Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಸೊಂಡೂರಿನ  ಮಳೆ!
ತಾಜಾ ಸುದ್ದಿBlog

ಸೊಂಡೂರಿನ  ಮಳೆ!

Dinamaana Kannada News
Last updated: April 21, 2024 5:08 am
Dinamaana Kannada News
Share
Sondur rain
Sondur rain
SHARE

ಊರಿನ ರಮ್ಯ , ಆಹ್ಲಾದಕರ ನಿಸರ್ಗವನ್ನು ಕಂಡು “ಸುಂದರಪುರ”ಎಂದು ವರ್ಣಿಸಿದ್ದಕ್ಕೆ ಸೊಂಡೂರು ಎಂದು ಹೆಸರಾಯಿತೆಂದು ಹೇಳುವವರು ಇದ್ದಾರೆ. ರಾಜಮಹಾರಾಜರನ್ನು ಮೆಚ್ಚಿಸಲಿಕ್ಕೆ ಆಸ್ಥಾನ ವಿದ್ವಾಂಸರು ಹಾಗೆ ಹೇಳಿರಬಹುದು. ನಂತರದಲ್ಲಿ ಗಾಂಧೀಜಿಯವರ ಭೇಟಿಯಿಂದಾಗಿ ಅವರು ಹೇಳಿದ್ದಾರೆನ್ನಲಾದ ಸೊಂಡೂರು ಕುರಿತಂತೆ “ಸೀ ಇನ್ ಸೆಪ್ಟೆಂಬರ್ “ಹೇಳಿಕೆಯನ್ನು ಕೂಡ ನಾರಿಹಳ್ಳದ  ಎತ್ತರದ ಬೆಟ್ಟಗಳ ಮೇಲೆ ಕೆತ್ತಲಾಗಿದೆ.

ಆಗಿನ ಸುಂದರಪುರ,ಈಗಿನ ಸೊಂಡೂರನ್ನು ಗುರುತಿಸುವುದು ಬಹು ಸುಲಭ.ಕೆಂಪು ಧೂಳುಗಟ್ಟಿದ ಮುರುಕು ಮನೆಗಳು,ಕೆಂಪಾಗಿ ಹೋದ ಬಸ್ಸುಗಳು,ಕೆಂಪು ಸೈನಿಕರ ಹಾಗೆ ಕಾಣುವ ಕಾರ್ಮಿಕರು,ಆಸ್ಪತ್ರೆಯ ಮುಂದೆ ಕೆಮ್ಮುತ್ತಲೆ ನಿಂತವರ ಕ್ಯೂ,ಡಾಕ್ಟರಿಗಾಗಿ ಕಾಯುವ ಟೀಬಿ ಪೇಷಂಟುಗಳು…ಹೀಗೆ ಅನೇಕ ದೃಶ್ಯಾವಳಿಗಳನ್ನು ಕಾಣಬಹುದು.

ಸದಾ ಬಿಜಿಯಾಗಿದ್ದ ಊರು,ಈಗ ಬಿಕೋ ಎನ್ನುವ ಮೌನಕ್ಕೆ ಶರಣಾಗಿದೆ.ಅಪಮಾನ,ಸಾಮಾಜಿಕ ,ಪ್ರಾಕೃತಿಕ ದೌರ್ಜನ್ಯಗಳ ದಾಳಿಗಳಿಗೆ ತತ್ತರಿಸಿದ ಏಕಾಂಗಿತನದ ಭಾವ ಊರಿಗೆ ಆವರಿಸಿದಂತಿದೆ.ಸದಾ ಗಿಜಿಗಿಜಿಗುಡುತ್ತಿದ್ದ,ಕೈಯ್ಯಿಂದ ಕೈಯ್ಯಿಗೆ ವಿನಿಮಯವಾಗುತ್ತಿದ್ದ ನೂರು,ಐನೂರು,ಸಾವಿರದ ಗಾಂಧಿ ನೋಟುಗಳು  …ಕೈಯ್ಯೊಳಗಿನ ಉರಿವ ಸಿಗರೇಟು,ವಿದೇಶಿ ಮದ್ಯದ ಖಾಲಿ ಬಾಟಲಿಗಳು ಸಂದಿಗೊಂದಿಗಳು ಯಾವುವೂ ಕಾಣಿಸುತ್ತಿಲ್ಲ.

