Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ಆರೋಗ್ಯ > ಮಲಬದ್ಧತೆ(constipation) | ಆಯುರ್ವೇದದಲ್ಲಿದೆ ಸೂಕ್ತ ಚಿಕಿತ್ಸೆ ಮತ್ತು ಪರಿಹಾರ : ಡಾ.ಬಿ.ಶಿವಕುಮಾರ್
ಆರೋಗ್ಯ

ಮಲಬದ್ಧತೆ(constipation) | ಆಯುರ್ವೇದದಲ್ಲಿದೆ ಸೂಕ್ತ ಚಿಕಿತ್ಸೆ ಮತ್ತು ಪರಿಹಾರ : ಡಾ.ಬಿ.ಶಿವಕುಮಾರ್

Dinamaana Kannada News
Last updated: January 17, 2026 5:21 am
Dinamaana Kannada News
Share
Davanagaere
SHARE

ಮಲಬದ್ಧತೆ ಅಥವಾ constipation ಎಂಬುದು ಸಾಮಾನ್ಯವಾಗಿ ಕಂಡುಬರುವ ಒಂದು ಮಲದ್ವಾರದ ರೋಗವಾಗಿದ್ದು, ಆಯುರ್ವೇದದಲ್ಲಿ ಇದರ ನಿರ್ವಹಣೆಗೆ ಹಲವು ವಿಧದ ಮಾರ್ಗಗಳನ್ನು ಸೂಚಿಸಲಾಗಿದೆ.

ಮಲಬದ್ಧತೆ ಗುದ  ರೋಗದ ಮುಖ್ಯ ಖಾಯಿಲೆ  ಆಗಿದ್ದು ಇದನ್ನು ತಾತ್ಸಾರ ಮಾಡುವುದು ಅತ್ಯಂತ ಅಪಾಯಕಾರಿಯಾಗಬಲ್ಲದು .

ಮಲಬದ್ಧತೆ ಮತ್ತು ಆಯುರ್ವೇದ ಚಿಕಿತ್ಸೆ ಮಲಬದ್ಧತೆ (Constipation) ಆಯುರ್ವೇದದಲ್ಲಿ “ಕೋಷ್ಟಬಂಧ” ಅಥವಾ “ವಿಬಂಧ” ಎಂದು ಕರೆಯಲಾಗುತ್ತದೆ.

ಮಲವಿಸರ್ಜನೆಗೆ ತೊಂದರೆಯಾಗುವುದು ಕರುಳಿನ ಚಲನೆಗಳು (ವಾರಕ್ಕೆ ಮೂರು ಬಾರಿಗಿಂತ ಕಡಿಮೆ )ಮತ್ತು ಮಲವು ಗಟ್ಟಿಯಾಗಿ ಒಣಗಿದ್ದು ಹಾದು ಹೋಗಲು ಕಷ್ಟವಾಗುವುದು ಮುಖ್ಯ ಲಕ್ಷಣಗಳಾಗಿವೆ.

ಇದು ಮುಖ್ಯವಾಗಿ ವಾತ ದೋಷದ ಹೆಚ್ಚಳ, ತಪ್ಪಾದ ಆಹಾರ-ವಿಹಾರ, ಕಡಿಮೆ ನೀರು ಸೇವನೆ ಮತ್ತು ಆಹಾರದಲ್ಲಿ ನಾರಿನ ಕೊರತೆ ಜಡ ಜೀವನ ಶೈಲಿ ಅಥವಾ ಕೆಲವು ಔಷಧಿಗಳ ಅಡ್ಡ ಪರಿಣಾಮಗಳು ಕಾರಣವಾಗಬಹುದು ಕೆಳಗೆ ಆಯುರ್ವೇದದ ಪರಿಣಾಮಕಾರಿ ಚಿಕಿತ್ಸೆಗಳು, ಮನೆಮದ್ದುಗಳ ವಿವರಿಸಲಾಗಿದೆ.

