ಜಗಳೂರು : ಕಡುಲೋಭವು ಮನುಷ್ಯನ ಒಳಗಿನ ದುರ್ಗುಣಗಳನ್ನು ಹೊರಗೆ ತಂದರೆ ಲೋಭವು ವ್ಯಕ್ತಿಯ ನೈತಿಕತೆಯನ್ನು ಹಾಳುಮಾಡಿ, ಸಮಾಜದಲ್ಲಿ ಭ್ರಷ್ಟಾಚಾರ, ಅನ್ಯಾಯ ಮತ್ತು ಮೋಸದಂತಹ ದುಷ್ಪ್ರವೃತ್ತಿಗಳಿಗೆ ಕಾರಣವಾಗುತ್ತದೆ ಎಂದು ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕಾಡರ ಕೊಪ್ಪದ ಪೂರ್ಣ ನಂದಾಶ್ರಮದ ನ್ಯಾಯ ವೇದಾಂತಚಾರ್ಯರಾದ ದಯಾನಂದ ಸರಸ್ವತಿ ಮಹಾಸ್ವಾಮಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಹಾಲೆಕಲ್ಲು ಗ್ರಾಮದ ಸಿದ್ದಾರೂಢ ಮಠದಲ್ಲಿ 23ನೇ ಸರ್ವ ಶರಣರ ಸಮ್ಮೇಳನದ ದಿವ್ಯಸಾ ನಿದ್ದೆ ವಹಿಸಿ ಆಶೀರ್ವಚನ ನೀಡಿದರು.
ಲೋಭವು ಮನುಷ್ಯನನ್ನು ಇಲ್ಲದ ಕೆಲಸಗಳಿಗೆ ಕೈ ಹಾಕಿದರೆ ಕಡು ಲೋಪವು ಈತನ ಜೀವನವನ್ನೇ ಹಾಳು ಮಾಡುತ್ತವೆ ಯಾವ ವ್ಯಕ್ತಿ ನ್ಯಾಯಪರವಾಗಿ ಧರ್ಮ ಪರವಾಗಿ ಕೆಲಸ ಮಾಡುತ್ತಾನೆಯೋ ಲೋಭವು ಆದರಿಂದ ದೂರವಿರಲಿದೆ ಆದರೆ ಇತ್ತೀಚಿನ ದಿನ ಮಾನಗಳಲ್ಲಿ ನಡೆಯುವಂತಹ ಘಟನೆಗಳನ್ನು ನೋಡಿದರೆ ಕಡೂ ಲೋಹದ ಆರ್ಭಟ ಹೆಚ್ಚಾಗುತ್ತಿದೆ ಇವುಗಳನ್ನು ನಿಯಂತ್ರಿಸಿದಾಗ ಮಾತ್ರ ಸಮಾಜದಲ್ಲಿ ಸರ್ವರು ಹೊಂದಾಣಿಕೆಯಿಂದ ನೆಮ್ಮದಿಯಿಂದ ಜೀವನ ಮಾಡಲು ಸಾಧ್ಯವಾಗಲಿದೆ ಎಂದು ಹೇಳಿದರು.
ಹೆಬ್ಬಾಳು ವಿರಕ್ತ ಮಠ ಮಹಾಂತ ರುದ್ರೇಶ್ವರ ಮಹಾ ಸ್ವಾಮಿಗಳು ಮಾತನಾಡಿ, ಇರುವುದರಲ್ಲಿ ಸಂಪೂರ್ಣ ತೃಪ್ತಿಯನ್ನು ಹೊಂದಬೇಕು ಇಲ್ಲದ ಕಡೆ ಗಮನಹರಿಸಿದಾಗ ಅತೃಪ್ತಿಯೂ ಇನ್ನೊಬ್ಬರ ಹಕ್ಕನ್ನೂ ಕಸಿದುಕೊಳ್ಳುವ ಮನೋಭಾವ ಬೆಳೆಯುವಂತೆ ಮಾಡುತ್ತದೆ ಅನ್ಯಾಯ, ಅಕ್ರಮ ಮಾರ್ಗಹಿಡಿದು ಹಣ, ಅಧಿಕಾರ, ಸ್ಥಾನಮಾನಗಳ ಮೇಲಿನ ಅತಿಯಾದ ಆಸಕ್ತಿ ಬೆಳೆಸಿಕೊಂಡು ಸಮಾಜಕ್ಕೆ ಮಾರಕವಾಗಿ ಬೆಳೆಯುತ್ತಾರೆ. ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬೆಳೆಯಬೇಕಾದರೆ ಮತ್ತೊಬ್ಬರನ್ನು ನೋಡಿ ಅಸೂಯೆ ಪಡಬಾರದು ಅವರಲ್ಲಿರುವ ಸದ್ಗುಣಗಳನ್ನು ಬೆಳೆ ಸಿಕೊಂಡು ಸಮಾಜಮುಖಿ ಕೆಲಸ ಮಾಡಬೇಕು ಎಂದು ಹೇಳಿದರು.
