ಜಗಳೂರು: ದುಬೈಗೆ ಪ್ರವಾಸ ಹೋಗಿದ್ದ ಜಗಳೂರು ತಾಲೂಕಿನ 15 ಜನ ಪ್ರವಾಸಿಗರು ಸುರಕ್ಷಿತವಾಗಿದ್ದಾರೆ. ಭಾರತದಿಂದ ಗಲ್ಫ್ ರಾಷ್ಟ್ರಗಳಿಗೆ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿರುವುದರ ಹಿನ್ನೆಲೆಯಲ್ಲಿ ಘಲ್ಪ್ ರಾಷ್ಟ್ರಗಳಿಂದ ಬರಬೇಕಾಗಿರುವ ಪ್ರವಾಸಿಗರು ದುಬೈನಲ್ಲೇ ವಾಸ್ತವ್ಯ ಹೂಡುವಂತಾಗಿದೆ.
ಜಗಳೂರು ತಾಲೂಕಿನ ತೋರಣಗಟ್ಟೆ ಮೂಲದ ನಿವೃತ್ತ ಉಪನ್ಯಾಸಕರಾದ ಚಂದ್ರಶೇಖರ್ ಮತ್ತು ಪತ್ನಿ, ಜಗಳೂರು ಪಟ್ಟಣದ ಜಿ.ಬಿ ಶಿವಕುಮಾರ್ ಮತ್ತು ಪತ್ನಿ, ಪಟ್ಟಣ ಪಂಚಾಯತಿಯ ನಾಮನಿರ್ದೇಶಿತ ಮಾಜಿ ಸದಸ್ಯರಾದ ರುದ್ರಮನಿ ಮತ್ತು ಪತ್ನಿ, ವಾಚ್ ಅಂಗಡಿ ಮಾಲೀಕರಾದ ಲೋಕೇಶ್ ಮತ್ತು ಪತ್ನಿ ಮತ್ತು ಇವರ ಸ್ನೇಹಿತರು ಸೇರಿದಂತೆ ಸೇರಿದಂತೆ ಒಟ್ಟು 15 ಜನ ಫೆಬ್ರವರಿ 23ರಂದು ದುಬೈಗೆ ಪ್ರವಾಸ ತೆರಳಿದ್ದರು ಫೆಬ್ರವರಿ 28ಕ್ಕೆ ಶಾರ್ಜಾ ವಿಮಾನ ನಿಲ್ದಾಣದಿಂದ ಹಿಂತಿರುಗಬೇಕಾಗಿತ್ತು ವಿಮಾನ ಸಂಚಾರ ರದ್ದುಗೊಂಡ ಹಿನ್ನೆಲೆಯಲ್ಲಿ ಇವರೆಲ್ಲರೂ ದುಬಾರಿನಲ್ಲಿಯೇ ವಾಸ್ತವ್ಯ ಉಡುವಂತ ಸ್ಥಿತಿ ನಿರ್ಮಾಣವಾಗಿದೆ.
Read also : ಮೌಢ್ಯತೆಗಳ ಪ್ರತಿಬಿಂಬಕ ಸಂಸ್ಕೃತಿಯ ಆಚರಣೆ ಸಲ್ಲದು : ಡಾ.ಎ.ಬಿ.ರಾಮಚಂದ್ರಪ್ಪ
ಫೆಬ್ರವರಿ 23 ರಂದು ಬೆಂಗಳೂರಿನಿಂದ ಬಂದಿದ್ದು ದುಬೈಗೆ ಬಂದು ಅಬುದಾಬಿ , ಶಾರ್ಜಾ ಸೇರಿದಂತೆ ವಿವಿಧ ಪ್ರವಾಸಿ ತಾಣಗಳನ್ನು ವಿಕ್ಷಿಸಿದ ನಂತರ 28ರಂದು ಭಾರತಕ್ಕೆ ಮರಳಬೇಕಾಗಿತ್ತು. ಆದರೆ, ವಿಮಾನಯಾನ ಸ್ಥಗಿತ ವಾಗಿರುವುದರಿಂದ ನಾವು ದುಬೈನಲ್ಲೆ ಉಳಿದುಕೊಳ್ಳಬೇಕಾಗಿದೆ. ಜಗಳೂರು ತಾಲೂಕಿನ ತೋರಣಗಟ್ಟೆ ಗ್ರಾಮದಿಂದ 15 ಜನ ಬಳ್ಳಾರಿ ಜಿಲ್ಲೆಯಿಂದ 35 ಜನ ಒಟ್ಟು 50 ಜನ ಪ್ರವಾಸ ಬಂದಿದ್ದೇವೆ
ನಮಗೆ ಆರ್ಥಿಕ ಸಮಸ್ಯೆಯಾಗುತ್ತಿದೆ. ಒಂದು ಊಟಕ್ಕೆ ರೂ.1000 ದರ ನಿಗದಿ ಮಾಡಿದ್ದಾರೆ.12 ತಾಸಿಗೆ ಲಾಡ್ಜ್ ರೂಮಿಗೆ ರೂ.30,000 ಧರ ನಿಗದಿ ಮಾಡಿದ್ದಾರೆ. ತಮ್ಮ ಅಸಹಾಯಕತೆಯನ್ನು ಇಲ್ಲಿನವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.ದಾವಣಗೆರೆ ಸಂಸದರಾದ ಪ್ರಭಾ ಮಲ್ಲಿಕಾರ್ಜುನ್ ಅವರ ಆಪ್ತ ಸಹಾಯಕ ನಮ್ಮನ್ನು ಸಪ್ಪರ್ಕ ಮಾಡಿದ್ದು ಭಾರತಕ್ಕೆ ಕರೆತರುವ ವ್ಯವಸ್ಥೆಯನ್ನು ಮಾಡಿ ಮಾಡಲಿದ್ದೇವೆ ಎಂದು ಭರವಸೆ ನೀಡಿದ್ದಾರೆ.