ಮಲಬದ್ಧತೆಯ ಕಾರಣಗಳು(Causative Factors)
•ನೀರು ಕಡಿಮೆ ಕುಡಿಯುವುದು
•ನಾರಿನಾಂಶ(fiber) ಕಡಿಮೆ ಇರುವ ಆಹಾರ
ಸಂಸ್ಕರಿದ ಆಹಾರ ಅತಿಯಾದ ಸೇವನೆ
•ಜಂಕ್ ಫುಡ್, ದೋಸೆ/ಪೂರಿ/ ಪದಾರ್ಥಗಳು
•ಒತ್ತಡ (stress)
• ಕಡಿಮೆ ದೈಹಿಕ ಚಟುವಟಿಕೆ
•ನಿದ್ರೆಯ ಕೊರತೆ
•ಸರಿಯಾದ ಸಮಯಕ್ಕೆ ಮಲವಿಸರ್ಜನೆ ಮಾಡದಿರುವುದು

-ಕಳಪೆ ಶೌಚಾಲಯದ ಅಭ್ಯಾಸಗಳು
-ಥೈರಾಯ್ಡ್ ಸಮಸ್ಯೆ
-ಅನಾರೋಗ್ಯಕರ ಆಹಾರ,
-ತಿಂದ ಆಹಾರದಲ್ಲಿ ನಾರಿನ ಕೊರತೆ
-ಪ್ರತಿದಿನದ  ವ್ಯಾಯಾಮ ಮತ್ತು ಶ್ರಮದ (ಶಾರೀರಿಕ ಚಟುವಟಿಕೆ) ಕೊರತೆ
-ಹೆಚ್ಚಿನ ಒತ್ತಡ ಮತ್ತು ಆತಂಕ
-ದೈಹಿಕ ಚಲನೆಯನ್ನು ನಿಯಂತ್ರಿಸುವ ವಾತ ದೋಷದಲ್ಲಿನ ಅಸಮತೋಲನ
(ಕೆಲ ಒಣಗಿದ, ಫಾಸ್ಟ್ ಫುಡ್‌ಗಳ ಸೇವನೆ )

ಮಲಬದ್ಧತೆ ಲಕ್ಷಣಗಳು
-ಗಟ್ಟಿಯಾದ, ಒಣಗಿರುವ ಮತ್ತು ಹೊರಹಾಕಲು ತೊಂದರೆಕೊಡುವಂತಹ ಮಲ
– ಅಪರೂಪದ ಕರುಳಿನ ಚಲನೆಗಳು, ವಾರಕ್ಕೆ ಮೂರುಹಿಂದಿದೆಯಾದರೆ ಮಲಬದ್ಧತೆ ಎಂದು ಪರಿಗಣಿಸಲಾಗುತ್ತದ
-ಮಲ ವಿಸರ್ಜನೆಯಾಗುವ ಸಮಯದಲ್ಲಿ ತೊಂದರೆ ಅಥವಾ ಆಗಾಗ್ಗೆ ಆಯಾಸಗೊಳಿಸುವಿಕೆ
.-ಹೊಟ್ಟೆ ನೋವು, ಉಬ್ಬುವಿಕೆ, ಬೆನ್ನು ನೋವು ಹಾಗೂ ವಾಯು ಸಮಸ್ಯೆ
– ಸಂಪೂರ್ಣ ಹೊಟ್ಟೆ ಖಾಲಿಯಾಗಿಲ್ಲ ಎನ್ನುವ ಭಾವನೆ ಯಾವುದೋ ರೀತಿಯ ಜೀರ್ಣಕೋಶದ ಅಸ್ವಸ್ಥತೆ -ಒತ್ತಡ

