ರೇಶ್, ರಾಜು, ಶರತ್, ರೂಪಾ, ಜಾನ್ಸನ್, ಫಜಲ್, ಅರುಣ್, ಅಲ್ತಾಫ್ ಇತರರು ಹಾಜರಿದ್ದರು.