ಸೊಂಡೂರಿನ ಬೀದಿಯಲ್ಲೀಗ ಅಕ್ಷರಶಃ ಬಣ್ಣಬಣ್ಣದ ಚಿತ್ರ ತೋರಿಸಿ ,ಸಿನಿಮಾ ಮುಗಿಯಿತೆಂದು ಪ್ರೊಜೆಕ್ಟರ್ ರೂಮಿನಿಂದ ಹೊರಬಂದು ನಿಂತವನ ಮ್ಲಾನವದನದಂತೆ ತೋರುತ್ತಿದೆ.

ಸಂಜೆ ಸೂರ್ಯನ ಬಿಸಿಲಿಗೆ

ಪ್ರತಿಫಲಿಸುತಿವೆ ಫಳಫಳನೆ

ಬೆಟ್ಟಗುಡ್ಡಗಳ ಬೋಳುತಲೆಗಳ ಸಾಲುಸಾಲು

ಬುಲ್ಡೋಜುರುಗಳುಂಟು ಮಾಡಿದ ರಣಗಾಯ

ಒಸರುವ ಕೀವು

ಕೂಗಿದರೂ ಕೇಳಿಸದ ನೋವು

ಕ್ಷಯದಿ ಸತ್ತ ಅಪ್ಪ ಅವ್ವನ

ಮಣ್ಣ ಮಾಡಿ ಅಳುತ ಕುಂತ

ಅನಾಥ ಹುಡುಗನ ಬೋಳು ತಲೆ ಪ್ರತಿಫಲಿಸುತಿದೆ ಫಳಫಳನೆ.

 

ಊರ ಮಸಣಕೊಂದು ಭದ್ರಕೋಟೆ

ಹೆಸರು ಕೆತ್ತಿಸಿದ ಭೂಪರು

ಮಣ್ಣು ಕದ್ದ ಅವರು

ಸರಳು ಹಿಂದೆ ಸರಳ ನಿಂತರು

ಚಿಂದಿಯಾದ ನನ್ನ ಜನರು

ಅರ್ಧ ಮಸಣ ಸೇರಿ

ಇನ್ನರ್ಧ ಬದುಕನರಸಿ

ಎಲ್ಲಿಗೋ ಹೋದರು….

ಸದಾ ಹಚ್ಚಹಸುರಿನ ಗಿರಿಸಾಲುಗಳನ್ನೆ ನೋಡುತ್ತಾ ,ಆಡುತ್ತಾ ಬೆಳೆದ ಮಕ್ಕಳು:ಒಂದಲ್ಲ ಒಂದು ಕೆಲಸದಲ್ಲಿ  ನಿರತರಾಗಿರುತ್ತಿದ್ದ ತಂದೆ-ತಾಯಿ;ಹಬ್ಬಗಳು, ಜಾತ್ರೆಗಳು ಆ ಸಂಭ್ರಮವನೆಲ್ಲವನ್ನೂ ಗಣಿಗಾರಿಕೆಯೆಂಬ ರಕ್ಕಸ ಕಿತ್ತುಕೊಂಡಿತು. ” ಹೋಗುವಿಯಂತೆ ಬಾ ತಮ್ಮೋ…” ಎಂದು ಕೂಗಿ ಕರೆದರೂ ಟೇಮಿಲ್ಲವೋ ಎಂದು ಟಿಪ್ಪರಗಳನೇರಿ ಹೋದ ಹುಡುಗರ ಕೈಗಳಿಗೂ ಈಗ ಕೆಲಸವಿಲ್ಲ.

