ದಾವಣಗೆರೆ : ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮನೆ ಮನೆಗಳಿಂದ ಮೂಲದಲ್ಲಿಯೇ ವಿಂಗಡಿಸಿದ ಜೈವಿಕವಾಗಿ ಕೊಳೆಯುವ ಹಸಿತ್ಯಾಜ್ಯ ಜೈವಿಕವಾಗಿ ಕೊಳೆಯದ ಮತ್ತು ಮರುಬಳಸಬಹುದಾದ ಒಣತ್ಯಾಜ್ಯ ಹಾಗೂ ಸ್ಯಾನಿಟರಿ ಪ್ಯಾಡ್ ನಂತಹ ನೈರ್ಮಲ್ಯ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ಪ್ರಾಥಮಿಕ ತ್ಯಾಜ್ಯ ಸಂಗ್ರಹಣಾ ವಾಹನಗಳಾದ ಆಟೋ ಟಿಪ್ಟರ್ ಗಳ ಮೂಲಕ ಸಂಗ್ರಹಿಸಲಾಗುತ್ತಿದೆ.
ತ್ಯಾಜ್ಯ ಸಂಗ್ರಹಣೆಯಲ್ಲಿ ತೊಡಗಿರುವ ವಾಹನ ಚಾಲಕರು ಸಹಾಯಕರುಗಳಿಗೆ ಸರ್ಕಾರದ ಆದೇಶದಂತೆ ವಾರದ ರಜೆ ಒದಗಿಸಬೇಕಿರುತ್ತದೆ. ಹಾಗೂ ಕರ್ನಾಟಕ ಪೌರನಿಗಮಗಳ ಅಧಿನಿಯಮದಡಿ ಸೆಕ್ಷನ್ನ್ವಯ, ನಗರದ ಎಲ್ಲಾ ವಾರ್ಡ್ಗಳಲ್ಲಿ ಭಾನುವಾರ ಹೊರತುಪಡಿಸಿ ಸೋಮವಾರದಿಂದ ಶನಿವಾರದವರೆಗೆ ಮನೆ ಮನೆಗಳಿಂದ ವಿಂಗಡಿಸಿದ ತ್ಯಾಜ್ಯ ಸಂಗ್ರಹಣೆಯನ್ನು ನಿರ್ವಹಿಸಲಾಗುವುದು.
ಆದ್ದರಿಂದ ಸಾರ್ವಜನಿಕರು ತಮ್ಮ ಮನೆಗಳಲ್ಲಿ ಉತ್ಪತ್ತಿಯಾದ ತ್ಯಾಜ್ಯವನ್ನು ರಸ್ತೆ ಚರಂಡಿ, ಖಾಲಿ ನಿವೇಶನಗಳಲ್ಲಿ ಎಸೆಯದೇ ಮೂಲದಲ್ಲಿಯೇ ಹಸಿಕಸ ಒಣಕಸ, ನೈರ್ಮಲ್ಯ ಕಸಗಳೆಂದು ಪ್ರತ್ಯೇಕವಾಗಿ ವಿಂಗಡಿಸಿ ಮನೆ ಬಾಗಿಲಿಗೆ ಬರುವ ತ್ಯಾಜ್ಯ ಸಂಗ್ರಹಣಾ ವಾಹನಗಳಿಗೆ ನೀಡಬೇಕು.
ಈಗಾಗಲೇ ಮಹಿಳಾ ಸ್ವ-ಸಹಾಯ ಗುಂಪುಗಳ ಸದಸ್ಯರುಗಳನ್ನು ತ್ಯಾಜ್ಯ ಸಂಗ್ರಹಣಾ ವಾಹನಗಳೊಂದಿಗೆ ಸಮುದಾಯ ಸಂಚಾಲಕರೆಂದು ನಿಯೋಜಿಸಿ ತ್ಯಾಜ್ಯ ವಿಂಗ ಡಣೆ ಮಾಡದ ಹಾಗೂ ತ್ಯಾಜ್ಯ ಸಂಗ್ರಹಣಾ ವಾಹನಗಳಿಗೆ ತ್ಯಾಜ್ಯ ನೀಡದೇ ಇರುವಂತಹ ಉಲ್ಲಂಘನೆದಾರರುಗಳನ್ನು ಪತ್ತೆ ಮಾಡಿ ದಂಡ ವಿಧಿಸುವ ಪ್ರಕ್ರಿಯೆ ಆರಂಭಿ ಸಲಾಗಿದ್ದು, ಅಂತಹ ಪ್ರಕರಣಗಳು ಕಂಡುಬಂದಲ್ಲಿ ತ್ಯಾಜ್ಯ ವಿಂಗಡಿಸದ/ ಆಟೋ ಟಿಪ್ಪರ್ಗಳಿಗೆ ತ್ಯಾಜ್ಯ ನೀಡದ ಮನೆಗಳ ಮಾಲೀಕರುಗಳಿಗೆ ಕರ್ನಾಟಕ ಮಹಾನಗರ ಪಾಲಿಕೆಗಳ ಘನತ್ಯಾಜ್ಯ ನಿರ್ವಹಣೆ ಉಪ ವಿಧಿಗಳುರಲ್ಲಿ ನಿಗದಿಪಡಿಸಿದಂತೆ ರೂ. 100 ರಿಂದ ರೂ 1000 ಗಳವರೆಗೆ ದಂಡ ವಿಧಿಸಲಾಗುವುದು.
