ದಾವಣಗೆರೆ ಫೆ.19 : ಜಿಲ್ಲೆಯ ಎಲ್ಲಾ ಕೊಳವೆ ಬಾವಿ ಕೊರೆಯುವ ಎಲ್ಲಾ ಬೋರ್ವೆಲ್ ಮಾಲೀಕರು ಕೊಳವೆಬಾವಿಗಳನ್ನು ಕೊರೆಸುವಾಗ ನಿಬಂಧನೆಗಳನ್ನು ಪಾಲಿಸುವಂತೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಸೂಚಿಸಿದ್ದಾರೆ.
ಕೊಳವೆ ಬಾವಿ ಕೊರೆಯುವ ಎಲ್ಲಾ ಬೋರ್ವೆಲ್ ಮಾಲೀಕರು ಕಡ್ಡಾಯವಾಗಿ 7ಎ ಪ್ರಮಾಣ ಪತ್ರವನ್ನು ಪಡೆಯಬೇಕು. ಕೊಳವೆ ಬಾವಿ ಕೊರೆಯುವಾಗ ರೈತರಿಗೆ ತೊಂದರೆಯಾಗದಂತೆ ಸರ್ಕಾರದ ಏಕರೂಪ ದರಪಟ್ಟಿಯಲ್ಲಿ ನಿಗದಿಪಡಿಸಿರುವ ದರಗಳಂತೆ ನಿರ್ವಹಿಸುವುದು. ಇದಕ್ಕಿಂತ ಹೆಚ್ಚು ಮೊತ್ತವನ್ನು ರೈತರಿಂದ ವಸೂಲಿ ಮಾಡಬಾರದು.
ಕೊಳವೆ ಬಾವಿಗಳನ್ನು ಕೊರೆದ ನಂತರ ವಿಫಲವಾದ ಕೊಳವೆ ಬಾವಿಗಳನ್ನು ಸುರಕ್ಷಿತವಾಗಿ 5.0ಮೀ ಕೇಸಿಂಗ್ ಹಾಕಿ ಅದರ ಮುಚ್ಚಳ ಮುಚ್ಚವಂತೆ ಬೋರ್ವೆಲ್ ಮಾಲೀಕರು ಕ್ರಮ ವಹಿಸುವುದು. 7ಎ ಪ್ರಮಾಣ ಪತ್ರವನ್ನು ಪಡೆಯದ ಬೋರ್ವೆಲ್ ಮಾಲೀಕರ ಮೇಲೆ ಪೆÇಲೀಸ್ ಮತ್ತು ಆರ್.ಟಿ.ಓ ಅಧಿಕಾರಿಗಳು ಕ್ರಮ ಕೈಗೊಳ್ಳುವುದು. ಸರ್ಕಾರಿ ಕಾಮಗಾರಿಗಳಿಗೆ ಕಡ್ಡಾಯವಾಗಿ 7ಎ ಹೊಂದಿರುವ ಬೋರ್ವೆಲ್ ಮಾಲೀಕರಿಂದ ಮಾತ್ರ ಕಾಮಗಾರಿ ನಿರ್ವಹಿಸುವುದು. ಸರ್ಕಾರಿ ಕಾಮಗಾರಿಗಳಿಗೆ ಟಾಸ್ಕ್ಪೆÇೀರ್ಸ ಸಮಿತಿಯಲ್ಲಿ ಅನುಮೋದನೆಯಾದ ಕಾಮಗಾರಿಗಳನ್ನು ಮಾತ್ರ ನಿರ್ವಹಿಸಬೇಕೆಂದು ತಿಳಿಸಿದ್ದಾರೆ.
Read also : ಕಾಯಕದಲ್ಲಿ ಶ್ರದ್ಧೆ, ಭಕ್ತಿ, ಗುರು ನಿಷ್ಠೆ ಇದ್ದರೆ ಪರಮಾತ್ಮನು ಆಶೀರ್ವಾದ ಮಾಡುತ್ತಾನೆ : ಕಣ್ವಕುಪ್ಪೆ ಶ್ರೀ