ಒಂದು ಕಾಲದಲ್ಲಿ, ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವೆಂದರೆ ಸೊಂಡೂರು  

ಮಳೆಯನ್ನೆ ನೆಚ್ಚಿಕೊಂಡಿದ್ದ ರೈತಾಪಿವರ್ಗ,ಜೋಳ, ಮೆಕ್ಕೆಜೋಳ,ಸಜ್ಜೆ,ನವಣಿ,  ಸೂರ್ಯಕಾಂತಿ, ನೆಲಗಡಲೆ ಮತ್ತು ಅಲ್ಪಪ್ರಮಾಣದಲ್ಲಿ ರಾಗಿಯನ್ನೂ ಬೆಳೆಯುತ್ತಿದ್ದರು.ಈಗ ಮಳೆ ಬಹಳ ಕಡಿಮೆಯಾಗಿದೆ.ಅಸಲಿಗೆ ಯಾರದೋ ಮಾತು ಕೇಳಿ ಗಣಿಗಾರಿಕೆಗೆ ಕೊಟ್ಟ ಹೊಲಗಳೂ ಕೆಲಸಕ್ಕೆ ಬಾರದಂತಾಗಿವೆ.ಸಂಪದ್ಭರಿತ ಕಾಡು ಬೋಳಾಗಿದೆ.ಹಸಿರಿನ ಸೊಂಡೂರು ಕೆಂಪಾಗಿದೆ.

ಇದ್ದಕ್ಕಿದ್ದಂತೆಯೇ ನಿಂತುಹೋದ ಗಣಿಗಾರಿಕೆಯಿಂದಾಗಿ ಮುಂದೇನು ಮಾಡಬೇಕೆನ್ನುವುದೇ ಗೊತ್ತಾಗುತ್ತಿಲ್ಲ ಸರ್…ನಾಕು ಮಕ್ಕಳಿದ್ದಾರೆ. ಬೆಳೆಯಂಗಿಲ್ಲ ಏನೂ ಮಾಡಂಗಿಲ್ಲ .. ಏನು ಮಾಡಬೇಕೋ..ನಾಳೆ ಹೇಗೋ ಏನೋ…ಎಂದು ಆತಂಕ ಹೊರಹಾಕುತ್ತಾರೆ ಕಲ್ಲಹಳ್ಳಿಯ ಕೃಷ್ಣನಾಯ್ಕ.

ಯುದ್ಧ ನಿಂತು ಹೋಗಿದೆ ಎಂಬುದೇನೋ ನಿಜ !

ಆದರೆ…ಗಣಿಗಾರಿಕೆಗೆ ಬಿದ್ದ ಬ್ರೇಕ್ ನಿಂದಾಗಿ ಪ್ರತಿದಿನ,ಪ್ರತಿಕ್ಷಣವೂ ಹಿಂಸೆಗೆ ಬಲಿಯಾಗುತ್ತಿರುವ ದೊಡ್ಡ ಸಂಖ್ಯೆಯ ಜನರ ಪೈಕಿ  ಬಹುತೇಕರು ಪಾರ್ಶ್ವ ವಾಯುವಿಗೆ ತುತ್ತಾದವರು,ಅಸ್ತಮಾ,ಟೀಬಿ ರೋಗದಿಂದ ನರಳುತ್ತಿರುವವರೇ ಹೆಚ್ಚು.ಅಕ್ರಮ ಗಣಿಗಾರಿಕೆಯ ಅಕಾಲ ಸ್ತಬ್ದತೆ,ಏಕಕಾಲಕ್ಕೆ ಜನರನ್ನು ಗಣಿಗಾರಿಕೆಯ ಹಿಂಸೆಯಿಂದ ಬಿಡುಗಡೆಗೊಳಿಸುವ ಮತ್ತು ಶಾಪಗ್ರಸ್ಥರನ್ನಾಗಿಸಿದ್ದು ಸೊಂಡೂರು ಮತ್ತು ಸುತ್ತಲಿನ ಹಳ್ಳಿಗಳಲ್ಲಿ ಕಾಣಸಿಗುತ್ತದೆ.

