Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > ದಿನಮಾನದ ಹೆಮ್ಮೆ : ದಿನ ಬಿಟ್ಟು ದಿನ ನೆನಪಾಗುವ ಕಾಟ್ರಹಳ್ಳಿ
Blog

ದಿನಮಾನದ ಹೆಮ್ಮೆ : ದಿನ ಬಿಟ್ಟು ದಿನ ನೆನಪಾಗುವ ಕಾಟ್ರಹಳ್ಳಿ

Dinamaana Kannada News
Last updated: July 2, 2024 7:15 am
Dinamaana Kannada News
Share
davanagere
ಮಹಾಬಲೇಶ್ವರ ಕಾಟ್ರಹಳ್ಳಿ
SHARE

Kannada News | Dinamaanada Hemme  | Dinamaana.com | 02-07-2024

ಆತ ರಾತ್ರಿಯೆಲ್ಲಾ ಕುಳಿತು ಮಾತನಾಡುತ್ತಿದ್ದ.ಕಾರ್ಲ್ ಮಾರ್ಕ್ಸ್, ಲೋಹಿಯಾ, ಬುದ್ಧ, ಬಸವಣ್ಣ, ಹೆಗೆಲ್, ಅಂಬೇಡ್ಕರ್…ಶಾಂತವೇರಿ , ಕೆ.ಎಚ್.ರಂಗನಾಥ್ ಹೀಗೆ ಮಾತು ಮುಗಿಯುವಷ್ಟರಲ್ಲಿ ಮುಂಜಾನೆಯ ಬೆಳಕು ಹರಿದಿರುತ್ತಿತ್ತು .

ಅಪ್ಪಟ ಸಮಾಜವಾದಿ..

ಅರ್ಧರ್ಧ ಕೇಟಿ ಕುಡಿದು ಬದುಕಿನ ದಾರಿಯ ಕಡೆಗೆ ಪಯಣ ಬೆಳೆಸುತ್ತಿದ್ದೆವು.ಇದು ಮಹಾಬಲೇಶ್ವರ ಕಾಟ್ರಹಳ್ಳಿಯವರ ಒಂದು ಕಾಲದ ಸಂಗಾತಿ ಸನತ್ ಕುಮಾರ್ ಬೆಳಗಲಿಯವರು ನೆನಪಿಸಿಕೊಳ್ಳುವ ರೀತಿ. ಅಪ್ಪಟ ಸಮಾಜವಾದಿಯಾಗಿದ್ದ ಕಾಟ್ರಹಳ್ಳಿಯ ಒಳಗೆ ಒಬ್ಬ ಸಂಶೋಧಕನಿದ್ದ, ಕಥೆಗಾರನಿದ್ದ , ಕವಿಯಿದ್ದ. ಅಪಾರ ಓದಿನ ಹಸಿದವನಿದ್ದ. ರಾಜಕಾರಣಿಯಿದ್ದ.

ಮುಂಗಾರು ಪತ್ರಿಕೆ ಸೇರಿಕೊಂಡರು. ಅಲ್ಲಿಯೂ ಬರಕತ್ತಾಗಲಿಲ್ಲ

ಹುಬ್ಬಳ್ಳಿಯ ಪಾಪು ರವರ ವಿಶ್ವವಾಣಿ ಪತ್ರಿಕೆಯಲ್ಲಿ ಮೊದಲಿಗೆ ಕೆಲಸ. ಹೂವಿನ ಹಡಗಲಿಯ ಉತ್ತಂಗಿಯಂಥ ಊರಿನಲ್ಲಿ ರೆವರೆಂಡ್ ಚೆನ್ನಪ್ಪ ನವರ ಹೆಸರಿನ ಗ್ರಂಥಾಲಯ ಸ್ಥಾಪನೆ, ಹಾಲಿನ ಸಹಕಾರ ಸಂಘ, ನಂತರ ಪ್ರಜಾವಾಣಿ ಸೇರಿ, ಅದೂ ಬಿಟ್ಟು ವಡ್ಡರ್ಸೆಯವರ ಮುಂಗಾರು ಪತ್ರಿಕೆ ಸೇರಿಕೊಂಡರು. ಅಲ್ಲಿಯೂ ಬರಕತ್ತಾಗಲಿಲ್ಲ.

