Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > ನೆಲದ ನೋವಿಗೆ ಧ್ವನಿಯಾದ ಪ್ರತಿಬಿಂಬವೇ ‘ಬಿಸಿಲ ಮಳೆ’
Blog

ನೆಲದ ನೋವಿಗೆ ಧ್ವನಿಯಾದ ಪ್ರತಿಬಿಂಬವೇ ‘ಬಿಸಿಲ ಮಳೆ’

Dinamaana Kannada News
Last updated: February 7, 2025 1:12 pm
Dinamaana Kannada News
Share
Davanagere
Davanagere
SHARE

ನೆಲಮೂಲದ ಸಾಹಿತ್ಯ ಯಾವಾಗಲೂ ಚಲನಶೀಲವಾಗಿರುತ್ತದೆ. ಅದು ನಿತ್ಯ ನೂತನ. ವರ್ತಮಾನದ ತಲ್ಲಣಗಳಿಗೆ ಮುಖಾಮುಖಿಯಾಗುವ ಅನೇಕ ಸಾಹಿತಿಗಳು ಈ ನೆಲದ ನೋವನ್ನು ತಮ್ಮದೇ ಆದ ರೀತಿಯಲ್ಲಿ ಬಿಂಬಿಸುತ್ತಾ ಬಂದಿರುವುದನ್ನು ಕಾಣುತ್ತೇವೆ. ನೆಲದ ನೋವಿನ ಪ್ರತೀಕವಾಗಿ ಹೊರಹೊಮ್ಮಿದ ಬಂಡಾಯ ಸಾಹಿತ್ಯ ತನ್ನದೇ ಆದ ಪ್ರಖರ ಬೆಳಕಿನ ಕಿರಣಗಳನ್ನು ಅಲ್ಲಲ್ಲಿ ಸೂಸಿದೆ. ಅದರ ಬೆಳಕು ಅನೇಕ ದಮನಿತರ ನೋವಿಗೆ ಔಷಧವಾಗಿದೆ ಎಂದರೆ ತಪ್ಪಿಲ್ಲ. ಅಂತಹ ಬೆಳಕಿನ ಕಿಡಿಗಳ ಕಾವ್ಯದ ಅವಲೋಕನವೇ ‘ಬಿಸಿಲ ಮಳೆ’. ನೆಲಮೂಲದ ಅಭಿವೃದ್ಧಿಯ ಆಶಯವನ್ನಿಟ್ಟುಕೊಂಡ ಜೀವಪರ ಬರಹಗಾರ ಹಾಗೂ ಕವಿಯಾದ ಬಿ. ಶ್ರೀನಿವಾಸ ಅವರು ತಾವು ಕಂಡುಂಡ ಬಳ್ಳಾರಿಯ ಆಯ್ದ ಕವಿಗಳ ಕಾವ್ಯವನ್ನು ಇಲ್ಲಿ ಸಾದ್ಯಂತವಾಗಿ ವಿವರಿಸುವ ಪ್ರಯತ್ನ ಮಾಡಿದ್ದಾರೆ.

ಬಳ್ಳಾರಿ ಎಂದರೆ ಎರಡೇ ಕಾಲಗಳು ನೆನಪಾಗುತ್ತವೆ. ಒಂದು ಬೇಸಿಗೆ ಕಾಲ ಮತ್ತೊಂದು ಬಿರುಬೇಸಿಗೆ ಕಾಲ. ಇಲ್ಲಿ ಮಳೆ ಎಂಬುದು ಮರಳುಗಾಡಿನ ಓಯಸಿಸ್ ಇದ್ದಂತೆ. ಮಳೆಗಾಲದಲ್ಲಿ ಬಿದ್ದ ಮಳೆ, ಬಿಸಿಲ ಝಳವನ್ನು ಹೊದ್ದುಕೊಂಡೇ ಸುರಿಯುತ್ತದೆ. ನೆಲದ ಕಾವನ್ನು(ಬಿಸಿಯನ್ನು) ಆರಿಸುವ  ಮೊದಲೇ ತಣ್ಣಗಾಗುವ ಮಳೆ ಬದುಕನ್ನು ತಂಪುಗೊಳಿಸಿದ್ದು ಮಾತ್ರ ಕಡಿಮೆ ಎನ್ನಬಹುದು. ಆದಾಗ್ಯೂ ,ಬದುಕಿನ ಭರವಸೆಯನ್ನಂತೂ ಕುಂದಿಸಿಲ್ಲ. ಅಂತೆಯೇ ಅವಿಭಜಿತ ಬಳ್ಳಾರಿ ಜಿಲ್ಲೆಯಾದ್ಯಂತ ಜೀವಪರ ಕಾಳಜಿಯನ್ನಿಟ್ಟುಕೊಂಡು ಅನ್ಯಾಯ, ಅಕ್ರಮ, ಭ್ರಷ್ಟಾಚಾರಗಳ ವಿರುದ್ಧ ಗುಡುಗಿದ ಅನೇಕ ಕವಿಗಳ ಕಾವ್ಯಾವಲೋಕನದ ಸಾರವೇ ‘ಬಿಸಲ ಮಳೆ’.