ಅಕ್ರಮ ಗಣಿಗಾರಿಕೆಯ ಹೆಸರಿನಲ್ಲಿ ಭಾಗಿಯಾದವರನ್ನು ಜೈಲಿಗೆ ಕಳುಹಿಸಲಾಯಿತು. ಕಾನೂನು ವಿಚಾರಣೆ ನಡೆಯುತ್ತಿದೆ. ಶಿಕ್ಷೆಯಾದ ಮತ್ತು ಶಿಕ್ಷೆಗೊಳಪಡುವವರೆನ್ನಲಾದವರು ಜಿಲ್ಲೆಗೆ ಕಾಲಿಡಬಾರದೆಂದೂ ಸುಪ್ರೀಂಕೋರ್ಟು ಆದೇಶ ನೀಡಿದೆ. ಗಣಿಧಣಿಗಳು,ಅಧಿಕಾರ ದುರ್ಬಳಕೆ ಮಾಡಿಕೊಂಡು ರಾಜಕಾರಣಿಗಳು,ಅಧಿಕಾರಿಗಳು ತಪ್ಪಿತಸ್ಥರಾಗಬೇಕಿತ್ತು. ಆದರೆ ದಿನನಿತ್ಯವೂ ಹಸಿವಿನಿಂದ ,ಅಪೌಷ್ಟಿಕತೆಯಿಂದ ,ಕ್ಷಯರೋಗದಿಂದ ನರಳುವ ಜನರು ಮಾಡಿರುವ ತಪ್ಪಾದರೂ ಏನು?  ಪ್ರಶ್ನೆ …ನಮ್ಮನ್ನು ಕಾಡದೆ ಬಿಡುವುದಿಲ್ಲ.

ಸೊಂಡೂರಿನಲ್ಲೀಗ ಭಾರೀ ಮಳೆಯಂತೆ

ಬಹುಶಃ ಮುಚ್ಚಿದ ಬಾಗಿಲುಗಳಿಂದ ಯಾವ ಹುಡುಗರೂ ಹರಿವ ನೀರಿನಲ್ಲಿ ಕಾಗದದ ದೋಣಿ ಬಿಡುತ್ತಿಲ್ಲ.ಎಷ್ಟೋ ಮನೆಗಳ ಬದುಕಿನ ದೋಣಿಗಳು ಮುಳುಗಿ ಹೋಗಿರುವಾಗ ಇದ್ಯಾವ ಲೆಕ್ಕ?

ಇಡೀ ಊರು ಇಷ್ಟೇಕೆ ಮೌನ?

……ಬೇಕಾದರೆ ಯಾರನ್ನಾದರೂ ಕೇಳಿ ನೋಡಿ.

ಸ್ಮಶಾನದಲ್ಲಿ ನಿಂತು ಯಾರೂ ಅಳಬಾರದಂತೆ.!

 

  ಕಾಡು…

 ಬೆಟ್ಟ-ಗುಡ್ಡ ಸವೆದರೂ

 ಸುರಿಯುತ್ತಿದೆ…

 ಮಳೆಯಲ್ಲವದು

 ಬಹುಶಃ

 ಯಾರೋ 

ರೋದಿಸುತ್ತಿರಬೇಕು

ಮತ್ತೆ ಮತ್ತೆ ಸೊಂಡೂರಿನಂತಹ ಊರುಗಳು ನಮ್ಮೆದೆಯೊಳಗೆ ಇಳಿಯುತ್ತಲೇ ಇರುತ್ತವೆ….