Read also : ಕ್ರೀಡಾಪಟುಗಳ ಶೈಕ್ಷಣಿಕ ಶುಲ್ಕ ಮರುಪಾವತಿಗಾಗಿ ಅರ್ಜಿ ಆಹ್ವಾನ
ಬೀದಿಬದಿ ವ್ಯಾಪಾರಿಗಳು ತಮ್ಮ ಉದ್ದಿಮೆಯ ಸುತ್ತಮುತ್ತ 100 ಅಡಿವರೆಗಿನ ಜಾಗದಲ್ಲಿ ಗುಟ್ಕಾ, ಟೀ ಕಪ್, ಸಿಗರೇಟ್ ಬೀಡಿ ತುಣುಕಗಳು ಬೀಳದಂತೆ 75 ಲೀ. ಸಾಮಥ್ರ್ಯದ ಕಸದ ಡಬ್ಬಿಗಳನ್ನು (ಲಿಟ್ಟರ್ ಬಿನ್) ಮತ್ತು ಸೂಚನಾ ಫಲಕಗಳನ್ನು ಅಳವಡಿಸಿ ಕ್ರಮವಹಿಸುವುದು, ತಪ್ಪಿದಲ್ಲಿ ಉದ್ದಿಮೆದಾರರುಗಳಿಗೆ ರೂ. 500 ರಿಂದ ರೂ. 1000 ಗಳವರೆಗೆ ದಂಡ ವಿಧಿಸಲಾಗುವುದು.
ಚಹಾ, ಕಾಫಿ ವ್ಯಾಪಾರಿಗಳು ಪೇಪರ್, ಪ್ರಾಸ್ಟಿಕ್ ಕಪ್ ಬದಲಾಗಿ ಮರುಬಳಸುವ ಸ್ಟೀಲ್, ಗಾಜಿನ ಕಪ್ಗಳನ್ನು ಉಪಯೋಗಿಸುವುದು.
ನಗರದಲ್ಲಿ ಮನೆ ನಿರ್ಮಾಣ ಕೆಡಹುವಿಕೆಯಿಂದ ಉತ್ಪತ್ತಿಯಾಗುವ ಕಟ್ಟಡ ತ್ಯಾಜ್ಯಗಳನ್ನು ಸಂಗ್ರಹಿಸುವ ಸಲುವಾಗಿ ನಗರದ ವಾರ್ಡ್- 02 ರ ಶಿವನಗರದ ಎಸ್ ಟಿ ಪಿ ಪಕ್ಕದ ತಗ್ಗು ಪ್ರದೇಶ ಮತ್ತು ವಾರ್ಡ್-31 ರ ರಾಮನಗರದ ರುದ್ರಭೂಮಿ (ಗಾಂಧಿ ಭವನ ಹಿಂಭಾಗು ಪಕ್ಕದ ತಗ್ಗು ಪ್ರದೇಶಗಳನ್ನು ಗುರುತಿಸಲಾಗಿದ್ದು ಮನೆ ಕೆಡುಹುವಿಕೆ. ನಿರ್ಮಾಣ, ನವೀಕರಣದಿಂದ ಉತ್ಪತ್ತಿಯಾಗುವ ಸಿ & ಡಿ ತ್ಯಾಜ್ಯಗಳನ್ನು ನಿಗದಿಪಡಿಸಿದ ಸ್ಥಳದಲ್ಲಿ ಮಾತ್ರವೇ ವಿಲೇಪಡಿಸಬೇಕೆಂದು ಪಾಲಿಕೆ ಆಯುಕ್ತರಾದ ರೇಣುಕಾ ತಿಳಿಸಿದ್ದಾರೆ.
