ಜಗಳೂರು: ಕೇಂದ್ರ ಸರ್ಕಾರವು ಬಡ ಕೂಲಿ ಕಾರ್ಮಿಕರ ತತ್ತಿನ ಚೀಲವನ್ನು ಕಸಿದುಕೊಳ್ಳುವಂತಹ ಕೆಲಸ ಮಾಡುತ್ತಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.
ಬುಧವಾರ ಪಟ್ಟಣದ ಶಾಸಕರ ಜನ ಸಂಪರ್ಕ ಕಚೇರಿ ಆವರಣದಲ್ಲಿ ಸಣ್ಣ ನೀರಾವರಿ ಇಲಾಖೆಯ ವತಿಯಿಂದ ಪ.ಜಾತಿ ,ಪ.ಪಂಗಡದ 21 ಜನ ರೈತರಿಗೆ ಉಚಿತವಾಗಿ ಪಂಪ್ , ಮೋಟರ್ ವಿತರಿಸಿ ನಂತರ ಮಾತನಾಡಿದರು.
ಸಣ್ಣ ನೀರಾವರಿ ಇಲಾಖೆ ವತಿಯಿಂದ ಉಚಿತವಾಗಿ ಬೋರ್ವೆಲ್ ಕೊರಸಿ ವಿದ್ಯುತ್ ಸಂಪರ್ಕ ನೀಡುತ್ತಿದ್ದು ಇದರಿಂದ ರೈತರು ಬೆಳೆ ಬೆಳೆದುಕೊಳ್ಳಲು ಸಹಕಾರಿಯಾಗಲಿದೆ ಆದರೆ ಕೇಂದ್ರ ಸರ್ಕಾರ ನರೇಗಾ ಯೋಜನೆಯನ್ನು ಬದಲಾವಣೆ ಮಾಡಿ ಬಡ ಕೂಲಿ ಕಾರ್ಮಿಕರ ತುತ್ತನ್ನು ಕಿತ್ತುಕೊಳ್ಳುವಂತ ಕೆಲಸ ಮಾಡುತ್ತಿದೆ. 2005ರಲ್ಲಿ ನರೇಗ ಯೋಜನೆಯನ್ನು ಜಾರಿಗೆ ತರಲಾಗಿದ್ದು ಮನಮೋಹನ್ ಸಿಂಗ್ ಪ್ರಧಾನಿ ಯಾದ ವೇಳೆ ಕೇಂದ್ರ ಸರ್ಕಾರದಿಂದ 90 ಪರ್ಸೆಂಟ್ ರಾಜ್ಯ ಸರ್ಕಾರದಿಂದ 10% ಈ ಯೋಜನೆಗೆ ನೀಡಲಾಗುತ್ತಿತ್ತು ಆದರೆ ಕೇಂದ್ರ ಸರ್ಕಾರ ಯೋಜನೆಯನ್ನು ಮಾರ್ಪಾಟು ಮಾಡಿ ಕೇಂದ್ರ ಸರ್ಕಾರ 60% ರಾಜ್ಯ ಸರ್ಕಾರ 40% ಎಂದು ರೇಶೂ ಅನ್ನು ಮಾಡಿ ರಾಜ್ಯ ಸರ್ಕಾರಕ್ಕೆ ವರೆ ಮಾಡಿದೆ ಅಲ್ಲದೆ ಕೂಲಿ ಕಾರ್ಮಿಕರ ತುತ್ತಿನ ಚೀಲವನ್ನು ಕಿತ್ತುಕೊಳ್ಳುವಂತ ಕೆಲಸ ಕೇಂದ್ರ ಸರ್ಕಾರ ಮಾಡುತ್ತಿದ್ದು ರಾಜ್ಯದಲ್ಲಿರುವ ಸಂಸದರು ಇದರ ಬಗ್ಗೆ ದ್ವನಿ ಎತ್ತಬೇಕಾಗಿದೆ ಎಂದರು.
ರೈತರ ಬದುಕು ಹಸನಗಬೇಕು ಎಂಬ ಉದ್ದೇಶದಿಂದ ಕಾಂಗ್ರೇಸ್ ಸರಕಾರ ಚುನಾವಣೆಯ ಮುಂಚೆ ನೀಡಿದ ಭರವಸೆಯನ್ನು ಈಡೇರಿಸುತ್ತಿದೆ ಎಂದರು.
ಸೌಲಭ್ಯ ಪಡೆದವರು ಸಾಮಾಜಿಕ , ರಾಜಕೀಯ ,ಆರ್ಥಿಕವಾಗಿ ಅಭಿವೃದ್ದಿ ಯಾಗಬೇಕಾಗಿದೆ ಎಂದರು.