ಪ್ರಯೋಗಾತ್ಮಕ ನಾಟಕಗಳ ಆಡಿಸಿದಂತಹ ಕಾಲವದು.

ಹರಪನಹಳ್ಳಿಯಲ್ಲಿ ಆಗ ತಾನೆ ಚಳುವಳಿಗಳು ಕಣ್ತೆರೆಯುವ ಕಾಲವದು. ಎಸ್.ಎಸ್.ಹಿರೇಮಠರ ನೇತೃತ್ವದಲ್ಲಿ ದಲಿತ ಸಂಘರ್ಷ ಸಮಿತಿಯ ಚಳುವಳಿ, ರೈತ , ವಿದ್ಯಾರ್ಥಿ ಚಳುವಳಿಗಳು ಉತ್ತುಂಗದಲ್ಲಿದ್ದ ಕಾಲ. ರಾಜಕೀಯವಾಗಿಯೂ, ಸಾಂಸ್ಕೃತಿಕವಾಗಿಯೂ ಎಂ.ಪಿ.ಪ್ರಕಾಶ ಬಹಳ ಕ್ರಿಯಾಶೀಲರಾಗಿದ್ದಂತಹ ಕಾಲ. ಉತ್ಪಲ್ ದತ್ತರ ಸೂರ್ಯ ಶಿಕಾರಿ ನಾಟಕ, ಜೋಕುಮಾರಸ್ವಾಮಿ ಗಳಂತಹ ಪ್ರಯೋಗಾತ್ಮಕ ನಾಟಕಗಳ ಆಡಿಸಿದಂತಹ ಕಾಲವದು.

ಪತ್ರಿಕೋದ್ಯಮದ ಬಹುದೊಡ್ಡ ಮಾದರಿ

ಧಾರವಾಡದ ಹಳೆಯ ನಂಟು ಕಾಟ್ರಹಳ್ಳಿಯವರನ್ನು ಹುಡುಕಿಕೊಂಡು ಎಂ.ಪಿ.ಪ್ರಕಾಶರು ಬರುವಂತೆ ಮಾಡುತ್ತಿತ್ತು. ಹರಪನಹಳ್ಳಿಯಲ್ಲಿ ಪ್ರಾರಂಭಿಸಿದ ‘ದಿನ ಬಿಟ್ಟು ದಿನ ‘ಪತ್ರಿಕೆ ವಿದ್ಯಾರ್ಥಿಗಳಾದ ನಮಗೊಂದು ಬೆರಗು.ಹಳ್ಳಿಗಾಡಿನ ನನಗೆ ಗುರುತು ಪರಿಚಿತರೆಲ್ಲರೂ ಬರೆಯುತ್ತಿದ್ದ ಪತ್ರಿಕೆ. ಅಪ್ಪಟ ಗ್ರಾಮೀಣ ಸೊಗಡಿನ ಪತ್ರಿಕೆಯು ಇಂದಿಗೂ ಪತ್ರಿಕೋದ್ಯಮದ ಬಹುದೊಡ್ಡ ಮಾದರಿಯಾಗಿದೆ. ಕಾಟ್ರಹಳ್ಳಿಯವರು ಚೀನಾದ ಜನಪದ ಕಾವ್ಯದ ಪುಟ್ಟ ಭಾಗವೊಂದನ್ನು ಅನುವಾದಿಸಿದ್ದಾರೆ.

ನನ್ನ ಜಗತ್ತಿನಲ್ಲಿ ತುಂಬಾ ಅನ್ಯಾಯ:
ಹತ್ತಿ ಬೆಳೆಯಲಾರದವನು ಅತ್ಯುತ್ತಮ ಬಟ್ಟೆ ಹೊದ್ದುಕೊಳ್ಳುತ್ತಾರೆ!
ಹೊಲದಲ್ಲಿ ಕೆಲಸ ಮಾಡದವರು
ಬೆಳ್ಳಕ್ಕಿ ಬೋನ ಸವಿಯುತ್ತಾರೆ!
ಮತ್ತೆ, ಉದ್ದನೆಯ ಗಡ್ಡದ ಸಭ್ಯನೊಬ್ಬ
ಹದಿಹರೆಯದ ಹುಡುಗಿ ಕೂಡುತ್ತಾನೆ.

