Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಹೊನ್ನಾಳ್ಳಿ|ಧರ್ಮದ ಕಲಂ ನಲ್ಲಿ ಬೌದ್ಧರು ಎಂದು ನಮೂದಿಸಿ : ಪ್ರೋ. ಹೆಚ್.ರಾಚಪ್ಪ
ತಾಜಾ ಸುದ್ದಿ

ಹೊನ್ನಾಳ್ಳಿ|ಧರ್ಮದ ಕಲಂ ನಲ್ಲಿ ಬೌದ್ಧರು ಎಂದು ನಮೂದಿಸಿ : ಪ್ರೋ. ಹೆಚ್.ರಾಚಪ್ಪ

Dinamaana Kannada News
Last updated: September 22, 2025 5:07 am
Dinamaana Kannada News
Share
Davanagere
SHARE

ಹೊನ್ನಾಳ್ಳಿ : ಶೋಷಿತ ಸಮುದಾಯಕ್ಕೆ ಪ್ರಸ್ತುತ ನಡೆಯಲಿರು ಜಾತಿ ಜನಗಣತಿಯಲ್ಲಿ ನಾವು ಜಾತಿಯ ಕಲಂ ನಲ್ಲಿ ನಮ್ಮ ನಮ್ಮ ಜಾತಿಯ ಹೆಸರುಗಳನ್ನು ನಮೂದಿಸಿಕೊಂಡು, ಧರ್ಮದ ಕಲಂ ನಲ್ಲಿ ಬೌದ್ಧರು ಎಂದು ನಮೂದಿಸಿಕೊಳ್ಳಬೇಕು ಎಂದು ಶಿವಮೊಗ್ಗದ ಬೌದ್ಧ ಧಮ್ಮಚಾರಿಗಳಾದ ಪ್ರೋ. ಹೆಚ್.ರಾಚಪ್ಪ ಹೇಳಿದರು.

ಪ್ರೋ ಬಿ.ಕೃಷ್ಣಪ್ಪ ಫೌಂಡೇಶನ್ ಹೊನ್ನಾಳಿ ವತಿಯಿಂದ ಏರ್ಪಡಿಸಿದ್ದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನಡೆಸಲಿರುವ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ 2025-26 (ಜಾತಿ ಜನಗಣತಿ) ಯಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಅಭಿಮಾನಿ ಮತ್ತು ಅನುಯಾಯಿಗಳ ಪಾತ್ರವೇನು? ಕುರಿತ ಕರ‍್ಯಕ್ರಮದಲ್ಲಿ ಮಾತನಾಡಿದರು.

ಇದು ಮತಾಂತರ ಅಥವಾ ಧರ್ಮಾಂತರವಲ್ಲ ಬಾಬಾಸಾಹೇಬರು ಹೇಳಿದಂತೆ ಮರಳಿ ನಮ್ಮ ಮನೆಗೆ ಹೋಗುವುದು. ದಲಿತರು ಬೌಧ್ಧ ಧರ್ಮವನ್ನು ತಮ್ಮ ಧರ್ಮವೆಂದು ನಮೂದಿಸಿಕೊಂಡರೆ ಸಂವಿಧಾನದ ಮೀಸಲಾತಿಯ ಸೌಲಭ್ಯಗಳು ಯತಾವತ್ತಾಗಿ ಮುಂದುವರೆಯಲಿದೆ. ಹಾಗಾಗಿ ನಾವು ಬೌದ್ಧರು ಎಂದು ಹೆಮ್ಮೆಯಿಂದ ಈ ಸಮೀಕ್ಷೆಯಲ್ಲಿ ದಲಿತರು ಬರೆಸಬೇಕು ಎಂದು ತಿಳಿಸಿದರು.

ದಲಿತರಿಗೆ ಈ ಚರಿತ್ರೆಯಲ್ಲಿ ಸಾಂಸ್ಕೃತಿಕ ಗಟ್ಟಿತನ ಇದೆ. ಈ ನಿಟ್ಟಿನಲ್ಲಿ ನಮ್ಮ ಪೂರ್ವಜರ ಧರ್ಮವಾಗಿರುವಂತಹ ಬೌದ್ಧ ಧರ್ಮವನ್ನು ಒಪ್ಪಿಕೊಂಡು ಈ ಮೂಲಕ ನಮ್ಮ ಜನಗಳಿಗೆ ನಾವು ಒಂದು ದಾರಿ ದೀಪವಾಗಬೇಕು ಇದು ಪ್ರಾಯಶಃ ಇಡೀ ಕರ್ನಾಟಕಕ್ಕೆ ವಿಜೃಂಭಿಸಲಿದೆ ಎಂದರು.

