Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಸಂವಿಧಾನ ಪ್ರೀತಿಸುವವರು ಒಂದೇ ವೇದಿಕೆಗೆ ಬರಲಿ
ತಾಜಾ ಸುದ್ದಿ

ಸಂವಿಧಾನ ಪ್ರೀತಿಸುವವರು ಒಂದೇ ವೇದಿಕೆಗೆ ಬರಲಿ

Dinamaana Kannada News
Last updated: April 1, 2024 5:19 pm
Dinamaana Kannada News
Share
CPI DAVANAGERE
ಸಂವಿಧಾನ, ಪ್ರಜಾತಂತ್ರ, ಬಹುತ್ವ ಭಾರತ ಉಳಿಸಲು ರಾಜಕೀಯ ಸಮಾವೇಶದಲ್ಲಿ ಅವರಗೆಎರ ಚಂದ್ರು ಮಾತನಾಡಿದರು,
SHARE

ದಾವಣಗೆರೆ:  ದೇಶದಲ್ಲಿ ಬಹುಭಾಷೆ, ಬಹುವರ್ಣ, ಜಾತಿ, ಧರ್ಮ, ಭಾಷೆ ಇರುವ ಬಹುತ್ವ ಭಾರತದಲ್ಲಿ ಒಂದು ದೇಶ, ಒಂದು ಚುನಾವಣೆ, ಒಬ್ಬನೇ ನಾಯಕ ನೀತಿಗೆ ನರೇಂದ್ರ ಮೋದಿ ಹೊರಟಂತಿದೆ ಎಂದು ಸಿಪಿಐನ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಹೇಳಿದರು.

ನಗರದ ಶ್ರೀ ಶಿವಯೋಗಿ ಮಂದಿರದಲ್ಲಿ ಭಾರತ ಕಮ್ಯುನಿಷ್ಟ್ ಪಕ್ಷದಿಂದ ಹಮ್ಮಿಕೊಂಡಿದ್ದ ಸಂವಿಧಾನ, ಪ್ರಜಾತಂತ್ರ, ಬಹುತ್ವ ಭಾರತ ಉಳಿಸಲು ರಾಜಕೀಯ ಸಮಾವೇಶ ಉದ್ಘಾಟಿಸಿ, ಏತಕ್ಕಾಗಿ ಬಿಜೆಪಿಯನ್ನು ಸೋಲಿಸಬೇಕೆಂಬ ಕಿರು ಹೊತ್ತಿಗೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಸಿಪಿಐ ಅಷ್ಟೇ ಅಲ್ಲ, ದೇಶ, ಸಂವಿಧಾನ ಪ್ರೀತಿಸುವವರು, ಸಂವಿಧಾನ ಉಳಿಸುವವರು, ಅಂಬೇಡ್ಕರ್ ಆದರ್ಶ ಪಾಲಿಸುವ ದಲಿತರು, ಅಲ್ಪಸಂಖ್ಯಾತರನ್ನು ಪ್ರೀತಿಸುವವರು ಒಂದೇ ವೇದಿಕೆಗೆ ಬರಬೇಕೆಂದು ಕರೆ ನೀಡಿದರು.

ಸಂವಿಧಾನದಿಂದ ಬಡವರಿಗೆ ನೆಮ್ಮದಿ

 

ದೇಶ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಹಕ್ಕು, ರಕ್ಷಣೆ ಸಂವಿಧಾನದ ಉದ್ದೇಶವಾಗಿದೆ. ಸಂವಿಧಾನದಿಂದ ದಲಿತರು, ಆದಿವಾಸಿಗಳು, ಅಲ್ಪ ಸಂಖ್ಯಾತರು, ಮಹಿಳೆಯರು, ಮಕ್ಕಳು ನೆಮ್ಮದಿಯಾಗಿ ಬಾಳುತ್ತಿದ್ದಾರೆ. ಬಿಜೆಪಿ ಸಂವಿಧಾನದ ಪುಟ ಹರಿದು, ಅಕ್ಷರ ಬರೆದೋ ಹೇಗೆ ಬದಲಾವಣೆ ಮಾಡುತ್ತದೆಂದು ಹೇಳಲಿ ಎಂದು ಪ್ರಶ್ನಿಸಿದರು.

