ದಾವಣಗೆರೆ : ದೂರದರ್ಶನ ಬೆಂಗಳೂರು ಚಂದನ ವಾಹಿನಿಯಲ್ಲಿ ಪ್ರತಿನಿತ್ಯ ಪ್ರಸಾರವಾಗುತ್ತಿರುವ ಜನಪ್ರಿಯ ಹಾಗೂ ಉಪಯುಕ್ತ ಕಾರ್ಯಕ್ರಮವಾದ ‘ಸಂಪೂರ್ಣ ಸ್ವಾಸ್ಥ್ಯಕ್ಕಾಗಿ ಯೋಗ’ ಸಂಚಿಕೆಯು ಇದೇ ಬರುವ ಫೆ. 2 ರಿಂದ (02-02-2026) ಪ್ರತಿ ದಿನ ಬೆಳಿಗ್ಗೆ 6-45 ರಿಂದ 7-00 ಗಂಟೆಯ ವರೆಗೆ ಸಂಚಿಕೆಗಳು ಪ್ರಸಾರವಾಗಲಿವೆ.
ಈ ವಿಶೇಷ ಸಂಚಿಕೆಗಳನ್ನು ನಗರದ ಆದರ್ಶಯೋಗ ಪ್ರತಿಷ್ಠಾನ (ರಿ), ದಾವಣಗೆರೆ ಶ್ರೀ ಮಹಮ್ಮಾಯಿ ವಿಶ್ವಯೋಗ ಮಂದಿರ ಹಾಗೂ ಯೋಗ ಚಿಕಿತ್ಸಾ ಕೇಂದ್ರದ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕøತ ಹಿರಿಯ ಯೋಗ ತಜ್ಞ ಡಾ|| ಯೋಗಾಚಾರ್ಯ ಶ್ರೀ ರಾಘವೇಂದ್ರ ಗುರೂಜಿ ನಡೆಸಿಕೊಡಲಿದ್ದು, ಯೋಗ ಚಿಕಿತ್ಸಾ ಪ್ರದರ್ಶನದಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದ ಎಂ.ಎಸ್ಸಿ ಇನ್ ಯೋಗಿಕ್ ಸೈನ್ಸ್ ವಿಭಾಗದ ಯೋಗ ವಿದ್ಯಾರ್ಥಿಗಳಾದ ಸುರೇಖಾ ಎಫ್. ಹುಡೇದ, ದೀಪಾ ಸಿ. ಕಿತ್ತಲಿ, ದೀಪಾ ಟಿ. ಹೆಗ್ರಿ, ಧರೇಶ್ ಜಿ. ಹಳೇಮನಿ, ವಮ್ಮಾರಿ ಪರಶುರಾಮ, ಮಹಂತೇಶ್ ಎಸ್. ಇವರುಗಳು ಭಾಗವಹಿಸಿರುತ್ತಾರೆ.
ಈ ಸಂಚಿಕೆಗಳಲ್ಲಿ ಬೆನ್ನುನೋವಿನ ಸಮಸ್ಯೆ, ದೀರ್ಘಕಾಲ ಕಾಡುವ ಮಂಡಿನೋವು, ಸಕ್ಕರೆಕಾಯಿಲೆ ಪರಿಹಾರ, ವೆರಿಕೋಸ್ ವೈನ್ಸ್ ಸಮಸ್ಯೆ, ಥೈರಾಯಿಡ್ ಸಮಸ್ಯೆ, ಮೈಗ್ರೇನ್-ತಲೆನೋವು, ಕುತ್ತಿಗೆ ಮತ್ತು ಕೈ ಭುಜಗಳ ನೋವು ಹೀಗೆ ದಿನನಿತ್ಯ ಅನುಭವಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಯೋಗ ಚಿಕಿತ್ಸೆಯ ಮೂಲಕ ಹೇಗೆ ಗುಣಪಡಿಸಿಕೊಳ್ಳಬಹುದು ಎನ್ನುವ ವಿಷಯಗಳನ್ನು ಸರಳವಾಗಿ ತಿಳಿಸಿರುತ್ತಾರೆ.
ದೂರದರ್ಶನದ ಉಪ ಮಹಾನಿರ್ದೇಶಕ ಭಾಗ್ಯವಾನ್ ಮತ್ತು ಕಾರ್ಯಕ್ರಮದ ವರಿಷ್ಠ ನಿರ್ವಾಹಕ ಹೆಚ್.ಎನ್. ಆರತಿ ಮಾರ್ಗದರ್ಶನದಲ್ಲಿ ಯೋಗ ವಿಭಾಗದ ಮುಖ್ಯಸ್ಥ ಎಮ್. ಗಿರೀಶ್ ನಿರ್ಮಾಣ ಮಾಡಿರುತ್ತಾರೆ.
Read also : Crime news|ಮೂರು ದಶಕಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
ಎಂ.ಜಿ. ಗೋವಿಂದರಾಜು ಮತ್ತು ಎಸ್. ಲೋಕಾಭಿರಾಮನ್ ಇವರ ಛಾಯಾ ಗ್ರಹಣವಿದ್ದು, ಶ್ರೀಕಾಂತ್ರವರು ಸಂಕಲನ ಕಾರ್ಯ ಮಾಡಿದ್ದು, ವಿಜಯ ಭಾಸ್ಕರ್ ಹಾಗೂ ವಸಂತ್ ಕುಮಾರ್ ಶೆಟ್ಟರ್ ಧ್ವನಿಗ್ರಹಣ ಮಾಡಿರುತ್ತಾರೆ.
ಯೂಟ್ಯೂಬ್, ಇನ್ಸ್ಟ್ರಾಗ್ರಾಮ್, ಫೇಸ್ಬುಕ್ಗಳಲ್ಲಿ ವೀಕ್ಷಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ: 94484-22829 ಸಂಪರ್ಕಿಸಬಹುದು.