ವಕೀಲ ಮೋಹನ್ ಕುಮಾರ್ ಎಂ ಸಿ ಮಾತನಾಡಿ, ಜಗತ್ತಿನ ಸಮಸ್ಯೆಗಳಿಗೆ ಗೌತಮ ಬುದ್ಧರು ತೋರಿದ ತ್ರಿಸರಣ ಮತ್ತು ಪಂಚಸದೀಲಗಳಲ್ಲಿ ಪರಿಹಾರಗಳಿವೆ. ಹಾಗಾಗಿ ಜಗತ್ತೆ ಇಂದು ಬುದ್ಧರ ವಿಚಾರಗಳಿಗೆ ಮನಸೋಲುತಿದೆ.  ನಾವುಗಳು ಬಾಬಾಸಾಹೇಬ್ ಅಂಬೇಡ್ಕರ್ ಮಕ್ಕಳಾಗಿ ರುವುದರಿಂದ ಅವರು 1956 ಆಕ್ಟೊಬರ್ 14 ರಂದು ಮಹಾರಾಷ್ಟ್ರದಲ್ಲಿ 5 ಲಕ್ಷ ಜನರಿಗೆ ಬೌದ್ಧ ಧಮ್ಮದ ದೀಕ್ಷೆಯನ್ನು ನೀಡಿ ಕರೆಕೊಟ್ಟಿರುವುದರಿಂದ ಅವರ ವಂಶಜರಾದ ನಾವು ಅವರ ಮಾರ್ಗದಲ್ಲಿಯೇ ಮುಂದೆ ಸಾಗುವುದು ಅನಿವಾರ್ಯವಾಗಿದೆ ಹಾಗೂ ಪರಿಶಿಷ್ಟ ಜಾತಿ ಜನಾಗಂದವರು ಈ ಸಮೀಕ್ಷೆಯಲ್ಲಿ ಬೌದ್ಧರು ಎಂದು ಬರೆಸಬೇಕು ಮತ್ತು ಶೋಷಿತ ಬಹುಜನ ಮಕ್ಕಳ ಶೈಕ್ಷಣಿಕ ಮತ್ತು ಜೌದ್ಯೋಗಿಕ ಹಾಗೂ ಸರ್ವತೋಮುಖ ಪ್ರಗತಿಗೆ ಫ್ರೋ.ಬಿ.ಕೆ ಫೌಂಡೇಶನ್ ಸದಾ ಕಾರ್ಯೋನ್ಮುಖವಾಗಿದೆ ಎಂದರು.

ಆರ್.ನಾಗಪ್ಪ ಮಾತನಾಡಿ, ದಲಿತ ಸಂಘರ್ಷ ಸಮಿತಿ ಮಾಡುತ್ತಿದ್ದಂತಹ ಭೂಮಿ ಹೋರಾಟಗಳನ್ನು ಮಾಡಬೇಕು, ಚಳವಳಿ ಗಟ್ಟಿಯಾಗಬೇಕು ಎಂದು ಹೇಳಿದರು.

ಎ.ಡಿ.ಈಶ್ವರಪ್ಪ ಮಾತನಾಡಿ, ದಲಿತರು ಹಿಂದೂ ಧರ್ಮವನ್ನು ತೊರೆದು ಬೌದ್ಧ ಧರ್ಮವನ್ನು ಸೇರಬೇಕು. ಈ ನಿಟ್ಟಿನಲ್ಲಿ ನಾವೆಲ್ಲರು ಒಟ್ಟಾಗಿ ಕೆಲಸಮಾಡಬೇಕು ಎಂದರು.

ತಮ್ಮಣ್ಣ ಜಿ.ಹೆಚ್ ಮಾತನಾಡಿ,ದಲಿತರು ಮೂಢನಂಬಿಕೆ, ಕಂದಾಚಾರದAತಹ ಅನಿಷ್ಟ ಪದ್ದತಿಗಳಿಂದ ಆಚೆ ಬರಬೇಕು ಎಂದರು.

ವಕೀಲ ಸಂತೋಷ್ ಎಸ್. ನಿರೂಪಿಸಿದರು. ಅಂಬೇಡ್ಕರ್ ಬೋಧ್.ಡಿ.ಎಂ.ಸ್ವಾಗತಿಸಿದರು.

Read also : Political analysis|ವಿಜಯೇಂದ್ರ ಬೆನ್ನಿಗೆ ಈಗ ಸಂತೋಷ್ ನಿಂತರು

ಮಾತೆ ರಮಾಬಾಯಿ ಅಂಬೇಡ್ಕರ್ ಮಹಿಳಾ ಸ್ವ-ಸಹಾಯ ಸಂಘ, ಹರಳಹಳ್ಳಿ. ಮಾತೆ ಸಾವಿತ್ರಿಬಾ ಫುಲೆ ಮಹಿಳಾ ಸ್ವಸಹಾಯ ಸಂಘ ಹರಳಹಳ್ಳಿ. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಮಹಿಳಾ ಸ್ವಸಹಾಯ ಸಂಘ ಗೋಪಗೊಂಡನಹಳ್ಳಿ. ಮಾತಾಂಗ ತಮಟೆ ಕಲಾ ತಂಡ ಸಾಸ್ವೆಹಳ್ಳಿ ಸಹಯೋಗದಲ್ಲಿ ಕರ‍್ಯಕ್ರಮ ನಡೆಯಿತು.