 

ಮನು ಸಂಸ್ಕೃತಿ ಮರು ಜಾರಿಗೆ ಯತ್ನ

 

ಮನು ಸಂಸ್ಕೃತಿಯನ್ನು ಮತ್ತೆ ತರಲು, ಸಂವಿಧಾನ ಬದಲಿಸಲು ಹೊರಟ ಸಂಘ ಪರಿವಾರ, ಬಿಜೆಪಿಯಿಂದ ಸಂವಿಧಾನ, ಪ್ರಜಾತಂತ್ರ, ಬಹುತ್ವ ಭಾರತವನ್ನು ಉಳಿಸಲು ಪ್ರತಿಯೊಬ್ಬರೂ ಮುಂದಾಗಬೇಕು. ಮನುಸ್ಮೃತಿ ಆದಾರಿತ ಸಂವಿಧಾನ ಜಾರಿಗಾಗಿ ನಿರಂತರ ಅವು ಪ್ರಯತ್ನ ನಡೆಸಿದೆ,. ಶ್ರೇಣೀಕೃತ ವ್ಯವಸ್ಥೆ ಜಾರಿಗೆ, ವರ್ಣಾಶ್ರಮ ಪದ್ಧತಿ ಜಾರಿಗೆ ಮುಂದಾಗಿದೆ. ಶೂದ್ರರು ಮೇಲಿನ ಮೂರು ವರ್ಣದವರ ಸೇವೆ ಮಾಡಬೇಕಿತ್ತಷ್ಟೇ. ಬಡವರು, ದಲಿತರು, ರೈತರು, ಕಾರ್ಮಿಕರು ಎಲ್ಲರೂ ಶೋಷಿತರಾಗಿದ್ದು, ಮತ್ತೆ ಅಂತಹ ಕಾಲಕ್ಕೆ ನೂಕುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.

ಆರೆಸ್ಸೆಸ್ ಆಶಯ ಜಾರಿಗೆ ಹುನ್ನಾರ

ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಕಿರು ಹೊತ್ತಿಗೆ ಬಿಡುಗಡೆಯಾಗುತ್ತಿದೆ. ಇದೊಂದು ಗೇಮ್ ಚೇಂಜರ್ ಕಿರು ಹೊತ್ತಿಗೆ. ಬಿಜೆಪಿ, ಸಂಘ ಪರಿವಾರ ಮನೆ ಮನೆಗೆ ಹೋಗಿ ಸುಳ್ಳು ಹೇಳಲು ಬಂದಾಗ ಪ್ರಶ್ನಿಸಲು ಈ ಕೈಪಿಡಿ ಆಸರೆ ಯಾಗುತ್ತದೆ. ಸಂವಿಧಾನ, ಪ್ರಜಾಪ್ರಭುತ್ವ, ದೇಶದ ಬಹುತ್ವ ಉಳಿಸಲು ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ. 2014ರಿಂದ ಈವರೆಗೆ ಸಂವಿಧಾನ ಬದಲಿಸುವ ಹೇಳಿಕೆ ನೀಡುವ ಬಿಜೆಪಿ ನಾಯಕರನ್ನು ನೋಡುತ್ತಾ ಬಂದಿದ್ದೇವೆ. ಸಂಸದ ಅನಂತಕುಮಾರ ಹೆಗಡೆ ಮಾತೆತ್ತಿದರೆ ಸಂವಿಧಾನ ಬದಲಾವಣೆಗೆ ಅನ್ನೋರು. ನಿತಿನ್ ಗಡ್ಕರಿ ಹೇಳಿದ್ದು, ಆರೆಸ್ಸೆಸ್ ಆಶಯ ಜಾರಿಗೊಳಿಸುವ ಘೋಷಣೆ ಮಾಡಿದ್ದನ್ನು ಜನತೆ ಅರಿಯಬೇಕು ಎಂದು ತಿಳಿಸಿದರು.

 

ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ಎಸ್.ಎಸ್.ಬಕ್ಕೇಶ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ.ಶೆಟ್ಟಿ, ಆಮ್ ಅದ್ಮಿ ಜಿಲ್ಲಾಧ್ಯಕ್ಷ ಶಿವಕುಮಾರಪ್ಪ, ಸಿಪಿಐ ಖಜಾಂಚಿ ಆನಂದರಾಜ, ಮುಖಂಡರಾದ ಕೆ.ರಾಘವೇಂದ್ರ ನಾಯರಿ, ಆವರಗೆರೆ ಎಚ್.ಜಿ.ಉಮೇಶ, ಕಾಂಗ್ರೆಸ್ ಮುಖಂಡರಾದ ಕೆ.ಜಿ.ಶಿವಕುಮಾರ, ಎಸ್.ಮಲ್ಲಿಕಾರ್ಜುನ, ವಕೀಲರಾದ ರಾಮಚಂದ್ರ ಕಲಾಲ್, ಅನೀಸ್ ಪಾಷ, ಮಾಜಿ ಮೇಯರ್ ಅನಿತಾ ಬಾಯಿ, ಮೈನುದ್ದೀನ್, ಡೋಲಿ ಚಂದ್ರು, ಶಾರದಮ್ಮ, ನೆರಳು ಸಂಸ್ಥೆಯ ಜಬೀನಾ ಖಾನಂ, ಎಂ.ಕರಿಬಸಪ್ಪ, ಆವರಗೆರೆ ವಾಸು, ನರೇಗಾ ರಂಗನಾಥ, ಐರಣಿ ಚಂದ್ರು ಇತರರು ಇದ್ದರು.