ತಡೆಗಟ್ಟುವ ವಿಧಾನ (Preventive Methods)
-ಆಹಾರದಲ್ಲಿ ಹೆಚ್ಚು ನಾರಿ, ಹಣ್ಣು, ತರಕಾರಿ ಸೇರಿಸಬೇಕು
-ದಿನವಿಡಿ ಸಾಕಷ್ಟು ನೀರು ಕುಡಿಯಬೇಕು
-ನಿಯಮಿತ ವ್ಯಾಯಾಮ ಮತ್ತು -ಪಾದಯಾತ್ರೆಸಮಯಕ್ಕೆ ಆಹಾರ ಸೇವನೆ, ಒತ್ತಡವನ್ನು ನಿಯಂತ್ರಿಸಬೇಕು

ಔಷಧಗಳು: ಕೆಲವು ನೋವು ನಿವಾರಕಗಳು ,ಅಲ್ಯುಮಿನಿಯಂ ಹೊಂದಿರುವ ಖಿನ್ನತೆ ಶಮನಕಾರಿ ಔಷಧಗಳು ಮಲಬದ್ಧತೆಗೆ ಅಡ್ಡ ಪರಿಣಾಮವಾಗಬಹುದು

ಆಯುರ್ವೇದ ಚಿಕಿತ್ಸೆ ಮತ್ತು ಮನೆಮದ್ದುಗಳು 
ಒಂದು ಚಮಚ  ತ್ರಿಫಲ ಪುಡಿಯನ್ನು ಬೆಚ್ಚಗಿನ ನೀರಿನಲ್ಲಿ ರಾತ್ರಿ ಮಲಗುವಾಗ ತೆಗೆದುಕೊಂಡರೆ ಮಲಬದ್ಧತೆ ಕಡಿಮೆ ಯಾಗುತ್ತದೆ. ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ವಾತ-ಪಿತ್ತ ನಿಯಂತ್ರಿತವಾಗುತ್ತದೆ

ಔಡಲಎಣ್ಣೆ (ಎರಂಡ ಎಣ್ಣೆ)
1 ಚಮಚ ಬಿಸಿ ನೀರು/ಬಿಸಿ ಹಾಲಿನಲ್ಲಿ ವಾರಕ್ಕೆ 1–2 ಬಾರಿ ಮಾತ್ರ. ಜೇನು ತುಪ್ಪವು ಮಲಬದ್ಧತೆಗೆ ಅತ್ಯುತ್ತಮ ಔಷದವಾಗಿದೆ ರಾತ್ರಿ ಮಲಗುವ ಮುನ್ನ ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ಬೆರೆಸಿ ಸೇವಿಸುವುದು.

ರಾತ್ರಿ 6-7 ಒಣ ದ್ರಾಕ್ಷಿಯನ್ನು ನೆನೆಸಿ ಮತ್ತು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಮಲಬದ್ಧತೆ ಗುಣವಾಗುವುದು

ಆಹಾರ ಸಲಹೆ (Diet Tips) 
ತಿನ್ನಬೇಕಾದವು

•ಬಿಸಿ ನೀರು
•ಹಣ್ಣುಗಳು: ಬಾಳೆಹಣ್ಣು, ಪಪ್ಪಾಯಿ,
•ತರಕಾರಿಗಳು: ಸೌತೆಕಾಯಿ, ಪಾಲಕ್,ಬಟಾಣಿ
•ದಾಲ್, ಸಾಂಬಾರ್, ರಾಗಿಜ್ಜೊಳ ಕಂಜಿ
•ಗೋಧಿ/ಓಟ್ಸ್/ಮಿಲ್ಲೆಟ್‌ಗಳು
•ಎಳ್ಳೆಣ್ಣೆ ಅಥವಾ ತುಪ್ಪ

ತಿನ್ನಬಾರದು
•ಗಾಢವಾಗಿ ಫ್ರೈಡ್  ಮಾಡಿದ ಆಹಾರ
•ಚೀಸ್,
•ಹೆಚ್ಚು ಕಾಫಿ/ಚಹಾ
•ಮಸಾಲೆ, ಜಂಕ್ ಫುಡ್
•ರಾತ್ರಿ ಹೊತ್ತು ತುಂಬಾ ತಡವಾಗಿ ಊಟ ಮಾಡುವುದು

