Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > ಸೊಂಡೂರಿನ ಕಗ್ಗತ್ತಲೆಯ ಕಥನಗಳು-29 ಉಗುಳಮ್ಮನ ಜಾತ್ರೆಯಲ್ಲಿ ನೀವೂ ಬಂದು …..
Blog

ಸೊಂಡೂರಿನ ಕಗ್ಗತ್ತಲೆಯ ಕಥನಗಳು-29 ಉಗುಳಮ್ಮನ ಜಾತ್ರೆಯಲ್ಲಿ ನೀವೂ ಬಂದು …..

Dinamaana Kannada News
Last updated: May 20, 2024 4:10 am
Dinamaana Kannada News
Share
sanduru
ಸಂಡೂರಿನ ಕಥನಗಳು
SHARE

ಬಳ್ಳಾರಿ ಜಿಲ್ಲೆಯ ವರಮಾನವು ರಾಜ್ಯಕ್ಕೆ ಐದನೇಯ ಸ್ಥಾನದಲ್ಲಿದೆ. ಉಳಿದೆಲ್ಲ ವಿಚಾರಗಳಲ್ಲಿ ಹದಿನೆಂಟೋ ಇಪ್ಪತ್ತನೆಯ ಸ್ಥಾನದಲ್ಲಿದೆ. ಲೋಕಾಯುಕ್ತರ ವರದಿ ಜನರ ಪಾಲಿಗೆ ವರದಾನವಾಗಬೇಕಿತ್ತು.   ಸುಪ್ರೀಮ್ ಕೋರ್ಟಿನ ಹಸಿರು ಪೀಠದ ತೀರ್ಪು ಜನರ ಮೊಗದಲ್ಲಿ ಕಿರುನಗೆಯನ್ನಾದರೂ ಮೂಡಿಸಲು ಸಾಧ್ಯವಿದೆ. ಆದರೆ ನಮ್ಮ ನಾಯಕರುಗಳಿಗೆ ಜೈಲಿನಿಂದ ಹೊರಗೆ ಬರುವ ಮತ್ತು ಹೊರಗಿರುವ ವರಿಗೆ ಮುಂದಿನ ಚುನಾವಣೆಯಲ್ಲಿ ಗೆಲ್ಲುವ ನಿರೀಕ್ಷೆಗಳಷ್ಟೆ. ಜನ ನಿರೀಕ್ಷೆ ಇಟ್ಟುಕೊಳ್ಳುವುದಾದರೂ ಹೇಗೆ?

ರೋದಿಸುತ್ತಿರುವ ಸುಬ್ರಾಯನಹಳ್ಳಿ

ಸೊಂಡೂರು ತಾಲೂಕಿನ ಬೆಟ್ಟದ ಮೇಲೆ ಸುಬ್ರಾಯನಹಳ್ಳಿ ಎಂಬೊಂದು ಪುಟ್ಟ ಹಳ್ಳಿ.ಒಂದು ಕಾಲದಲ್ಲಿ ಹಚ್ಚು ಹಸುರಿನ ಗುಡ್ಡದ ಮೇಲಿರುವ ಹಳ್ಳಿಯಾಗಿತ್ತು.ಅದೀಗ ಮರುಭೂಮಿಯಲ್ಲಿ ಯಾರೋ ತನ್ನನ್ನು ದೋಚಿ ಹೋಗಿದ್ದಾರೆ ಎಂದು ರೋದಿಸುತ್ತ ಕುಳಿತಂತೆ ತೋರುವ ಹಳ್ಳಿ.

ಆ ಹಳ್ಳಿಯ ಹೊರವಲಯದಲ್ಲಿ ವಿಚಿತ್ರವಾದ ಜಾತ್ರೆ ನಡೆಯುತ್ತದೆ. ಅದಕ್ಕೆ “ಉಗುಳಮ್ಮನ ಜಾತ್ರೆ” ಎಂದು ಹೆಸರು. ತಿಂಗಳಿಡೀ ಮೈನ್ಸ್ ಗಳಲ್ಲಿ ಮೈ ಮುರಿದು ದುಡಿದ ಕಾರ್ಮಿಕರಿಗೆ ರೇಷನ್ ಮತ್ತು ಸಂಬಳ ಕೊಡುವ  ಆ ದಿನ ಕಾರ್ಮಿಕರು ಹೆಂಡ, ಹುಂಜ , ಕೋಳಿ ಎಂದು ಬಿಜಿಯಾಗಿರುತ್ತಾರೆ.