 

                ಬಿ.ಶ್ರೀನಿವಾಸ

TAGGED:dinamaana.comKannada NewsSondur rain .ಕನ್ನಡ ಸುದ್ದಿಕಾಂದಿನಮಾನಸೊಂಡೂರಿನ ಮಳೆ!.
Share This Article
Twitter Email Copy Link Print
Previous Article Zilla Panchayat ಮತದಾನ ಜಾಗೃತಿಗೆ ಫ್ಯಾಶನ್ ಶೋ
Next Article minininga ಎದೆ ನೋವು ಸಾಮಿ…ಎಂದು ಬಂದವರು

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

ಭದ್ರತಾ ಮಾನದಂಡಗಳನ್ನು ಎಲ್ಲಾ ಬ್ಯಾಂಕ್‍ಗಳು ಪಾಲನೆ ಮಾಡುವುದು ಕಡ್ಡಾಯ : ಉಮಾ ಪ್ರಶಾಂತ್

ದಾವಣಗೆರೆ : ಜ. 21 (Davanagere) ಬ್ಯಾಂಕ್‍ಗಳ ದರೋಡೆ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು ಭದ್ರತಾ ಮಾನದಂಡದ ಜೊತೆಗೆ ಸಿಬ್ಬಂದಿಗಳ ಮಾಹಿತಿ…

By Dinamaana Kannada News

Davanagere | ಸ್ವಯಂ ಪ್ರೇರಿತ ರಕ್ತದಾನ ಶಿಬಿರ : ಡಾ. ಬಿ ಆರ್ ರವಿಕಾಂತೇಗೌಡ ಚಾಲನೆ

ದಾವಣಗೆರೆ (Davanagere):  ಜಿಲ್ಲಾ ಪೊಲೀಸ್ ಹಾಗೂ ಲೈಪ್ ಲೈನ್ ರಕ್ತ ಕೇಂದ್ರ ಹಾಗೂ ಕರ್ನಾಟಕ ಹಿಮೊಫಿಲಿಯಾ ಸೊಸೈಟಿ ಆಶ್ರಯದಲ್ಲಿ ಜಿಲ್ಲಾ…

By Dinamaana Kannada News

LG Havanur | ಹಿಂದುಳಿದ ವರ್ಗಗಳ ಆಯೋಗದ ವರದಿ ರೂಪುಗೊಂಡ ಬಗೆ..

Kannada News | Dinamaana.com |28 -08-2024 ಸ್ವತಂತ್ರ ಭಾರತದಲ್ಲಿ ಸಂವಿಧಾನ ಅನುಷ್ಠಾನಗೊಂಡ ನಂತರ,ಉದ್ಯೋಗದಲ್ಲಿ,ಶಿಕ್ಷಣದಲ್ಲಿ ಹಿಂದುಳಿದ ವರ್ಗಗಳನ್ನು ಗುರುತಿಸಲು ಸಾಧ್ಯವಾಗದಂತಹ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

Davanagere | ಆವರಗೆರೆ ನಿರಾಶ್ರಿತರಿಗೆ ಹಕ್ಕುಪತ್ರಕ್ಕೆ ಆಗ್ರಹಿಸಿ ಪ್ರತಿಭಟನೆ

By Dinamaana Kannada News
Davanagere
Blog

Davanagere | ಸರ್ಕಾರಿ ಶಾಲೆ ಮಕ್ಕಳಿಗೆ ಪುಸ್ತಕ, ಸಿಹಿ ವಿತರಣೆ  

By Dinamaana Kannada News
Davanagere
ತಾಜಾ ಸುದ್ದಿ

Davanagere | ಮನಸ್ಸಿನ ವ್ಯಾಯಾಮಕ್ಕೆ ಧ್ಯಾನ ಅತ್ಯಗತ್ಯ : ಬ್ರಹ್ಮಕುಮಾರಿ ಲೀಲಾಜಿ

By Dinamaana Kannada News
Davanagere
ರಾಜಕೀಯ

Political analysis | ಅಮಿತ್ ಶಾ ಆತುರಕ್ಕೆ ಏನು ಕಾರಣ?

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Welcome Back!

Sign in to your account

Lost your password?