ಬಿಸಿಲ ಝಳದ ನಂತರ ಬರುವ ಮಳೆ, ಬದುಕಿಗೆ ಭರವಸೆಯನ್ನು ನೀಡುವಂತೆ ಇಲ್ಲಿನ ಕಾವ್ಯದ ಅವಲೋಕನವೂ ಸಹ ಸಾಹಿತ್ಯದ ಬದುಕಿಗೆ ಭರವಸೆಯನ್ನು ನೀಡಿದೆ. ಬಳ್ಳಾರಿ ಜಿಲ್ಲೆಯ ಪ್ರಮುಖ ಪಟ್ಟಣ ಹಾಗೂ ನಗರಗಳಿಂದ ಮಾತ್ರವಲ್ಲದೇ ಹಳ್ಳಿ-ಹಳ್ಳಿಗಳಲ್ಲೂ ಕಾವ್ಯದ ಕಿಚ್ಚು ಹಚ್ಚಿಕೊಂಡ ಅನೇಕ ಕವಿಗಳು ತಮ್ಮ ಪ್ರಖರವಾದ ಪದಗಳ ಬಾಣದಿಂದ ನಮ್ಮನ್ನಾಳುವವರನ್ನು ತಿವಿದು ಎಚ್ಚರಿಸಿರುವುದನ್ನು ಇಲ್ಲಿನ ಕವಿಗಳ ಕಾವ್ಯತ್ವ ತಿಳಿಸುತ್ತದೆ.

ಇಲ್ಲಿ ಹದಿನಾರು ಕವಿಗಳ ಕಾವ್ಯದ ಅವಲೋಕನವಿದೆ. ಹದಿನಾರು ಕವಿಗಳ ಬರಹಗಳು, ಚಳುವಳಿಗಳು, ಅವರ ಜೀವಪರವಾದ ಕಾಳಜಿಗಳು, ಬದುಕಿಗೆ ಬೇಕಾದ ಬದ್ಧತೆಗಳು, ಸೃಜನಶೀಲ ಸಾಹಿತಿಕ ಚಟುವಟಿಕೆಗಳು, ಹೋರಾಟಗಳು, ಅವರು ಎದುರಿಸಿದ ಸವಾಲುಗಳು. ದಮನಿತರ ಬದುಕಿಗೆ ನೀಡಿದ ಬೆಂಬಲಗಳು, ಬದುಕನ್ನು ಉನ್ನತಿಗೊಳಿಸಲು ನೀಡಿದ ಸಾಂಸ್ಕೃತಿಕ ಚೈತನ್ಯಗಳು, ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿ ಅವರ ಬರಹಗಳನ್ನು ಭಿತ್ತಿಚಿತ್ರಗಳಾಗಿ ಲೇಖಕ ಶ್ರೀನಿವಾಸರು  ಪ್ರಸ್ತುಪಡಿಸಿದ್ದಾರೆ.

ಜಾಗತೀಕರಣ, ಉದಾರೀಕರಣ, ಖಾಸಗೀಕರಣ, ಜಾತೀಕರಣ, ಧಾರ್ಮಿಕರಣ. ಹೀಗೆ ಹತ್ತು ಹಲವು ಕರಣಗಳನ್ನು ತಮ್ಮ ಕಾವ್ಯ, ಕಥೆ, ಕಾದಂಬರಿಗಳ ಮೂಲಕ ಖಂಡಿಸುತ್ತಾ, ಜನಪರ ಆಶಯಗಳನ್ನು ಬೆಂಬಲಿಸಲು ಪ್ರಯತ್ನಿಸಿದ ಎಸ್.ಎಸ್.ಹಿರೇಮರ್, ಪರಶುರಾಮ ಕಲಾಲ, ಶೇಷಗಿರಿ ಹವಾಲ್ದಾರ್, ಪಿ.ಆರ್.ವೆಂಕಟೇಶ್, ಪೀರಬಾಷಾ, ಹುಲಿಕಟ್ಟಿ ಚನ್ನಬಸಪ್ಪ, ಮೇಟಿ ಕೊಟ್ರಪ್ಪ, ಹುರಕಡ್ಲಿ ಶಿವಕುಮಾರ, ಡಿ.ಬಿ.ಬಡಿಗೇರ, ಪಂಚಪ್ಪ ಮೇಷ್ಟ್ರು, ಚೆನ್ನಬಸವಣ್ಣ, ಕಾಟ್ರಹಳ್ಳಿ ಮಹಾಬಲೇಶ್ವರ, ಡಿ. ರಾಮ ನವಲಿ, ಇಸ್ಮಾಯಿಲ್ ಎಲಿಗಾರ್ ಮತ್ತು ಎಲ್. ಖಾದರ್ ಬಾಷಾ ಇವರುಗಳ ಕಾವ್ಯದ ಧ್ವನಿಯನ್ನು ಇಲ್ಲಿ ಪ್ರಸ್ತುತಪಡಿಸಲಾಗಿದೆ.