ತೊರೆಸಲು ಭಾಗದಲ್ಲಿ ಹದಿನಾರು ಕೋಟಿ 30 ಲಕ್ಷ ರೂಪಾಯಿ ಮತ್ತು ಸೊಕ್ಕೆ ಭಾಗದಲ್ಲಿ 15 ಕೋಟಿ 34 ಲಕ್ಷ ವೆಚ್ಚದಲ್ಲಿ ಕಾಮಗಾರಿಗೆ ಭೂಮಿ ಪೂಜೆಯನ್ನು ನೇರವೇರಿಸಲಾಗಿದೆ ಗುರುವಾರ ತಾಲೂಕಿನ ಬಿದರಕೆರೆ ಗ್ರಾಮದಲ್ಲಿ 2 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳಿಗೆ ಭೂಮಿಪೂಜೆಯನ್ನು ನೆರೆವೇರಿಸಲಾಗುವುದು ಎಂದರು.
ತಾಲೂಕಿನ ಬಿಳಿಚೊಡು ಸೇತುವೆಯನ್ನು ಮರು ನಿರ್ಮಾಣ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದ್ದು ಟೆಂಡರ್ ಅಂತದಲ್ಲಿದೆ ಪಟ್ಟಣದಲ್ಲಿರುವ ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸಿ ಒಳಂಗಣ ಕ್ರೀಡಾಂಗಣವನ್ನು ಮಾಡಿ ಕ್ರೀಡೆಗಳಿಗೆ ಉತ್ತೇಜನ ನೀಡಲಾಗುವುದು ಎಂದು ಹೇಳಿದರು.
ಜಿ.ಪಂ. ಮಾಜಿ ಸದಸ್ಯ ಕೆ.ಪಿ. ಪಾಲಯ್ಯ ಮಾತನಾಡಿ , ಕ್ಷೇತ್ರದಲ್ಲಿ ಜನಪರ ಕೆಲಸ ಕಾರ್ಯಗಳು ನಡೆಯುತ್ತಿದ್ದು ವಿರೋಧ ಪಕ್ಷದವರು ಏನು ಕೆಲಸವಾಗಿಲ್ಲ ಎನ್ನುತ್ತಾರೆ ಈ ಸೌಲಭ್ಯಗಳ ಬಗ್ಗೆ ವಿರೊದ ಪಕ್ಷದವರು ಗಮನಿಸಬೇಕು. ಶಾಸಕರು ಮತ್ತು ಮಾಜಿ ಶಾಸಕರುಗಳ ಸಹಕಾರ ದಿಂದ ಕ್ಷೇತ್ರದ 57 ಕೆರೆಗಳಿಗೆ ನೀರು ಬಂದಿದ್ದು ಅಂರ್ತಜಲ ಹಚ್ಚಳವಾಗಿದೆ ಎಂದರು.
ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆಯ ಅಭಿಯಂತರ ರಜತ್, ಕಾಂಗ್ರೆಸಿ ಘಟಕದ ತಾಲೂಕು ಅಧ್ಯಕ್ಷ ಮಹೇಶ್ವರಪ್ಪ, ಮುಖಂಡರುಗಳಾದ ಮಾಳಮ್ಮನಹಳ್ಳಿ ವೆಂಕಟೇಶ್ ,ಪಲ್ಲಾಗಟ್ಟೆ ಶೇಖರಪ್ಪ, ಗೌಡ ಅಂಗ ರಕ್ಷಕ ಸೋಮಣ್ಣ ಹಾಜರಿದ್ದರು.
ಹೊಟೇಲ್, ಬಸ್ ನಿಲ್ದಾಣ ,ಬಸ್ ಗಳಲ್ಲಿ, ಆಟೋಗಳಲ್ಲಿ ಸಾರ್ವಜನಿಕರು ಶಾಸಕರು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಎಂದು ಸಾರ್ವಜನಿಕರ ಪ್ರಶಂಸ್ಥೆ ವ್ಯಕ್ತಪಡಿಸುತ್ತಿದ್ದಾರೆ. ಒಬ್ಬ ಶಾಸಕನಿಗೆ ಇದಕ್ಕಿಂತ ಮಿಗಿಲಾಗಿ ಮತ್ತೆ ಏನು ಬೇಕಾಗಿದೆ.ಶಾಸಕ ಬಿ. ದೇವೇಂದ್ರಪ್ಪ