ಯಾರಿಗೆ ಬೇಕಾದರೂ ಮನಸಾರೆ ಬೈಯ್ಯಬಹುದು!

ಆ ಹೊತ್ತಿನಲ್ಲಿ ಊರ ಹೊರಗಿನ ಬೇವಿನಮರದ ಉಗುಳಮ್ಮನಿಗೆ ಪೂಜೆಗೈದ ನಂತರ,ತಾನು ಬಯಸಿದ ಯಾರಿಗೆ ಬೇಕಾದರೂ ಮನಸಾರೆ ಬೈಯ್ಯಬಹುದು!  ಅದೊಂದು ದಿನ ಮಾತ್ರ ಈ ರಿಯಾಯಿತಿ.ಗಣಿ ಮಾಲೀಕನ ಕಿರುಕುಳ, ಸಾಲದ ಸಂಬಳ, ಹೀಗೆ ನಾನಾ ತರಹದ ಸಮಸ್ಯೆಗಳನ್ನು , ಸಮಸ್ಯೆ ತಂದಿಟ್ಟವರನ್ನೂ ಉಗುಳಮ್ಮ ದೇವಿಯ ಮುಂದೆ ಹೇಳಿಕೊಂಡು ಮನಸಾರೆ ಬಯ್ಯಬಹುದಿತ್ತು.ಇದಕ್ಕೆ ಯಾರೂ ತಕರಾರು ತೆಗೆಯುವಂತಿರಲಿಲ್ಲ,ಇದು ದೇವಿಯ ಬೈಲಾ!.ಬೈದು ಬೈದು ನಿರಾಳರಾಗಿ ಆ ದಿನದ ಮಟ್ಟಿಗಾದರೂ ಹೆಂಡದ ಅಮಲಿನಲ್ಲಿ ನಿದ್ದೆಗೆ ಜಾರಿಬಿಡುತ್ತಿದ್ದರು.ತಾವು ಕೆಲಸ ಮಾಡುವ ಮಾಲೀಕರಿಗೆ ಬೈದರೂ ಪುನಃ ಮುಂಜಾನೆ ಅದೇ ಧಣಿಗಳ ಮುಂದೆ ಕೆಲಸಕ್ಕೆ ಹೋಗುತ್ತಿದ್ದರು.

ಉಗುಳಮ್ಮ ದೇವಿಗೆ ಕರುಣೆಯಿಲ್ಲ

ಆದರೂ ಉಗುಳಮ್ಮ ದೇವಿಗೆ ಕರುಣೆಯಿಲ್ಲ.ಒಂದೇ ಒಂದು ದಿನವೂ ಮಿಸುಕಾಡಿಲ್ಲ. ಜನ ಮಾತ್ರ ಆ ದೇವತೆಗೆ ಬೈಯ್ಯುವ ಸಲಿಗೆ ಬೆಳೆಸಿಕೊಂಡಿದ್ದಾರೆ. ಕಾಲ ಮಾತ್ರ ತಣ್ಣಗೆ ಸರಿದು ಹೋಗುತ್ತಿದೆ. ಈಗಲಾದರೂ ನನ್ನ ಓಡಾಟದ ಈ ಬರೆಹಗಳನ್ನು,ತಣ್ಣನೆಯ ಕ್ರೌರ್ಯವನ್ನು ತಿಳಿದ ನಂತರವೂ  ಸಹೃದಯಿಗಳಾದ  ಓದುಗರು ಉಗುಳಮ್ಮನ ಜಾತ್ರೆಗೆ ಬಂದು ನೀವೂ ಉಗಿಯುತ್ತೀರಲ್ಲವೆ? ಗುಮ್ಮನ ಜಾತ್ರೆ ಈ ಕಾಲದ ಬಹುದೊಡ್ಡ ರೂಪಕವಾಗಿ ನನಗಂತೂ ಇಂದಿಗೂ ಕಾಡುತ್ತಿದೆ.

                 ಬಿ.ಶ್ರೀನಿವಾಸ

 

TAGGED:dinamaana.comLatest Kannada NewsSanduru sotriesಕನ್ನಡ ಸುದ್ದಿದಿನಮಾನ.ಕಾಂಸಂಡೂರಿನ ಕಥನಗಳು.
Share This Article
Twitter Email Copy Link Print
Previous Article sanduru - ಸೊಂಡೂರಿನ ಕಗ್ಗತ್ತಲೆಯ ಕಥನಗಳು-28 ಸೊಂಡೂರು ಎಂಬ ಒಂದು ಕಾಲದ ಸುಂದರಪುರ
Next Article Chess Association ಚದುರಂಗ ಆಟ ಮಕ್ಕಳ ಬುದ್ಧಿಶಕ್ತಿ ಬೆಳವಣಿಗೆಗೆ ಸಹಕಾರಿ : ದಿನೇಶ್ ಕೆ ಶೆಟ್ಟಿ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ದಾವಣಗೆರೆ : ಅಕ್ಕಿಯ ಸಗಟು ಮಳಿಗೆಗೆ ದಿಢೀರ್ ಭೇಟಿ ನೀಡಿದ ಸಚಿವ ಮುನಿಯಪ್ಪ

ದಾವಣಗೆರೆ : ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಅವರು ಎಪಿಎಂಸಿ ಆವರಣದಲ್ಲಿರುವ ಅಕ್ಕಿಯ ಸಗಟು ಮಳಿಗೆಗೆ ದಿಢೀರ್ ಭೇಟಿ ನೀಡಿ…

By Dinamaana Kannada News

Davanagere | ಯಶಸ್ಸು ನಿಮ್ಮದಾಗಲು ಗುರಿ ಇಟ್ಟುಕೊಳ್ಳಿ : ಪ್ರೊ.ಆರ್.ಶಶಿಧರ್

ದಾವಣಗೆರೆ (Davanagere): ಆಧುನಿಕ ಶಿಕ್ಷಣ ಪದ್ಧತಿಯು ಇಂದು ಅನೇಕ ಜ್ಞಾನ ಶಿಸ್ತುಗಳನ್ನು ಕಲಿಯುವ ಅವಕಾಶ ವಿದ್ಯಾರ್ಥಿಗಳಿಗೆ ಕಲ್ಪಿಸಿ ಕೊಟ್ಟಿದೆ. ಆ…

By Dinamaana Kannada News

ರಾಷ್ಟ್ರೀಕೃತ ಬ್ಯಾಂಕ್‌ಗಳ  ಖಾಸಗೀಕರಣ ರಾಷ್ಟ್ರೀಯ ದುರಂತ : ಕೆ.ರಾಘವೇಂದ್ರ ನಾಯರಿ

ದಾವಣಗೆರೆ : ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ (AIBEA) ಸುದೀರ್ಘವಾದ ಹೋರಾಟದ ಫಲವಾಗಿ 1969 ರ ಜುಲೈ 19…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ನಾಳೆಯಿಂದ ನಾಗನೂರಿನಲ್ಲಿ ಅದ್ದೂರಿ ಉಮಾ ಮಹೇಶ್ವರ ಜಾತ್ರೆ

By Dinamaana Kannada News
Davanagere crime news
ಅಪರಾಧ ಸುದ್ದಿ

ನಕಲಿ ಬಂಗಾರ ವಂಚನೆ ಪ್ರಕರಣ:ಇಬ್ಬರ ಬಂಧನ

By Dinamaana Kannada News
DHO DAVANAGERE
ತಾಜಾ ಸುದ್ದಿ

ಆಯ್ಕೆಯಾದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ : ಆಕ್ಷೇಪಣೆಗೆ ಆಹ್ವಾನ

By Dinamaana Kannada News
Deadline extended
ತಾಜಾ ಸುದ್ದಿ

ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಯೋಜನೆ :ಅವಧಿ ವಿಸ್ತರಣೆ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?