ಆಯುರ್ವೇದ ದಿನಚರ್ಯೆ / ಯೋಗ
•ಬೆಳಿಗ್ಗೆ 1 ಗ್ಲಾಸ್ ಬೆಚ್ಚಗಿನ ನೀರು + 1 ಚಮಚ ನಿಂಬೆ + 1 ಚಮಚ ತುಪ್ಪ
•20 ನಿಮಿಷ ನಡಿಗೆ
•ಯೋಗ:
•ಪವನಮುಕ್ತಾಸನ
•ವಜ್ರಾಸನ
•ಭುಜಂಗಾಸನ
•ಹೊಟ್ಟೆಯ ಭಾಗಕ್ಕೆ ಸಣ್ಣ ಎಣ್ಣೆ ಮಸಾಜ್ (Abhyanga) — ವಾತ ಶಾಂತಗೊಳಿಸುತ್ತದೆ.

ಮಲಬದ್ಧತೆ ತೀವ್ರವಾಗಿದ್ದರೆ ಅಥವಾ ಸುಧಾರಿಸದಿದ್ದರೆ ಇದು ನಿಮ್ಮ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತಿ ದ್ದರೆ ಕೂಡಲೇ  ವೈದ್ಯರನ್ನು ಸಂಪರ್ಕಿಸಬೇಕು.

Read also : ಆಯುರ್ವೇದ ಮತ್ತು ಶಸ್ತ್ರ ಚಿಕಿತ್ಸೆ : ಡಾ. ಬಿ.ಶಿವಕುಮಾರ

“ಆಯುರ್ವೇದವು ಕೇವಲ ಚಿಕಿತ್ಸೆ ಮಾತ್ರವಲ್ಲ, ಇದು  ಒಂದು  ಮಾದರಿ ಜೀವನ ಪದ್ಧತಿ ಸಾರುವ  ವಿಶೇಷ ಚಿಕಿತ್ಸಾ ವಿಧಾನ ಆಗಿರುವುದರಿಂದ  ಇದನ್ನು ಕೇವಲ ಔಷಧಿ ಗಷ್ಟೇ ಸೀಮಿತ ವಾಗಿಸದೆ  ಸಂಪೂರ್ಣವಾಗಿ  ದಿನಚರಿ ಋತು ಚರಿ ಆಹಾರ  ಆಚರಣೆಗಳನ್ನು ಅರಿತು ಪಾಲಿಸಿದಲ್ಲಿ ಇದರ ಸಂಪೂರ್ಣ ಲಾಭ ಸಿಗುವುದರಲ್ಲಿ ಸಂಶಯವಿಲ್ಲಾ

ಡಾ. ಬಿ. ಶಿವಕುಮಾರ್. ಎಮ್ ಎಸ್ (ಶಲ್ಯ ತಂತ್ರ )
ವೈದ್ಯಾಧಿಕಾರಿಗಳು
ಆಯುಷ್ ಆರೋಗ್ಯ ಮಂದಿರ
ನರಗನಹಳ್ಳಿ
ದಾವಣಗೆರೆ ತಾ ಮತ್ತು ಜಿಲ್ಲೆ

TAGGED:(constipation)Davanagere Newsdinamaana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂಮಲಬದ್ಧತೆ
Share This Article
Twitter Email Copy Link Print
Previous Article Power outage ಬಿ.ಟಿ. ಲೇಔಟ್, ಗುಜರಿ ಲೈನ್ ಸೇರಿದಂತೆ ವಿವಿಧೆಡೆ ಜ.17 ರಂದು ಬೆಳಿಗ್ಗೆ10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ
Next Article Davanagere ದಾವಣಗೆರೆ ದಕ್ಷಿಣ ಉಪ ಚುನಾವಣೆಗೆ ಸಿದ್ದತೆ: ಆಕ್ಷೇಪಣೆಗಳನ್ನು ನಿಗಧಿತ ಅವಧಿಯಲ್ಲಿ ಸಲ್ಲಿಸಲು ಸಲಹೆ
Leave a comment

Leave a Reply Cancel reply

You must be logged in to post a comment.