ಕಾವ್ಯಕ್ಕೆ ಒಂದು ರೀತಿಯ ಸಮಗ್ರತೆ ಇರುತ್ತೆ. ಕವಿಯ ಕಣ್ಣಳತೆಯಲ್ಲಿ , ಕಿವಿಯಳತೆಯಲ್ಲಿ ಬರುವ ಎಲ್ಲಾ ಚಿತ್ರಗಳೂ ಇಲ್ಲಿ ಬರುತ್ತವೆ. ಕಾವ್ಯವನ್ನು ನಮಗೆ ನಾವೇ ನೋಡಿಕೊಳ್ಳುವ ಹಾಗೆ ಬರೆಯಬಲ್ಲ / ಅನುವಾದಿಸಬಲ್ಲ ತಾಕತ್ತಿದ್ದವರು -ಮಹಾಬಲೇಶ್ವರ ಕಾಟ್ರಹಳ್ಳಿ.

ಬಿಸಿಲು ನಾಡಿಗೆ ಆಂದೋಲನ, ಪ್ರಪಂಚ, ಪ್ರಜಾಮತ, ಕನ್ನಡಪ್ರಭ, ಪ್ರಜಾವಾಣಿ, ಮುಂಗಾರು, ಅಭಿಮಾನಿ, ಕರಾವಳಿ ದೈನಿಕ, ಲಂಕೇಶ್, ಸುದ್ದಿ ಸಂಗಾತಿಗಳಂತಹ ಪತ್ರಿಕೆಗಳನ್ನು ಪರಿಚಯಿಸಿದವರು. ಗೌರ್ಮೆಂಟ್ ಲೈಬ್ರರಿಗೆ ಬರುತ್ತಿದ್ದ ಈ ಎಲ್ಲಾ ಪತ್ರಿಕೆಗಳನ್ನು ಒಂದೇ ಏಟಿಗೆ ಓದುವ ಧಾವಂತ ನಮ್ಮದಾಗಿರುತ್ತಿತ್ತು.

ಬರಹ ಕುರಿತು ಸಂಶೋಧನೆಯೇ ಆಗಬೇಕಿದೆ

ಇಂಥದೊಂದು  ಬಣ್ಣಬಣ್ಣದ ಸೀನರಿಯನ್ನು ನನ್ನ ಬಾಲ್ಯದಲ್ಲಿ ತೋರಿಸಿ ನೇಪಥ್ಯಕ್ಕೆ ಸರಿದು ಹೋದ ಮಹಾಬಲೇಶ್ವರ ಕಾಟ್ರಹಳ್ಳಿಯವರ ಬಗೆಗೆ ಕನ್ನಡದಲ್ಲಿ ಅಷ್ಟಾಗಿ ಬಂದು ಬರಹಗಳಿಲ್ಲ .ಇವರ ಬರಹ ಕುರಿತು ಸಂಶೋಧನೆಯೇ ಆಗಬೇಕಿದೆ.

ಬಳ್ಳಾರಿ ಸೀಮೆಯಾದ್ಯಂತ ತುಂಗಭದ್ರೆ, ಹಗರಿ, ಹಳ್ಳಕೊಳ್ಳ ಗಳು ತುಂಬಿ ಹರಿದು ಹೋಗಿವೆ. ಹರಿಯುವಾಗಿನ ಭೋರ್ಗರೆತ, ಬತ್ತಿದಾಗಿನ ಮೌನ ಎರಡರ ಸಮ್ಮಿಳನದಂತಿದ್ದ ಕಾಟ್ರಹಳ್ಳಿಯವರ ದಿನ ಬಿಟ್ಟು ದಿನ ಪತ್ರಿಕೆಯ ಖಾಲಿ ಫ್ರೇಮ್ , ಇಂದಿಗೂ ನೂರಾರು ಕಥೆಗಳನ್ನು ಹೊಸ ಹೊಸ ಸಾಧ್ಯತೆಗಳನ್ನು ನಮ್ಮೊಳಗೆ ಹುಟ್ಟುಹಾಕುತ್ತಲೇ ಇದೆ.

ಬಿ.ಶ್ರೀನಿವಾಸ

 

TAGGED:Davanagere districtDinamaana hemmeDinamana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂದಿನಮಾನದ ಹೆಮ್ಮೆ
Share This Article
Twitter Email Copy Link Print
Previous Article Applications invited ಪಿಹೆಚ್‍ಡಿ ಫಿಲೋಶಿಪ್‍ಗೆ ಅರ್ಜಿ ಆಹ್ವಾನ
Next Article davanagere ಡಾ.ಫ.ಗು. ಹಳಕಟ್ಟಿ : ವಚನ ಸಾಹಿತ್ಯ ಸಂರಕ್ಷಣಾ ದಿನ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
ವಾರದ ಕಥೆವಾರದ ಕಥೆ

Popular Posts

ಪೊಲೀಸ್‌ ವಶದಲ್ಲಿದ್ದ ವ್ಯಕ್ತಿ ಸಾವು : ಕಲ್ಲು ತೂರಾಟ, 7 ಪೊಲೀಸ್ ವಾಹನ ಜಖಂ

ಚನ್ನಗಿರಿ :   ಪಟ್ಟಣದಲ್ಲಿ ಶುಕ್ರವಾರ ರಾತ್ರಿ ಮಟ್ಕಾ ಜೂಜಾಟ ಪ್ರಕರಣದ ಆರೋಪಿ ಆದೀಲ್ ಎಂಬಾತನನ್ನು ಪೊಲೀಸರು ವಿಚಾರಣೆಗೆ ಕರೆದುಕೊಂಡು ಬಂದ…

By Dinamaana Kannada News

ಜೂ.13 ರಂದು ಕರೆಂಟ್‌ ಇರಲ್ಲ

ದಾವಣಗೆರೆ ಜೂ.12 : ಕುಕ್ಕವಾಡ, ಶ್ಯಾಗಲೆ, ಆನಗೋಡು, ಅತ್ತೀಗೆರೆ ಮತ್ತು ಮಾಯಕೊಂಡ ವಿದ್ಯುತ್ ವಿತರಣ ಕೇಂದ್ರದಲ್ಲಿ ತುರ್ತು ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ…

By Dinamaana Kannada News

Davanagere | ಕನ್ನಡ ಜ್ಯೋತಿ ರಥ ಯಾತ್ರೆಗೆ ಕುರ್ಕಿ ಗ್ರಾಮದಲ್ಲಿ ಅದ್ದೂರಿ ಸ್ವಾಗತ

ದಾವಣಗೆರೆ  (Davanagere) :  ಮಂಡ್ಯ ದಲ್ಲಿ ಡಿಸೇಂಬರ್ 20 ರಿಂದ ಮೂರು ದಿನಗಳ ಕಾಲ ನಡೆಯಲಿರುವ 87ನೇ ಅಖಿಲ ಭಾರತ…

By Dinamaana Kannada News

You Might Also Like

Dinesh K Shetty
ತಾಜಾ ಸುದ್ದಿ

ದಾವಣಗೆರೆ|ದೇಶ ಮತ್ತು ಯೋಧರ ವಿಚಾರದಲ್ಲಿ ರಾಜಕೀಯ ಸಲ್ಲ: ದಿನೇಶ್ ಕೆ ಶೆಟ್ಟಿ

By Dinamaana Kannada News
recruitment for posts in BSF
ತಾಜಾ ಸುದ್ದಿ

BSFನಲ್ಲಿ 3588 ಹುದ್ದೆಗಳ ಭರ್ಜರಿ ನೇಮಕಾತಿ

By Dinamaana Kannada News
Gold price
ತಾಜಾ ಸುದ್ದಿ

ಮೂರು ದಿನಗಳಲ್ಲಿ ಚಿನ್ನದ ಬೆಲೆ 2,400 ರೂ. ಇಳಿಕೆ

By Dinamaana Kannada News
PUC
ತಾಜಾ ಸುದ್ದಿ

ಪ್ರಥಮ PUC ಪ್ರವೇಶಾತಿಗೆ ಜುಲೈ 31 ಕೊನೆ ಅವಕಾಶ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?