ಜಗಳೂರು : ಪಟ್ಟಣ ಪಂಚಾಯಿತಿಯಿಂದ ಬೀದಿ ನಾಯಿಗಳಿಗೆ ಆಶ್ರಯ ತಾಣವನ್ನು ನಿರ್ಮಿಸಿ ಸಕಲ ಸೌಲಭ್ಯಗಳನ್ನು ನೀಡಲಾಗುವುದು ಎಂದು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸಿ.ಲೋಕ್ಯಾ ನಾಯ್ಕ ತಿಳಿಸಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿದಲ್ಲಿರುವ ಕಟ್ಟಡದಲ್ಲಿ ಪಟ್ಟಣ ಪಂಚಾಯತಿ ವತಿಯಿಂದ ತೆರೆಯಲಾಗಿರುವ ಬೀದಿ ನಾಯಿಗಳಿಗೆ ಆಶ್ರಯ ತಾಣದ ಕಾಮಗಾರಿಯನ್ನು ಪರಿಶೀಲನೆ ನಡೆಸಿ ನಂತರ ಮಾತನಾಡಿದರು.
ಸುಪ್ರೀಂಕೋರ್ಟ್ ಆದೇಶದಂತೆ ಪ್ರೌಢ ಪೌರಾಡಳಿತ ಇಲಾಖೆಯ ಸೂಚನೆಯಂತೆ ಪಟ್ಟಣದ ವ್ಯಾಪ್ತಿಯಲ್ಲಿ ವಾಸವಾಗಿರುವ ಬೀದಿ ನಾಯಿಗಳನ್ನು ಆಶ್ರಯ ತಾಣಗಳಿಗೆ ಬಿಡುವ ಸಲುವಾಗಿ ಗೋಧಾಮಿನಲ್ಲಿ ಕಾಮಗಾರಿ ನಡೆಯುತ್ತಿದ್ದು ಅವುಗಳ ವಾಸ ಮಾಡಲಿಕ್ಕೆ ಅನುಕೂಲವಾಗುವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗುವುದು. ಅವುಗಳು ಮಲ ಮೂತ್ರ ವಿಸರ್ಜನೆ ಮಾಡಿದ ತಕ್ಷಣ ಬೇರಡೆಗೆ ಹೋಗುವ ವ್ಯೆವಸ್ಥೆ ಮತ್ತು ಊಟದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.
Read also : ಭಾರತ ಜನಗಣತಿ-2027 ಸಮೀಕ್ಷೆಗೆ ಸಕಲ ಸಿದ್ಧತೆಗೆ ಕ್ರಮವಹಿಸಿ:ಗಂಗಾಧರ ಸ್ವಾಮಿ
ಪ್ರತ್ಯೇಕವಾಗಿ ಮೆಸ್ಸುಗಳನ್ನು ಅಳವಡಿಸಿದ್ದು ಒಂದಕ್ಕೊಂದು ಗಲಾಟೆ ಮಾಡಿಕೊಳ್ಳದ ಹಾಗೆ ನಿಗಾವಹಿಸುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಮತ್ತು ಇವುಗಳಿಗೆ ನೀರು ನೆರಳಿನ ವ್ಯವಸ್ಥೆ ಜೊತೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುವುದು ಪಟ್ಟಣದಲ್ಲಿ ಸುಮಾರು ಒಂದು ಸಾವಿರಕ್ಕೂ ಅಧಿಕ ಬೀದಿನಾಯಿಗಳಿದ್ದು ಅವುಗಳನ್ನು ಈ ಆಶ್ರಯ ತಾಣಕ್ಕೆ ಕರೆತರಲಾಗುವುದು ಮತ್ತು ಅವುಗಳನ್ನು ಜವಾಬ್ದಾರಿಯಿಂದ ನೋಡಿಕೊಳ್ಳುವುದರೊಂದಿಗೆ ಸಂತಾನ ಹರಣ ಪ್ರಕ್ರಿಯೆಯನ್ನು ಮಾಡಲಾಗುವುದು ಎಂದು ಹೇಳಿದರು.
ಬೀದಿ ನಾಯಿಗಳ ದತ್ತು ನೀಡುವ ಮತ್ತು ಪಡೆದುಕೊಳ್ಳುವ ವ್ಯವಸ್ಥೆಯನ್ನು ಮಾಡಲಾಗಿದ್ದು ಯಾವುದಾದರೂ ಸಂಘ ಸಂಸ್ಥೆಯವರು ಸ್ವ ಇಚ್ಚೆಯಿಂದ ಬಂದರೆ ಅವರಿಗೆ ಈ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು.
ಸಿ. ಲೋಕ್ಯಾನಾಯ್ಕ ,ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ
