Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > ಸೊಂಡೂರಿನ ಕಗ್ಗತ್ತಲೆಯ ಕಥನಗಳು-11: ನಾಳೆಗಳ ಕಥೆಗಳನ್ನು ಅವ್ವಂದಿರು ಇಂದೇ ಹೇಳಿಬಿಡುತ್ತಾರೆ
Blog

ಸೊಂಡೂರಿನ ಕಗ್ಗತ್ತಲೆಯ ಕಥನಗಳು-11: ನಾಳೆಗಳ ಕಥೆಗಳನ್ನು ಅವ್ವಂದಿರು ಇಂದೇ ಹೇಳಿಬಿಡುತ್ತಾರೆ

Dinamaana Kannada News
Last updated: May 2, 2024 4:20 am
Dinamaana Kannada News
Share
sanduru stories
ಸತ್ತ ಕಂದಮ್ಮಗಳ ಪಕ್ಕಾ ಲೆಕ್ಕ ಕೊಡುವ ತಾಯಿ!
SHARE

ಇಲ್ಲಿ ದ್ವೇಷವಿಲ್ಲ.ಜಗಳವಿಲ್ಲ.ಹತ್ಯಾಕಾಂಡಗಳೂ ನಡೆದಿಲ್ಲ.ಆದರೂ ಊರು ಛಿದ್ರಗೊಂಡಿದೆ.ಊರ ಬೆನ್ನಿನ ಮೇಲೆ ಬಾಸುಂಡೆಯ ಗೀರುಗಳು. ಸಾವಿನ ಭಯದ ಭಾರಕ್ಕೆ  ಊರ ಬೆನ್ನು ಬಾಗಿದೆ.

ಹೌದು, ಬದುಕು ಛಿದ್ರಗೊಂಡಿದೆ

ಒಂದೂರಿನಲ್ಲಿ ಒಬ್ಬ ರಾಜನಿದ್ದ.ಅವನೊಂದು ದಿನ ಬೇಟೆಗೆಂದು ‌ಅಗೋ…ಅಲ್ಲಿ ಕಾಣಿಸುತ್ತಲ್ಲ,ಆ ಬೆಟ್ಟಗಳ ಸಾಲು,ಅಲ್ಲಿ ಕುದುರೆ ಮ್ಯಾಲೆ ಹೋಗುತ್ತಿರಬೇಕಾದರೆ ಹಚ್ಚಹಸುರಿನ ಗಿಡಮರಗಳಿಂದ ತಂಗಾಳಿ ಬೀಸುತ್ತಿತ್ತು.ಘಮಘಮಿಸುವ ವನಸುಮಗಳು..ಜೊತೆಗೆ ರಾಜಕುಮಾರೀನೂ ಇದ್ಲಂತೆ !.

ಹೀಗೆ ಶುರುವಾದ ಕಥೆ,ಸೊಂಡೂರಿನ ಬೀದಿ ಹಳ್ಳಕೊಳ್ಳಗಳ ದಾಟಿ,ನದಿಯನ್ನು ಸೇರಿ ಅಲ್ಲಿಂದ ಸಮುದ್ರ ಸೇರುವ ವರೆಗೂ …ನಿಲ್ಲುವ ಹಾಗಿರಲಿಲ್ಲ.