ಲೇಖಕರು ತಮ್ಮ ನುಡಿಯಲ್ಲಿ ತಿಳಿಸಿದಂತೆ ಇದೊಂದು ಬಳ್ಳಾರಿ ಜಿಲ್ಲೆ ಆಯ್ದ ಕವಿಗಳ ಕಾವ್ಯಾವಲೋಕನ. ಆದರೆ ಇಲ್ಲಿರುವ ಎಲ್ಲರೂ ಎಡಪಂಥೀಯ ಚಳವಳಿಗಳಲ್ಲಿ ತೊಡಗಿಸಿಕೊಂಡವರು ಎಂಬುದು ಗಮನಾರ್ಹ. ಹಾಗಾದರೆ ಬಳ್ಳಾರಿ ಜಿಲ್ಲೆಯಲ್ಲಿ ಇಷ್ಟೇ ಜನ ಮಾತ್ರ ಎಡ ಪಂಥೀಯ ಕವಿಗಳು ಇರುವರೇ? ಅ ನುಮಾನ ಕಾಡದಿರದು. ಆದರೆ ಲೇಖಕರು ತಮ್ಮಷ್ಟಕ್ಕೆ ತಾವೇ ಇಲ್ಲಿನ ಬರಹಕ್ಕೊಂದು ಮಿತಿಯನ್ನು ಹಾಕಿಕೊಂಡಿದ್ದಾರೆ. ಇದನ್ನು ಯಾಕೆ ಮೊಟಕುಗೊಳಿಸಿದ್ದಾರೋ ತಿಳಿಯದು. ಇನ್ನೂ ಸಾಕಷ್ಟು ಹೊಸ ತಲೆಮಾರಿನ ಕವಿಗಳೂ ಇಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅವರ ಕಾವ್ಯತ್ವವನ್ನೂ ಇಲ್ಲಿ ಗಮನಿಸಬಹುದಾಗಿತ್ತು. ಬಹುಶಃ ಇದರ ಎರಡನೇ ಭಾಗದಲ್ಲಿ ಅದು ಸಾಕಾರಗೊಳ್ಳಬಹುದು.

ಇದು ಅಖಂಡ ಬಳ್ಳಾರಿಯ ಹದಿನಾರು ಕವಿಗಳ ಕಾವ್ಯದ ಇಣುಕು ನೋಟವಾದರೂ ಇಡೀ ಅಖಂಡ ಬಳ್ಳಾರಿಯ ಕವಿಗಳ ಕಾವ್ಯದ ಘಮಲನ್ನು, ತುಮುಲವನ್ನು, ತುಡಿತ-ಮಿಡಿತವನ್ನು ಹೊಂದಿದೆ. ಕಾವ್ಯಕ್ಕೆ ಬೇಕಾಗಿರುವ ಭಾಷೆ, ಶೈಲಿ, ತಂತ್ರಗಳನ್ನು ಸಾಮಾಜಿಕ ಬದುಕಿನೊಂದಿಗೆ ಹೇಗೆ ತಳುಕುಹಾಕಬೇಕೆನ್ನುವ ಭವಿಷ್ಯದ ಕವಿಗಳಿಗೆ ಇದೊಂದು ಸಣ್ಣ ಕೈದೀವಿಗೆಯಾಗಲಿದೆ. ಚರಿತ್ರೆಯ ಸಮಾಜಮುಖಿ ದಿನಗಳನ್ನು ‘ಬಿಸಿಲ ಮಳೆ’ಯಲ್ಲಿ ದಾಖಲಿಸುವ ಪ್ರಯತ್ನದಲ್ಲಿ ಬಿ. ಶ್ರೀನಿವಾಸ ಅವರು ಯಶಸ್ವಿಯಾಗಿದ್ದಾರೆ. ಬಿಸಿಲ ಝಳವನ್ನು ತಂಪಾಸುವ ಮಳೆ ಎಲ್ಲಡೆ ಸುರಿದು ಸಾಹಿತ್ಯದ ಬೆಳೆ ಹುಲುಸಾಗಲಿ ಎಂಬುದು ನಮ್ಮ ಆಶಯ.