TAGGED:Ambedkar ideal followers should come to the same platform.dinamaana.comdinamaana.com.davanagere newsದಿನಮಾನ.ಕಾಂದಿನಮಾನ.ಕಾಂ.ದಾವಣಗೆರೆ ಸುದ್ದಿಸಂವಿಧಾನ ಪ್ರೀತಿಸುವವರು ಒಂದೇ ವೇದಿಕೆಗೆ ಬರಲಿ.
Share This Article
Twitter Email Copy Link Print
Previous Article chitraduraga news kuwj ಪತ್ರಕರ್ತರಿಗೆ ಸ್ವತಂತ್ರ ಇಲ್ಲದ ಪತ್ರಿಕೋದ್ಯಮ ಅಪಾಯದಲ್ಲಿದೆ
Next Article father and son ಅಪ್ಪನ ಕನಸು ನನ್ನ ಕನಸೂ …ಎರಡೂ ನನಸಾಗಲಿಲ್ಲ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

Davanagere | ಕ್ರೀಡಾಪಟುಗಳಿಗೆ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ

ದಾವಣಗೆರೆ ಡಿ.12 (Davanagere):  ಪ್ರಸಕ್ತ ಸಾಲಿನ ಪರಿಶಿಷ್ಟ ಜಾತಿ ಉಪಯೋಜನೆ ಹಾಗೂ ಪರಿಶಿಷ್ಟ ಪಂಗಡ ಗಿರಿಜನ ಯೋಜನೆ ಅಡಿಯಲ್ಲಿ 2023ನೇ…

By Dinamaana Kannada News

ಮೆಣಸಿನಕಾಯಿಗೂ ಎಂಎಸ್ಪಿ ಚಿಂತನೆ: ಸಚಿವ ಶಿವಾನಂದ ಪಾಟೀಲ

ಹಾವೇರಿ : ಮೆಣಸಿನಕಾಯಿ ಬೆಳೆಗೂ ಕನಿಷ್ಟ ಬೆಂಬಲ ಬೆಲೆ ನಿಗದಿ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು…

By Dinamaana Kannada News

Davanagere | ಪೊಲೀಸ್ ಪಬ್ಲಿಕ್ ಶಾಲೆಗೆ ನುರಿತ ಶಿಕ್ಷಕರಿಂದ ಅರ್ಜಿ ಆಹ್ವಾನ

ದಾವಣಗೆರೆ (Davanagere) : ಕೊಂಡಜ್ಜಿಯಲ್ಲಿರುವ ಪೊಲೀಸ್ ಪಬ್ಲಿಕ್ ಶಾಲೆಗೆ ನುರಿತ ಸ್ನಾತಕೋತ್ತರ ಹಾಗೂ ಸ್ನಾತಕ ಶಿಕ್ಷಕರನ್ನು ಆಯ್ಕೆ ಮಾಡಲು ಅರ್ಜಿ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ತಾನಾಗಬಲ್ಲ-ತಾನಾಗಿಸಬಲ್ಲ ಇದು ಶಿಕ್ಷಕನಲ್ಲಿರುವ ಗುಣಧರ್ಮ : ಡಾ|| ರಾಘವೇಂದ್ರ ಗುರೂಜಿ

By Dinamaana Kannada News
Davanagere
ತಾಜಾ ಸುದ್ದಿ

Davanagere | ನಮ್ಮ ಆರೋಗ್ಯ, ನಮ್ಮ ಕೈಲಿ : ಡಿ.ಸಿ

By Dinamaana Kannada News
Davanagere
ತಾಜಾ ಸುದ್ದಿ

ಎಸ್.ಎಸ್. ಜನರಲ್ ಆಸ್ಪತ್ರೆಯಲ್ಲಿ ಒಳರೋಗಿಗಳ ಸೇವೆಗೆ ಡಾ|| ಎಸ್ಸೆಸ್ ಚಾಲನೆ

By Dinamaana Kannada News
Davanagere
ತಾಜಾ ಸುದ್ದಿ

ವಿದ್ಯುತ್ ವ್ಯತ್ಯಯ | ಜೂ.24 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?