ದಲಿತ ಸಾಹಿತ್ಯ ಪರಿಷತ್ ಜಿಲ್ಲಾದ್ಯಕ್ಷರು ರಘು ಆರ್, ಮಂಜುನಾಥ ಬೆನಕನಹಳ್ಳಿ, ಕುಬೇರ.ಆರ್, ಪ್ರದೀಪ್, ಪುಟ್ಟಸ್ವಾಮಿ ಉಪಸ್ಥಿತರಿದ್ದರು.

TAGGED:Davanagere NewsDinamana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Political analysis Political analysis|ವಿಜಯೇಂದ್ರ ಬೆನ್ನಿಗೆ ಈಗ ಸಂತೋಷ್ ನಿಂತರು
Next Article Davanagere ಸಾರ್ವಜನಿಕ ಕುಂದುಕೊರತೆ ವ್ಯವಸ್ಥೆ ನಿವಾರಣೆಗೆ: ದಾವಣಗೆರೆ ಸ್ಮಾರ್ಟ್ ಹೆಲ್ಪ್ ಅಪ್ಲಿಕೇಷನ್

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ದ್ವಾಪರ ದಾಟುತ ಬಂದ ಕೃಷ್ಣಂ ಪ್ರಣಯ ಸಖಿ : ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಮೂರನೇ ಹಾಡು ಬಿಡುಗಡೆ

ಖ್ಯಾತ ನಿರ್ದೇಶಕ ಶ್ರೀನಿವಾಸರಾಜು ಅವರ ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ "ಕೃಷ್ಣಂ ಪ್ರಣಯ ಸಖಿ" ಚಿತ್ರ ಆರಂಭದಿಂದಲೂ…

By Dinamaana Kannada News

Davanagere | ಜನರು ಮೂಕರಾಗಿ, ಜನಪ್ರತಿನಿಧಿಗಳು ಕಿವುಡರಾಗಿರುವಂತಿದೆ ಈ ಪ್ರಜಾಪ್ರಭತ್ವ ವ್ಯವಸ್ಥೆ : ರವಿ ನಾರಾಯಣ್

ದಾವಣಗೆರೆ (Davanagere) :  ಜನರಿಂದ, ಜನರಿಗಾಗಿ, ಜನರಿಗೋಸ್ಕರ ಪ್ರಜಾಪ್ರಭುತ್ವ, ಆದರೆ, ವಾಸ್ತವದಲ್ಲಿ ಜನರು ಮೂಕರಾಗಿ, ಜನಪ್ರತಿನಿಧಿಗಳು ಕಿವುಡರಾಗಿರುವಂತಿದೆ ಈ ಪ್ರಜಾಪ್ರಭತ್ವ…

By Dinamaana Kannada News

ಪಾರ್ಕ್ ನಲ್ಲಿ ಕಸ ವಿಲೇವಾರಿ ಘಟಕ : ಪ್ರತಿಭಟನೆ

ದಾವಣಗೆರೆ: ಪಾಲಿಕೆ ವ್ಯಾಪ್ತಿಯ 41ನೇ ವಾರ್ಡ್ನ ಸರ್ವೆ ನಂಬರ್ 62ರ ಸೈಟ್ ನಂಬರ್ 154ರ ಉದ್ಯಾನವನದಲ್ಲಿ ಕಸ ವಿಲೇವಾರಿ ಘಟಕ…

By Dinamaana Kannada News

You Might Also Like

Davanagere crime
ಅಪರಾಧ ಸುದ್ದಿತಾಜಾ ಸುದ್ದಿ

ಬೈಕ್ ಕಳ್ಳತನ ಪ್ರಕರಣ : ಅಂತರ ಜಿಲ್ಲಾ ಕಳ್ಳರ ಬಂಧನ

By Dinamaana Kannada News
Davanagere
ಅಭಿಪ್ರಾಯ

ಮಕ್ಕಳ ನೀತಿ ಕಥೆ: ಉತ್ತಮ ವ್ಯಕ್ತಿತ್ವಕ್ಕೆ ಭದ್ರ ಬುನಾದಿ|ಡಿ. ಫ್ರಾನ್ಸಿಸ್ 

By Dinamaana Kannada News
Davanagere
ತಾಜಾ ಸುದ್ದಿ

ದಾವಣಗೆರೆ:ಮಾಸಡಿ ಗ್ರಾಪಂ ಅಕ್ರಮ ಖಂಡಿಸಿ ಪ್ರತಿಭಟನೆ

By Dinamaana Kannada News
Davanagere
ತಾಜಾ ಸುದ್ದಿಅಪರಾಧ ಸುದ್ದಿ

ಅಕ್ರಮವಾಗಿ ಪಡಿತರ ದಾಸ್ತಾನು:ವಿವಿಧ ಕಡೆ ದಾಳಿ ನಡೆಸಿ ವಶಕ್ಕೆ ಪಡೆದ ಪೊಲೀಸರು

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?