ಬೆಟ್ಟಗಳ ಸಂದುಗೊಂದುಗಳಲ್ಲಿ ಹರಿದು ಬರುವ ಹರಿಶಂಕರದ ನೀರು,ಘೋರ್ಪಡೆ ಮಹಾರಾಜರು ಬೇಟೆಗೆ ಹೊರಡುವ ರೀತಿ ನೀತಿ.ಅದರಲ್ಲು ಬೆಂಕಿ ರಾಜನ ಕಥೆಗಳು ಕೇಳಲು ಬಲು ರೋಚಕವಾಗಿರುತ್ತಿದ್ದವು.ಒಂದರ ಮೇಲೊಂದು ಕುಸ್ತಿಗೆ ಬಿದ್ದವರಂತೆ ಕಾಣುತ್ತಿದ್ದ ದೊಡ್ಡದೊಡ್ಡ ಕಪ್ಪು ಬಂಡೆಗಳು ನಮ್ಮನ್ನು ಏರಬಲ್ಲಿರಾ?ಸವಾಲೆಸೆಯುವಂತೆ ಕರೆಯುತ್ತಿಧ್ಧವು.ಹಸಿರಿನ ನಡುವೆ ಆಡುತ್ತಾ ಬೆಳೆದ ಮಕ್ಕಳು ಅಪ್ಪ ಅವ್ವಂದಿರುಗಳ ಅಜ್ಜಿಯಂದಿರುಗಳು ಪ್ರೀತಿಯಲ್ಲಿ ತೊಯ್ದುಹೋಗುತ್ತಿದ್ಧರು.

ಸಂಭ್ರಮಗಳೆಲ್ಲ ಎಲ್ಲಿ ಹೋದವೋ..?

ಮದುವೆ ಮುಗಿದ ಮನೆಯ ಹಂದರದ ಮೌನ!

ಊರ ತುಂಬಾ  ಆವರಿಸಿಬಿಟ್ಟಿದೆ.

ಜೋ…ಜೋ…ಲಾಲೀ ಲಾಲೀ……ಹಾಡುತ್ತಾ ಬೆಳೆಯುತ್ತಾ ಮಕ್ಕಳನ್ನು ಮಲಗಿಸುತ್ತಿದ್ದ ಅವ್ವಂದಿರುಗಳ ಜೋಗುಳದ ಪದಗಳೂ ಈಗ ಬದಲಾಗಿವೆ.

ನಿನ್ನೆಯ ಕಥೆಗಳ ಬದಲು

ರಣ ರಣ ಬಿಸಿಲಿನಲ್ಲಿ

ಅಸ್ಥಿಪಂಜರಗಳು ಸಿಕ್ಕು ಒದ್ದಾಡುವ

ನಾಳಿನ

ಕಥೆಗಳನ್ನು

ಅವ್ವಂದಿರು ಇಂದೇ ಹೇಳಿಬಿಡುತ್ತಾರೆ.

 

 ಸತ್ತ ಕಂದಮ್ಮಗಳ ಪಕ್ಕಾ ಲೆಕ್ಕ ಕೊಡುವ ತಾಯಿ!

ಊರಿನ ಕಥೆಗಳಿಗೆ ಆದಿಯೆಂಬುದು ಇರುವುದಿಲ್ಲ.ಹಾಗೆಯೇ ಅಂತ್ಯವೂ ಕೂಡ.ಮಾತಾಡಿಸಲೋ ಬೇಡವೋ ಎಂದುಕೊಳ್ಳುತ್ತಲೆ ಮೂವತ್ತರ ವಯಸ್ಸಿನ ಯುವಕನನ್ನು ಮಾತಾಡಿಸಿದೆ.

ಸೊಂಡೂರಿನ ಬಸ್ಸ್ಟಾಂಡಿನೆದುರಿನ ಗುರುಪ್ರಸಾದ್ ಹೋಟೆಲಿನ ಬಳಿ ನಿಂತಿದ್ದ.ಹೋಗಿ ಬರೋರಗೆಲ್ಲ ಬಸ್ ಚಾರ್ಜು ಕೇಳುತ್ತಿದ್ದ.ಅದ್ಯಾವುದು ಅಷ್ಟೊಂದು ದೂರದ ಊರೋ…?ಬರೋರ  ಹತ್ತಿರ ದಿನಪೂರ್ತಿ ಅವನದು ಅದೊಂದೇ ಬೇಡಿಕೆಯಾಗಿತ್ತು.ಹಾಗೆಂದು ಎಂದೂ ಆ ಜಾಗ ಬಿಟ್ಟು ಕದಲಿದವನಲ್ಲ.ಬಲವಂತವಾಗಿ ಆತನನ್ನು ಮಾತನಾಡಿಸಲು ನಾನು ಹಾಗೂ ನನ್ನ ಮಿತ್ರ ಇಬ್ಬರೂ ಪ್ರಯತ್ನಿಸಿದೆವು.

ಆತ ಬಿಕ್ಕಿ ಬಿಕ್ಕಿ ಅಳತೊಡಗಿದ !

ಕಥೆಗಳು ಕೆಸರಿನ ನೀರಿನಂತೆಯೂ,ಮತ್ತೊಮ್ಮೆ ಬೆಂಕಿಯ ಕೆನ್ನಾಲಿಗೆ ಮುಂಚೆಯೂ ಹರಿಯುತ್ತಿರುತ್ತವೆ.ಇವರು ಅನುಭವಿಸಿದ ನೋವುಗಳನ್ನು ಬರೆಯಲು ಒಂದಿಡೀ ಜೀವಮಾನ ಸಾಕಾಗದು ಎನಿಸುತ್ತಿದೆ.

ಅಂತಹದೊಂದು ಪುಟ್ಟ ಊರಿನಲ್ಲಿ ಎಷ್ಟೊಂದು ಜನಜಂಗುಳಿ ಇರುತ್ತಿತ್ತು.ದಿನಕ್ಕೆರಡು ಮೂರು ಸಾವಿನ ಸುದ್ದಿಗಳನ್ನು ಕೇಳುವುದು ಸರ್ವೇಸಾಮಾನ್ಯವಾದ ಸಂಗತಿಯಾಗಿತ್ತು.ರೊಕ್ಕದ ದಾಂಗುಡಿ ಯಲ್ಲಿ ಜನರು ಸಾವಿನ ವಿಷಯವನ್ನೆ ಮರೆತು ಬಿಟ್ಟರು.

ಆದರೆ…..

ಆಕೆ ಮಾತ್ರ ಮರೆತಿರಲಿಲ್ಲ…!

ಹೊಸಳ್ಳಿಯ ಪುಟ್ಟ ಮಣ್ಣಿನ ಮನೆಯ ಗೋಡೆಯ ಮೇಲೆ ಆಕೆ ಬರೆದ ಗೀಟುಗಳು ಕಂಡವು.

ಆಕೆ…

ಸಾಲಿ ಕಲಿತಿಲ್ಲವಾದರೂ

ಟೀಬಿಗೆ

ಗೂರಲು ಕೆಮ್ಮಿಗೆ

ಉಸಿರುಗಟ್ಟಿ

ಟಿಪ್ಪರುಗಳ ಗಾಲಿಗೆ ಸಿಕ್ಕು

ಸತ್ತ ಕಂದಮ್ಮಗಳು ಎಷ್ಟೆಂದು ನಿಖರವಾಗಿ ಹೇಳಬಲ್ಲರು

ಅದೋ ನೋಡಿ

ಗೋಡೆಯ ಮೇಲೆ

ಆಕೆ ಬರೆದ ಗೀಟುಗಳಿವೆ!

   ಬಿ.ಶ್ರೀನಿವಾಸ.

TAGGED:dinamaana.comKannada Newssanduru mining.ಕನ್ನಡ ಸುದ್ದಿದಿನಮಾನ.ಕಾಂಸಂಡೂರು ಮೈನಿಂಗ್
Share This Article
Twitter Email Copy Link Print
Previous Article sanduri story 10 ಸೊಂಡೂರಿನ ಕಗ್ಗತ್ತಲೆಯ ಕಥನಗಳು -10: ವೇಷಗಾರರ ಸಂಕಟ  
Next Article hamsaleka ಜನವಿರೋಧಿ ಆಡಳಿತವನ್ನು ರಕ್ತಕ್ರಾಂತಿ ಇಲ್ಲದೆಯೆ ಬದಲಾಯಿಸಬೇಕು : ಸಂಗೀತ ನಿರ್ದೇಶಕ ಹಂಸಲೇಖ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ದಾವಣಗೆರೆ | ವಿಶೇಷಚೇತನರಿಗೆ ಕರುಣೆ ತೋರದೆ ಹೆಚ್ಚಿನ ಅವಕಾಶ, ಸಮಾನ ಮನ್ನಣೆ ನೀಡಿ

