Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > ಸೊಂಡೂರಿನ ಕಗ್ಗತ್ತಲೆಯ ಕಥನಗಳು-22   ಎಲ್ಲಿ ಹೋದರೋ…
Blog

ಸೊಂಡೂರಿನ ಕಗ್ಗತ್ತಲೆಯ ಕಥನಗಳು-22   ಎಲ್ಲಿ ಹೋದರೋ…

Dinamaana Kannada News
Last updated: May 13, 2024 4:20 am
Dinamaana Kannada News
Share
sanduru
ಸಂಡೂರಿನ ಕಥನಗಳು
SHARE

ಸದಾ ಹಸಿರಿನಿಂದ ಕಂಗೊಳಿಸುತ್ತಿದ್ದ ಕುಮಾರಸ್ವಾಮಿ ಬೆಟ್ಟ,ರಾಮನಮಲೈ ಮತ್ತು ಜಂಬುನಾಥ ಶಿಖರಗಳಂತಹ ಅನೇಕ ಬೆಟ್ಟಗಳ ಸಾಲುಗಳಲ್ಲಿ ಪಾಪಪ್ರಜ್ಞೆ ಮೈವೆತ್ತಂತೆ ಮೌನಕ್ಕೆ ಶರಣಾಗಿವೆ. ಇಂತಹ ಬೆಟ್ಟ -ಗುಡ್ಡಗಳು, ಕಾಡು ಮರಗಳು, ಸಣ್ಣಪುಟ್ಟ ಪ್ರಾಣಿ,ಪಕ್ಷಿಗಳು,ಜನರದ್ದೂ ಸಹ ಅದೇ ದೈನೇಸಿ ನೋಟ!

ಆ ನೋಟದಲ್ಲಿ ಮನುಷ್ಯನ ಗಣಿಗಾರಿಕೆಯೆಂಬ ದುರಾಶೆಗೆ ಅಂತಃಕರಣೆ ಎಂಬುದು ಇರಬಾರದಿತ್ತೆ ಎಂಬ ಭಾವ. ಪ್ರೀತಿ ಮತ್ತು ಸಹಾನುಭೂತಿಯನ್ನು ಕಳೆದುಕೊಂಡವರು ಮಾತ್ರ ನಮ್ಮ ಸುತ್ತಲಿನ ಬದುಕು ನರಕ ವಾಗಿದ್ದರೂ ನೆಮ್ಮದಿಯಾಗಿ ಉಣ್ಣಬಲ್ಲರು. ಕಲ್ಲಳ್ಳಿ,ಹೊಸಳ್ಳಿ,ಕಣಿವೆಳ್ಳಿಗಳಂತಹ ಊರುಗಳ ಮುದುಕರು ದಿನವೊಂದರಲ್ಲಿ ಒಪ್ಪತ್ತು ಕೂಡ ಉಣ್ಣದವರ ಹಾಗೆ ಯಾಕೆ ಕಾಣುತ್ತಾರೆ ಎಂಬುದು ಅರ್ಥವಾಗುತ್ತಿದೆ.

ಸೊಂಡೂರು ಸುತ್ತಮುತ್ತಲಿನ ಹಳ್ಳಿಗಳ ಜನರನ್ನು ಶತಮಾನಗಳ ಕಾಲ ಪೊರೆದ ಬೆಟ್ಟಗಳು,ಕಾಡು, ಕರಗಿ ಹೋದಂತೆಲ್ಲ ಮನುಷ್ಯರ ಜೀವಗಳೂ ಕರಗಿ ಹೋದವು.  ನಿನ್ನೆ ಮೊನ್ನೆಯವರೆಗೂ ಕೆಂಪು ಸೈನಿಕರ ಹಾಗೆ, ಯುದ್ಧಕ್ಕೆ ಹೊರಟವರಂತೆ ಕಾಣಿಸುತ್ತಿದ್ದ ಗಣಿ ಕೂಲಿ ಕಾರ್ಮಿಕರು ಈಗ ಯಾವ ಬೀದಿ ಸುತ್ತುತ್ತಿದ್ದಾರೋ….?

ಅಮ್ಮಾ…. ತಾಯೇ…ಎಂದು 

ಖಾಲಿ ಬೋಗುಣಿ ಹಿಡಿದು

ಕೂಗುತ್ತಾ

ಕಟ್ಟಿಕೊಂಡ ಸೆರಗಿನಲ್ಲಿ

ಅನ್ನವಿತ್ತೋ ಇಲ್ಲವೋ…

ಕೂಸೊಂದು ಮಾತ್ರ ಇತ್ತು.

ಪಾಪ … ಅವರು ಹಸಿದಿದ್ದರು.

ಎಲ್ಲಿ ಹೋದರೋ….