ಪುಸ್ತಕಕ್ಕಾಗಿ 99163322730  ಈ ಸಂಖ್ಯೆಗೆ ಸಂಪರ್ಕಿಸಿ  

ಆ‌ರ್.ಬಿ.ಗುರುಬಸವರಾಜ. ಹೊಳಗುಂದಿ

TAGGED:Davanagere districtDavanagere NewsDinamana.comKannada news ದಾವಣಗೆರೆ ಜಿಲ್ಲೆಕನ್ನಡ ಸುದ್ದಿದಿನಮಾನ.ಕಾಂ
Share This Article
Twitter Email Copy Link Print
Previous Article Davanagere Davanagere | ಮಕ್ಕಳ ಸುರಕ್ಷತೆಗಾಗಿ ನಿಯಮಗಳ ಪಾಲನೆ ಕಡ್ಡಾಯ : ಡಿಸಿ
Next Article Davangere MP Dr. Prabha Mallikarjun ಆಯುಷ್ಮಾನ್ ಭಾರತ್ : ಆರ್ಥಿಕವಾಗಿ ಹಿಂದುಳಿದವರಿಗೂ ಪರಿಗಣಿಸಲು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಒತ್ತಾಯ 

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

Davanagere | ಒಳಮೀಸಲಾತಿ ವಿಷಯ ಸದನದಲ್ಲಿ ಪ್ರಸ್ತಾಪಿಸಿ : ಡಿಎಸ್‍ಎಸ್ ಒತ್ತಾಯ

ದಾವಣಗೆರೆ (Davanagere): ಪ.ಜಾತಿಯಲ್ಲಿನ ಒಳ ಮೀಸಲಾತಿ ಸುಪ್ರೀಂ ಕೋರ್ಟ್ ಆದೇಶ ಮೇರೆಗೆ ಜಾರಿಗೊಳಿಸುವಂತೆ ಚಳಿಗಾಲದ ಅಧಿವೇಶನ ದಲ್ಲಿ ಪ್ರಸ್ತಾಪಿಸಬೇಕೆಂದು ಒತ್ತಾಯಿಸಿ…

By Dinamaana Kannada News

ಖಾಸಗಿ ಕಾರ್ಯಕ್ರಮಕ್ಕೆ ಬಿ.ವಾಮದೇವಪ್ಪ ಅಧ್ಯಕ್ಷತೆ : ದಾವಣಗೆರೆ ಸಾಹಿತ್ಯ ವಲಯದಲ್ಲಿ ಅಸಮಾಧಾನ

ದಿನಮಾನ.ಕಾಂ, ದಾವಣಗೆರೆ : ಖಾಸಗಿ ಕಾಲೇಜುಗಳ ವಾಣಿಜ್ಯ ಕಾರ್ಯಕ್ರಮ ಒಂದಕ್ಕೆ ದಾವಣಗೆರೆ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ವಾಮದೇವಪ್ಪ…

By Dinamaana Kannada News

ಗಲಭೆ ಸೃಷ್ಠಿಸಲು ಬಿಜೆಪಿ ಮತ್ತದರ ಅಂಗಸಂಸ್ಥೆಗಳ ಪ್ರಯತ್ನ

ದಾವಣಗೆರೆ: ದಾವಣಗೆರೆ ನಗರದಲ್ಲಿ ಕೆಲವು ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿರುವ ಯುವಕರು ಹಾಗೂ ಮತ್ತು ಅದರ ಅಂಗಸಂಸ್ಥೆಗಳ ಪದಾಧಿಕಾರಿಗಳು ಗಲಭೆ ಸೃಷ್ಠಿಸುವ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ವಿದ್ಯುತ್ ವ್ಯತ್ಯಯ | ಜೂ.24 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ

By Dinamaana Kannada News
Davanagere
ತಾಜಾ ಸುದ್ದಿ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ | ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ

By Dinamaana Kannada News
Davanagere
ತಾಜಾ ಸುದ್ದಿ

ಅಲ್ಪಸಂಖ್ಯಾತ ಅಭ್ಯರ್ಥಿಗಳಿಂದ ಸ್ಪರ್ಧಾತ್ಮಕ ಪರೀಕ್ಷಾ ಪೂರ್ವ ತರಬೇತಿಗೆ ಅರ್ಜಿ ಆಹ್ವಾನ

By Dinamaana Kannada News
Political analysis
ರಾಜಕೀಯ

Political analysis | ವಿಜಯೇಂದ್ರ ಅವರಿಗೆ ಲಾಸ್ಟ್ ಚಾನ್ಸು?

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?