ದಾವಣಗೆರೆ : ಅಂಗವಿಕಲರ ಬಗ್ಗೆ ಕರುಣೆ ತೋರಿಸದೆ ಅವಕಾಶ ಮತ್ತು ಸಮಾನ ಮನ್ನಣೆ ನೀಡಿ ಎಲ್ಲರನ್ನು ಪ್ರೋತ್ಸಾಹಿಸಬೇಕು ಎಂದು ಜಿಲ್ಲಾ ಕಾನೂನು…

By Dinamaana Kannada News

ಭಾವನಾತ್ಮಕವಾಗಿ ಕೆರಳಿಸಿ ನಿಮ್ಮನ್ನು ಕೈಬಿಡಲ್ಲ

ಬೆಂಗಳೂರು ಮಾ 23:  ನಾವು ಬಿಜೆಪಿಯವರಂತೆ ಕೇವಲ ಭಾವನಾತ್ಮಕವಾಗಿ ಕೆರಳಿಸಿ ನಿಮ್ಮ ಕೈಬಿಡಲ್ಲ-ಬಿಜೆಪಿಯವರಂತೆ ಸುಳ್ಳು ಹೇಳಲ್ಲ. ನಿಮ್ಮ ಬದುಕಿಗೆ ಸ್ಪಂದಿಸುತ್ತೇವೆ…

By Dinamaana Kannada News

ದಲಿತ, ಶೋಷಿತ ವ್ಯಕ್ತಿಗಳ ಅಂತರಂಗದ ನುಡಿಗಳೇ ಶರಣ ಸಾಹಿತ್ಯ : ಡಾ. ಮಂಜುನಾಥ ಕುರ್ಕಿ

ದಾವಣಗೆರೆ (Davanagere) :  ಬಂಡವಾಳ ಶಾಹಿಗಳ ಸಾಮ್ರಾಜ್ಯದಿಂದ ದೂರ ಇದ್ದಂತಹ ದಲಿತ, ಶೋಷಿತ ವ್ಯಕ್ತಿಗಳು ತಮ್ಮ ಅಂತರಂಗದ ಅರಿವಿನ ಮೂಲಕ…

By Dinamaana Kannada News

You Might Also Like

Applications invited
ತಾಜಾ ಸುದ್ದಿ

ದಾವಣಗೆರೆ:ಹೊಯ್ಸಳ ಮತ್ತು ಕಿತ್ತೂರು ರಾಣಿಚೆನ್ನಮ್ಮ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

By Dinamaana Kannada News
Applications invited
ತಾಜಾ ಸುದ್ದಿ

ಕ್ರಿಶ್ಚಿಯನ್ ಸಮುದಾಯ ಅಭಿವೃದ್ದಿ ನಿಗಮದ ಸೌಲಭ್ಯಗಳಿಗಾಗಿ ಅರ್ಜಿ ಆಹ್ವಾನ

By Dinamaana Kannada News
Davanagere
ತಾಜಾ ಸುದ್ದಿ

ದಾವಣಗೆರೆ ಪಾಲಿಕೆ ಆಯುಕ್ತರಿಂದ ಪೌರಕಾರ್ಮಿಕರಿಗೆ ಕಿರುಕುಳ: ವರ್ಗಾವಣೆಗೆ ಒತ್ತಾಯ

By Dinamaana Kannada News
CEO Gitte Madhava Vitthal Rao
ತಾಜಾ ಸುದ್ದಿ

ಕುಷ್ಠರೋಗ ನಿವಾರಣೆಗೆ ಅರಿವು ಮೂಡಿಸಿ : ಸಿಇಓ ಗಿತ್ತೆ ಮಾಧವ ವಿಠಲ ರಾವ್

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?