ಇನ್ಸೆಟ್ ಐಎಎಸ್ ಸಂಸ್ಥೆಯ ಸಂಸ್ಥಾಪಕ ವಿನಯ್ ಕುಮಾರ್ ಮಾತನಾಡಿ, ಅತಿಯಾದ ಲಾಭಾಸಕ್ತಿ, ಹಣ,ಸಂಪತ್ತು,ಪದವಿ,ಶಕ್ತಿ ಇತ್ಯಾದಿಗಳ ಮೇಲೆ ಮಿತಿ ಮೀರಿ ಬಯಕೆಯನ್ನು ಹೊಂದುವುದರಿಂದ ಅಗತ್ಯಕ್ಕಿಂತ ಹೆಚ್ಚಾಗಿ ಪಡೆಯಬೇಕೆಂಬ ಹಂಬಲ,ಇತರರ ಹಕ್ಕುಗಳನ್ನು ಕಸಿಯುವಂತ ಕೆಲಸ ಮಾಡುತ್ತಾದೆ. ಇರುವುದರಲ್ಲಿಯೇ ನೆಮ್ಮದಿಯ ಜೀವನವನ್ನು ಕಾಣಬೇಕು ಇತರನ್ನು ನೋಡಿ ಅಸೂಯೆಬ ಪಟ್ಟುಕೊಳ್ಳಬಾರದು ಹಗಲಿರುಳು ಶ್ರಮ ಹಾಕಿದರೆ ಎಲ್ ಸರ್ವವು ದೊರೆಯಲಿದೆ ಅದನ್ನು ಪ್ರತಿಯೊಬ್ಬರ ಮನಗಾಣ ಬೇಕಾಗಿದೆ ಎಂದು ಹೇಳಿದರು.
ಕೆಪಿಸಿಸಿ ಎಸ್ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ .ಕೀರ್ತಿ ಕುಮಾರ್ ಮಾತನಾಡಿ,ಯಾರೇ ಆದರೂ ಹೊಟ್ಟೆ ತುಂಬುವಷ್ಟು ಊಟ ಮಾಡಬೇಕು ಹೆಚ್ಚಾಗಿ ಊಟ ಮಾಡಿದರೆ ಹೊಟ್ಟೆಯಿಂದ ಹೊರ ಬರುತ್ತದೆ ಹಾಗೆಯೇ ಹಣ ಆಸ್ತಿ ಸಂಪಾದನೆಯನ್ನು ನಮಗೆ ಎಷ್ಟು ಬೇಕೋ ಅಷ್ಟನ್ನು ಕ್ರೂಡೀಕರಣ ಮಾಡಿಕೊಂಡು ಉಳಿದಿದ್ದನ್ನು ಗ್ರಾಮಗಳ ಅಭಿವೃದ್ಧಿಗೆ, ಬಡವರಿಗೆ ,ದೀನದಲಿತರಿಗೆ ದಾನ ಮಾಡುವ ಗುಣಗಳನ್ನು ಬೆಳೆಸಿಕೊಳ್ಳಬೇಕಾಗಿದೆ, ಯಾವುದೇ ಆದರೂ ನ್ಯಾಯಸಮ್ಮತವಾಗಿರಬೇಕು ನ್ಯಾಯ ಸಮ್ಮತವಾಗಿ ಇಲ್ಲದಿದ್ದರೆ ಸಮಾಜಕ್ಕೆ ಮಾರಕವಾಗಲಿದೆ ಎಂದರು.
ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಉಪ್ಪಾರಟ್ಟಿ ಸಿದ್ದಾರೂಡ ಮಠದ ಆಶ್ರಮದ ನಾಗೇಶ್ವರನಂದ ಮಹಾಸ್ವಾಮಿಗಳು, ಬಾಗಲಕೋಟೆ ತಾಲೂಕಿನ ತುಳಸಿಗಿರಿ ಪೂರ್ಣ ನಂದಾಶ್ರಮದ ರಮಾನಂದ ಮಹಾಸ್ವಾಮಿಗಳು, ಚಂದ್ರಗಿರಿಯ ಪರಮಹಂಸ ಮುರುಳಿಧರ ಮಹಾಸ್ವಾಮಿಗಳು, ಬೆಂಗಳೂರಿನ ಶಂಕರಾನಂದ ಆಶ್ರಮದ ಮಾತೇ ಅನ್ನಪೂರ್ಣಮ್ಮನವರು ಸೇರಿದಂತೆ ಹಾಲೇಕಲ್ಲು, ಸುತ್ತಮುತ್ತಲಿನ ಗ್ರಾಮಸ್ಥರು ಜನಪ್ರತಿನಿಧಿಗಳು, ಭಕ್ತಾದಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಹಾಲೇಕಲ್ಲು ಬಿಳಿಚೋಡು, ಮುಗ್ಗಿದರಾಗಿಹಳ್ಳಿ ನಾಗೇನಹಳ್ಳಿ, ರಾಮಘಟ್ಟ, ಎಮ್ಮೆ ಹಟ್ಟಿ ಗ್ರಾಮಗಳ ಬಜನತಂಡದವರು ಭಜನೆಯನ್ನು ಮಾಡಿದರು.
ಸಾಮಾಜಿಕ ಅನ್ಯಾಯ ದುರಾಸೆಯಿಂದ ಇತರರ ಹಕ್ಕು ಕಸಿದುಕೊಳ್ಳುವುದು ಧಾರ್ಮಿಕ ಗ್ರಂಥಗಳಲ್ಲಿ ಕಡುಲೋಭವನ್ನು ಪಾಪಗುಣವೆಂದು ಹೇಳಲಾಗಿದೆ. ಭಗವದ್ಗೀತೆಯಲ್ಲಿ ಲೋಭವನ್ನು ಮಾನವನ ಪತನಕ್ಕೆ ಕಾರಣವಾಗುವ ದುರ್ಗುಣಗಳಲ್ಲಿ ಒಂದಾಗಿ ಉಲ್ಲೇಖಿಸಲಾಗಿದೆ.
ಎಂ.ಡಿ. ಕೀರ್ತಿ ಕುಮಾರ್,
ಕೆಪಿಸಿಸಿ ಎಸ್ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ
