ದಾವಣಗೆರೆ: ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಏ.21ರಂದು ಬೆಳಗ್ಗೆ 10ಕ್ಕೆ ವಿನೋಬ ನಗರದ ಮೂರನೇ ಮುಖ್ಯರಸ್ತೆ ಒಂಭತ್ತನೇ ಅಡ್ಡರಸ್ತೆಯಲ್ಲಿನ ಶ್ರೀ ಸಿದ್ದಿವಿನಾಯಕ ಸಾಂಸ್ಕೃತಿಕ ಸಂಘದ ಶಾಲೆಯಲ್ಲಿ ಯುಗಾದಿ ಕವಿಗೋಷ್ಠಿ ಏರ್ಪಡಿಸಲಾಗಿದೆ.
ಕವಿಗೋಷ್ಠಿಯು ವಿಶೇಷವಾಗಿ ನಡೆಯಲಿದ್ದು, ನಾವು ಓದಿದ ಕವಿತೆಯನ್ನು ಅಲ್ಲಿರುವ ಉಳಿದ ಕವಿಗಳಲ್ಲೊಬ್ಬರು ಆಯ್ಕೆ ಮಾಡಿಕೊಂಡು ವಿಮರ್ಷೆ ಮಾಡಬಹುದು. ಗೋಷ್ಠಿಯಲ್ಲಿ ಭಾಗವಹಿಸುವ ಕವಿಗಳು ಹಸ್ತಪ್ರತಿ ಅಥವಾ ಮುದ್ರಿತ ಪ್ರತಿ ತರುವುದು ಕಡ್ಡಾಯ.
ಕವಿಗೋಷ್ಠಿಯಲ್ಲಿ ಭಾಗವಹಿಸುವವರು ಏ.20ರ ಶನಿವಾರ ಸಂಜೆ 5ರ ಒಳಗೆ ಸಂದೇಶ ಕಳುಹಿಸುವ ಮೂಲಕ ಹೆಸರು ನೋಂದಾಯಿಸಲು ಅವಕಾಶವಿದ್ದು, ಹೆಚ್ಚಿನ ವಿವರಕ್ಕೆ 9611969690 ಸಂಪರ್ಕಿಸಿ.