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

Davangere school news | ಮಳೆಗೆ ಉದುರಿದ ಸರ್ಕಾರಿ ಶಾಲೆ ಹಂಚುಗಳು : ಪೋಷಕರಲ್ಲಿ ಆತಂಕ  

ದಾವಣಗೆರೆ (Davangere):  ದಾವಣಗೆರೆ ತಾಲ್ಲೂಕಿನ ದೊಡ್ಡ ಬೂದಿಹಾಳ್ ಗ್ರಾಮದಲ್ಲಿ ಮಳೆಗೆ ಸರ್ಕಾರಿ ಶಾಲೆಯ ಹಂಚುಗಳು ಉದುರಿ ಬಿದಿದ್ದು, ಮಕ್ಕಳ ಪೋಷಕರಲ್ಲಿ…

By Dinamaana Kannada News

ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಸ್ಪರ್ದಾತ್ಮಕ ಧಾರಣೆ : ಸ್ಪರ್ಧಾತ್ಮಕ ಬೆಲೆಗಳನ್ನು ಪಡೆಯಲು ಡಿಸಿ ಸೂಚನೆ

ದಾವಣಗೆರೆ :  ಪ್ರಸ್ತುತ ಸುಗ್ಗಿಯ ಕಾಲ ಪ್ರಾರಂಭವಾಗಿದ್ದು, ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಎಲ್ಲಾ ಅಧಿಸೂಚಿತ ಕೃಷಿ ಹುಟ್ಟುವಳಿಗಳನ್ನು…

By Dinamaana Kannada News

Davanagere | ನಗರ ಸಚ್ಚತೆಗೆ ಸಹಕರಿಸಿ, ಉಲ್ಲಂಘನೆಯಾದಲ್ಲಿ ದಂಡ ಪಾವತಿಸಿ : ಡಿಸಿ

ದಾವಣಗೆರೆ (Davanagere): ಸಾರ್ವಜನಿಕರು, ಬೀದಿ ಬದಿ ವ್ಯಾಪಾರಿಗಳು, ಉದ್ಯಮಿದಾರರು ತ್ಯಾಜ್ಯ ವಿಂಗಡಿಸದೇ, ತ್ಯಾಜ್ಯ ಎಸೆಯುತ್ತಿದ್ದಲ್ಲಿ ಅಂತಹ ಪ್ರಕರಣಗಳ ಬಗ್ಗೆ ಮೇಲಾಧಿಕಾರಿಗಳಿಗೆ…

By Dinamaana Kannada News

You Might Also Like

Political analysis
ರಾಜಕೀಯ

Political analysis|ಡೋಂಟ್ ವರಿ ಕಮ್ ಟು ಡೆಲ್ಲಿ

By Dinamaana Kannada News
Davanagere
ತಾಜಾ ಸುದ್ದಿ

ಓಪಿಎಸ್ ಜಾರಿಗಾಗಿ ಯಾವುದೇ ತೆರನಾದ ಹೋರಾಟಕ್ಕೂ ಸಿದ್ಧ : ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ

By Dinamaana Kannada News
Davanagere
ತಾಜಾ ಸುದ್ದಿ

ಆನಗೋಡು ಮೃಗಾಲಯದಲ್ಲಿ ಚುಕ್ಕೆ ಜಿಂಕೆಗಳ ಸಾವು| ಸೂಕ್ತ ಮುನ್ನಚ್ಚರಿಕೆ ಕ್ರಮ : ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷವರ್ಧನ​

By Dinamaana Kannada News
Davanagere
Blog

ಮಕ್ಕಳಲ್ಲಿ ಕನ್ನಡ ಸಾಹಿತ್ಯ ಓದುವ ಅಭಿರುಚಿ ಬೆಳೆಸಿ : ಶಾಸಕ ಕೆ.ಎಸ್.ಬಸವಂತಪ್ಪ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?