ಜಗಳೂರು : ತಾಲ್ಲೂಕಿನ ದೇವಿಕೆರೆ ಬಳಿ ಬೈಕ್ ಮತ್ತು ಆಟೋ ನಡುವೆ ಅಪಘಾತ ನಡೆದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಘಟನೆ ವಿವರ : ಮಂಗಳವಾರ ತಾಲೂಕಿನ ದೇವಿಕೆರೆಗ್ರಾಮದ ಸಮೀಪ ಜರುಗಿದೆ.
ದಾವಣಗೆರೆ ತಾಲ್ಲೂಕು ಮಳಲಕೆರೆ ಗ್ರಾಮದ ನಿವಾಸಿಗಳಾದ ಕುಮಾರಪ್ಪ,ಬಸಮ್ಮ ಎಂಬ ದಂಪತಿಗಳು ಬೈಕ್ ನಲ್ಲಿ ಜಗಳೂರು ತಾಲ್ಲೂಕಿನ ಕಾಮಗೇತನಹಳ್ಳಿ ಗ್ರಾಮದ ಮನೆದೇವ್ರ ದೇವಸ್ಥಾನಕ್ಕೆ ಆಗಮಿಸುತ್ತಿದ್ದ ವೇಳೆ ಮಂಗಳವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ದೇವಿಕೆರೆ ಬಳಿ ಪ್ರಯಾಣಿಕರ ಆಟೋ ಬೈಕ್ ಗೆ ಡಿಕ್ಕಿ ಹೊಡೆದು ಅಪಘಾತವಾಗಿದೆ.
ಗಾಯಾಳುಗಳನ್ನು ದಾವಣಗೆರೆ ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಮಧ್ಯಾಹ್ಞ ಮಂಗಳವಾರ 3.30 ಗಂಟೆ ಸುಮಾರಿಗೆ ಕುಮಾರಪ್ಪ (54) ವರ್ಷ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಕೆಲಸ ಖಾಯಮಾತಿಗೆ ಒತ್ತಾಯಿಸಿ ಪರವಾನಗಿ ಭೂಮಾಪಕರಿಂದ ಅನಿರ್ದಿಷ್ಟಾವಧಿ ಮುಷ್ಕರ
ಪತ್ನಿ ಗಾಯಾಳು ಬಸಮ್ಮ (45)ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಳಿಚೋಡು ಪೋಲೀಸ್ ಠಾಣೆಯಲ್ಲಿ ಪ್ರಕಣರ ದಾಖಲಾಗಿದೆ .