ಅತ್ಯಾಚಾರಕ್ಕೊಳಗಾದವರ ಅನುಭವ ತುಂಬಾ ಸಂಕೀರ್ಣವಾದುದು. ತೀವ್ರವಾದ ನಷ್ಟದ ಭಾವ,  ಜೊತೆಗೆ ಹತಾಶೆ ಮತ್ತು ಅವಮಾನವೂ ಸೇರಿಬಿಡುವಂತೆ, ಇಡೀ ಊರಿಗೆ ಊರೇ ಕೇಡಿಗೆ ಒಳಗಾದ ಸಂತ್ರಸ್ತೆಯಂತೆ ತೋರುತ್ತಿದೆ. ನೀವು ಯಾರನ್ನೆ ಮಾತಾಡಿಸಿದರೂ… ಪಾಪಪ್ರಜ್ಞೆಯ ಭಾರ ಹೊತ್ತವರೆ ಆಗಿರುತ್ತಾರೆ. ಸದ್ಯದ ಗಣಿಗಾರಿಕೆಯಿಂದ ತನ್ನದೆಲ್ಲವನ್ನೂ ಕಳೆದುಕೊಂಡು ಮೌನಿಯಾದವರಂತೆ..!

              ಬಿ.ಶ್ರೀನಿವಾಸ

 

TAGGED:dinamaana.comLatest Kannada NewsSanduru sotriesಕನ್ನಡ ಸುದ್ದಿದಿನಮಾನ.ಕಾಂಸಂಡೂರಿನ ಕಥನಗಳು.
Share This Article
Twitter Email Copy Link Print
Previous Article DAVANAGERE ವೀರಶೈವರಿಗೆ ಜಾತಿ ಭೇದ ಇಲ್ಲ : ಶ್ರೀಶೈಲ ಪೀಠದ ಡಾ.ಚನ್ನಸಿದ್ಧರಾಮ ಸ್ವಾಮೀಜಿ
Next Article davanagere ಬೇಸಿಗೆ ಕಾಲದಲ್ಲಿ ಅಲರ್ಜಿ ಹಾಗೂ ದಮ್ಮಿನ ರೋಗಿಗಳ ವಿಶೇಷ ಕಾಳಜಿ ಅವಶ್ಯ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ಅಗತ್ಯ ; ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ/ಲಕ್ಷ್ಮೀಶ್ವರ  ಜ. 19 (Davanagere) ; ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಬೇಕು ಎಂದು ದಾವಣಗೆರೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಸಲಹೆ…

By Dinamaana Kannada News

ಹೋರಾಟಗಳ ಅಂತಃಕರಣ-ಅನಿಲ್  ಹೊಸಮನಿ: ಬಿ.ಶ್ರೀನಿವಾಸ

ಹೋರಾಟಗಳ ಅಂತಃಕರಣ-ಅನಿಲ್  ಹೊಸಮನಿ: 1945-46 ರ ಕಾಲ. ಬಿಜಾಪುರ ಜಿಲ್ಲೆಯ ಅಲಮೇಲು ಗ್ರಾಮದಲ್ಲಿ ಪ್ರೈಮರಿ ಸ್ಕೂಲಿನಲ್ಲಿ ಓದುತ್ತಿದ್ದ ಅಸ್ಪೃಶ್ಯ ಬಾಲಕನೊಬ್ಬ, ನೀರಡಿಕೆಯಿಂದಾಗಿ…

By ಬಿ.ಶ್ರೀನಿವಾಸ

ನರೇಂದ್ರ ಮೋದಿ ಬೆಂಬಲಿಸದಂತೆ ಉಮ್ಮತ್ ಚಿಂತಕರ ವೇದಿಕೆ ಮನವಿ

ದಾವಣಗೆರೆ ;  ಟಿ.ಡಿ.ಪಿ ಮತ್ತು ಜೆ.ಡಿ.ಯು ಪಕ್ಷದ ಅಧ್ಯಕ್ಷರು ಪ್ರಧಾನಿಯಾಗಿ ನರೇಂದ್ರ ಮೋದಿಯವರನ್ನು ನೇಮಕ ಮಾಡಲು ಬೆಂಬಲ ನೀಡಬಾರದು ಎಂದು…

By Dinamaana Kannada News

You Might Also Like

Applications invited
ತಾಜಾ ಸುದ್ದಿ

ದಾವಣಗೆರೆ | ವೈದ್ಯಕೀಯ ಮತ್ತು ದಂತ ವೈದ್ಯಕೀಯ ವಿದ್ಯಾಭ್ಯಾಸಕ್ಕೆ ಅರ್ಜಿ ಆಹ್ವಾನ

By Dinamaana Kannada News
10 Permanent Driver Posts: Applications invited from ex-servicemen
ತಾಜಾ ಸುದ್ದಿ

ದಾವಣಗೆರೆ |10 ಖಾಯಂ ಚಾಲಕ ಹುದ್ದೆ : ಮಾಜಿ ಸೈನಿಕರಿಂದ ಅರ್ಜಿ ಆಹ್ವಾನ

By Dinamaana Kannada News
Vinaykumara G B
ತಾಜಾ ಸುದ್ದಿ

ದೇಗುಲ ಕಟ್ಟುವ ಒಗ್ಗಟ್ಟಿನಂತೆ ಸುಸಜ್ಜಿತ ಶಾಲೆಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು ಅಗತ್ಯ: ಜಿ. ಬಿ. ವಿನಯ್ ಕುಮಾರ್

By Dinamaana Kannada News
MP Dr. Prabha Mallikarjun
ತಾಜಾ ಸುದ್ದಿ

ಇಎಸ್‌ಐ ಅರ್ಹತಾ ಮಿತಿಯನ್ನು ಪರಿಷ್ಕರಿಸಲು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಒತ್ತಾಯ 

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?